ಮಳೆಗಾಲದ ನಂತರ ಕಳೆ ತೆಗೆಯಿರಿ – ಮಣ್ಣಿನ ರೀಚಾರ್ಜ್ ಮಾಡಿ.

ಕರಾವಳಿ ಮತ್ತು ಮಲೆನಾಡು ಪ್ರದೇಶಗಳಲ್ಲಿ ವರ್ಷಕ್ಕೆ 5 ರಿಂದ 6 ತಿಂಗಳು ಮಳೆಗಾಲ. ಈ ದೀರ್ಘ ಮಳೆಯ ಸಮಯದಲ್ಲಿ ಮಣ್ಣು ನೀರಿನಿಂದ ತುಂಬಿ, ಗಾಳಿಯಿಲ್ಲದ ಸ್ಥಿತಿಯಲ್ಲಿರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಮಣ್ಣು ಅಮ್ಲೀಯವಾಗುತ್ತದೆ ಮತ್ತು ಅದರ ಸ್ವಾಭಾವಿಕ ಸಮತೋಲನ ಕಳೆದುಕೊಳ್ಳುತ್ತದೆ. ಬೇರು ಬೆಳವಣಿಗೆಗೆ ಹಾಗೂ ಪೋಷಕಾಂಶ ಲಭ್ಯತೆಗೆ ಸಹಾಯ ಮಾಡುವ ಉತ್ತಮ ಜೀವಾಣುಗಳು ನಿಷ್ಕ್ರಿಯವಾಗುತ್ತವೆ, ಆದರೆ ಹಾನಿಕಾರಕ ಜೀವಾಣುಗಳು ಹೆಚ್ಚಾಗುತ್ತವೆ. ಇದರ ಪರಿಣಾಮವಾಗಿ ರೋಗಗಳು ಹೆಚ್ಚಾಗಿ ಮಣ್ಣಿನ ಸ್ವಾಭಾವಿಕ ಫಲವತ್ತತೆ ಕುಂಠಿತಗೊಳ್ಳುತ್ತದೆ. ಮಳೆಯು ತಗ್ಗಿ ಚಳಿಗಾಲ ಆರಂಭವಾದಾಗ ತೋಟಗಳಲ್ಲಿ…

Read more
ಉತ್ತಮ ರಾಶಿ ಅಡಿಕೆ

ಅಡಿಕೆ- ಕರಿಮೆಣಸು- ಕಾಫಿ-ಶುಂಠಿ ಧಾರಣೆ: 19-11-2021 ಶುಕ್ರವಾರ.

ರಾಜ್ಯದಾದ್ಯಂತ ವಿವಿಧ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಹಾಗೂ ಖಾಸಗಿ ವರ್ತಕರಲ್ಲಿ  ಇಂದು 19-11-2021 ಶುಕ್ರವಾರ ಅಡಿಕೆ, ಕರಿಮೆಣಸು, ರಬ್ಬರ್, ಕಾಫಿ , ಶುಂಠಿ ಧಾರಣೆ ಹೀಗಿತ್ತು. ‘ ಕರಾವಳಿಯಲ್ಲಿ ಖಾಸಗಿ ವರ್ತಕರ ಸ್ಪರ್ಧೆ ಅಡಿಕೆ ಮಾರುಕಟ್ಟೆಯನ್ನು ತುಸು ಮೇಲೆಕ್ಕೆತ್ತಿದೆ. ಹೊಸ ಚಾಲಿಗೆ ನಿನ್ನೆಯಿಂದ ಖಾಸಗಿ ವರ್ತಕರಲ್ಲಿ ಕಿಲೋಗೆ ರೂ.5 ಹೆಚ್ಚಳವಾಗಿದೆ. ಹಳೆ ಚಾಲಿಗೆ ಕ್ಯಾಂಪ್ಕೋ ಸಹ ರೂ. 5 ಹೆಚ್ಚಿಸಿದೆ. ಆದರೆ ಗುಣಮಟ್ಟದ ಹೊಸ ಅಡಿಕೆ ಬರುವುದು ತುಂಬಾ ಕಡಿಮೆಯಾದ ಕಾರಣ ಇದು ದೊಡ್ದ ವಿಷಯವಲ್ಲ….

Read more
ಹಳಸಲು ಮಣ್ಣು – ಇದರಿಂದ ಕೃಷಿಗೆ ಎನೇನು ತೊಂದರೆ

ಹಳಸಲು ಮಣ್ಣು – ಇದರಿಂದ ಕೃಷಿಗೆ ಎನೇನು ತೊಂದರೆ?

ಅಡುಗೆ ಮಾಡಿದ ಪದಾರ್ಥ  ಹಳಸಲು ಆಗುವುದು ಗೊತ್ತು. ಇನ್ನು ಮಣ್ಣು ಹಳಸುವುದು ಇದು ಯಾವುದಪ್ಪಾ ಹೊಸ ವಿಷಯ?  ಇದೇನೂ ಹೊಸ ವಿಷಯವಲ್ಲ. ನಮ್ಮ ಹಿರಿಯರಿಗೆ ಇದು ಗೊತ್ತಿತ್ತು. ನಮಗೆ ಮಾತ್ರ ಇದು ಗೊತ್ತಿಲ್ಲ. ಹಳಸುಮಣ್ಣು  ಒಂದು ರೀತಿಯಲ್ಲಿ ಸಸ್ಯ ಬೆಳವಣಿಗೆಗೆ ವಿಷ ಎಂತಲೇ ಹೇಳಬಹುದು. ಬಹುತೇಕ ಜನ ಇಂತಹ ಹಾಕಿ ಬೆಳೆ ಹಾಳು ಮಾಡಿಕೊಂಡವರಿದ್ದಾರೆ. ಬಹಳಷ್ಟು ಜನ ರೈತರು ಹೀಗೆ ಮಾಡಿಕೊಂಡು ಬೆಳೆ ಹಾಳು ಮಾಡಿಕೊಂಡವರಿದ್ದಾರೆ. ಏನಿದು ಮಣ್ಣು ಹಳಸುವುದು ನೋಡೋಣ. ಮಣ್ಣು ಯಾವಾಗಲೂ ಹಿತಮಿತ ತೇವಾಂಶದಿಂದ…

Read more
ಮ್ಯುರೇಟ್ ಆಫ್ ಪೊಟ್ಯಾಶ್ ಎಲ್ಲಾ ಕಡೆ ಸಿಗುವಂತದ್ದು

ಪೊಟ್ಯಾಶ್ ಇಲ್ಲವೇ? ಚಿಂತಿಸಬೇಡಿ. ಪೊಟ್ಯಾಶ್ ಇಲ್ಲದೆಯೂ ಬೆಳೆ ತೆಗೆಯಬಹುದು!

ಮಾರುಕಟ್ಟೆಯಲ್ಲಿ ಪೊಟ್ಯಾಶ್ ಇಲ್ಲ ಎಂದು ಕಾಳಸಂತೆಯಲ್ಲಿ ಸಿಗುವ ಪೊಟ್ಯಾಶ್ ಖರೀದಿಗೆ ಹೋಗಬೇಡಿ. ಪೊಟ್ಯಾಶ್ ಗೊಬ್ಬರ ಶಾಶ್ವತವಾಗಿ  ಲಭ್ಯವಿಲ್ಲ ಎಂದು ಯಾರೂ ಹೇಳಿಲ್ಲ. ಆಮದು ಪ್ರಕ್ರಿಯೆ ನಡೆಯುತ್ತಿದ್ದು, ಕೆಲವೇ ದಿನಗಳಲ್ಲಿ ಬರಲಿದೆ. ಆ ತನಕ ರೈತರು ಪೊಟ್ಯಾಶ್ ಗಾಗಿ ಏನು ಮಾಡಬೇಕು ಇಲ್ಲಿದೆ ಮಾಹಿತಿ. ಸಸ್ಯಗಳಿಗೆ ಬೆಳವಣಿಗೆಯ ವಿವಿಧ ಹಂತಕ್ಕನುಗುಣವಾಗಿ ಪೊಟ್ಯಾಶಿಯಂ ಸತ್ವ ಬೇಕಾಗುತ್ತದೆ. ಪೊಟ್ಯಾಶ್ ಬರೇ ಮ್ಯುರೇಟ್ ಆಫ್ ಪೊಟ್ಯಾಶ್ ನಲ್ಲಿ ಮಾತ್ರ ಇರುವುದಲ್ಲ. ಬೇರೆ ಗೊಬ್ಬರಗಳಲ್ಲೂ ಇದೆ. ಹೆಚ್ಚಾಗಿ ನಾವು ಬೆಳೆಗಳಿಗೆ  ಬಳಸುವ ಪೊಟ್ಯಾಶ್ ಗೊಬ್ಬರ…

Read more
fruit

ಇದು ಆರೋಗ್ಯ ರಕ್ಷಕ ಹಣ್ಣು ಗೊತ್ತೇ?

ದಾರೆ ಹುಳಿ ಎಂದು ಸಾಮಾನ್ಯ ಆಡು ಭಾಷೆಯಲ್ಲಿ ಕರೆಯಲ್ಪಡುವ  ಈ ಹಣ್ಣು ಹುಳಿ ಮತ್ತು ಸಿಹಿ ರುಚಿಯಲ್ಲಿ  ಇರುತ್ತದೆ. ಸಾಮಾನ್ಯವಾಗಿ ಇದನ್ನು ಹಳ್ಳಿಗಳಲ್ಲಿ  ಬೆಳೆಸಿ ಅದನ್ನು ಹುಳಿಯ ಬದಲಿಗೆ  ಉಪಯೋಗ ಮಾಡುತ್ತಾರೆ. ಇದು ಆರೋಗ್ಯಕ್ಕೆ ಉತ್ತಮ ಹಣ್ಣು.  ಬಹಳಷ್ಟು ಔಷಧೀಯ ಗುಣಗಳನ್ನು  ಹೊಂದಿದೆ.ನಾವು ಸಣ್ಣವರಿದ್ದಾಗ ಲಿಂಬೆ ಹುಳಿ ಶರಬತ್ತಿನ ಬದಲು ಇದನ್ನು ಹಿಚುಕಿ ಬೆಲ್ಲ ಹಾಕಿ ಕುಡಿಯುತ್ತಿದ್ದ ನೆನಪು ಈಗಲೂ ಇದೆ. ಸಸ್ಯ ಮೂಲ:  ಕನ್ನಡದಲ್ಲಿ ಇದನ್ನು ಕರಿಮಾದಲ,  ದಾರೆ ಹುಳಿ,  ಕಮ್ರ  ದ್ರಾಕ್ಷಿ,  ಕೊಮರಿಕೆ  ಆಂಗ್ಲ…

Read more

ಸಾವಯವ ಇಂಗಾಲ- ಇದು ಇದ್ದರೆ ಮಣ್ಣಿಗೆ ಬೇರೆ ಹೆಚ್ಚೇನೂ ಬೇಡ.

ಮಣ್ಣು ವಿಜ್ಞಾನಿಗಳು ಮಣ್ಣು ನೋಡಿ ಮೊದಲು ಹೇಳುವುದು ಈ ಮಣ್ಣಿನಲ್ಲಿ ಸಾವಯವ ಇಂಗಾಲ ಎಷ್ಟು ಇದೆ ಎಂಬುದನ್ನು. ಇದನ್ನು ಅನುಸರಿಸಿ ನಂತರದ ಸಲಹೆಗಳು. ಮಣ್ಣು ಯಾವ ಪೋಷಕಾಂಶ  ಹಾಕಿದರೂ ಅದು ಸಸ್ಯ ಸ್ವೀಕರಿಸಬೇಕಾದರೆ ಆದರಲ್ಲಿ ಇಂಗಾಲದ ಅಂಶ ಹೆಚ್ಚಿನ ಪ್ರಮಾಣದಲ್ಲಿ  ಇರಬೇಕು. ಈಗ ನಮ್ಮ ಸುತ್ತಮುತ್ತ ಮಾರಾಟವಾಗುತ್ತಿರುವ ವಿವಿಧ ಹೆಸರಿನ ಜೈವಿಕ ಗೊಬ್ಬರಗಳೂ ಕೆಲಸ ಮಾಡಿ ನಮಗೆ ತೃಪ್ತಿಕರ ಫಲಿತಾಂಶ ಕೊಡಬೇಕಿದ್ದರೆ ಮಣ್ಣಿನಲ್ಲಿ  ಕಾರ್ಬನ್ ( ಇಂಗಾಲ) ಅಂಶ ಹೇರಳವಾಗಿ ಇರಬೇಕು. ಹೀಗಿರುವಾಗ ನಾವು ಗೊಬ್ಬರ ಹಾಕುವುದಕ್ಕಿಂತ…

Read more
ಉತ್ತಮ ಬೆಳವಣಿಗೆಯ ಸಸಿ

ಬಯಲುಸೀಮೆಯ ಅಡಿಕೆ ಬೆಳೆಗಾರರಿಗೆ ಪ್ರಮುಖ ಸಲಹೆಗಳು.

ಬಯಲು ಸೀಮೆಯ ರೈತರು ಈ ತನಕ ನಷ್ಟದ ಬೆಳೆಗಳಾದ ಜೋಳ, ಭತ್ತ ಮುಂತಾದ ಬೆಳೆಗಳನ್ನೇ ಬೆಳೆಸುತ್ತಿದ್ದವರು. ಈಗ ಹೊಸ ಆಕಾಂಕ್ಷೆಯಲ್ಲಿ ಹೆಚ್ಚಿನ ಆದಾಯ ಕೊಡಬಲ್ಲ ಅಡಿಕೆ ಬೆಳೆಯಲು ಪ್ರಾರಂಭಿಸಿದ್ದಾರೆ.  ಇವರಿಗೆ ಅಡಿಕೆ ಬೆಳೆ ಏನು, ಇದನ್ನು ಬೆಳೆಸುವ ಕುರಿತಾಗಿ ಸ್ವಲ್ಪ ಮಟ್ಟಿನ ಸಲಹೆ ಕೊಡುವುದು ಈ ಬರಹದ ಉದ್ದೇಶ.  ಈಗ ಸಾಂಪ್ರದಾಯಿಕ ಬೆಳೆ ಪ್ರದೇಶದ ಪರಿದಿಯನ್ನು ಮೀರಿ  ವ್ಯಾಪಿಸಿದೆ.  ಕರಾವಳಿ ಮಲೆನಾಡಿನ  ರೈತರು ಮಾತ್ರ ಅಡಿಕೆಯಂತಹ ಬೆಳೆ ಬೆಳೆದು ಹೆಚ್ಚು ಆದಾಯ ಸಂಪಾದಿಸುವುದಲ್ಲ. ಇವರೂ ಸಂಪಾದಿಸಬೇಕು. ನಮ್ಮ…

Read more
ದಾಳ್ಚಿನಿ ಮೊಗ್ಗು

ಸರ್ವಾಂಗಕ್ಕೂ ಬೆಲೆ ಇದೆ- ದಾಳ್ಚಿನಿ – ಬೆಳೆಸಿ.

ಯಾವುದೇ ರೋಗ ಇಲ್ಲ. ಕೀಟ ಇಲ್ಲ. ಬೆಳೆಸಲು ಗೊಬ್ಬರ, ನೀರಾವರಿ ಬೇಕಿಲ್ಲ . ಫಸಲಿಗೆ ಮಾತ್ರವಲ್ಲದೆ, ಎಲೆ , ತೊಗಟೆ, ಕಾಯಿ ಎಲ್ಲದಕ್ಕೂ ಬೇಡಿಕೆ ಇರುವ ನಮ್ಮೆಲ್ಲರ ಚಿರಪರಿಚಿತ ಸಂಬಾರ ಮರ ದಾಳ್ಚಿನಿ. ಬೆಳೆಸಿದವರಿಗೆ  ನಿರಂತರ ಲಾಭ ತಂದು ಕೊಡಬಲ್ಲ ಸಸ್ಯ ದಾಳ್ಚಿನಿ. ದಾಳ್ಚಿನಿ ಕಾಯಿಗೆ 750 ರೂ ತನಕ ಇರುತ್ತದೆ. ಎಲೆಗೆ ಕಿಲೋ 50 ರೂ. ಚೆಕ್ಕೆಗೆ ಕಿಲೋ 75-100 ತನಕವೂ ಇರುತ್ತದೆ  ಒಂದು ಗಿಡದ ಸರ್ವಾಂಗಕ್ಕೂ ಬೆಲೆ ಇರುವ ಏಕಮಾತ್ರ ಸಾಂಬಾರ ಬೆಳೆ ದಾಳ್ಚಿನಿ….

Read more
ಗಡ್ದೆ ಕಸಿಯ ಗಿಡ

ಗಡ್ಡೆಯಿಂದ ಅಂಗಾಂಶ ಕಸಿ- ನೀವೇ ಮಾಡಬಹುದು ಹೇಗೆ?

ನಿಮಗೆ ಖುಷಿ ಕಂಡ ಬಾಳೆಯನ್ನು ಎಲ್ಲೇ ಕಂಡರೂ ಅದರ ಒಂದು ಗಡ್ಡೆ ತಂದರೆ ಸಾಕು, ಆ ಒಂದು  ಗಡ್ಡೆಯ ಮೂಲದಲ್ಲಿ 4 ತಿಂಗಳೊಳಗೆ 50 ಕ್ಕೂ ಹೆಚ್ಚು ಸಸಿಗಳನ್ನು  ಪಡೆಯಬಹುದು. ಈ ತಂತ್ರಜ್ಞಾನವನ್ನು ತಿರುಚಿನಾಪಳ್ಳಿಯ ರಾಷ್ಟ್ರೀಯ ಬಾಳೆ ಸಂಶೋಧನಾ ಕೇಂದ್ರದ ವಿಜ್ಞಾನಿಗಳು ಪ್ರಚಾರಕ್ಕೆ ತಂದಿದ್ದಾರೆ. ಬಾಳೆಯ ಅಧಿಕ ಸಸಿಗಾಗಿ ಅಂಗಾಂಶ ಕಸಿ ಮಾಡಬೇಕು. ಇಲ್ಲವೇ ಅಧಿಕ ತೂಕದ ಗಡ್ಡೆಯನ್ನು ತರಬೇಕು. ಅದರ ಬದಲಿಗೆ ಒಂದು ಗಡ್ಡೆ ಇದ್ದರೆ ನಿಮ್ಮ ಮನೆಯಲ್ಲೇ ಅಧಿಕ ಸಂಖ್ಯೆಯ ಬಾಳೆ ಸಸಿಯನ್ನು ಉತ್ಪಾದಿಸಲು…

Read more
ಸೌತೆ ಬೆಳೆಯ ಹೊಲ

ಸೌತೆ ಬೆಳೆಯಲ್ಲಿ ಹೆಚ್ಚು ಕಾಯಿ ಪಡೆಯುವ ವಿಧಾನ .

ಸೌತೇ ಸುಮಾರಾಗಿ ಬೇಸಿಗೆಯಲ್ಲಿ ಎಲ್ಲರೂ ಬೆಳೆಸುವ ತರಕಾರಿ ಬೆಳೆ. ಸೌತೆ ಬೆಳೆಯಲ್ಲಿ ಕೆಲವು ಟ್ರಿಮ್ಮಿಂಗ್ ಮಾಡುವುದರಿಂದ ಬೇಗ ಮತ್ತು ಹೆಚ್ಚು ಇಳುವರಿ ಪಡೆಯಬಹುದು. ಟೊಮೇಟೋ, ಆಲೂಗಡ್ಡೇ ನಂತರ ಅತೀ ಹೆಚ್ಚು ಬಳಕೆಯಗುವ ತರಕಾರಿ ಸೌತೆ. ಸೌತೆ ಬೆಳೆಯನ್ನು ಹೆಚ್ಚು ನಿಗಾವಹಿಸಿ ಬೆಳೆದಾಗ ಉತ್ತಮ ಲಾಭವೂ ಇದೆ. ಸೌತೆಯಲ್ಲಿ ಎರಡು ಪ್ರಕಾರಗಳು. ಒಂದು ಉದ್ದದ ಕಾಯಿಗಳನ್ನು ಬಿಡುವ ಕೇರಳ ಮೂಲದ ಸೌತೆ. ದಕ್ಷಿ ಣ ಕರ್ನಾಟಕದ ದುಂಡಗೆಯ ತಳಿ. ತೂಕ ಸುಮಾರಾಗಿ ಏಕ ಪ್ರಕಾರವಾಗಿರುತ್ತದೆ. ಕೆಲವು ಪ್ರದೇಶಗಳಲ್ಲಿ ಇನ್ನೂ…

Read more
error: Content is protected !!