ಗೇರು ಮರಕ್ಕೆ ಪುನಃಶ್ಚೇತನ

ಗೇರು – ಮಾವು- ಹಲಸು ಹಳೆ ಮರಗಳಿಗೆ ಪುನಃಶ್ಚೇತನ.

ನಮ್ಮಲ್ಲಿ ಇರುವಂತಹ ಹಳೆಯ ಮಾವು- ಗೇರು-ಹಲಸು ಇನ್ಯಾವುದೇ ಹಣ್ಣಿನ  ತೊಟಗಳಲ್ಲಿ ಹೆಚ್ಚಿನವುಗಳು ಅನಾಮಧೇಯ ತಳಿಯ ಬೀಜಗಳಿಂದ ಆದವುಗಳು. ಇವು ಈಗಲೇ  ಹಳೆಯದಾಗಿ ಅನುತ್ಪಾದಕವೂ ಆಗಿರಬಹುದು. ಇಂತಹ ಮರಗಳು ಹೆಚ್ಚಾಗಿ ನಿರ್ವಹಣೆ ಇಲ್ಲದೇ ನಿರ್ಲಕ್ಷ್ಯದಿಂದ ಬೆಳೆದಿರುತ್ತವೆ. ಇವುಗಳನ್ನು ಇಳುವರಿ ಅಭಿವೃದ್ಧಿಯ ದೃಷ್ಟಿಯಿಂದ ಪುನಶ್ಚೇತನ ಮಾಡುವುದು ಉತ್ತಮ.  ಹಳೆಯ ಅಥವಾ ಕಡಿಮೆ ಇಳುವರಿ ಕೊಡುವಂತಹ ಮರಗಳನ್ನು ಸವರುವಿಕೆಯಿಂದ ಹಾಗು ಕಸಿ ವಿಧಾನದ ಮೂಲಕ ಪುನಶ್ಚೇತನಗೊಳಿಸಿದರೆ  ಹೊಸ ಮರವನ್ನಾಗಿ ಪರಿವರ್ತಿಸಬಹುದು. ಪುನಶ್ಚೇತನದ ಉದ್ದೇಶಗಳು : ಹಳೆಯ ಹಾಗೂ ಕಡಿಮೆ ಇಳುವರಿಯ ಗಿಡಗಳ…

Read more
ಕೊಳೆರೋಗ ಹೆಚ್ಚಳಕ್ಕೂ ಸಸ್ಯ ಆರೋಗ್ಯ

ಕೊಳೆ ರೋಗ ಹೆಚ್ಚಳಕ್ಕೂ ಸಸ್ಯ ಆರೋಗ್ಯಕ್ಕೂ  ಸಂಬಂಧಗಳಿರಬಹುದೇ ಯೋಚಿಸಿ.

ಈ ವರ್ಷ ಬಹಳಷ್ಟು ಅಡಿಕೆ ಬೆಳೆಗಾರರು ಅಡಿಕೆ ಕಾಯಿಗಳಿಗೆ ಕೊಳೆ ರೋಗ ಬಂದಿದೆ ಎಂದು ಹೇಳುತ್ತಿದ್ದಾರೆ.  ಹೆಚ್ಚಿನ ಕಡೆ ಕೊಳೆ ರೋಗ ಬಂದಿದೆ. ಇದಕ್ಕೆ ಸಸ್ಯ ಆರೋಗ್ಯ  ಕಾರಣ ಇರಬಹುದೇ? ಕೆಲವು ದೃಷ್ಟಿಕೋನದಲ್ಲಿ ಇದು ನಿಜ ಎನ್ನಿಸುತ್ತದೆ. ಅಡಿಕೆಯ ಕೊಳೆ ರೋಗ ಬಂದಂತೆ ಅಡಿಕೆ ಸಸಿ/ ಮರಗಳಿಗೆ , ತೆಂಗಿನ ಮರಗಳಿಗೆ ಸುಳಿ ಕೊಳೆ ರೋಗವೂ  ಇತ್ತೀಚೆಗೆ ಬಹಳಷ್ಟು ಹೆಚ್ಚಾಗುತ್ತಿದೆ. ಪೋಷಕಾಂಶಗಳು ಅಸಮತೋಲನವಾಗಿ ಸಸ್ಯಕ್ಕೆ ಲಭ್ಯವಾಗದಿರುವುದೇ ಇದಕ್ಕೆ ಒಂದು ಕಾರಣ ಇರಬಹುದೇ ಎಂಬ ಬಗ್ಗೆ ಸಂಶಯವಿದೆ.  ನಾವೆಲ್ಲಾ…

Read more
ರಸಗೊಬ್ಬರವನ್ನು ಮೀರಿಸುವ ಶಕ್ತಿ ಉಳ್ಳ ಸಾವಯವ ಗೊಬ್ಬರ – ಸಮುದ್ರ ಪಾಚಿ.

ರಸಗೊಬ್ಬರವನ್ನು ಮೀರಿಸುವ ಶಕ್ತಿ ಉಳ್ಳ ಸಾವಯವ ಗೊಬ್ಬರ – ಸಾಗರಪಾಚಿ.

ಭಾರತದ ಕೃಷಿ ವ್ಯವಸ್ಥೆಯನ್ನು  ಗೊಬ್ಬರದಲ್ಲಿ ಸ್ವಾವಲಂಭಿಯಾಗಿ ಮುನ್ನಡೆಸಲು ಸಧ್ಯೋಭವಿಷ್ಯದಲ್ಲಿ ಸಮುದ್ರ ಪಾಚಿ ಎಂಬ ಸಾಗರದ ನೀರಿನಲ್ಲಿ ಬೆಳೆಯುವ ಸಸ್ಯದ ಸಾವಯವ ಗೊಬ್ಬರ ಪ್ರವೇಶಿಸಲಿದೆ.  ರಸಗೊಬ್ಬರವನ್ನು ಮೀರಿಸುವ ಶಕ್ತಿ ಉಳ್ಳ ಈ ಗೊಬ್ಬರದಲ್ಲಿ ಬಹುಬಗೆಯ ಪೋಷಕಾಂಶಗಳಿವೆ. ಕಳಕೊಳ್ಳುತ್ತಿರುವ ಮಣ್ಣಿನ ಜೈವಿಕ ಗುಣಧರ್ಮವನ್ನು ಇದು ಮರಳಿ ನೀಡಲು ಶಕ್ತ ಎನ್ನುತ್ತದೆ ವಿಜ್ಞಾನ. ಇದನ್ನು ಮಾನವ ಬಳಕೆಯ ಔಷದೋಪಚಾರಕ್ಕೆ ಬಳಸಲಾಗುತ್ತದೆ. ಹಾಗೆಯೇ ಸಸ್ಯ ಪೋಷಕವಾಗಿಯೂ ಬಳಕೆ ಮಾಡಲಾಗುತ್ತದೆ. ಭವಿಷ್ಯದಲ್ಲಿ ರಸಗೊಬ್ಬರಕ್ಕೆ ಪರ್ಯಾಯವಾಗಿ ಇದು ನಮ್ಮ ಬೆಳೆಗಳನ್ನು ಮೇಲೆತ್ತಲಿದೆ. ಸಮುದ್ರ ಪಾಚಿ, ಅಥವಾ…

Read more
ಅಡಿಕೆ ಬೆಳೆಗಾರರನ್ನು ಬೆನ್ನತ್ತಿದೆ ಕೊಳೆರೋಗ

ಅಡಿಕೆ ಬೆಳೆಗಾರರನ್ನು ಬೆನ್ನತ್ತಿದೆ ಕೊಳೆರೋಗ – ಕಾರಣ ಏನು ಗೊತ್ತೇ?

ಕೊಳೆರೋಗ ಅಡಿಕೆ ಬೆಳೆಗೆ, ಕರಿಮೆಣಸು, ಕೊಕ್ಕೋ, ಹಾಗೆಯೇ ಇನ್ನಿತರ ಬೆಳೆಗಳಿಗೆ ಮಳೆಗಾಲದಲ್ಲಿ ಕಾಡುವ ಅತೀ ದೊಡ್ಡ ಸಮಸ್ಯೆಯಾಗಿದ್ದು, ಈ ರೋಗವು ಬರೇ ಬೆಳೆ ಮಾತ್ರವಲ್ಲದೆ ಮರವನ್ನೂ ನಿತ್ರಾಣಗೊಳಿಸುತ್ತದೆ. ರೋಗ ಹೆಚ್ಚಳಕ್ಕೆ ವಾತಾವರಣದ ಜೊತೆಗೆ ನಾವು ತೆಗೆದುಕೊಳ್ಳುವ ಮುನ್ನೆಚ್ಚರಿಕಾ ವಿಧಾನವೂ ಒಂದು ಕಾರಣವಾಗಿದೆ. ಈ ವರ್ಷ ಜುಲೈ ತಿಂಗಳಲ್ಲಿ ಬಂದ ಮಳೆಯ ಕಾರಣ ಹೆಚ್ಚಿನವರ ತೋಟದಲ್ಲಿ ಕೊಳೆ ರೋಗ ಪ್ರಾರಂಭವಾಗಿದೆ. ಅಡಿಕೆಗೆ ಕಾಯಿಗೆ ಕೊಳೆ ಬಂದು ಉದುರುವುದು, ಅದು  ಉಲ್ಬಣವಾದರೆ ಗೊನೆ ಬುಡದ ಮೃದು ಭಾಗದ ಮೂಲಕ  ಸುಳಿಗೆ…

Read more
ಹೊಲದಲ್ಲಿ ಎರೆಹುಳ

ಹೊಲದಲ್ಲಿ ಎರೆಹುಳಗಳು ಕಡಿಮೆಯೇ ? ಕಾರಣ ಏನು?

ಮಣ್ಣು  ಅಥವಾ ಹೊಲ ಅನೇಕ ತರಹದ ಕಶೇರುಕ ಮತ್ತು ಅಕಶೇರುಕ ಜೀವಿಗಳಿಗೆ ಆಶ್ರಯತಾಣ. ಇಲಿ ಹೆಗ್ಗಣ ,ಅಳಿಲುಗಳಿಂದ ಹಿಡಿದು, ಇರುವೆ ಗೆದ್ದಲು, ಜೇಡ, ನುಶಿ, ಮೈಟ್, ಬಸವನ ಹುಳು ಎರೆಹುಳು, ಕಪ್ಪೆ ಚಿಪ್ಪಿನ ಹುಳು, ಶತಪದಿಗಳು, ಸಹಸ್ರಪದಿಗಳು,  ಎರೆಹುಳುಗಳು ಹಾಗೆಯೇ ಹಲವಾರು ಕಣ್ಣಿಗೆ ಕಾಣದ ಸೂಕ್ಷ್ಮಾಣು ಜೀವಿಗಳು ಎಲ್ಲವೂ ಮಣ್ಣಿನಲ್ಲಿಯೇ ಬದುಕುವ ಜೀವಿಗಳು. ಮಣ್ಣು ಇಲ್ಲದಿದ್ದರೆ ಅವು ಇಲ್ಲ. ಅವು ಇಲ್ಲದಿದ್ದರೆ ಮಣ್ಣಿಗೆ ಜೀವಂತಿಕೆ ಇಲ್ಲ. ಹೊಲ ಎರೆಹುಳಗಳಿಗೆ ಆಹಾರ ಕೊಡದ ಸ್ಥಿತಿಯಲ್ಲಿ ಇದ್ದರೆ ಅಲ್ಲಿ ಅವುಗಳ…

Read more
ಎರೆ ಹುಳುಗಳು

ಎರೆಹುಳು ಬಗ್ಗೆ ನಾವು ತಿಳಿಯಬೇಕಾದ ವಾಸ್ತವ ಸಂಗತಿ.

ಎರೆಗೊಬ್ಬರ ಎಂದರೆ ಅದು ಸಂಪಧ್ಭರಿತ ಗೊಬ್ಬರ ಅಲ್ಲ. ಅದು ಒಂದು ಸಾವಯವ ವಸ್ತುಗಳನ್ನು ಹುಡಿ ಮಾಡಿದ ಮಿಶ್ರಣ ಅಷ್ಟೇ. ಇದು ಬೆಳೆಗೆ ದೊರೆಯಬೇಕಾದರೆ ಮಣ್ಣಿನಲ್ಲಿರುವ ಸ್ಥಳೀಯ ಎರೆಹುಳುಗಳು ಕೆಲಸ  ಮಾಡಲೇ ಬೇಕು. ಎರೆಹುಳ ಏನು? ಎರೆಹುಳು ಎಂಬ ದುಂಡು ಹುಳ (ಅನೆಲಿಡಾ) ಜಾತಿಗೆ ಸೇರಿದ ಜೀವಿಯು  ಸಾವಯವ ತ್ಯಾಜ್ಯಗಳನ್ನು  ರೂಪಾಂತರಿಸಿ ಕೊಡುತ್ತದೆ. ಇದನ್ನು  ಬೆಳೆಗಳಿಗೆ ಗೊಬ್ಬರವಾಗಿ ಬಳಕೆ ಮಾಡಿದಾಗ ಅಧ್ಬುತ ಇಳುವರಿ ಬರುತ್ತದೆ, ಮಣ್ಣು  ಶ್ರೀಮಂತವಾಗುತ್ತದೆ. ಸಾವಯವ ಕೃಷಿ ಎಂಬ ಅಹಿಂಸಾತ್ಮಕ  ಕೃಷಿ ವಿಧಾನಕ್ಕೆ ಇದು ಒಂದು ಸರಳ…

Read more
ಸಗಣಿ ಮಾರುವುದು ಅಶುಭ

ಸಗಣಿ ಮಾರುವ ಕನಸು ಬೇಡ- ಇದು ಅಶುಭ.

ರಾಜಸ್ಥಾನದ ಜೈಪುರ ದಿಂದ ಅರಬ್ ರಾಷ್ಟ್ರಕ್ಕೆ (ಕುವೆಟ್) ಸಗಣಿ ರಪ್ತು ಆದದ್ದನ್ನು ನಾವು ಹಾಡಿ ಹೊಗಳುತ್ತೇವೆ.ನಮ್ಮ ದನಗಳ ಸಗಣಿಗೆ ಇಷ್ಟು ಮಹತ್ವ ಇದೆ ಎಂದು ಬೀಗುತ್ತೇವೆ. ಕೆಲವರು ಸಗಣಿ ಮಾರಾಟದ ಕನಸಿನಲ್ಲೂ ಇರಬಹುದು. ಸಗಣಿ ಮಾರಾಟ ಮಾಡುವುದಿದ್ದರೆ ಅದಕ್ಕೆ ಅರಬ್ ರಾಷ್ಟ್ರಗಳೇ ಆಗಬೇಕಾಗಿಲ್ಲ. ಭಾರತದ ಒಳಗೆಯೂ  ಸಾಕಷ್ಟು ಬೇಡಿಕೆ ಇದೆ. ಬೆಲೆಯೂ ಇದೆ.  ಕೃಷಿ ಪ್ರಧಾನವಾದ ನಮ್ಮ ದೇಶಕ್ಕೆ ಕೃಷಿಯ ಅವಿಭಾಜ್ಯ ಅಂಗವಾದ ಸಗಣಿಯನ್ನು ಬೇರೆಯವರಿಗೆ ಮಾರಾಟ ಮಾಡುವುದು ಒಳ್ಳೆಯದಲ್ಲ. ಕೃಷಿ ಮಾಡುವ ಭೂಮಿಯನ್ನು ಹೇಗೆ ಮಾರಾಟ…

Read more
ಸುಣ್ಣ ಮತ್ತು ಮೈಲುತುತ್ತೆ ಸೇರಿಸಿ ತಯಾರಿಸಿದ ಬೋರ್ಡೋ ದ್ರಾವಣ

ಬೋರ್ಡೋ ದ್ರಾವಣದ ಸುಣ್ಣ – ರೈತರ ಸಂದೇಹಗಳಿಗೆ ಉತ್ತರ.

ಕೆಲವು ದಿನಗಳಿಂದ ಅಡಿಕೆ , ಕಾಫಿ, ಕರಿಮೆಣಸು ಮುಂತಾದ ಬೆಳೆಗಾರರು ಬೋರ್ಡೋ ದ್ರಾವಣ ಸಿಂಪರಣೆಗಾಗಿ ಬಳಕೆ ಮಾಡುವ ಹುಡಿ ಸುಣ್ಣದ ಬಗ್ಗೆ ಕೆಲವು ಸಂದೇಹಗಳು ಉಧ್ಬವವಾಗಿದೆ. ಕೆಲವು ಬ್ರಾಂಡ್ ನ ಸುಣ್ಣ ಬಳಕೆ ಮಾಡದಂತೆ ಕೃಷಿ ಇಲಾಖೆ ಆದೇಶ ಹೊರಡಿಸಿದ ಪ್ರತಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಇದೆಲ್ಲದರ ನಡುವಿನಲ್ಲಿ ಎಲ್ಲಾ ಸುಣ್ಣದ ಮೇಲೂ ರೈತರು ಸಂದೇಹ ಪಡುವಂತಾಗಿದೆ. ಈ ಕುರಿತಂತೆ ರೈತರ ಸಂದೇಹಗಳಿಗೆ ಉತ್ತರ ಇಲ್ಲಿದೆ. ಸುಣ್ಣವನ್ನು ಸಿಂಪರಣೆಗೆ ಕ್ಯಾಲ್ಸಿಯಂ ಮೂಲಕ್ಕಾಗಿ ಬಳಕೆ ಮಾಡಲಾಗುತ್ತದೆ. ಕ್ಯಾಲ್ಸಿಯಂ ಮೂಲವಸ್ತುಗಳನ್ನು…

Read more
MOP red

ಮ್ಯುರೇಟ್ ಆಫ್ ಪೊಟ್ಯಾಶ್ – ಮೂಲ ಯಾವುದು ಗೊತ್ತೇ?

ಪೊಟ್ಯಾಶಿಯಂ ಎಂಬ ಪೋಷಕವು ಎಲ್ಲಾ ಬೆಳೆಗಳಿಗೂ ಅವಶ್ಯಕವಾಗಿ ಬೇಕಾಗುವಂತದ್ದು. ಇದು ರಾಸಾಯನಿಕ ಇರಲಿ, ಸಾವಯವ ಇರಲಿ, ಸಸ್ಯಗಳಿಗೆ ಇದು ಬೇಕೇ ಬೇಕು. ಸಾವಯವ ಎಂಬ ಮಡಿವಂತಿಕೆಯಲ್ಲಿ ಇದನ್ನು ಹಾಕುವುದಕ್ಕೆ ಹಿಂಜರಿಯಬೇಡಿ. ಇದು ರಾಕ್ ಫೋಸ್ಫೇಟ್ ಎಂಬ ಖನಿಜ ಗೊಬ್ಬರದಂತೆ ಒಂದು. ಇದರಿಂದ ಹಾನಿ ಇಲ್ಲ.  ಪೊಟ್ಯಾಶ್ ಎಂಬ ಪೋಷಕವು ಸಸ್ಯ ಬೆಳೆವಣಿಗೆಯ ಶಕ್ತಿ (Energy) ಎಂಬುದಾಗಿ ಈ ಹಿಂದೆಯೇ ಹೇಳಲಾಗಿದೆ. ಇದನ್ನು ಬಳಸದೆ ಇದ್ದರೆ ಬೆಳೆ ಅಪೂರ್ಣ.ಬಳಸುವಾಗ ಯಾವುದು, ಹೇಗೆ ಎಂಬುದನ್ನು ಪ್ರತೀಯೊಬ್ಬ ರೈತನೂ ಅರಿತಿರಬೇಕು. ಪೊಟಾಶಿಯಂ…

Read more
ಬೋರ್ಡೋ ದ್ರಾವಣ ಸಿಂಪರಣೆ

ಬೋರ್ಡೋ ದ್ರಾವಣ ಸಿಂಪರಣೆ ಮತ್ತು ಕೆಲವು ಸೂಕ್ಷ್ಮಗಳು.

ಅಡಿಕೆಯ ಕೊಳೆ ರೋಗ ನಿಯಂತ್ರಿಸುವ ಉಪಚಾರವಾಗಿ ಬೋರ್ಡೋ ದ್ರಾವಣದ ಸಿಂಪರಣೆಯನ್ನು ಮಾಡಲಾಗುತ್ತದೆ. ವಿವಿಧ ನಮೂನೆಯ ತುತ್ತೆ, ಸುಣ್ಣ, ಗಮ್ ಗಳು ಇರುವಾಗ ರೈತರಿಗೆ ದ್ವಂದ್ವ ಉಂಟಾಗುವುದು ಸಹಜ. ಈ ನಿಟ್ಟಿನಲ್ಲಿ ಕೆಲವು ಸೂಕ್ಷ್ಮ ವಿಚಾರಗಳೊಳಗೊಂಡ ಮಾಹಿತಿ ಇಲ್ಲಿದೆ. ಬೊರ್ಡೋ ದ್ರಾವಣವನ್ನು ಪ್ರಪ್ರಥಮವಾಗಿ,  ಪ್ರಾನ್ಸ್ ದೇಶದ ಬೋರ್ಡೋ ಎಂಬ ಪ್ರಾಂತದಲ್ಲಿ ದ್ರಾಕ್ಷಿ ಬೆಳೆಗೆ ಶಿಲೀಂದ್ರಗಳಿಂದ ಉಂಟಾಗುವ ರೋಗ ನಿಯಂತ್ರಣಕ್ಕೆ ಬಳಸುತ್ತಿದ್ದರಂತೆ. ಅದನ್ನು ಬ್ರಿಟೀಷರ ಕಾಲದಲ್ಲಿ ಆಗಿನ ಮೈಸೂರು ಸರಕಾರದ ಕೃಷಿ ಅಧಿಕಾರಿಯಾಗಿದ್ದ ಲೆಸ್ಲಿ ಸಿ ಕೋಲ್ಮನ್ ಇವರು  ನಮ್ಮ…

Read more
error: Content is protected !!