ನಯಾ ಪೈಸೆ ಖರ್ಚಿಲ್ಲದ ಕೃಷಿ ಹೀಗೆ.

ದೇಸೀ ಹಸುವೊಂದಿದ್ದರೆ  ನೀವು ಯಾವ ಗೊಬ್ಬರದಂಗಡಿಯವನನ್ನೂ  ಸಾಕಬೇಕಾಗಿಲ್ಲ.  ಹಸುವಿನ ಸಗಣಿ, ಅದರ ಮೂತ್ರ, ಮಜ್ಜಿಗೆ, ಹಾಲು, ಶುಂಠಿ ರಸ, ಬ್ರಹ್ಮಾಸ್ತ್ರ, ಅಗ್ನ್ಯಾಸ್ತ್ರ, ನೀಮಾಸ್ತ್ರ ಮುಂತಾದ ಸ್ಥಳೀಯವಾಗಿ ದೊರೆಯುವ ಮೂಲ ವಸ್ತುಗಳಿಂದ ಬೆಳೆಯ ಸರ್ವಾಂಗೀಣ ಅವಶ್ಯಕತೆಯನ್ನೂ ಪೂರೈಸಬಹುದು. ಎಲ್ಲವೂ ಬದಲಾಗಲಿದೆ : ಕೆಲವೇ ವರ್ಷಗಳಲ್ಲಿ ಈ ದೇಶದಲ್ಲಿರುವ ಸರಕಾರೀ ಸ್ವಾಮ್ಯದ ರಸಗೊಬ್ಬರ  ತಯಾರಿಕಾ  ಸಂಸ್ಥೆಗಳು ಬಾಗಿಲು ಹಾಕಲಿವೆ. ಲಕ್ಷಾಂತರ ಜನ ನಿರುದ್ಯೋಗಿಗಳಾಗಲಿದ್ದಾರೆ. ಕೊಟ್ಯಾಂತರ ರೂಪಾಯಿ ವ್ಯವಹಾರದ  ರಸಗೊಬ್ಬರ, ಕೀಟ ನಾಶಕ, ರೋಗನಾಶಕ ಹಾಗೂ ಇನ್ನಿತರ ಬೆಳೆ  ಸಂರಕ್ಷಕ ತಯಾರಕರು…

Read more
less water ans weed less

15 ದಿನಕ್ಕೊಮ್ಮೆ ನೀರು ಕೊಟ್ಟರೆ ಸಾಕು!

ಪಾಲಿಥೀನ್ ಶೀಟನ್ನು ಮಳೆಗಾಲ ಮುಗಿಯುವಾಗ ನೆಲಕ್ಕೆ ಹಾಕಿ. ತೀವ್ರ ಬೇಸಿಗೆಯ ಜನವರಿ ನಂತರ  15 ದಿನಕ್ಕೊಮ್ಮೆ ನೀರುಣಿಸಿದರೆ ಯತೇಚ್ಚ ಸಾಕಾಗುತ್ತದೆ.ಈ ವಿಧಾನದಿಂದ ಗರಿಷ್ಟ ನೀರು ಉಳಿಸಬಹುದು. ಸಸ್ಯಗಳ ಬೇರುಗಳಿಗೆ ಬೇಕಾಗುವ ಸೂಕ್ತ ವಾತಾವರಣವನ್ನೂ ದೊರಕಿಸಿಕೊಡಬಹುದು.  ಆಧುನಿಕ ತಂತ್ರಜ್ಞಾನಗಳು ಕೃಷಿ ಕ್ಷೇತ್ರದ ಸುಧಾರಣೆಗೆ ನೀಡಿದ ಕೋಡುಗೆಗಳನ್ನು ಸಮರ್ಪಕವಾಗಿ ಬಳಸಿಕೊಂಡದ್ದೇ ಆದರೆ ಭವಿಷ್ಯದಲ್ಲಿ  ನೀರಿನ ಸಮಸ್ಯೆಯಿಂದ ಪಾರಾಗಬಹುದು.    ಒಂದು ಕಾಲದಲ್ಲಿ ತರಕಾರಿ ಬೆಳೆಗಳಿಗೆ ಮಾತ್ರ ಬಳಸಲ್ಪಡುತ್ತಿದ್ದ ಈ ಮಲ್ಚಿಂಗ್ ಶೀಟುಗಳು ಈಗ ಬಹುತೇಕ ಎಲ್ಲಾ ಬೆಳೆಗಳಿಗೂ ಬಳಕೆಯಾಗುತ್ತಿವೆ.  ಮಲ್ಚಿಂಗ್…

Read more
ಫ್ಯುರಡಾನ್ ಹರಳು

ಫ್ಯುರಡಾನ್- ಫೋರೇಟ್ ಇದು ಅಪಾಯಕಾರೀ ಕೀಟನಾಶಕ.

ಹೆಚ್ಚಿನ ರೈತರು ನೆಲದ ಹುಳಕ್ಕೆ ಪ್ಯುರಡಾನ್ – ಫೋರೇಟ್  ಬಳಸುತ್ತಾರೆ . ಇದು ಪ್ರಭಲ ಕೀಟನಾಶಕ. ಅಗತ್ಯ ಇದ್ದರೆ ಮಾತ್ರ ಬಳಸಿದರೆ ಕ್ಷೇಮ. ಮಣ್ಣು ಸಂಬಂಧಿತ ಕೆಲವು ಜಂತು ಹುಳು ಹಾಗೂ ದುಂಬಿಗಳ ನಾಶಕ್ಕೆ ಫ್ಯುರಡಾನ್. ಫೋರೇಟ್ ಎಂಬ ಎರಡು  ಬಗೆಯ ಕೀಟನಾಶಕಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಇವು ಮರಳಿನ (ರೆಸಿನ್) ಮೇಲೆ ಕೀಟನಾಶಕವನ್ನು ಲೇಪನಮಾಡಿ ತಯಾರಿಸುತ್ತಾರೆ. ಫ್ಯುರಡಾನ್ ನಲ್ಲಿ ವಾಸನೆ ಇಲ್ಲ ಫೋರೇಟ್ ನಲ್ಲಿ  ವಾಸನೆ ಇದೆ. ಫ್ಯುರಡಾನ್ ನಲ್ಲಿ ಕಾರ್ಬೋಸಲ್ಫಾನ್ ಎಂಬ ಅಂಶ 3% (G…

Read more

ಆಡಿಕೆ ಗರಿ ಹಳದಿಯಾಗಲು ಇದು ಕಾರಣ.

ಸಸ್ಯಗಳಿಗೆ ಉತ್ತಮ ಬಿಸಿಲು ದೊರೆತಾಗ ಅವುಗಳ ಎಲೆಗಳು ಹೆಚ್ಚು ಹೆಚ್ಚು ಉಸಿರಾಟ  ಕ್ರಿಯೆ  ನಡೆಸಿ ಚೆನ್ನಾಗಿ ಬೆಳೆಯುತ್ತವೆ. ಆದರೆ  ಕೆಲವೊಮ್ಮೆ ಈ ಅತಿಯಾದ ತಾಪಮಾನ ಕೆಲವು ಕೀಟಗಳನ್ನು ಆಕರ್ಷಿಸುತ್ತವೆ. ಇಂತದ್ದರಲ್ಲಿ ಒಂದು ಅಡಿಕೆಯ ಗರಿಯಲ್ಲಿ ವಾಸ ಮಾಡುವ ಕೆಂಪು ಮತ್ತು ಬಿಳಿ ತಿಗಣೆ. ಅಡಿಕೆ ಬೆಳೆಗೆ  ಸಹ್ಯ ತಾಪಮಾನ 35 ಡಿಗ್ರಿ  ತನಕ. ಅದಕ್ಕಿಂತ ಹೆಚ್ಚಾದರೆ ಅದು ಸಹಿಸಿಕೊಳ್ಳುವುದಿಲ್ಲ. ಅದಕ್ಕಾಗಿಯೇ  ನಮ್ಮ ಹಿರಿಯರು ಅಡಿಕೆ ತೋಟವನ್ನು ಅದಕ್ಕೆ ಸೂಕ್ತವಾದ ಜಾಗದಲ್ಲಿ ಮಾತ್ರ ಮಾಡಬೇಕು ಎನ್ನುತ್ತಿದ್ದರು. ಅಡಿಕೆ ಬೆಳೆಯಲು…

Read more

ಸತ್ವಯುತ ಕಾಂಪೊಸ್ಟು ತಯಾರಿಕೆ ಹೀಗೆ.

ಕಾಂಪೋಸ್ಟು ಅದರಲ್ಲೇನಿದೆ. ಹೊಂಡ ಮಾಡುವುದು ಅದಕ್ಕೆ  ಎಲ್ಲಾ  ತ್ಯಾಜ್ಯಗಳನ್ನು  ಹಾಕುವುದು ಗೋಬರ್ ಗ್ಯಾಸ್ ಸ್ಲರಿಯನ್ನು  ಎರೆಯುವುದು. ಕೆಲವು ತಿಂಗಳಲ್ಲಿ ಕಾಂಪೋಸ್ಟು  ತಯಾರಾಗುತ್ತದೆ. ಇದು ನಿಜವಾಗಿಯೂ ಸೂಕ್ತ  ಕಾಂಪೋಸ್ಟು ತಾಂತ್ರಿಕತೆ ಆಲ್ಲ. ಇದರಲ್ಲಿ ಯಾವ ಪೋಷಕಗಳೂ ಇರುವುದಿಲ್ಲ. ಸಾವಯವ ತ್ಯಾಜ್ಯಗಳು ಹಾಕಿದ ತರಹವೇ ಯಾವುದೇ ರೂಪಾಂತರಗೊಳ್ಳದೆ ಇರುತ್ತವೆ. ಗುಂಡಿಯ  ಒಳಗಡೆ ನೀರು ಹೆಚ್ಚಾಗಿರುತ್ತದೆ. ಇದು ಸೂಕ್ಷ್ಮ ಜೀವಿಗಳನ್ನು ಬದುಕಲು ಬಿಡುವುದಿಲ್ಲ.  ಯಾವುದೇ ಸಾವಯವ ತ್ಯಾಜ್ಯ ಕಾಂಪೋಸ್ಟು ಕ್ರಿಯೆಗೆ ಒಳಪಟ್ಟಾಗ ಅದು ಹುಡಿ ಆಗಬೇಕು. ಗುಂಡಿ ಪದ್ದತಿಯಲ್ಲಿ ಅದು ಆಗುವುದಿಲ್ಲ….

Read more

5 ವರ್ಷದೊಳಗೆ ನೀರು ಬರಿದಾಗುತ್ತದೆ. ಎಚ್ಚರ . !!

ಅಂತರ್ಜಲ ಒಂದು ಸಂಗ್ರಹಿತ ಜಲ ಮೂಲ. ಇದನ್ನು ಎಷ್ಟು ಹಿತಮಿತವಾಗಿ ಬಳಕೆ ಮಾಡುತ್ತೇವೆಯೋ ಅಷ್ಟು ಸಮಯ ಅದು ನೀರು ಕೊಡುತ್ತಿರುತ್ತದೆ. ಅಂತರ್ಜಲವನ್ನು ನಾವು ಸಾಮೂಹಿಕವಾಗಿ ಉಳಿಸುವ ಪ್ರಯತ್ನ ಮಾಡಿದರೆ ಉಳಿಸಬಹುದು. ಈಗ ನಾವು  ಮಾಡುತ್ತಿರುವ ಅನಾಚಾರದಲ್ಲಿ ಇದು ಕೆಲವೇ ಸಮಯದಲ್ಲಿ ನಮಗೆ ಕೈ ಕೊಡುತ್ತದೆ. ರಾಜ್ಯ – ದೇಶದಾದ್ಯಂತ ಅಂತರ್ಜಲ ಮಟ್ಟ ಕುಸಿಯುತ್ತಿದೆ. ಸುಮಾರು 25  ವರ್ಷದ ಹಿಂದೆ ಅಂತರ್ಜಲ ಮಟ್ಟ 250 ಅಡಿಯಲ್ಲಿದ್ದುದು, ಈಗ 500 ಅಡಿಗೆ ಮುಟ್ಟಿದೆ. ಅಪವಾದವಾಗಿ ಕೆಲವು ಕಡೆ ಸ್ವಲ್ಪ ಮೇಲೆಯೇ…

Read more
ಏಳಿಗೆ ಕಾಣದ ಅಡಿಕೆ ಗಿಡ

ಸಸ್ಯಗಳು ಎಷ್ಟೇ ಆರೈಕೆ ಮಾಡಿದರೂ ಏಳಿಗೆ ಆಗದಿರಲು ಕಾರಣ.

ಮನುಷ್ಯರಿಗೆ ಹೊಟ್ಟೆ ಹುಳ ಬಾಧಿಸಿದರೆ ಏನಾಗುತ್ತದೆಯೋ ಅದೇ ರೀತಿ ಇದು ಬೇರುಗಳಿಗೆ ಬಾಧಿಸಿ, ಸಸ್ಯ ಬೆಳವಣಿಗೆಯನ್ನು  ಹಿಂಡುತ್ತವೆ. ಬೆಳೆ ಬೆಳೆಸುವ ಸಂಧರ್ಭದಲ್ಲಿ ಒಮ್ಮೊಮ್ಮೆ ಒಂದೊಂದು ಹೊಸ ಸಮಸ್ಯೆಗಳು ಉಧ್ಭವವಾಗುತ್ತದೆ. ಅದರಲ್ಲಿ ಒಂದು ನಮಟೋಡು. ಕೆಲವೇ ಬೆಳೆಗಳಿಗೆ ತೊಂದರೆ ಮಾಡುತ್ತಿದ್ದ ಇದು, ಈಗ ಎಲ್ಲಾ ಬೆಳೆಗಳನ್ನು ಮುಟ್ಟಿದೆ. ಇದು ಸಸ್ಯದ ಬೇರುಗಳಲ್ಲಿ ಸೇರಿಕೊಂಡು ಭಾರೀ ತೊಂದರೆ ಮಾಡುತ್ತದೆ. ಮೈನರ್ ಪೆಸ್ಟ್ ಇದ್ದುದು ಮೇಜರ್ ಪೆಸ್ಟ್ ಎಂಬ ಸ್ಥಾನ ಪಡೆಯಲಾರಂಭಿಸಿದೆ. ಬಾಳೆ, ದಾಳಿಂದೆ, ದ್ರಾಕ್ಷಿ, ಪೇರಳೆ, ಹಿಪ್ಪು ನೇರಳೆ, ಬದನೆ, ಬೆಂಡೆ, ಸೌತೆ…

Read more

ನೀವೂ ಮಾಡಬಹುದು- ಸರಳ ಬಡ್ಡಿಂಗ್.

ನಿಮಗೆ ಬೇರೆಕಡೆ ಉತ್ತಮ ಹಣ್ಣಿನ – ಹೂವಿನ ಸಸಿ ನೋಡಿ, ಅದನ್ನು ನಿಮ್ಮಲ್ಲೂ ಬೆಳೆಸಬೇಕೆಂಬ ಆಸೆ ಉಂಟಾದರೆ, ಒಂದು  ಅದೇ ಜಾತಿಯ ಬೇರು ಗಿಡ ಇದ್ದರೆ ಸಾಕು. ಅಲ್ಲಿಂದ ಎಲೆಗಳು ಇರುವ ಒಂದು ಸಣ್ಣ  ಕಾಂಡದ ತುಂಡು ತಂದು ಅದರಿಂದ ಸಸಿ ಮಾಡಿಕೊಳ್ಳಬಹುದು. ಇದು ಬಡ್ಡಿಂಗ್ ವಿಧಾನದಲ್ಲಿ. ಪ್ರತೀ ಡೈಕೋಟ್ ( ದ್ವಿದಳ) ಸಸ್ಯದ ಎಲೆಯ ಕಂಕುಳಲ್ಲಿ ಒಂದು ಮೊಳಕೆ ಬರುವ ಜೀವ ಕೋಶ ಇರುತ್ತವೆ. ಇದು ಅನುಕೂಲ ಕೂಡಿ ಬಂದಾಗ ಅಲ್ಲೇ ಮೊಳೆತು ಹೊಸ ಚಿಗುರು…

Read more
ತೆಂಗಿನ ಕಾಂಡದಲ್ಲಿ ರಕ್ತ ಸೋರುವುದೇಕೆ?

ತೆಂಗಿನ ಕಾಂಡದಲ್ಲಿ ರಕ್ತ ಸೋರುವುದೇಕೆ?

ಕಾಂಡ ಎಂದರೆ ಅದರಲ್ಲಿ ಎಲ್ಲಾ ಜೀವ ಸತ್ವಗಳೂ ಸರಬರಾಜು ಆಗುವ ಸ್ಥಳ. ಇಲ್ಲಿ ಯಾವುದೇ ಗಾಯವಾದರೂ ರಕ್ತ ಸ್ರವಿಸಿದಂತೆ ರಸಸ್ರಾವ ಆಗುತ್ತದೆ.ಗಾಯ ಅಲ್ಲದೆ ಕೆಲವು ರೋಗ ಕಾರಕಗಳ ಸೋಂಕಿನಿಂದಲೂ ರಸಸ್ರಾವ ಆಗುತ್ತದೆ. ಇದನ್ನು ಸ್ಟೆಮ್ ಬ್ಲೀಡಿಂಗ್ ಎನ್ನುತ್ತಾರೆ. ಇದೊಂದು ಪ್ರಮುಖ ರೋಗವಾಗಿದ್ದು, ತೆಂಗು ಬೆಳೆಯುವ ಬಹುತೇಕ ಪ್ರದೇಶಗಳಲ್ಲಿ  ಇದೆ. ಮೊದಲಾಗಿ ಇದು ಶ್ರೀಲಂಕಾ ದೇಶದಲ್ಲಿ ಕಂಡು ಬಂತು. ನಂತರ ನಮ್ಮ ದೇಶ ಮತ್ತು ತೆಂಗು ಬೆಳೆಯಲಾಗುವ ಇತರ ದೇಶಗಳಿಗೂ ಪ್ರಸಾರವಾಯಿತು. ಹೇಗೆ ರೋಗ ಬರುತ್ತದೆ: ಕಾಂಡದಲ್ಲಿ ರಸ…

Read more
ಬೇರು ಹುಳ ಬಾಧಿತ ತೆಂಗು

ತೆಂಗಿಗೂ ತೊಂದರೆ ಮಾಡುತ್ತಿದೆ- ಬೇರು ಹುಳ

ಎಷ್ಟೇ ಪೊಷಕಾಂಶ ಒದಗಿಸಿದರೂ ಸ್ಪಂದಿಸದೆ, ಮರದ ಗರಿಗಳು ಸದಾ ತಿಳಿ ಹಸುರು ಬಣ್ಣದಲ್ಲಿದ್ದರೆ, ಇಳುವರಿ ತೀರಾ ಕಡಿಮೆ  ಇರುವುದೇ ಆಗಿದ್ದರೆ   ಅಂತಹ ಮರಕ್ಕೆ ಬೇರು ಹುಳದ ತೊಂದರೆ  ಇದೆ ಎಂದು ಸಂಶಯ ಪಡಬಹುದು. ತೆಂಗಿನ ಮರಕ್ಕೆ  ಸಾಕಷ್ಟು ನೀರು ಒದಗಿಸಿ- ಗೊಬ್ಬರ ಕೊಡಿ ಒಂದು ವರ್ಷ ತನಕ ಕಾಯಿರಿ. ಎಲೆಗಳು ಹಸುರಾಗದೇ, ಗರಿಗಳು ಹೆಚ್ಚದೇ ಇದ್ದರೆ ಅಂತಹ ಮರಗಳಿಗೆ ಬೇರು ಹುಳ ಬಾಧಿಸಿದೆ ಎಂದು ಖಾತ್ರಿ ಮಾಡಿಕೊಳ್ಳಬಹುದು. ಕರ್ನಾಟಕದ ಅಡಿಕೆ ಬೆಳೆಯುವ ಪ್ರದೇಶಗಳಲ್ಲೆಲ್ಲಾ ಬಹುತೇಕ ಹೆಚ್ಚು ಕಡಿಮೆ …

Read more
error: Content is protected !!