mulching for water saving

ಇದು 75% ದಷ್ಟು ನೀರು ಉಳಿಸುವ ವಿಧಾನ.

 ಬೇಸಿಗೆ ಬಂದರೆ ಸಾಕು .ನೀರು- ನೀರಾವರಿ, ನೀರಿನ ಕೊರತೆ.  ದಿನಾ ಇದೇ ಕೆಲಸ. ಬೇಸಿಗೆ ಬಂದರೆ ಸಾಕು ಎಲ್ಲೂ ಹೋಗುವಂತಿಲ್ಲ. ನೀರಾವರಿಯದ್ದೇ ತಲೆಬಿಸಿ. ಇಷ್ಟೆಲ್ಲಾ ನೀರುಣಿಸಿದರೆ  ಅಂತರ್ಜಲ ಯಾಕೆ  ಭೂ ಗರ್ಭದ ಪಾತಾಳ ಜಲಕ್ಕೂ ಹೋಗಬೇಕಾಗ ಬಹುದು. ಇದಕ್ಕೆ  ಪರಿಹಾರ ಎಷ್ಟು ಬೇಕೋ ಅಷ್ಟು ನೀರು ಕೊಟ್ಟು, ಆವೀಕರಣವನ್ನು ಶೂನ್ಯ ಮಾಡುವುದು. ಆವೀಕರಣ ತಡೆದರೆ ಸಸ್ಯಕ್ಕೆ  ಬೇಕಾಗುವ ನೀರು ತುಂಬಾ ಕಡಿಮೆ. ಮಳೆ ಹಿಂದಿನಂತಿಲ್ಲ: ಪ್ರಕೃತಿಯ ನಡೆ ಹೇಗಿರುತ್ತದೆ ಎಂದು ಬಲ್ಲವರಾರೂ ಇಲ್ಲ. ಮಳೆ ಬಂದರೆ ಬಂತು….

Read more
ಸಾವಯವ ವಿಧಾನದ ಕಳೆ ನಿಯಂತ್ರಣ

ಸಾವಯವ ಕಳೆ ನಿಯಂತ್ರಣ ವಿಧಾನ.

ರಾಸಾಯನಿಕ ವಿಧಾನದ ಕಳೆ ನಿಯಂತ್ರಣದ ಬದಲಿಗೆ ಸಾವಯವ ವಿಧಾನದಲ್ಲಿ ಕಳೆ ನಿಯಂತ್ರಿಸಲು ಸಾಧ್ಯವಿದೆ.  ಇದರಿಂದ ಮಣ್ಣಿನ ಫಲವತ್ತತೆ ಹೆಚ್ಚಾಗುತ್ತದೆ. ಕೆಲಸ ಸ್ವಲ್ಪ ದುಬಾರಿಯಾದರೂ ಈ ವಿಧಾನದ ಕಳೆ ನಿಯಂತ್ರಣ ಎಲ್ಲಾ ದೃಷ್ಟಿಯಿಂದಲೂ ಉತ್ತಮ. ಕೃಷಿ ಭೂಮಿ ಫಲವತ್ತತೆ ಕಳೆದುಕೊಳ್ಳುತ್ತಿರುವ ಈ ಸಂದರ್ಭದಲ್ಲಿ ಇಂತಹ ವಿಧಾನದ ಕಳೆ ನಿಯಂತ್ರಣ ನಮ್ಮ ಆದ್ಯತೆಯಾದರೆ ಒಳ್ಳೆಯದು. ಕಳೆ ನಿಯಂತ್ರಣ ಕೃಷಿಕರಿಗೆ  ಒಂದು ದೊಡ್ದ  ಸವಾಲು. ಕಳೆಗಳು ಹೊಲ ನಿರ್ವಹಣೆಗೆ  ತುಂಬಾ ಅನನುಕೂಲ ಪರಿಸ್ಥಿತಿಯನ್ನು  ಉಂಟು ಮಾಡುತ್ತವೆ. ನಾವು ಬಳಕೆ ಮಾಡುವ ಬಹುತೇಕ …

Read more

ಹೀಗೆ ಬೆಳೆ ಬೆಳೆದರೆ ಕೀಟ- ರೋಗ ಇಲ್ಲ.

ಬೆಳೆಗಳ  ಮೇಲೆ  ಬಿಳಿ ಬಟ್ಟೆಯ ತರಹದ ಪಾಲಿಮರ್ ಹೊದಿಕೆಯನ್ನು ಹೊದಿಸಿ ಬೆಳೆ  ಬೆಳೆಸುವುದು ಆಧುನಿಕ ಸಾವಯವ ಬೇಸಾಯ ತಾಂತ್ರಿಕತೆ. ಇಲ್ಲಿ ಹೊರಗಡೆಯಿಂದ ಬರುವ ಕೀಟ – ರೋಗಗಳು ಒಳಗೆ ಸುಳಿಯಲಾರವು. ಇದರೊಳಗಿನ ವಾತಾವರಣ ಸಸ್ಯಗಳಿಗೆ ಅನುಕೂಲವಾಗಿದ್ದು, ಗುಣಮಟ್ಟದ ಇಳುವರಿ ಬರುತ್ತದೆ. Click to WhatsApp and build your website now! ಕ್ರಾಪ್ ಕವರ್ ಏನು? ಬೆಳೆ ಬೆಳೆಯುವಾಗ ಸಸ್ಯದ ಮೇಲೆ  ಹೊದಿಸುವ ಒಂದು ಬಟ್ಟೆ ತರಹದ ವಸ್ತು. ನೋಡಲು ಬಟ್ಟೆ ತರಹವೇ ಇರುವ  ಇದನ್ನು spun…

Read more

ಖರ್ಚು ಇಲ್ಲದ ಕೀಟ ನಿಯಂತ್ರಣ ಮತ್ತು ಅಧಿಕ ಫಲ.

ಇದು ಪ್ರಾಕೃತಿಕ ಕೃಷಿ ಪದ್ದತಿ. ಪ್ರಕೃತಿಯ ನಡೆಗೆ ಸರಿಯಾಗಿ ನಮ್ಮ ಹೆಜ್ಜೆ. ಇದಕ್ಕೆ ಖರ್ಚು ಇಲ್ಲ. ನಿಮ್ಮ ಆರೋಗ್ಯಕ್ಕೂ ಇದು ಒಳ್ಳೆಯದು. ಬೆಳೆಗಳು ಇದಕ್ಕೆ ತ್ವರಿತವಾಗಿ ಸ್ಪಂದಿಸಿ ನಿಮಗೆ ಅಧಿಕ ಇಳುವರಿಯ ಮೂಲಕ ಪ್ರತಿಫಲ ಕೊಡುತ್ತವೆ. ತೀರ್ಥಹಳ್ಳಿಯ ಶ್ರೀ. ಪುರುಷೋತ್ತಮರಾಯರು ಎಲ್ಲಾ ಕಡೆ ಹೇಳುತ್ತಿದ್ದ ಮಾತು ಇದು, “ನೀವು ನಿಮ್ಮ ಹೊಲದ ಮೂಲೆ ಮೂಲೆಗೂ ಹೋಗಿದ್ದೀರಾ?, ಮರಗಳ ಬಳಿ ಹೋಗಿ ಮಾತನಾಡಿದ್ದೀರಾ” ಇದನ್ನು ಕೇಳಿ ಜನ ನಗೆಯಾಡಿದ್ದೂ ಇರಬಹುದು. ಆದರೆ ಈ ವಿಚಾರ ತಿಳಿಯದೆ ಆಡಿದ ಮಾತು…

Read more

ಸೂಕ್ಷ್ಮ ನೀರಾವರಿಯ ಹೃದಯ – ಫಿಲ್ಟರ್ ಗಳು.

ಫಿಲ್ಟರ್ ಎಂದರೆ ಯಾವ ನೀರಿನಲ್ಲಿ  ಯಾವ ರೀತಿಯ ಕಶ್ಮಲ ಇದೆ ಎಂಬುದನ್ನು  ಗಮನಿಸಿ ಅದನ್ನು ಸಮರ್ಪಕವಾಗಿ ಸೋಸಿ ಕೊಡುವ  ವ್ಯವಸ್ಥೆ.  ಬರಿ ಕಣ್ಣಿನಲ್ಲಿ ನೀರನ್ನು ಕಾಣುವಾಗ ಬಹಳ ಸ್ವಚ್ಚವಾಗಿ ಕಂಡರೂ ಅದರಲ್ಲಿ ಏನಾದರೂ ಕಶ್ಮಲ ಇದ್ದೇ ಇರುತ್ತದೆ. ಅದನ್ನು ಸೋಸದೇ ಹನಿ ನೀರಾವರಿಯ ಮೂಲಕ ಹರಿಸಿದರೆ  ವ್ಯವಸ್ಥೆ  ಸಮರ್ಪಕವಾಗಿ ಕೆಲಸ ಮಾಡುವುದಿಲ್ಲ. ಬೇರೆ ಬೇರೆ ಕಶ್ಮಲಗಳನ್ನು ನೀರಿನಿಂದ ಪ್ರತ್ಯೇಕಿಸಿ ಸೋಸಿ ಕೊಡುವ ಬೇರೆ ಸೋಸು ವ್ಯವಸ್ಥೆಗಳು ಇವು. ಮೆಷ್  ಫಿಲ್ಟರ್: (ಸ್ಕ್ರೀನ್ ) ಇದು 80-100-120 ಮೈಕ್ರಾನ್…

Read more
ಬೋರ್ ವೆಲ್ ನೀರಿನಲ್ಲಿರುವ ಕಶ್ಮಲಗಳು

ಬೋರ್ ವೆಲ್ ನೀರಿನಲ್ಲಿರುವ ಕಶ್ಮಲಗಳ ನಿವಾರಣೆ

ಹನಿ ನೀರಾವರಿ ಎಂದರೆ ನಾವು ಬಳಸುವ ನೀರಿನ ಮೂಲದಲ್ಲಿ  ಯಾವ ಕಶ್ಮಲ  ಇದೆ ಎಂದು ಕೂಲಂಕುಶವಾಗಿ ಗಮನಿಸಿ , ಅದನ್ನು ಸೋಸಲು  ಮತ್ತು ಸ್ವಚ್ಚಮಾಡಲು ಬೇಕಾದ ವ್ಯವಸ್ಥೆ ಮಾಡಿಕೊಂಡರೆ ಹನಿ ನೀರಾವರಿ 100% ಯಶಸ್ವಿ. ಹೆಚ್ಚಿನವರು ಕಡಿಮೆ ಖರ್ಚಿನಲ್ಲಿ ವ್ಯವಸ್ಥೆಗಳನ್ನು  ಮಾಡಿಕೊಳ್ಳುವ ಉದ್ದೇಶದಿಂದ ಅಗತ್ಯವಾದ ಸೋಸು ವ್ಯವಸ್ಥೆಗಳನ್ನು ಅಳವಡಿಸಿಕೊಳ್ಳುವುದಿಲ್ಲ. ಅದರ ಫಲವಾಗಿ ಸೂಕ್ಷ್ಮ ನೀರಾವರಿ ವ್ಯವಸ್ಥೆ  ಕೆಡುತ್ತದೆ. ಯಾವ ನೀರಿನ ಮೂಲ: ನಾವು ನೀರಾವರಿಗಾಗಿ ಬಳಕೆ ಮಾಡುವ ನೀರಿನ ಮೂಲಗಳೆಂದರೆ ಬಾವಿ- ಕೆರೆ ನೀರು, ಕೊಳವೆ ಬಾವಿ…

Read more

ಅಂತರ್ಜಲ ಮಟ್ಟ ಏರಿಸಲು ಕಷ್ಟ ಇಲ್ಲ.

ಎಲ್ಲೆಡೆ ಆಂತರ್ಜಲ ಮಟ್ಟ ಕುಸಿದಿದೆ, ನಾಳೆಯ ನೀರಿಗಾಗಿ ಇಂದು ಚಿಂತನೆ ನಡೆಯುತ್ತಿದೆ.ನೀರಿನ ತೃಷೆ ತಣಿಸಲು ಆಂತರ್ಜಲ ಬಳಕೆ ಪ್ರಾರಂಭ ಆದ ನಂತರ ಅಂತರ್ಜಲ ಮಟ್ಟ ಕುಸಿಯಲಾರಂಭಿಸಿತು. ಜನ ಮಳೆ ಕಡಿಮೆಯಾಗಿದೆ, ಹವಾಮಾನ ವೈಪರೀತ್ಯ ಎಂದೆಲ್ಲಾ ಹೇಳುತ್ತಾ ಜಲ ಜಾಗೃತಿ ಮೂಡಿಸುತ್ತಿದ್ದಾರೆ. ವಾಸ್ತವಾಗಿ ಅಂತರ್ಜಲ ಮಟ್ಟ ಕುಸಿತಕ್ಕೆ ಕಾರಣ ಹಲವು ಇದೆ. ಇದರಲ್ಲಿ ಅತಿಯಾದ ನೀರಿನ ಬಳಕೆ ಒಂದು. ಅಂತರ್ಜಲ ಕೆಳಗಿಳಿಯಲು ಕಾರಣ: ಸರಳವಾಗಿ ಹೇಳಬೇಕೆಂದರೆ ಲೆಕ್ಕಕ್ಕಿಂತ ಮಿತಿ ಮೀರಿ ನೀರಿನ ಬಳಕೆ ಆದುದೇ ಅಂತರ್ಜಲ ಕುಸಿತಕ್ಕೆ ಕಾರಣ….

Read more

ಬೇಸಿಗೆ ಕಾಲದಲ್ಲಿ ನೀರೊತ್ತಾಯ ತಡೆಯಲು ಹೀಗೆ ಮಾಡಿಕೊಳ್ಳಿ.

ಬೇಸಿಗೆಯಲ್ಲಿ ಕೃಷಿಕರಿಗೆ ಹೊಲಕ್ಕೆ ನೀರುಣಿಸುವುದೇ ಕೆಲಸ. ಇಂದು ನೀರುಣಿಸಿದರೆ ನಾಳೆ ನೋಡುವಾಗ ಒಣಗಿರುತ್ತದೆ. ಅಷ್ಟೂ ನೀರನ್ನೂ ಬೆಳೆ ಸಸ್ಯಗಳು ಹೀರಿಕೊಳ್ಳುವುದಲ್ಲ. ಅದರಲ್ಲಿ ಮುಕ್ಕಾಲು ಪಾಲು ಆವಿಯಾಗಿ ವ್ಯಯವಾದರೆ ಕಾಲು ಪಾಲು ಮಾತ್ರ ಸಸ್ಯ ಬಳಕೆ ಮಾಡಿಕೊಳ್ಳುತ್ತದೆ. ಆವೀಕರಣ ತಡೆದರೆ ನೀರು ತುಂಬಾ ಕಡಿಮೆ ಸಾಕು. ಬೇಸಿಗೆ ಕಾಲ ಎಂದರೆ ಸೂರ್ಯನ ಪ್ರಖರ ಬಿಸಿಲಿಗೆ ಏನಿದ್ದರೂ ಒಣಗಿ ಹೋಗುವ ಕಾಲ. ಈ ಸಮಯದಲ್ಲಿ ಸಿಮೆಂಟ್ ನೆಲಕ್ಕೆ  1 ಲೀ. ನೀರು ಚೆಲ್ಲಿದರೆ ಅದು ಆವಿಯಾಗಲು ಆಗಲು  1 ಗಂಟೆ…

Read more

ಕೃಷಿ ಉತ್ಪನ್ನಗಳ ನಿರ್ಜಲೀಕರಣದಿಂದ ಲಾಭ ಹೆಚ್ಚು.

ಮಾರುಕಟ್ಟೆಯಲ್ಲಿ ವ್ಯಾಪಾರಿ ನನಗೆ ನಿಮ್ಮ  ಉತ್ಪನ್ನ ಬೇಕು ಎಂದು ಕೇಳುವ ಸ್ಥಿತಿ ಯಾವಾಗ ಬರುತ್ತದೆಯೋ ಆಗ ರೈತರು ತಮ್ಮ ಉತ್ಪನ್ನಕ್ಕೆ MRP ಇಡಬಹುದು. ಅದಕ್ಕೆ ಸ್ವಲ್ಪವೇ ತಯಾರಿ ನಡೆಯಬೇಕಿದೆ. ನೀವು 100  ಟನ್  ಬೀನ್ಸ್  ಬೆಳೆದರೆ ಕೊಳ್ಳುವ ವ್ಯಾಪಾರಿ ಬುದ್ದಿವಂತಿಕೆ  ಮೆರೆಯುತ್ತಾನೆ. ನಿಮ್ಮ ಕೊಯಿಲಿನ ಸಮಯದ ತನಕ ಉತ್ತಮ ಬೆಲೆ ಇದ್ದರೆ  ನೀವು ಕೊಯ್ಯುವಾಗ ಬೆಲೆ ನೆಲಕಚ್ಚುತ್ತದೆ. ಆ ಸಮಯದಲ್ಲಿ  ನೀವು “ನಾನು ಬೆಳೆದ ಬೆಳೆಯನ್ನು ಪೂರ್ತಿ ಸಂಸ್ಕರಣೆ ಮಾಡುತ್ತೇನೆ. ತಾಜಾ ಮಾರುಕಟ್ಟೆಗೆ ಕೊಡುವುದಿಲ್ಲ” ಎಂದರೆ ತಕ್ಷಣ …

Read more

ಈ ಸಸ್ಯಗಳಲ್ಲಿ ವಿಶೇಷ ಗುಣಗಳು ಇವೆ.

ಕಳೆ ಸಸ್ಯಗಳೆಂದು ನಾವು ನಿರ್ಲಕ್ಷ್ಯ ಮಾಡುವ ಕೆಲವು ಸಸ್ಯಗಳು ಮಣ್ಣೀನ ಫಲವತ್ತತೆ  ಹೆಚ್ಚಿಸಲು ಸಹಕಾರಿ. ಅವುಗಳಲ್ಲಿ ಒಂದು ಕ್ರೊಟಲೇರಿಯಾ ಜಾತಿಯ ಸಸ್ಯ. ಸಸ್ಯಗಳು ಮತ್ತು ಮಣ್ಣು:  ಅಲ್ಪಾವಧಿಯ ಸಸ್ಯಗಳಾದ ಇವುಗಳನ್ನು ಹೊಲದಲ್ಲಿ ಬೆಳೆಯುವುದರಿಂದ ಮಣ್ಣಿನ ಭೌತಿಕ ಮತ್ತು ಜೈವಿಕ ರಚನೆ ಅಭಿವೃದ್ದಿಯಾಗುತ್ತದೆ. ಇಂತವುಗಳು  ನಮ್ಮ ಸುತ್ತಮುತ್ತ ಹಲವಾರು ಇವೆ. ಯಾವುದು ದ್ವಿದಳ ಕಾಳುಗಳನ್ನು ಕೊಡುವ ಸಸ್ಯಗಳಿವೆಯೋ ಅವೆಲ್ಲಾ ಪೋಷಕಾಂಶ ಕೊಡುವ ಸಸ್ಯಗಳು.  ಮಣ್ಣು  ಈ ತನಕ ಜೀವಂತವಾಗಿ ಉಳಿದುಕೊಂಡು ಬಂದುದು ಅದರಲ್ಲಿ ಆಶ್ರಯಿಸಿರುವ ಸೂಕ್ಷ್ಮ ಜೀವಿಗಳು, ಸಸ್ಯಗಳು…

Read more
error: Content is protected !!