ತೋಟದಲ್ಲಿ ಕೆಸು ಕಳೆಯ ನಿಯಂತ್ರಣ ವಿಧಾನ.

ತೋಟದಲ್ಲಿ ಕೆಸು ಕಳೆಯ ನಿಯಂತ್ರಣ ವಿಧಾನ.

ಕೆಸು  Colocasia or Taro ಎಂಬುದು ಎಲ್ಲಾ ಪ್ರದೇಶಗಳಲ್ಲೂ ಕಂಡು ಬರುವ ಒಂದು ಕಳೆ ಸಸ್ಯ. ಇದರಲ್ಲಿ ನೂರಾರು ವಿಧಗಳಿದ್ದು, ಕೆಲವೇ  ಕೆಲವು ಅಡುಗೆ ಉದ್ದೇಶಕ್ಕೆ  ಬಳಕೆಮಾಡಲು ಸಲ್ಲುವಂತದ್ದು. ಹೆಚ್ಚಿನವು ಕಳೆ ಸಸ್ಯಗಳಂತೆ ಒಮ್ಮೆ ಹೊಲದಲ್ಲಿ ಹುಟ್ಟಿದರೆ ಅದನ್ನು ನಿರ್ನಾಮ ಮಾಡಲು ಸಾಧ್ಯವೇ ಆಗುವುದಿಲ್ಲ.  ಇದನ್ನು ನಿರ್ನಾಮ ಮಾಡುವುದು ಎಂದರೆ ಅದು ಭಗೀರಥ ಪ್ರಯತ್ನ ಎಂದೇ ಹೇಳಬಹುದು. ಇದು ಕಳೆಯಾಗಿ ಕಂಡರೂ ಅದು ಬೆಳೆಯುವುದು ಮಾತ್ರ ಫಲವತ್ತಾದ ಮಣ್ಣಿನಲ್ಲಿ ಎಂಬುದು ಇಲ್ಲಿ ಉಲ್ಲೇಖನೀಯ. ಒಳ್ಳೆಯವರಿಗೆ ಕಾಲವಿಲ್ಲ ಎಂಬ…

Read more
ಕಳೆನಾಶಕ ಬಳಕೆಯಿಂದ ಮಣ್ಣಿಗೆ ತೊಂದರೆ ಹೆಚ್ಚೋ, ಮಾನವನಿಗೋ?

ಕಳೆನಾಶಕ ಬಳಕೆಯಿಂದ ಮಣ್ಣಿಗೆ ತೊಂದರೆ ಹೆಚ್ಚೋ, ಮಾನವನಿಗೋ?

ಕಳೆನಾಶಕದ ಬಳಕೆಯಿಂದ ಮಣ್ಣು ಹಾಗಾಗುತ್ತದೆ, ಹೀಗಾಗುತ್ತದೆ ಎಂದೆಲ್ಲಾ ಹೇಳುವವರೇ ಹೊರತು ಇದನ್ನು ಬಳಸಿದ ಮಾನವನಿಗೆ ಏನಾಗುತ್ತದೆ ಎಂದು ಹೇಳುವವರು ಬಲು ಅಪರೂಪ. ಕಳೆನಾಶಕಗಳಿಂದ ಮಣ್ಣಿಗೆ ಹಾಳು ಎಂಬ ವಿಚಾರ ಒತ್ತಟ್ಟಿಗಿರಲಿ. ಬಳಕೆ ಮಾಡುವ ನಮಗೆಷ್ಟು ಹಾನಿಕರ ಎಂಬುದನ್ನು ತಿಳಿದುಕೊಳ್ಳುವ.ಕಳೆ ನಿಯಂತ್ರಣ ಬೆಳೆಗಾರರಿಗೆ ಈಗ ಅತೀ ದೊಡ್ಡ ಖರ್ಚಿನ ಬಾಬ್ತು ಆಗಿದೆ. ಹಿಂದೆ ಕಳೆಗಳನ್ನು ಕತ್ತಿ, ಕೈಯಿಂದ ಕೀಳಿ ತೆಗೆಯುತ್ತಿದ್ದೆವು. ಈಗ ಅದನ್ನು ಮಾಡಿದರೆ ಕೃಷಿ ಉತ್ಪತ್ತಿ ಆ ಕೆಲಸದವರ ಮಜೂರಿಗೆ ಸಾಲದು. ಆ ಸಮಸ್ಯೆ ನಿವಾರಣೆಗಾಗಿ ಈಗ…

Read more
ಅಂತರ್ಜಲ ಯಾಕೆ ಬರಿದಾಯಿತು? ಮುಂದಿನ ಸ್ಥಿತಿ ಏನಾಗಬಹುದು?

ಅಂತರ್ಜಲ ಯಾಕೆ ಬರಿದಾಯಿತು? ಮುಂದಿನ ಸ್ಥಿತಿ ಏನಾಗಬಹುದು?

ಈ ವರ್ಷ ಕರಾವಳಿ ಮಲೆನಾಡಿನಲ್ಲಿ ಅಂತರ್ಜಲ ಬರಿದಾಗಲಾರಂಭಿಸಿದೆ. ಕೆಲವು ಮೂಲಗಳ ಪ್ರಕಾರ ಸುಮಾರು 25% ಕೊಳವೆ ಬಾವಿಗಳು ಬರಿದಾಗಿವೆ. ಈ ವರ್ಷ ಕೊರೆದಷ್ಟು ಕೊಳವೆ ಬಾವಿ ಈ ಹಿಂದೆ ಯಾವ ವರ್ಷದಲ್ಲೂ ಆದದ್ದಿಲ್ಲ ಎನ್ನುತಾರೆ ಜಲ ಶೋಧಕರು ಮತ್ತು ರಿಗ್ ಏಜೆಂಟರು. ಯಾಕೆ ಇಷ್ಟೊಂದು ಕೊಳವೆ ಬಾವಿ ಬರಿದಾಯಿತು? ಮುಂದೆ ಕೊಳವೆ ಬಾವಿ ನೀರಿನ ಮೂಲವನ್ನು ಆಶ್ರಯಿಸಿ ಕೃಷಿ ಮಾಡುವವರ ಸ್ಥಿತಿ ಏನಾಗಬಹುದು? ಯಾವ ಮುನ್ನೆಚ್ಚರಿಕೆ ವಹಿಸಬೇಕು ಈ ಬಗ್ಗೆ ಮಾಹಿತಿ ಇಲ್ಲಿದೆ. ಕರಾವಳಿ ಮತ್ತು ಮಲೆನಾಡಿನ…

Read more
ಹಾಲಿ ವರ್ಷದಲ್ಲಿ 50% ಅಡಿಕೆ ಉತ್ಪಾದನೆ ಕೊರತೆ. ಬೆಲೆ ಏರುವ ಸಾಧ್ಯತೆ

ಹಾಲಿ ವರ್ಷದಲ್ಲಿ 50% ಅಡಿಕೆ ಉತ್ಪಾದನೆ ಕೊರತೆ. ಬೆಲೆ ಏರುವ ಸಾಧ್ಯತೆ.

ಹಾಲೀ ವರ್ಷದ ಹವಾಮಾನ ವೈಪರೀತ್ಯದ ಕಾರಣ ಅಡಿಕೆಯ ಸಾಂಪ್ರದಾಯಿಕ ಬೆಳೆ ಪ್ರದೇಶಗಳಲ್ಲಿ 50% ಫಸಲು ನಷ್ಟವಾಗಿದ್ದು, ಈ ನಷ್ಟ ಇನ್ನೂ ಒಂದೆರಡು ಮುಂದುವರಿಯುವ ಸಾಧ್ಯತೆ ಇದೆ.ಈಗಾಗಲೇ ಅಡಿಕೆ ತೋಟಗಳು ನೀರಿಲ್ಲದೆ, ನೀರು ಇದ್ದೂ ಹಾಳಾಗಿದೆ. ಅಡಿಕೆ ಮರಗಳಲ್ಲಿ ಗರಿಗಳು ಒಣಗಿವೆ. ಹೂಗೊಂಚಲು ಕರಟಿ ಹೋಗಿವೆ, ಬೆಳೆಗಾರರು ಮರ ಉಳಿದರೆ ಸಾಕು ಎನ್ನುವ ಸ್ಥಿತಿಗೆ ಬಂದಿದ್ದಾರೆ. ಅಡಿಕೆ ಬೆಳೆಗಾರರ ಪಾಲಿಗೆ ಈ ವರ್ಷದ ಹವಾಮಾನ ವೈಪರೀತ್ಯ ಅತೀ ದೊಡ್ಡ ನಷ್ಟವನ್ನು ಉಂಟುಮಾಡಿದೆ. ದಕ್ಷಿಣ ಕನ್ನಡ, ನೆರೆಯ ಕಾಸರಗೋಡು, ಉಡುಪಿ,…

Read more
ಕೆಲಸದವರು ಇಲ್ಲದೆ ಕೃಷಿ ಮುಂದುವರಿಯಬಹುದೇ?

ಕೆಲಸದವರು ಇಲ್ಲದೆ ಕೃಷಿ ಮುಂದುವರಿಯಬಹುದೇ? ರೈತರಿಗೆ ಕೃಷಿಯೇ ಬೇಡವಾಗುತ್ತಿದೆ.

ಕೃಷಿ ಎಂಬುದು ಉಳಿದ ಉದ್ದಿಮೆಗಳಂತೆ ಮಾಲಕ ಮತ್ತು ಕೆಲಸದವರ ಸಹಯೋಗದಲ್ಲಿ ಮುನ್ನಡೆಸಬೇಕಾದ ಕಸುಬು. ಆದರೆ ಇತ್ತೀಚಿನೆ ವರ್ಷಗಳಲ್ಲಿ ಕೃಷಿ ಕೆಲಸಕ್ಕೆ ಜನ ಸಿಗುತ್ತಿಲ್ಲ. ಸಿಗುವ ಜನರ ಕ್ಷಮತೆ ಏನೇನೂ ಇಲ್ಲದಾಗಿದೆ. ಕೆಲಸದವರ ಸಹಕಾರ ಇಲ್ಲದೆ ಕೃಷಿ ಇಂದು ಬಡವಾಗುತ್ತಿದೆ. ಇದರಿಂದಾಗಿ ಕೃಷಿಯನ್ನು ವೃತ್ತಿಯಾಗಿ ಸ್ವೀಕರಿಸಿದವರಿಗೆ ಇದು ಬೇಡ ಎಂಬ ಭಾವನೆ ಬರಲಾರಂಭಿಸಿದೆ !.ಕೃಷಿ ಕೆಲಸ ಎಂದರೆ ಅದು ಸ್ವಲ್ಪ ಕೆಳಮಟ್ಟದ್ದು ಎಂಬ ಭಾವನೆ ಹೊಸ ತಲೆಮಾರಿನಲ್ಲಿ ಮೂಡಲಾರಂಭಿಸಿದೆ. ವಿಶೇಷವಾಗಿ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಕೃಷಿ ಕೆಲಸಕ್ಕೆ ಜನ…

Read more
ಹಣ್ಣು - ತರಕಾರಿ ಬೆಳೆಯುವವರ ಪಾಲಿಗೆ ಪರಮ ವೈರಿ ಈ ಕೀಟ.

ಹಣ್ಣು – ತರಕಾರಿ ಬೆಳೆಯುವವರ ಪಾಲಿಗೆ ಪರಮ ವೈರಿ ಈ ನೊಣ.

ಹಣ್ಣು  ತರಕಾರಿ ಬೆಳೆಗಾರರು ಬೆಳೆದ ಎಲ್ಲಾ ಉತ್ಪನ್ನಗಳೂ ಹಾಳಾಗದೆ ಉಳಿದರೆ, ಅವರಿಗೆ ಲಕ್ಷ್ಮಿ ಒಲಿದಂತೆ. ಆದರೆ ಈ ಒಂದು ಕೀಟ ಅವರ ಪಾಲಿನ ಪರಮ ವೈರಿ. ದೇವರು ಕೊಟ್ಟರೂ ಅರ್ಚಕ ಬಿಡ ಎಂಬಂತೆ ಈ ಕೀಟ  ಸಾಧ್ಯವಾದಷ್ಟೂ ತೊಂದರೆ ಮಾಡಿ ರೈತನ ಪಾಲಿಗೆ ಸಿಂಹ ಸ್ವಪ್ನವಾಗುತ್ತಿದೆ. ನಮ್ಮ ದೇಶವೂ ಸೇರಿದಂತೆ ಪ್ರಪಂಚದಾದ್ಯಂತ ರೈತ ಬೆಳೆದ ಹಣ್ಣು , ತರಕಾರಿಗಳಲ್ಲಿ 50% ಕ್ಕೂ ಹೆಚ್ಚು ಕೀಟಗಳ ಪಾಲಾಗುತ್ತಿವೆ. ಮಾವಿನ ಹಣ್ಣಿಗೆ ಮಾರುಕಟ್ಟೆಯಲ್ಲಿ ಕಿಲೋ 100 ಇರಬಹುದು. ಆದರೆ ರೈತನಿಗೆ…

Read more
ಖರ್ಚು ಕಡಿಮೆಮಾಡಿ ಅಧಿಕ ಫಸಲು ಪಡೆಯುವ ಸರಳ ವಿಧಾನ

ಖರ್ಚು ಕಡಿಮೆ ಮಾಡಿ ಅಧಿಕ  ಇಳುವರಿ ಪಡೆಯುವ ಸುಲಭೋಪಾಯ.

ಖರ್ಚು ಮಾಡಿ ಅಧಿಕ ಫಸಲು ಪಡೆಯುವ ಬಗ್ಗೆ ನಮ್ಮಲ್ಲಿರುವ ಆಸಕ್ತಿ , ಉಚಿತ ಸಂಪನ್ಮೂಲಗಳನ್ನು ಬಳಸಿಕೊಳ್ಳುವ ಬಗ್ಗೆ ಕಡಿಮೆ. ಪ್ರಕೃತಿ ಕೆಲವು ಉಚಿತ ಬೆಳೆ ಪೋಷಕಗಳನ್ನು ಕೊಡುತ್ತದೆ. ಅದನ್ನು ಸರಿಯಾಗಿ ಬಳಸಿಕೊಂಡರೆ ಬೆಳೆ ಖರ್ಚು ಕಡಿಮೆಯಾಗುತ್ತದೆ. ಇಳುವರಿ ಹೆಚ್ಚಾಗುತ್ತದೆ. ರಸ್ತೆ ಅಥವಾ ಗದ್ದೆ ಹುಣಿಯ ತೆಂಗಿನ ಮರದಲ್ಲಿ ಫಸಲು ಯಾಕೆ ಹೆಚ್ಚು? ತೋಟದಲ್ಲಿ ಎತ್ತರದ ಅಡಿಕೆ ಮರಗಳಲ್ಲಿ ಫಸಲು ಹೆಚ್ಚು ಮತ್ತು ರೋಗ ಕೀಟದ ಬಾಧೆಯೂ ಕಡಿಮೆ. ಬಯಲು ಸೀಮೆಯ ತರಕಾರಿ, ಹಣ್ಣು ಹಂಪಲುಗಳಿಗೆ ರುಚಿ (…

Read more
ಮಳೆ ಬಂದಿದೆ, ಕೆರೆ ತುಂಬಿದೆ ಅಂತರ್ಜಲ ಬರಿದಾಗುತ್ತಿದೆ. ಎಚ್ಚರ!.

ಮಳೆ ಬಂದಿದೆ, ಕೆರೆ ತುಂಬಿದೆ  ಅಂತರ್ಜಲ ಬರಿದಾಗುತ್ತಿದೆ. ಎಚ್ಚರ!.

ಮಳೆ ಬಂದಿದೆ ಕೆರೆ ತುಂಬಿದೆ ನೀರಿಗೇನೂ ಬರವಿಲ್ಲ ಎಂದು ನಂಬಿದ್ದ ನಮ್ಮ ನಂಬಿಕೆ ಈಗ ಹುಸಿಯಾಗಲಾರಂಭಿಸಿದೆ. ಎಲ್ಲೆಲ್ಲೂ ಕೊಳವೆ ಬಾವಿಗಳು ಇಳುವರಿ ಕಡಿಮೆಯಾಗುತ್ತಿದೆ. ವಿಫಲವಾಗುತ್ತಿದೆ. ಕಿಂಡಿ ಅಣೆಕಟ್ಟುಗಳು, ಕಿರು ಜಲವಿದ್ಯುತ್  ಉತ್ಪಾದಿಸುವ ಅಣೆಕಟ್ಟುಗಳಲ್ಲೂ ನೀರಿಲ್ಲದಾಗಿದೆ. ರೈತರು ಹೊಸ ಬಾವಿ ತೋಡಲು ರಿಗ್ ನ ಹಿಂದೆ ತಿರುಗುವಂತಾಗಿದೆ. ಅಂತರ್ಜಲ ಕಳೆದ ಕೆಲವು ವರ್ಷಗಳಿಂದ ರೈತರೂ ಸೇರಿದಂತೆ ಎಲ್ಲರೂ ಕೊಳವೆ ಬಾವಿ ನೀರಿಗೇ ಅವಲಂಬಿತರಾದ ಕಾರಣ ಅಂತರ್ಜಲದ ಮೇಲೆ ಒತ್ತಡ ಹೆಚ್ಚಿದೆ. ಎಲ್ಲಿ ನೋಡಿದರಲ್ಲಿ ಕೊಳವೆ ಬಾವಿ ತೋಡುವ ಸದ್ದು…

Read more
ಹಳೆಯ ಬೋರ್ ವೆಲ್ ರಿ-ಡ್ರಿಲ್ಲಿಂಗ್

ಹಳೆಯ ಬೋರ್ ರಿ-ಡ್ರಿಲ್ಲಿಂಗ್-  ಇದು ಲಾಭದಾಯಕವೇ?

ಹಿಂದೆ ಡ್ರಿಲ್ ಮಾಡಲಾದ  ಹಳೆಯ ಬೋರ್ ವೆಲ್ ಅನ್ನು ಮತ್ತೆ ಆಳ ಮಾಡಿದರೆ ಹೆಚ್ಚು ನೀರು ಪಡೆಯಬಹುದು. ಇದು ಒಂದಷ್ಟು ಜನ ರೈತರ ಇಚ್ಚೇ. ಹಳೆಯ ಬೋರ್ ವೆಲ್ ಆಳ ಮಾಡಿದರೆ ಇರುವ ನೀರಿಗೆ ತೊಂದರೆ ಇಲ್ಲ. ಆಳದಲ್ಲಿ ಹೆಚ್ಚಿನ ನೀರು ಸಿಕ್ಕರೆ ಅದು ಲಾಭ. ಹೇಗೂ 250-300 ಅಡಿ ಕೊರೆದು ಆಗಿದೆ. ಇನ್ನು ಸ್ವಲ್ಪ ತೋಡಿದರೆ ಖರ್ಚು ಕಡಿಮೆ, ರಿಸ್ಕ್ ಸಹ ಕಡಿಮೆ ಎಂಬುದು ರೈತರ ತರ್ಕ. ಈ ಬಗ್ಗೆ ಬೋರ್ ವೆಲ್ ಡ್ರಿಲ್ಲಿಂಗ್ ಮತ್ತು…

Read more
ಕೃಷಿ ಮತ್ತು ಮನುಕುಲಕ್ಕೆ ಆತಂಕ ಉಂಟುಮಾಡುತ್ತಿದೆ ಪ್ರಕೃತಿಯ ಮುನಿಸು

ಕೃಷಿ ಮತ್ತು ಮನುಕುಲಕ್ಕೆ ಆತಂಕ ಉಂಟುಮಾಡುತ್ತಿದೆ ಪ್ರಕೃತಿಯ ಮುನಿಸು.

ಪ್ರಕೃತಿ ಅನುಕೂಲಕರವಾಗಿದ್ದರೆ ಮಾತ್ರ ಮನುಕುಲ ಕ್ಷೇಮದಿಂದ ಇರಲು ಸಾಧ್ಯ. ಈಗ ಪ್ರಕೃತಿ ಮುನಿಸಿಕೊಂಡಂತಿದೆ. ಹವಾಮಾನ ಬದಲಾಗುತ್ತಿದೆ. ನಾವು ಹೊಟ್ಟೆ ಹೊರೆಯಲು ಬೆಳೆಸುವ ಬೆಳೆಗಳ ಮೇಲೆ ಹಾಗೂ ನಮ್ಮೆಲ್ಲರ ಆರೋಗ್ಯದ ಮೇಲೆ ಇದರ ದುಶ್ಪರಿಣಾಮ ಉಂಟಾಗಲಾರಂಭಿಸಿದೆ. ಮುಂದಿನ ದಿನಗಳಲ್ಲಿ ಕೃಷಿ ಉತ್ಪಾದನೆ ಕುಂಠಿತವಾಗಲಿದೆ ಎಂಬುದಾಗಿ ತಜ್ಞರು ಸರಕಾರಕ್ಕೆ ವರದಿ ನೀಡಿದ್ದಾರೆ. ಜನ ಆನಾರೋಗ್ಯ ಸಮಸ್ಯೆಯಿಂದ  ಬಳಲು ಸ್ಥಿತಿ ಉಂಟಾಗಿದೆ. ಹವಾಮಾನ ಬದಲಾವಣೆಯ ಬಿಸಿ ಈ ವರ್ಷ ಕೃಷಿ ಕ್ಷೇತ್ರಕ್ಕೆ ವಿಪರೀತವಾಗಿ ಬಾಧಿಸುವ ಸಾಧ್ಯತೆ ಇದೆ. ಶಿವರಾತ್ರೆ ಕಳೆದ ಮೇಲೆ…

Read more
error: Content is protected !!