ಬೇರು ಹುಳ ಪೀಡಿತ ಅಡಿಕೆ ತೋಟ

ಬೇರು ಹುಳ ನಿಯಂತ್ರಣಕ್ಕೆ ಜೈವಿಕ ನಿಯಂತ್ರಕ –EPN.

ಜೈವಿಕವಾಗಿ ಕೆಲವು ಕೀಟಗಳನ್ನು ನಿಯಂತ್ರಿಸಲು ಸಾಧ್ಯ. ಅದರಲ್ಲಿ ಒಂದು EPN.  ಇದು ಬೇರು ಹುಳಗಳನ್ನೇ ಆಶ್ರಯಿಸಿ ಬದುಕಿ, ಅದನ್ನು ಕೊಲ್ಲುತ್ತದೆ. ಇದರ ಬಳಕೆ ಸುಲಭ. ಇದನ್ನು ರೈತರೇ ಉತ್ಪಾದಿಸುವ ತಂತ್ರಜ್ಝಾನವನ್ನು  CPCRI ಹೇಳಿಕೊಡುತ್ತದೆ. ಅಡಿಕೆ ತೆಂಗು, ಕಬ್ಬು ಬೆಳೆಗಾರರು ಬೇರು ಹುಳದ ಸಮಸ್ಯೆಗೆ ಯಾವುದು ಉತ್ತಮ ಪರಿಹಾರ ಎಂಬ ಹುಡುಕಾಟದಲ್ಲಿದ್ದಾರೆ. ಇತ್ತೀಚೆಗೆ ಈ ಹುಳ  ನಿಯಂತ್ರಣಕ್ಕೆ ಜೈವಿಕ ಪರಿಹಾರ ಉತ್ತಮವಾಗಿ ಕೆಲಸ ಮಾಡುತ್ತದೆ ಎಂದು ತಿಳಿಯಲಾಗಿದೆ. ಇದರಲ್ಲಿ ಒಮ್ದು ಎಂಟಮೋ ಪಥೋಜೆನಿಕ್ ನಮಟೋಡ್ (EPN) Entomopathogenic Nematodes ಇದನ್ನು ಬಳಸಿ…

Read more
ಬಾಳೆ ಸುಳಿ ಕೊಳೆಯುವಿಕೆ

ಬಾಳೆಯಲ್ಲಿ ಸುಳಿ ಹೀಗೆ ಆಗುವುದು ಯಾವ ಕಾರಣಕ್ಕೆ?.

ಚೆನ್ನಾಗಿ ಬೆಳೆಯುತ್ತಿರುವ ಬಾಳೆಯಲ್ಲಿ ಇದ್ದಕ್ಕಿದ್ದಂತೆ ಸುಳಿ ಭಾಗ ಕಪ್ಪಗಾಗುತ್ತದೆ, ಮುರಿದು ಬೀಳುತ್ತದೆ. ನಂತರ ಅದು ಕೊಳೆತು ಹೋಗುತ್ತದೆ. ಇದು ಎಲ್ಲಾ ಕಡೆ ಕಂಡುಬರುವ ಸಮಸ್ಯೆಯಾಗಿದ್ದು, ಇಂತಹ ಬಾಳೆ ಸರಿ ಮಾಡಲಾಗದಿದ್ದರೂ ಅದರ ಕಂದನ್ನು ಸರಿಮಾಡಬಹುದು. ಕೆಳಸ್ಥರದ ಎಲೆಗಳೆಲ್ಲಾ ಸರಿಯಾಗಿದ್ದು, ತುದಿ ಭಾಗದ ಸುಳಿ ಎಲೆ, ಗಿಡ್ಡವಾಗಿ ಕೊಳೆಯುವ ಒಂದು ಸಮಸ್ಯೆ ಎಲ್ಲಾ ಬಾಳೆ  ಬೆಳೆಗಾರರೂ ಗಮನಿಸಿದ್ದು. ಇದು ಮಳೆಗಾಲದಲ್ಲಿ ಮತ್ತು ಇಬ್ಬನಿ ಬೀಳುವ ಸಮಯದಲ್ಲಿ  ಹೆಚ್ಚು. ಇದರ ನಿಯಂತ್ರಣ ಹೀಗೆ.  ಬಾಳೆ ಬೆಳೆಸುವವರ ಹಿಡಿತದಲ್ಲಿಲ್ಲದ ಸಮಸ್ಯೆ ಎಂದರೆ…

Read more
ಕಳೆನಾಶಕ ಬಳಸಿ ಸಾಯಿಸಿದ ಹುಲ್ಲು

ಕಳೆನಾಶಕಗಳಿಂದ ಕ್ಯಾನ್ಸರ್ ಬರುವುದು ನಿಜವೇ ?

ಕಳೆನಾಶಕಗಳನ್ನು ಬಳಸಿದರೆ ಕ್ಯಾನ್ಸರ್ ಬರುತ್ತದೆ ಎಂಬುದಾಗಿ ಈಗ ಇರುವ ವ್ಯಾಪಕ ಪ್ರಚಾರ. ಕಳೆನಾಶಕ ಬಳಕೆ ಮಾಡುವುದು ಕಳೆಗಳನ್ನು ಕೊಲ್ಲಲು. ಕಳೆಗಳನ್ನು ಕೊಲ್ಲಲು ಸೂಕ್ತ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದೆ ಇದ್ದರೆ, ಕಳೆನಾಶಕ ಬಳಸಿದ ಹುಲ್ಲನ್ನು ಪಶುಗಳಿಗೆ ಮೇವಾಗಿ ಕೊಟ್ಟರೆ ಅದು ಕ್ಯಾನ್ಸರ್ ಕಾರಕವಾಗಬಹುದು. ಆದರೆ ಹುಲ್ಲು ಸತ್ತಾಗ ಅದಕ್ಕೆ ಕ್ಯಾನ್ಸರ್ ಬರಲಾರದು. ಹಾಗಾಗಿ ಕಳೆನಾಶಕ ಕಳೆಗಳಿಗೆ ಅಗತ್ಯವಿದ್ದರೆ ಮಾತ್ರ ಬಳಕೆ ಮಾಡುವುದು ಸೂಕ್ತ. ಬಹುಷಃ ಮಾಧ್ಯಮಗಳ ಮೂಲಕ ಮಾಹಿತಿ ಪಡೆಯುವ ಪ್ರತೀಯೊಬ್ಬ ಕಳೆನಾಶಕ ಬಳಕೆದಾರನಿಗೂ ಈ ಸಂದೇಶ ತಲುಪಿರಬಹುದು….

Read more
ಸರಿಯಾದ ಸಮಯಕ್ಕೆ ಸಿಂಪರಣೆ ಮಾಡಿದಾಗ ಹೀಗೆ ಹೂ ಬಿಡುತ್ತದೆ

ಚಿಗುರು ಉಳಿಸಿದರೆ – ಮಾವು ಉತ್ತಮ ಫಲ ಕೊಡುತ್ತದೆ.

ವಾಣಿಜ್ಯಿಕವಾಗಿ ಮಾವಿನ ಬೇಸಾಯ ಮಾಡುವವರು  ಮಾವಿನ ಹಣ್ಣು ಬೆಳೆಯುವ ತನಕ ಕನಿಷ್ಟ  8-10 ಸಲ  ಕೀಟನಾಶಕ ರೋಗ ನಾಶಕ ಸಿಂಪಡಿಸುತ್ತಾರೆ. ಇದನ್ನು ಮಾಡದೇ ಇದ್ದರೆ  ಮಾವಿನ ಬೇಸಾಯವೇ ವ್ಯರ್ಥ. ಯಾವುದೇ ಒಂದು ಬೆಳೆಯನ್ನು ವಾಣಿಜ್ಯಿಕವಾಗಿ ಮಾಡುವಾಗ ಅದಕ್ಕೆ ಕೀಟಗಳು ರೋಗಗಳು ಹೆಚ್ಚು. ನಿಯಂತ್ರಣ ಕೈಗೊಳ್ಳದೇ ಇದ್ದರೆ ಅದರ ಹಾನಿ ಹೆಚ್ಚಾಗುತ್ತಾ ಇರುತ್ತದೆ. ಇಂತದ್ದರಲ್ಲಿ ಒಂದು ಮಾವಿನ ಚಿಗುರು ಕೊರಕ ಹುಳು. ಚಿಗುರು ಸಸ್ಯ ಬೆಳವಣಿಗೆಯ ಪ್ರಮುಖ ಹಂತ. ಅದಕ್ಕೆ ತೊಂದರೆ ಆದಾಗ ಸಸ್ಯ ಬೆಳವಣಿಗೆ ಕುಂಠಿತವಾಗಿ ,…

Read more
ಟಿ ಸೊಳ್ಳೆ ಬಾಧಿಸದ ಗೇರು ಮಿಡಿ

ಗೇರು ಬೆಳೆಯಲ್ಲಿ ಹೆಚ್ಚು ಫಸಲು ಪಡೆಯಲು ಈ ಕ್ರಮ ಅನುಸರಿಸಿ.

ಗೇರು ಬೆಳೆಗೆ ಅಗತ್ಯವಾಗಿ ಬೇಕಾದ ಆರೈಕೆ ಎಂದರೆ ಚಿಗುರು ಮತ್ತು ಹೂವು ಬರುವಾಗ ಕೀಟ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳುವುದು. ಇಲ್ಲಿ ಉದಾಸೀನ ಮಾಡಿದರೆ ಫಸಲು ಭಾರೀ ಕಡಿಮೆಯಾಗುತ್ತದೆ. ಈ ಸಮಯದಲ್ಲಿ ಟಿ. ಸೊಳ್ಳೆ ಫಸಲಿನ ನಶ್ಟವನ್ನು ಉಂಟು ಮಾಡುತ್ತದೆ. ಗೋಡಂಬಿ ಬೆಳೆಯಲ್ಲಿ ಟಿ- ಸೊಳ್ಳೆ ಕೀಟವನ್ನು  ನಿಯಂತ್ರಿಸಿಕೊಂಡಲ್ಲಿ ಬೆಳೆ ಬಂಪರ್. ಆದಾಯವೂ ಸೂಪರ್. ಟಿ ಸೊಳ್ಳೆ ಕೀಟವನ್ನು ಸುರಕ್ಷಿತವಾಗಿ ನಿಯಂತ್ರಣ ಮಾಡುವುದು ಹೀಗೆ. ರಸ್ತೆ ಬದಿಯಲ್ಲಿರುವ ಗೇರು ಮರಗಳಿಗೆ ಯಾವ ಟಿ- ಸೊಳ್ಳೆಯ ಕಾಟವೂ ಇಲ್ಲ….

Read more
pest problem

ಅಡಿಕೆ ಹೂಗೊಂಚಲು ಒಣಗುತ್ತಿದೆಯೇ ? ಯಾವ ಕಾರಣ- ಪರಿಹಾರ.

ಅಧಿಕ ಆದಾಯದ ಅಡಿಕೆ ಬೆಳೆಯಲ್ಲಿ ಹೂಗೊಂಚಲು ಒಣಗುವ ಸಮಸ್ಯೆ ಅತೀ ದೊಡ್ಡದು. ಇದಕ್ಕೆ ಪರಿಹಾರ ಸಿಂಗಾರಕ್ಕೆ ಸಿಂಪರಣೆ ಒಂದೇ.ರಾಸಾಯನಿಕ ಸಿಂಪರಣೆ ಇಷ್ಟವಿಲ್ಲದವರು ಮರದಲ್ಲಿ ಒಣಗಿದ ಹೂಗೊಂಚಲು ಶೇಷವನ್ನು ಸಂಪೂರ್ಣವಾಗಿ ತೆಗೆದು ಸ್ವಲ್ಪ ಮಟ್ಟಿಗೆ ನಷ್ಟದಿಂದ ಪಾರಾಗಬಹುದು. ಕಳೆದ ವರ್ಷ ಅಡಿಕೆ ಬೆಳೆಗಾರರು ಭಾರೀ ಪ್ರಮಾಣದಲ್ಲಿ ಬೆಳೆ ನಷ್ಟ ಮಾಡಿಕೊಂಡಿದ್ದಾರೆ. ಕಾರಣ ಉತ್ತಮ ಹೂ ಗೊಂಚಲು ಇತ್ತು. ಆದರೆ ಹೂ ಗೋಂಚಲೆಲ್ಲಾ ಒಣಗಿ ಹಾಳಾಗಿದೆ. ಇದರಿಂದಾಗಿ ಬೆಳೆ ಸುಮಾರು 30% ನಷ್ಟವಾಗಿದೆ. ಈ ವರ್ಷ ಹಾಗಾಗಬಾರದು ಎಂದು ಬೆಳೆಗಾರರು…

Read more
Healthy pepper vine

“ಟ್ರೈಕೋಡರ್ಮಾ’ ರೋಗ ನಿರೋಧಕ ಶಕ್ತಿಗೆ ಸಂಜೀವಿನಿ

ಟ್ರೈಕೋಡರ್ಮಾ ಅಥವಾ ಇನ್ಯಾವುದೇ ಜೀವಾಣುಗಳನ್ನು ಮಣ್ಣಿಗೆ ಸೇರಿಸುವುದರಿಂದ ಮಣ್ಣಿನ ಜೈವಿಕ ಗುಣಧರ್ಮ ಬದಲಾಗುತ್ತದೆ. ಎಲ್ಲಾ ಜೀವಾಣುಗಳೂ ಮಣ್ಣು ಮೂಲದವುಗಳೇ ಆಗಿದ್ದು, ಅವುಗಳನ್ನು ಸಂಸ್ಲೇಶಿಸಿ ಕೃತಕವಾಗಿ ಬೆಳೆಸಿ ಸೂಕ್ತ ಮಾದ್ಯಮದಲ್ಲಿ ಸೇರಿಸಿ ರೈತರಿಗೆ ಬೇರೆ ಬೇರೆ ಬೆಳೆಗೆ ಬಳಕೆ ಮಾಡಲು ಕೊಡಲಾಗುತ್ತದೆ. ಇದು ಸಸ್ಯಗಳಿಗೆ  ರೋಗ ನಿರೋಧಕ ಶಕ್ತಿಯನ್ನು ಕೊಡಬಲ್ಲ ಮತ್ತು ರೋಗಕಾರಕ ಸೂಕ್ಷ್ಮಾಣು ಜೀವಿಗಳ ಜೊತೆಗೆ ಬದುಕಿ ಅದನ್ನು ನಿಶ್ಕ್ರಿಯಗೊಳಿಸುವ ಶಕ್ತಿಯನ್ನು ಹೊಂದಿದೆ. ಟ್ರೈಕೋಡರ್ಮಾ  ಎಂಬ ಶಿಲೀಂದ್ರವನ್ನು ಬಹಳ ಹಿಂದೆಯೇ ಸೂಕ್ಷ್ಮಾಣು ಜೀವಿ ಶಾಸ್ತ್ರಜ್ಞರು (1974)ಮಣ್ಣಿನಲ್ಲಿರುವುದನ್ನು ಗುರುತಿಸಿದ್ದಾರೆ….

Read more
ಅಡಿಕೆ ಮರಗಳಿಗೆ ಸುಣ್ಣ ಬಳಿದು ಬಿಸಿಲಿನಿಂದ ರಕ್ಷಣೆ

ಅಡಿಕೆ ಮರಕ್ಕೆ ಸುಣ್ಣ ಯಾಕೆ ಕೊಡಲೇ ಬೇಕು? ಇದರಿಂದಾಗಿ ಲಾಭ ಎಷ್ಟು?

ಅಡಿಕೆ ಮರದ ಕಾಡಕ್ಕೆ ನಿರಂತರ ಬಿಸಿಲಿನ ಹೊಡೆತ ಬೀಳುವುದರಿಂದ ಆ ಭಾಗ ಬಿಸಿಯಾಗುತ್ತದೆ. ಮೊದಲಿಗೆ ಬಿಸಿಲು ತಾಗಿದ ಭಾಗ ಹಳದಿ ಮಿಶ್ರ ಕೆಂಪು ಬಣ್ಣದಲ್ಲಿ ಕಾಣಿಸುತ್ತದೆ. ವರ್ಷ ಕಳೆದಾಗ ಅಲ್ಲಿ ಸಣ್ಣ ಒಡಕು ಕಾಣಿಸುತ್ತದೆ. ಎರಡು ಮೂರು ವರ್ಷ ಕಳೆದಾಗ ಆ ಭಾಗ ನಿರ್ಜೀವವಾಗುತ್ತದೆ. ಅದು ಎದ್ದು ಬರಲೂ ಬಹುದು. ಗಾಳಿಗೆ ಬೀಳಲೂ ಬಹುದು. ಇದನ್ನು ತಡೆಯುವ ಉಪಾಯ ಮರದ ಕಾಂಡಕ್ಕೆ ಎಅರಡನೇ ವರ್ಷದಿಂದ ಸಾದ್ಯವಾದಷ್ಟು ವರ್ಷದ ತನಕ ಸುಣ್ಣದ ಲೇಪನ ಒಂದೇ. ಚಳಿಗಾಲ ಪ್ರಾರಂಭವಾಗುವ ಕಾರ್ತಿಕ…

Read more
ಸುಳಿ ಮುರುಟಿದ ಅಡಿಕೆ ಗಿಡ

ಅಡಿಕೆ ಸಸ್ಯಗಳು ಮುರುಟಿಕೊಳ್ಳುವುದೇಕೆ? ಪರಿಹಾರ ಏನು?

ಅಡಿಕೆ ಸಸ್ಯಗಳ ಸುಳಿ ಮುರುಟಿಕೊಳ್ಳುವಿಕೆ ಮತ್ತು ಶಿರಭಾಗ ಬಾಗಿ ತಿರುಗುವಿಕೆ, ಗರಗಸ ಗಂಟು ಇವೆಲ್ಲಾ ಒಂದು ಶಾರೀರಿಕ ಸಮಸ್ಯೆಗಳು.ಕೆಲವು ಪ್ರಾಥಮಿಕ ಹಂತದಲ್ಲಿರುವವುಗಳನ್ನು ಸರಿಪಡಿಸಲು ಸಾಧ್ಯವಾಗುತ್ತದೆ. ಆದರೆ ಇದು ಸ್ವಲ್ಪ ನಿಧಾನ ಪ್ರಕ್ರಿಯೆ. ಗೊಬ್ಬರ ನಿರ್ವಹಣೆ ಮತ್ತು ಅಗತ್ಯ ಬೇಸಾಯ ಕ್ರಮದಲ್ಲೇ ಇದನ್ನು  ಸರಿಪಡಿಸಿಕೊಳ್ಳಲು ಸಾಧ್ಯ. ನೂರು ಅಡಿಕೆ ಮರಗಳಲ್ಲಿ ಕನಿಷ್ಟ 10 ಆದರೂ ಈ ತರಹ ಸುಳಿ ಮುರುಟುವುದು, ಗರಿ ಬಿಡಿಸಿಕೊಳ್ಳದೆ ಅಲ್ಲಿಗೆ ಗುಛ್ಛವಾಗುವುದು ಇರುತ್ತದೆ. ಇದಕ್ಕೆ ಪ್ರಾದೇಶಿಕ ಇತಿ ಮಿತಿ ಇಲ್ಲ. ಇದನ್ನು ಕೆಲವರು ಹಿಡಿ…

Read more
ಬಾಳೆ ಎಲೆ ವೈರಾಣು ರೋಗ ಚಿನ್ಹೆ- Virus diseae symptom

ಬಾಳೆಯ ಎಲೆ ಹೀಗೆ ಆದರೆ ಅದು ಯಾರಿಂದಲೂ ಸರಿಪಡಿಸಲು ಸಾಧ್ಯವಿಲ್ಲ..

ಬಾಳೆ ಹಾಗೆಯೇ ಇನ್ನೂ ಕೆಲವು ಬೆಳೆಗಳಲ್ಲಿ ವೈರಾಣು ರೋಗ ಬಂದಿತೆಂದರೆ ಅದನ್ನು ಉಳಿಸಿದರೆ ಬೇರೆ ಬಾಳೆಗೆ ಹರಡುತ್ತದೆ. ಇದನ್ನು  ಮುಂಚಿತವಾಗಿ ಗುರುತಿಸಿ ಅದನ್ನು ನಾಶ ಮಾಡುವುದರಲ್ಲೇ ಇರುವುದು ಬಾಳೆಯ ರೋಗ ಮುಕ್ತ ಬೇಸಾಯ ಕ್ರಮ. ನೀವು ನೆಟ್ಟ ಬಾಳೆಯ ಎಲೆಗಳು  ಸಹಜವಾಗಿ ಇರದೆ ಎಲೆಗಳ ಮೂಡುವಿಕೆ ಗುಚ್ಚದ ತರಹ ಆಗಿ, ಯಾವುದೂ ಪೂರ್ಣವಾಗಿ ಬಿಡಿಸಿಕೊಳ್ಳದಿದ್ದರೆ ಅದು ನಂಜಾಣು ರೋಗ. ಕೆಲವು ಎಲೆಗಳು ಸಹಜವಾಗಿ ಬಂದು ನಂತರ ಬರುವ ಎಲೆಗಳು ಶಕ್ತಿ ಕಳೆದುಕೊಂಡು ಹಳದಿಯಾಗಿ ಮೂಡಿತೆಂದರೆ ಅದು ಸಹ…

Read more
error: Content is protected !!