ನ್ಯಾನೊ ಸಾರಜನಕ (ಸಾಂದರ್ಭಿಕ ಚಿತ್ರ

ಶ್ರೀಲಂಕಾಕ್ಕೆ ಮತ್ತೆ ಭಾರತದಿಂದ ಸಾರಜನಕ ಗೊಬ್ಬರ.

ನೆರೆಕರೆಯವರೊಂದಿಗೆ ಉತ್ತಮ ಬಾಂಧವ್ಯ ಬೆಳೆಸುವ ಇರಾದೆಯಲ್ಲಿ ಭಾರತ ಸರಕಾರವು ಮತ್ತೆ ಶ್ರೀಲಂಕಾದ ಕೃಷಿಯನ್ನು ಮೇಲೆ ಎತ್ತಲು ನ್ಯಾನೋ ಸಾರಜನಕ ಗೊಬ್ಬರವನ್ನು ವಿಮಾನದಲ್ಲಿ ಕಳುಹಿಸಿಕೊಟ್ಟಿದೆ.  ಭಾರತದ ಔದಾರ್ಯವೋ ಚೀನಾಕ್ಕೆ ಸೆಡ್ದೋ ಒಟ್ಟಿನಲ್ಲಿ ಭಾರತ ಶ್ರೀಲಂಕಾಕ್ಕೆ ಬೆಂಬಲವಾಗಿ ನಿಂತಿದೆ. ನ್ಯಾನೋ ಯೂರಿಯಾ ಭಾರತದಲ್ಲಿ ಇಫ್ಕೋ ಸಂಸ್ಥೆ ಇತ್ತೀಚೆಗಷ್ಟೇ ಬಿಡುಗಡೆ ಮಾಡಿದ್ದು, ಭಾರತದ   ರೈತರು ಇದನ್ನು ಎಷ್ಟು ಬಳಕೆ ಮಾಡಿದ್ದಾರೋ ಗೊತ್ತಿಲ್ಲ. ಶ್ರೀಲಂಕಾಕ್ಕೆ ಅದೇ ನ್ಯಾನೋ ಸಾರಜನಕವನ್ನು ಕಳುಹಿಸಲಾಗಿದೆಯೋ ಬೇರೆ ಕಳುಹಿಸಲಾಗಿದೆಯೋ ಮಾಹಿತಿ ಇಲ್ಲ. ಶ್ರೀಲಂಕಾದ ಸಾವಯವ ಕೃಷಿಗೆ ಸಹಾಯ ಎನ್ನುತ್ತಿರುವ…

Read more
ಹೊಸ ರಾಸಿ ಅಡಿಕೆ

ದೀಪಾವಳಿ- ಅಡಿಕೆ ಆಶಾಧಾಯಕ- ಕರಿಮೆಣಸು ನಿರಾಸೆ. 02-11-2021 ರ ಧಾರಣೆಗಳು.

ನವೆಂಬರ್ ತಿಂಗಳ ಮೊದಲ ದಿನ, ದಿನಾಂಕ:02-11-2021  ರ ಮಂಗಳವಾರ ಅಡಿಕೆ ಮಾರುಕಟ್ಟೆ ಆಶಾದಾಯಕವಾಗಿಯೇ ಮುಂದುವರಿದಿದೆ.ಕರಿಮೆಣಸು ಮಾತ್ರ ಯಾಕೋ ಸ್ವಲ್ಪ ಹಿಮ್ಮೆಟ್ಟಿದೆ. ಈ ವಾರದಲ್ಲಿ ಇನ್ನು ಎರಡು ದಿನ ಮಾರುಕಟ್ಟೆ ಇರುತ್ತದೆ. ಆದರೆ ಈ ದಿನಗಳಲ್ಲಿ ಅಡಿಕೆ ಅವಕ ತುಂಬಾ ಕಡಿಮೆ ಇರುತ್ತದೆ. ಹಾಗಾಗಿ ಬಿಡ್ಡಿಂಗ್ ಕೂಡಾ  ಅಷ್ಟು ಹುಮ್ಮಸ್ಸಿನಲ್ಲಿ ಇರುವುದಿಲ್ಲ.  ಆದಾಗ್ಯೂ ಮಾರುಕಟ್ಟೆ ಸ್ಥಿರವಾಗಿ ಉಳಿಯಲಿದೆ ಎಂಬ ಮಾಹಿತಿಗಳಿವೆ. ಕರಿಮೆಣಸು ಶುಕ್ರವಾರದ ಹುರುಪಿಗೆ ಹೋಲಿಸಿದರೆಮತ್ತೆ ಸ್ವಲ್ಪ ಹಿಂಜರಿಕೆಯಾಗಿದೆ. ಇನ್ನೂ ಸ್ವಲ್ಪ ಹಿಂದೆ ಬರಬಹುದು ಎಂಬ ಮಾಹಿತಿಗಳಿವೆ. ಅದು…

Read more
ಪರಮ ಪವಿತ್ರವಾದ ಹಣತೆ ದೀಪ

ದೀಪಾವಳಿ – ರೈತರಿಗೆ ಬಹಳ ವಿಶೇಷ ಹಬ್ಬ

ದೀಪಾವಳಿ ಎಂಬ ದೀಪ ಬೆಳಗುವ ಹಬ್ಬ ಕೇವಲ ದೀಪ ಬೆಳಗುವ ಮತ್ತು ಪಠಾಕಿ ಸಿಡಿಸುವ ಹಬ್ಬ ಅಲ್ಲ. ಇದು ರೈತರಿಗೆ ಸುಗ್ಗಿ ಪ್ರಾರಂಭದ ಸಂಮೃದ್ದಿಯ ಹಬ್ಬ. ಶರತ್ಕಾಲದಲ್ಲಿ ಬರುವ  ಈ ಹಬ್ಬ ಆಚರಿಸುವ ನಾವೆಲ್ಲರೂ ಹಬ್ಬದ ಬಗ್ಗೆ ಒಂದಷ್ಟು ತಿಳಿದುಕೊಂಡು ಇದನ್ನು ಹೆಚ್ಚು ಅರ್ಥಗರ್ಭಿತವಾಗಿ ಆಚರಿಸಿದರೆ  ಒಳ್ಳೆಯದು. ಶರತ್ಕಾಲ ಅದರೆ ಅಕ್ಟೋಬರ್ ಕೊನೆಗೆ ಅಥವಾ ನವೆಂಬರ್ ಮೊದಲ ವಾರ ದೀಪಾವಳಿ ಎಂಬ ದೀಪದ ಹಬ್ಬವು ಬರುತ್ತದೆ. ಸಾಮಾನ್ಯವಾಗಿ ಈ ಹಬ್ಬವನ್ನು  ಕತ್ತಲಿನಿಂದ ಬೆಳಕಿನೆಡೆಗೆ, ಅಜ್ಞಾನದಿಂದ  ಸುಜ್ಞಾನದೆಡೆಗೆ, ಅಶುಭದಿಂದ…

Read more
ಗಾಳಿ ಮಳೆ

ಫೆಬ್ರವರಿ ತನಕವೂ ಮಳೆ ಬರುತ್ತದೆಯೇ?ಆತಂಕ ಬೇಡ.

ಕೆಲವು ವರದಿಗಳ ಪ್ರಕಾರ ಮುಂದಿನ ಫೆಬ್ರವರಿ ತನಕವೂ ಮಳೆ ಬರಲಿದೆ ಎಂಬ ಸುದ್ದಿಗಳಿವೆ. ಹೀಗೆ ಆದರೆ ಕೃಷಿಕರಿಗೆ ಅಪಾರ ನಷ್ಟವಾಗುತ್ತದೆ. ಹಾಗೆ ಆಗದೆ ಇರಲಿ ಎಂಬುದೇ ಎಲ್ಲರ ಆಶಯ. ಈ ಬಗ್ಗೆ ಕೆಲವು ಕಡೆ ಹುಡುಕಾಡಿದಾಗ ರೈತರು ಅಂತಹ ಆತಂಕ ಪಡಬೇಕಾಗಿಲ್ಲ. ಆಗಾಗ ಕೆಲವು ವಿಶೇಷ ದಿನಗಳ ಸಮಯಕ್ಕೆ ಕಾಕತಾಳೀಯವಾಗಿ ವಾಯುಭಾರ ಕುಸಿತ ಉಂಟಾಗಿ ಮಳೆ ಬರುವ ಸಾಧ್ಯತೆಗಳು ಕಂಡು ಬರುತ್ತವೆ. ಮಳೆ ಬೇಕು ಆದರೆ ಅದು ಯಾವಾಗ ಬರಬೇಕು ಆಗಲೇ ಬಂದರೆ ಅನುಕೂಲ. ಈ ವರ್ಷ…

Read more
ಕೊಬ್ಬರಿ ಧಾರಣೆ

ದಿನಾಂಕ 29-10-2021 ಶುಕ್ರವಾರ- ಅಡಿಕೆ-ಕರಿಮೆಣಸು- ಶುಂಠಿ-ಕೊಬ್ಬರಿ- ರಬ್ಬರ್- ಧಾರಣೆ.

ರಾಜ್ಯದ ವಿವಿಧ ಅಡಿಕೆ ಬೆಳೆಯುವ ಪ್ರದೇಶಗಳಲ್ಲಿ  ಅಡಿಕೆ, ಕರಿಮೆಣಸು, ಹಸಿ ಶುಂಠಿ, ಕೊಪ್ಬ್ಬರಿ ರಬ್ಬರ್ ಕಾಫೀ, ಮುಂತಾದ ತೋಟಗಾರಿಕಾ ಬೆಳೆಗಳ  ಮಾರುಕಟ್ಟೆ ಧಾರಣೆ ಹೀಗಿತ್ತು. ಚಾಲಿ ದರ ಸ್ಥಿರವಾಗಿತ್ತು. ಕೆಂಪು ಯಲ್ಲಾಪುರ ಮತ್ತು ಶಿರಸಿಗಳಲ್ಲಿ ಸ್ವಲ್ಪ ತೇಜಿ. ಉಳಿದೆಡೆ ಯಥಾಪ್ರಕಾರ ಸ್ಥಿರ.  ದರ ಇಳಿಕೆ ಆಗುವ ಸಾಧ್ಯತೆ ಇಲ್ಲ. ಭಾರೀ ಏರುವ ಸಾಧ್ಯತೆಯೂ ಇಲ್ಲ. ಕರಿಮೆಣಸು ದರ ಇಂದೂ ಸ್ವಲ್ಪ ಏರಿಕೆ. 500 ರ ಗಡಿ ದಾಟಿ 51000 ಕ್ಕೆ ಕಾಲಿಟ್ಟಿದೆ. ಕೆಲವು ವರ್ತಕರು ದರ ಮೇಲೇರುವ…

Read more
ಅಡಿಕೆ ಮಂಡಿ ಟೆಂಡರ್

ರಾಜ್ಯದಲ್ಲಿ ಇಂದು ಅಡಿಕೆ- ಕರಿಮೆಣಸು ಧಾರಣೆ. 28-10-2021 –ಗುರುವಾರ.

ಎಲ್ಲರ ಚಿತ್ತ ಅಡಿಕೆ ಧಾರಣೆಯ ಮೇಲೆ. ಈಗ ಕೆಲವು ದಿನಗಳಿಂದ ಕರಿಮೆಣಸು ಮೇಲೆಯೇ. ಅಡಿಕೆ ಧಾರಣೆ ಸಹ ಯಾವಾಗ ಏನಾಗುತ್ತದೆ ಎಂಬುದು ಯಾರಿಗೂ ಗೊತ್ತಿಲ್ಲ. ಹಾಗಾಗಿ ಕುತೂಹಲ. ಏರಿಕೆ ಆಗುತ್ತದೆ. ಹಾಗೆಯೇ ಇಳಿಕೆಯೂ ಆಗುತ್ತದೆ. ಅಕ್ಟೋಬರ್ ತಿಂಗಳ ಕೊನೆ ಎರಡು ವಾರಗಳಲ್ಲಿ ದರ ಸ್ಥಿರತೆ ಕಂಡುಬಂದಿದೆ. ಸಪ್ಟೆಂಬರ್ ನಲ್ಲಿ  ನಿರಾಸೆ ಮೂಡಿಸಿದ್ದ ಧಾರಣೆ ಅಕ್ಟೋಬರ್ ನಲ್ಲಿ ಸ್ವಲ್ಪ ಧೈರ್ಯ ಕೊಟ್ಟಿದೆ. ಸಧ್ಯಕ್ಕೆ ಅಡಿಕೆ ಧಾರಣೆ ಸ್ಥಿರತೆಯಲ್ಲಿ ಮುಂದುವರಿಯಲಿದೆ. ಏನಾದರೂ  ವ್ಯತ್ಯಾಸಗಳಾಗುತ್ತಿದ್ದರೆ, ನಿನ್ನೆ ಪಶ್ಚಿಮ ಬಂಗಾಲ ಸರಕಾರ  ಪಾನ್…

Read more
ಹೆಸರು

ಅಪೌಷ್ಟಿಕತೆಯತ್ತ ಜನತೆ- ಬೇಳೆ ಕಾಳು ಬೆಳೆಗಾರರ ಕಡೆಗಣನೆ.

ಮನುಷ್ಯರಿಗೆ ಮೆದುಳು ಶಕ್ತಿ ಚುರುಕು ಆಗಲು, ದೇಹದಲ್ಲಿ ಅಂಥಃಶಕ್ತಿ ಹೆಚ್ಚಲು ಬೇಕಾಗುವುದು ಪೌಷ್ಟಿಕ ಆಹಾರ. ವಿಟಮಿನ್ ಗಳು, ಪ್ರೋಟೀನುಗಳು ಹೇರಳವಾಗಿರುವ ಬೇಳೆ ಕಾಳುಗಳ ಬಳಕೆಯಿಂದ ಮಾತ್ರ ಇದು ಸಾಧ್ಯ. ಇವುಗಳ ಬೆಳೆ ಕಡಿಮೆಯಾಗುತ್ತಿದ್ದು, ಭವಿಷ್ಯದಲ್ಲಿ ಇದು ಮಾನವ ಸಂಪನ್ಮೂಲದ ಮೇಲೆ ಪರಿಣಾಮ ಬೀರಲಿದೆ. ಇದಕ್ಕೆಲ್ಲಾ ಕಾರಣ ದೇಶದಲ್ಲಿ ಈ ಬೆಳೆಗಳನ್ನು ಬೆಳೆಸುವವರ ಕಡೆಗಣನೆ. ಬೇಳೆ ಕಾಳುಗಳು ಮಾನವನಿಗೆ ಶಾರೀರಿಕ ಸಧೃಢತೆಯನ್ನು ಕೊಡುತ್ತವೆ. ಇದು ಪೌಷ್ಟಿಕ ಆಹಾರವಾಗಿದ್ದು, ಇದರ ಬಳಕೆ ಕಡಿಮೆ ಮಾಡಿದರೆ ನಮ್ಮ ಶಾರೀರಿಕ ಅಂಥಃ ಶಕ್ತಿ…

Read more
ಪೊಟ್ಯಾಶಿಯಂ ಕ್ಲೋರೈಡ್

ಶ್ರೀಲಂಕಾಕ್ಕೆ ಭಾರತದಿಂದ ಪೊಟ್ಯಾಶ್ ! ನಮ್ಮಲ್ಲಿ ಪೊಟ್ಯಾಶ್ ಭಾರೀ ಕೊರತೆ.

ಶ್ರೀಲಂಕಾ ದೇಶ ಸಾವಯವ ಕೃಷಿಯಲ್ಲಿ  ಪ್ರಾಪಂಚಿಕ ಮನ್ನಣೆ ಪಡೆದು, ಸಾವಯವ ಕೃಷಿ ಉತ್ಪನ್ನಗಳನ್ನೇ ಉತ್ಪಾದಿಸುವ ರಾಷ್ಟ್ರವಾಗಬೇಕು ಎಂದು ರಸಗೊಬ್ಬರ ಬ್ಯಾನ್ ಮಾಡಿ ಸಾವಯವ ಕೃಷಿಗೆ ಇಳಿಯಿತು. ಆದರೆ ಲೆಕ್ಕಾಚಾರ ತಲೆಕೆಳಗಾಯಿತು. ಈಗ ತಕ್ಷಣದ ಪರಿಹಾರಕ್ಕಾಗಿ ಭಾರತದಿಂದ ಪೊಟ್ಯಾಶ್ ಖರೀದಿಗೆ ಮುಂದಾಗಿದೆ ಎಂಬುದಾಗಿ ವರದಿಗಳಿವೆ. ಶ್ರೀಲಂಕಾ ಸರಕಾರದ ಸಾವಯವ ಕೃಷಿ ನೀತಿಗೆ ಜನ ಸಮುದಾಯದ ತೀವ್ರ ಆಕ್ಷೇಪ ವ್ಯಕ್ತವಾದ ಹಿನ್ನೆಲಯಲ್ಲಿ ಈ ಹೇರಿಕೆಯನ್ನು ಸ್ವಲ್ಪ ಸಡಿಲಗೊಳಿಸುವ ನಿರ್ಧಾರಕ್ಕೆ ಸರಕಾರ ಬಂದಿದೆ. ಸಾವಯವ ಕೃಷಿ ಒಮ್ಮಿಂದೊಮ್ಮೆಗೆ ಬದಲಾಗುವ ವಿಚಾರವಲ್ಲ. ನಿಧಾನವಾಗಿ…

Read more
ಕೆಂಪು ಅಡಿಕೆ

ಅಡಿಕೆ ಧಾರಣೆ ದಿನಾಂಕ 25-10-2021 ಸೋಮವಾರ.

ರಾಜ್ಯದ ವಿವಿಧ ಅಡಿಕೆ ಮಾರಾಟ ಕೇಂದ್ರಗಳಲ್ಲಿ ಇಂದು ಅಕ್ಟೋಬರ್ ತಿಂಗಳ ಕೊನೆಯ ಸೋಮವಾರ  ಅಡಿಕೆ ಧಾರಣೆ ಕರಿಮೆಣಸು, ಕಾಫೀ, ಕೊಬ್ಬರಿ, ಹಾಗೂ ರಬ್ಬರ್ ಧಾರಣೆ ಹೀಗಿತ್ತು. ರಬ್ಬರ್ ಧಾರಣೆ ಇಳಿಮುಖ. ಕರಿಮೆಣಸು ಕಳೆದ ನಾಲ್ಕು ವರ್ಷಗಳಿಂದ ಏರದ್ದು ಇಂದು  500 ಕ್ಕೆ ಏರಿಕೆ, ಅಡಿಕೆ ಸಿಹಿ. ಅಡಿಕೆ ಬೆಳೆಗಾರರಿಗೆ  ಮಳೆಯ ಕಾಟ. ಮಳೆ ನಿಲ್ಲುತ್ತಲೇ ಇಲ್ಲ. ಎಲ್ಲಾ ಕಡೆ ಮಳೆ. ಅಡಿಕೆ ಕೊಯಿಲು ಮಾಡಿದರೆ ಒಣಗಿಸುವುದೇ ಕಷ್ಟ ಎಂಬ ಸ್ಥಿತಿ ಉಂಟಾಗಿದೆ.  ಹೀಗಿರುವಾಗ ಅಡಿಕೆಯ ಅವಕವೂ ಕಡಿಮೆಯಾಗಿದೆ….

Read more
ಕರಿಮೆಣಸು

ಕರಿಮೆಣಸು ಬೆಲೆ ಏಲ್ಲಿ ತನಕ ಏರಿಕೆ ಆಗಬಹುದು? ರೂ. 500-600?

ಕಳೆದ ಒಂದು ವಾರದಿಂದ ಕರಿಮೆಣಸು ಬೆಲೆ ಎರಿಕೆಯಾಗಲು ಪ್ರಾರಂಭವಾಗಿದೆ. ಕೇರಳದ ಮಳೆ, ಶ್ರೀಲಂಕಾದ ಉತ್ಪಾದನೆ ಕುಸಿತ, ವಿಯೆಟ್ನಾಂ ನ ಬೆಳೆ ಬದಲಾವಣೆ ಮೆಣಸಿನ ಬೇಡಿಕೆಯನ್ನು ಹೆಚ್ಚಿಸಿದ್ದು, ಬಹುಷಃ ಕರಿಮೆಣಸಿನ ಬೆಲೆ ಭಾರೀ ನೆಗೆತ ಕಾಣಲಿದ್ದು,500 ದಾಟಬಹುದು, 600 ಆದರೂ ಅಚ್ಚರಿ ಇಲ್ಲ ಎಂಬುದಾಗಿ ಹೇಳುತ್ತಿದ್ದಾರೆ. ಮೆಣಸು ದಾಸ್ತಾನು ಉಳ್ಳವರು ಮಾರಾಟ ಮಾಡದಿರುವುದೇ ಉತ್ತಮ. ಕರಾವಳಿಯಲ್ಲಿ ಚಾಲಿ ಬೆಲೆ ಯಾಕೆ ಬಾರೀ ಕುಸಿತ ಆಗುವುದಿಲ್ಲ ಎಂಬುದಕ್ಕೆ ಮೂಲ ಕಾರಣ ಬೆಳೆಗಾರರ ದೃಢ ನಿರ್ಧಾರ. ಅಡಿಕೆ ಬೆಳೆಗಾರರು ತುರ್ತು ಅಗತ್ಯ…

Read more
error: Content is protected !!