ಲಾಭದಾಯಕ ಕೃಷಿಗೆ ಬೇಕಾದ ಫಲವತ್ತಾದ ಮಣ್ಣು

ಕೃಷಿ ಲಾಭದಾಯಕವಾಗಲು ಬೇಕಾಗುವುದೇ ಉತ್ತಮ ಮಣ್ಣು – ಹೇಗೆ?

ಕೃಷಿ ಮಾಡುವ ನಾವೆಲ್ಲಾ ಮಣ್ಣಿನ ಬಗ್ಗೆ ಎಷ್ಟು ತಿಳಿದುಕೊಂಡರೂ ಸಾಲದು. ಮಣ್ಣು ಮೊದಲು. ಕೃಷಿ ಅನಂತರ.ಮಣ್ಣಿನಲ್ಲಿ ಫಲವತ್ತತೆ ಇದ್ದರೆ ಮಾತ್ರ ಅದರಲ್ಲಿ ಕೃಷಿ ಮಾಡಿ. ಫಲವತ್ತತೆ ಇಲ್ಲದಲ್ಲಿ ಕೃಷಿ ಯಾವಾಗಲೂ ಲಾಭದಾಯಕವಾಗುವುದಿಲ್ಲ. ಇತ್ತೀಚೆಗೆ ಈಶ ಫೌಂಡೇಶನ್ ನ ಸಧ್ಗುರುಗಳು ತಮ್ಮ ವೀಡಿಯೊದಲ್ಲಿ ಕ್ಯಾಲಿಫೋರ್ನಿಯಾ ದೇಶವು ಅಕ್ಕಿಯನ್ನು ಥೈಲ್ಯಾಂಡ್ ದೇಶದಿಂದ ಆಮದು ಮಾಡಿಕೊಳ್ಳುತ್ತಿದ್ದೇವೆ. ಯಾಕೆ ಭಾರತದಿಂದ ಮಾಡುವುದಿಲ್ಲ ಎಂಬ ಬಗ್ಗೆ ಕೇಳಿದಾಗ ಭಾರತದ ಅಕ್ಕಿಯಲ್ಲಿ ಯಾವ ಪೋಷಕಾಂಶಗಳೂ ಇಲ್ಲ ಎನ್ನುತ್ತಾರೆ ಎಂದಿದ್ದಾರೆ. ಅದೇ ರೀತಿ ವಿಯೆಟ್ ನಾಂ ದೇಶ…

Read more

ತೆಂಗಿಗೆ ವಿಷ ಕೊಟ್ಟರೆ ಎಳನೀರು ಸಿಹಿಯಾಗುವುದೇ?

ತೆಂಗಿನ ಕಾಯಿಯ, ಎಳೆಕಾಯಿಯ   ನೀರು ಸಿಹಿಯಾಗಿರಲಿ ಅದರ ತಳಿ ಗುಣ ಕಾರಣ ಹೊರತು ಅದನ್ನು ಹೊರ ವಸ್ತುಗಳನ್ನು ಸೇರಿಸಿ ಸಿಹಿ ಮಾಡಲು ಸಾಧ್ಯವಿಲ್ಲ. ತೆಂಗಿನ ಕೆಲವು ತಳಿಗಳು ಸಿಹಿಯಾದ ಎಳನೀರನ್ನು ಕೊಡುತ್ತವೆ. ಮತ್ತೆ ಕೆಲವು ಸ್ವಲ್ಪ ಸಪ್ಪೆ. ಇದು ಯಾರೂ ಮಾಡುವುದು ಅಲ್ಲ. ಅದು ಅದರ ಅಂತರ್ಗತ ಗುಣ. ಅಲ್ಪ ಸ್ವಲ್ಪ ಪ್ರಮಾಣದಲ್ಲಿ ಸಿಹಿ ಹೆಚ್ಚಿಸಲು ಸೂಕ್ಷ್ಮ ಪೊಷಕಾಂಶ ಮತ್ತು ಪೊಟ್ಯಾಶಿಯಂ ಬಳಕೆ ನೆರವಾಗುತ್ತದೆಯಾದರೂ  ಯಾವ ಕೀಟನಾಶಕ ರೋಗ ನಾಶಕ ಇದನ್ನು ಹೆಚ್ಚಿಸುವುದಿಲ್ಲ. ಇತ್ತೀಚೆಗೆ ಒಂದು ವಾಟ್ಸ್…

Read more
50,000 ಬೆಲೆಯ ಬಿದಿರು ಬೊಂಬು

ಈ ಬಿದಿರಿನ ಗಳಕ್ಕೆ ರೂ. 50,000 ನಂಬುತ್ತೀರಾ? ಇದು ನಿಜ.

ಬಿದಿರಿನ ಒಂದು ಗಳ ಅದರಲ್ಲೂ ಮುಳ್ಳು ಇರುವ ಸ್ಥಳೀಯ ಬಿದಿರಿನ ಒಂದು ಗಳಕ್ಕೆ ಹೆಚ್ಚೆಂದರೆ 100-200 ರೂ. ಪಡೆಯುವವರು ಇರಬಹುದು. ಈ ಹಿಂದೆ ಕೆಲವರು ಮರ ಹತ್ತಲು ಬಿದಿರಿನ ಏಣಿಗಳನ್ನು ಬಳಸುತ್ತಿದ್ದರು. ಆ ಕಾಲ ಹೋಯಿತು.ಬಿದಿರಿನ ಏಣಿಯ ಬದಲು ಅಲ್ಯೂಮೀನಿಯಂ ಏಣಿ ಬಂದು ಬಿದಿರು ತೆರೆಯ ಮರೆಯಾಯಿತು. ಹಿಂದೆ ಮನೆ ಕಟ್ಟುವಾಗ ಮರದ ಬದಲಿಗೆ ಬಿದಿರಿನ ಗಳಗಳನ್ನು ಹಾಕಿ ಛಾವಣಿ ಮಾಡುತ್ತಿದ್ದರು. ಈಗ ಬಿದಿರಿನ ಗಳದ ಛಾವಣಿ  ಮಾಡುವ ಖರ್ಚಿಗಿಂತ ಕಡಿಮೆ ಬೆಲೆಗೆ ಬೇರೆ ಸಾಮಾಗ್ರಿಗಳಿಂದ ಮಾಡಲಿಕ್ಕಾಗುತ್ತದೆ….

Read more
ಹೊಲಕ್ಕೆ ಯೂರಿಯಾ ಎಸೆಯುತ್ತಿರುವ ರೈತ

ಯೂರಿಯಾ ಗೊಬ್ಬರ –ಖರೀದಿ ಇನ್ನು ಕಷ್ಟವಾಗಲಿದೆ!

ರೈತರ ಬೆಳೆ ಪೋಷಣೆಗೆ ಬೇಕಾಗುವ ರಾಸಾಯನಿಕ ಗೊಬ್ಬರಗಳಿಗೆ ಭಾರತ ಸರಕಾರ ಸಬ್ಸಿಡಿ ನೀಡುತ್ತದೆ. ಆದ ಕಾರಣ ಅದು ನಮಗೆ ಮಿತ ದರದಲ್ಲಿ ಲಭ್ಯವಾಗುತ್ತದೆ. ಈ ಸಬ್ಸಿಡಿ  ದುರುಪಯೋಗವಾಗುತ್ತಿದೆ. ಮನಬಂದಂತೆ ಯೂರಿಯಾ ಗೊಬ್ಬರ ಖರೀದಿ ಮಾಡಿ, ಅದನ್ನು ಬೇರೆ ಉದ್ದೇಶಗಳಿಗೂ ಬಳಕೆ ಮಾಡುತ್ತಾರೆ ಎಂಬ ಕಾರಣಕ್ಕೆ ಇನ್ನು ಆಯಾ ಹಂಗಾಮಿನಲ್ಲಿ ಮಾತ್ರ ನಿಗದಿಪಡಿಸಿದ ಪ್ರಮಾಣದ ಗೊಬ್ಬರ ಮಾತ್ರ ಖರೀದಿಗೆ ಅವಕಾಶ ಕಲ್ಪಿಸಲಾಗುತ್ತದೆ. ಈ ನಿಬಂಧನೆ ಜ್ಯಾರಿಯಾಗಿ ಎರಡು ವರ್ಷಗಳೇ ಆಗಿದ್ದರೂ ಈಗ ಎಲ್ಲಾ ರಸಗೊಬ್ಬರ ಮಾರಾಟ ಮಾಡುವ ಅಂಗಡಿಗಳವರೂ ಇದನ್ನು ಕಡ್ದಾಯವಾಗಿ…

Read more
ಹಳ್ಳಿಯ ರೈತನಿಗೆ ಕೈ ಹಿಡಿದೀತೇ ನೇರ ಮಾರುಕಟ್ಟೆಯ ಪ್ರಯೋಜನ?

ಹಳ್ಳಿಯ ರೈತನಿಗೆ ಕೈ ಹಿಡಿದೀತೇ ನೇರ ಮಾರುಕಟ್ಟೆಯ ಪ್ರಯೋಜನ?

ಇದು ಟೀಕೆ ಅಲ್ಲ. ಅನಿಸಿಕೆ ಅಷ್ಟೇ. ರೈತರಿಗೆ ಅನುಕೂಲವಾಗುವುದಾದರೆ ಎಲ್ಲವೂ ಸ್ವಾಗತಾರ್ಹ.  ಒಮ್ಮೆ ನಮ್ಮ ಹಳ್ಳಿಯ ರೈತನ ಚಿತ್ರಣವನ್ನು ಯೋಚಿಸಿಕೊಳ್ಳಿ. ದೇಶದಲ್ಲಿ 70% ಕ್ಕೂ ಹೆಚ್ಚಿನವರು ಸಣ್ಣ ಮತ್ತು ಅತೀ ಸಣ್ಣ  ರೈತರು. ಹಾಗೆಯೇ ಇಷ್ಟೂ ಜನ ರೈತರೂ ಕಡಿಮೆ ವಿಧ್ಯಾವಂತರು. ಇವರಿಗೆ ನೇರ ಮಾರುಕಟ್ಟೆಯ ಅವಕಾಶವನ್ನು ಎಷ್ಟು ಜೀರ್ಣಿಸಿಕೊಳ್ಳಲು ಆದೀತೋ ಗೊತ್ತಿಲ್ಲ. ಆದರೆ ಇದರಿಂದ ರೈತರಿಗೆ ಅನುಕೂಲವಾಗಲಿದೆ ಎನ್ನುತ್ತದೆ ಸರಕಾರ. ನಾನು ಒಂದು ಕ್ವಿಂಟಾಲು ಹಣ್ಣು ಬೆಳೆದರೆ ಅದನ್ನು ಹೇಗಾದರೂ ಗ್ರಾಹಕರನ್ನು ಹುಡುಕಿ ಮಾರಾಟ ಮಾಡಬಹುದು….

Read more
PM Narendra modi

ರೈತರ ಕಲ್ಯಾಣಕ್ಕೆ ಕೇಂದ್ರ ಸರಕಾರದ “ಕೃಷಿ ಸುಧಾರಣಾ ಬಿಲ್”

ದೇಶದ ರೈತರ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಮಾರುಕಟ್ಟೆ ವ್ಯವಸ್ಥೆಗೆ ಭಾರೀ ಸರ್ಜರಿ ಬೇಕು ಎಂದು ಮನಗಂಡ ಕೇಂದ್ರ ಸರಕಾರ ಕಿಸಾನ್ ಬಿಲ್ 2020 ನ್ನು  ರಚಿಸಿ ಅದನ್ನು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಪಾಸ್ ಮಾಡಿ, ರಾಷ್ಟ್ರಪತಿಗಳ ಅಂಕಿತಕ್ಕೆ ಕಳುಹಿಸಿದೆ. ಅಲ್ಲಿ ಅವರ ಅಂಕಿತ ಬಿದ್ದ ನಂತರ ಅದು ಜ್ಯಾರಿಗೆ ಬರಲಿದೆ. ಈ ಬಿಲ್ ಬಗ್ಗೆ ಜನ ಮನಬಂದಂತೆ ಮಾತಾಡುತ್ತಾರೆ. ಆದರೆ ಪ್ರಧಾನಿಗಳು ಅದರ ಬಗ್ಗೆ ಸ್ಪಷ್ಟಣೆಯನ್ನೂ ನೀಡಿದ್ದಾರೆ.  ಕೃಷಿ ಕ್ಷೇತ್ರದ ಸುಧಾರಣೆಗೆ ಕೆಲವು ಕಾನೂನಾತ್ಮಕ ಬದಲಾವಣೆ ಬೇಕೇ…

Read more
vertical farming

ಕಡಿಮೆ ಸ್ಥಳದಲ್ಲಿ ಹೆಚ್ಚು ಬೆಳೆ ಬೆಳೆಯಬಹುದಾದ ವರ್ಟಿಕಲ್ ಕೃಷಿ.

ಕೃಷಿ ದಿನದಿಂದ ದಿನಕ್ಕೆ ಬದಲಾವಣೆಯ ಮೆಟ್ಟಲೇರುತ್ತಾ ಇರುತ್ತದೆ. ಇನ್ನು ಮುಂದಿನ ದಿನಗಳಲ್ಲಿ ಅತೀ ಕಡಿಮೆ ಸ್ಥಳಾವಕಾಶದಲ್ಲಿ ಅಧಿಕ ಬೆಳೆ ಬೆಳೆಸಿ, ಅಧಿಕ ಇಳುವರಿ ಪಡೆಯುವುದೇ ಆಗಿರುತ್ತದೆ. ಸುಮಾರು 30-40 ವರ್ಷದ ಹಿಂದೆ ನಮ್ಮ ಕೃಷಿ ಹೇಗಿತ್ತು ಎಂಬುದನ್ನು ಆ ವಯೋಮಾನದವರು ಒಮ್ಮೆ ನೆನಪಿಸಿಕೊಳ್ಳಿ. ಅದೇ ರೀತಿ ತುಂಬಾ ಹಿರಿಯರಿದ್ದರೆ ಅವರ ಕಾಲದಲ್ಲಿ ಸುಮಾರು 50-60 ವರ್ಷಗಳ ಹಿಂದೆ ಹೇಗಿತ್ತು ಎಂಬುದನ್ನು ಒಮ್ಮೆ ಕೇಳಿ ನೋಡಿ ಈಗಿನದ್ದು   ನಮಗೆಲ್ಲಾ ಗೊತ್ತಿದೆ ತಾನೇ? ಎಲ್ಲವೂ ಭಾರೀ ಬದಲಾವಣೆ ಆಗಿದೆ. ಆಗುತ್ತಲೇ…

Read more

ಕಾಡು ಪ್ರಾಣಿಗಳಿಗೆ ಇನ್ನು ಹೊಲವೇ ಖಾಯಂ ವಾಸ್ತವ್ಯ!

ಸರಕಾರ ಈಗ ಅರಣ್ಯ ಇಲಾಖೆಯ ಸುಪರ್ದಿಯಲ್ಲಿದ್ದ ಸುಮಾರು 23 ಲಕ್ಷ ಎಕ್ರೆ ಅರಣ್ಯ ( ಡೀಮ್ದ್ ಫೋರೆಸ್ಟ್ )ನಲ್ಲಿ 15 ಲಕ್ಷ ಎಕರೆ  ಭೂಮಿಯನ್ನು ಸರಕಾರ ಕಂದಾಯ ಇಲಾಖೆಗೆ ವರ್ಗಾಯಿಸಲು ನಿರ್ಧರಿಸಿದೆ. ಈಗಲೇ ಅರಣ್ಯ ನಾಶದಿಂದ  ಕೃಷಿಕರ 10- 20 % ದಷ್ಟು ಬೆಳೆ ಕಾಡು ಪ್ರಾಣಿಗಳ ಪಾಲಾಗುತ್ತಿದೆ. ಒಂದು ವೇಳೆ ಇನ್ನೂ ಕಾಡು ಕಡಿಮೆಯಾದರೆ  ಕೃಷಿಕರ ಹೊಲದಲ್ಲೇ ಕಾಡು ಪ್ರಾಣಿಗಳು ವಾಸಮಾಡಬಹುದು. ಬೆಳೆಗಳು ಕೋತಿ, ಆನೆ ಕಾಡೆಮ್ಮೆಗಳ ಪಾಲಾಗಬಹುದು. ಹಟ್ಟಿಯಲ್ಲಿರುವ ಹಸುಗಳು ಹುಲಿ, ಚಿರತೆಯ ಪಾಲಾದರೂ…

Read more

ರೈತರು ಬುದ್ಧಿವಂತರಾಗದಿದ್ದರೆ ಉಳಿಗಾಲವಿಲ್ಲ. ತಿಳಿದಿರಲಿ.

ನಮ್ಮ ದೇಶದಲ್ಲಿ ಕೃಷಿಕರನ್ನು ಮಾತ್ರ ಯಾವ ರೀತಿಯಲ್ಲೂ ಮೋಸಮಾಡಬಹುದೇನೋ ಅನ್ನಿಸುತ್ತಿದೆ. ಕೃಷಿಕರಿಗೆ ಬೇಕಾಗುವ ಯಂತ್ರೋಪಕರಣ, ಗೊಬ್ಬರ, ಕೀಟ ನಾಶಕ, ಹೀಗೆ ಬೇಕಾಗುವ ಕೃಷಿ ಒಳಸುರಿ ಮಾರಾಟ ಮಾಡುವವರು ದಿನಕ್ಕೆ ಒಬ್ಬರಂತೆ ಸೃಷ್ಟಿಯಾಗುತ್ತಿದ್ದಾರೆ. ನಮಗೆ ಹೇಗಾದರೂ ಮಾಡಿ ಇಳುವರಿ ಹೆಚ್ಚಿಸಿಕೊಳ್ಳಬೇಕೆಂಬ ಹಂಬಲ. ಅವರಿಗೆ ಇದೇ ಬಂಡವಾಳ. ಹೊಸ ಹೊಸ ಉತ್ಪನ್ನಗಳು. ಹೊಸ ಬಾಟಲಿಯಲ್ಲಿ ಅಧಿಕ ಬೆಲೆಯ ಹಳೇ ಸಾಮಾನುಗಳು ಅಷ್ಟೇ ಬದಲಾವಣೆ. ಕೃಷಿಕರ ವೀಕ್ ನೆಸ್-ಇನ್ನೊಬ್ಬರ ಬಂಡವಾಳ: ಕೃಷಿಕರಲ್ಲಿ ಬಹುತೇಕ ಎಲ್ಲರಿಗೂ ಪರಸ್ಪರ ನಂಬಿಕೆ ಕಡಿಮೆ. ಅದು ಒಳ್ಳೆಯದೇ?ಇದು…

Read more
ಅಡಿಕೆ- ಕರಿಮೆಣಸು ಬೆಳೆಗಳ ತೋಟಕ್ಕೆ ಅಗತೆ ವರ್ಜ್ಯ

ಅಡಿಕೆ- ಕರಿಮೆಣಸು ಬೆಳೆಗಳ  ತೋಟಕ್ಕೆ ಅಗತೆ, ಉಳುಮೆ ವರ್ಜ್ಯ.

ಅಡಿಕೆ ಮರಗಳ ಬೇರುಗಳು ಮೆತ್ತನೆಯ ಮೇಲ್ಮಣ್ಣಿನಲ್ಲಿ ಹರಡಿ ಬೆಳೆಯುವ ಗುಣದ ಸಸ್ಯಗಳು. ಆದ ಕಾರಣ ಮೇಲು ಭಾಗವನ್ನು ಅಗತೆ, ಉಳುಮೆ ಮಾಡುವುದರಿಂದ  ಬೇರಿಗೆ ಹಾನಿಯಾಗುತ್ತದೆ. ಅಲ್ಲದೆ ಬೇರೆ ಬೇರೆ ತೊಂದರೆಗಳೂ ಉಂಟಾಗುತ್ತವೆ.ಅಡಿಕೆ ಮರದ ಬುಡದಲ್ಲಿ ಕರಿಮೆಣಸು ಇದ್ದರೆ ಯಾವ ಕಾರಣಕ್ಕೂ ಬುಡ ಭಾಗವನ್ನು  ಕೆರೆಯುವುದೂ ಸಹ ಮಾಡಬಾರದು. ಇದರಿಂದ ಕರಿಮೆಣಸಿನ ಬಳ್ಳಿ ಸಾಯಬಹುದು, ಅಥವಾ ಸೊರಗಬಹುದು. ಬುಡ ಬುಡಿಸುವುದು ಹಳೆ ಪದ್ದತಿ: ನಮ್ಮ ಹಿರಿಯರು ತಿಳಿದೋ ತಿಳಿಯದೆಯೋ ಕೆಲವು ಬೇಸಾಯ ಕ್ರಮಗಳನ್ನು ಅನುಸರಿಸುತ್ತಿದ್ದರು. ಅದರಲ್ಲಿ ಒಂದು ಬುಡ…

Read more
error: Content is protected !!