ಭೂ ತಾಯಿ ಮುನಿದಿದ್ದಾಳೆ- ನಾವೆಲ್ಲಾ ಒಟ್ಟಾಗಿ ಪ್ರಾರ್ಥಿಸೋಣ.

ಪ್ರತೀ ವರ್ಷ ಎಪ್ರೀಲ್ 22 ದಿನವನ್ನು ಜಾಗತಿಕ ಭೂಮಿಯ ದಿನ ಎಂದು ಆಚರಿಸಲಾಗುತ್ತದೆ. ಪ್ರತೀ ವರ್ಷ ಒಂದೊಂದು ಧ್ಯೇಯಗಳನ್ನು ಇಟ್ಟುಕೊಂಡು ಈ ದಿನವನ್ನು ವಿಶೇಷ ಪ್ರಾತಿನಿಧ್ಯ ಕೊಟ್ಟು ಆಚರಿಸಲಾಗುತ್ತದೆ. ಈ ವರ್ಷ ಹವಾಮಾನ ಬದಲಾವಣೆಯಂತಃ ಗಂಭೀರ ಸಮಸ್ಯೆಯನ್ನು ಮುಂದಿಟ್ಟುಕೊಂಡು ಅದನ್ನು ಆಚರಿಸಲಾಗುತ್ತದೆ. ಬಹುಷಃ ಈ ವರ್ಷದ  ಆಚರಣೆಗೆ ಪ್ರಕೃತಿಯ ಅಸಮಾಧಾನ ಏನೋ ಇದ್ದಂತಿದೆ. ಕೊರೋನಾ ಎಂಬ ಮಹಾ ಮಾರಿ ರೂಪದಲ್ಲಿ ಮನುಕೂಲದ ಮೇಲೆ ಭೂ ತಾಯಿ ಮುನಿದಂತಿದೆ. ಜಗತ್ತೇ ಮನುಕುಲ ಕಾಣದ ಅನಾಹುತದ ಸುಳಿಯಲ್ಲಿ ಸಿಕ್ಕಿಕೊಂಡಿದೆ. ಇದು…

Read more
rain water

ಈ ವರ್ಷದ ಮಳೆ ಭವಿಷ್ಯ

ಮಳೆ ಭವಿಷ್ಯವನ್ನು ಹಿಂದೆ ಪಂಚಾಗಕರ್ತರು ಹೇಳುತ್ತಿದ್ದರು. ಈಗ ಅದನ್ನು ಹವಾಮಾನ ಇಲಾಖೆ ಹೇಳುತ್ತದೆ. ಅದು ಪೂರ್ವಭಾವಿಯಾಗಿಯೇ. ಭಾರತೀಯ ಹವಾಮಾನ ಕಚೇರಿ ಈ ವರ್ಷ ಸರಾಸರಿ ಮಳೆಯಾಗುವ ಸೂಚನೆಯನ್ನು ನೀಡಿದೆ. ಮೇ ಕೊನೇ ವಾರ, ಜೂನ್ ಒಂದನೇ ತಾರೀಖಿಗೆ ಕೇರಳ ಪ್ರವೇಶಿಸುವ ಮುಂಗಾರು ಮಳೆ ಸಪ್ಟೆಂಬರ್ ತನಕ ದೇಶದಾದ್ಯಂತ ಏಕ ಪ್ರಕಾರವಾಗಿ ಬೀಳಲಿದ್ದು, ಕೃಷಿಕರ ಬದುಕಿಗೆ ಇದು ನೆಮ್ಮದಿ ತರಲಿದೆ ಎಂಬುದಾಗಿ ಭೂ ವಿಜ್ಞಾನ ಸಚಿವಾಲಯದ ಕಾರ್ಯದರ್ಶಿ ಎಂ.ರಾಜೀವನ್ ಹೇಳುತ್ತಾರೆ. ಈ ವರ್ಷದ ಮುಂಗಾರು ಮಳೆಯನ್ನು ಸರಾಸರಿ ಮಳೆ…

Read more

ಸರಕಾರ ಗುಟ್ಕಾ ನಿಷೇಧ ಮಾಡಲು ಸಾಧ್ಯವೇ ?

ದೇಶದ ಅರ್ಥ ವ್ಯವಸ್ಥೆಗೆ ತಂಬಾಕು, ಮತ್ತು ಅದರ ಉತ್ಪನ್ನಗಳ ಮೂಲಕ ವಾರ್ಷಿಕ 43,000 ಕೋಟಿ ಆದಾಯ ಸಂಗ್ರಹ ಇದೆ. ಸುಮಾರು 4.6 ಕೋಟಿ ಜನ ಈ ಕ್ಷೇತ್ರದಲ್ಲಿ ಉದ್ಯೋಗಿಗಳಾಗಿದ್ದಿದೆ. ಈ ಆದಾಯವನ್ನು ಕಳೆದು ಕೊಳ್ಳಲು ಮತ್ತು ಇಷ್ಟು ಕೆಲಸಗಾರರಿಗೆ ಬೇರೆ ಕೆಲಸ ಕೊಡಲು ನಮ್ಮ ಸರಕಾರಕ್ಕೆ  ಸಾಧ್ಯವಿದ್ದರೆ ಮಾತ್ರ ಗುಟ್ಖಾ  ಪಾನ್ ಮಸಾಲ ನಿಷೇಧ ಸಾಧ್ಯ. ಅದೂ ಈಗಿನ ಆರ್ಥ ವ್ಯವಸ್ಥೆಗೆ ಬಿದ್ದ ಹೊಡೆತವನ್ನು ತಡೆಯುವ ಶಕ್ತಿ ಯಾವ ಸರಕಾರಕ್ಕೂ ಇರಲಿಕ್ಕಿಲ್ಲ. ಕೊರೋನಾ ಸೋಂಕಿನ ಹಿನ್ನೆಲೆಯಲ್ಲಿ ಕೆಲವು…

Read more

ಕಲ್ಲಿನ ಕೂರೆಯ ಹುಡಿಯೂ ಉತ್ತಮ ಗೊಬ್ಬರ ಗೊತ್ತೇ?

ಸಸ್ಯ ಪೋಷಕವಾಗಿ ನಮಗೆ ರಾಕ್ ಫೋಸ್ಫೇಟ್ ಬಳಕೆ ಗೊತ್ತು.ಇದು ಕಲ್ಲಿನ ಹುಡಿ. ಅದೇ ರೀತಿ ನಮ್ಮ ಸುತ್ತಮುತ್ತ ಬೇರೆ ಬೇರೆ  ಶಿಲೆಗಳನ್ನು ಕಾಣಬಹುದು. ಶಿಲೆಗಳೆಲ್ಲವೂ ಜ್ವಾಲಾಮುಖಿಯ ಮೂಲಕ ಸೃಷ್ಟಿಯಾದವುಗಳು. ಅದರಲ್ಲಿ ಬೆಳೆ ಪೋಷಣೆಗೆ ಬೇಕಾಗುವ ವಿವಿಧ ಪೋಷಕಾಂಶಗಳು ಇವೆ.  ಇದನ್ನುಮೊತ್ತ ಮೊದಲ ಬಾರಿಗೆ  ಮಂಡ್ಯದ ಕೃಷಿ ಮಹಾವಿಧ್ಯಾಲಯದ  ವಿಜ್ಞಾನಿಗಳು ಕಂಡುಕೊಂಡಿದ್ದಾರೆ. ಭೂಮಿಯ ಮೇಲಿರುವ ಪ್ರತಿಯೊಂದು ಜೀವರಾಶಿಯ ಅಸ್ತಿತ್ವಕ್ಕೆ ಮಣ್ಣೇ ಆಧಾರ. ಬೆಳೆಗಳಿಗೆ ಮರಗಿಡಗಳಿಗೆ ಆಸರೆ ನೀಡುತ್ತದೆ. ಪೋಷಕಾಂಶವನ್ನು ಒದಗಿಸುತ್ತದೆ. ನೀರನ್ನುಹಿಡಿದಿಟ್ಟುಕೊಂಡು ಬೇಕಾದಾಗ ಪೂರೈಸುತ್ತದೆ. ಮಣ್ಣು ಸಕಲ ಪೋಷಕಾಂಶಗಳನ್ನೂ…

Read more

ವಿದ್ಯುತ್ ಶಕ್ತಿ ಕೊಟ್ಟರೆ ಕೃಷಿ ದೇಶಕ್ಕೆ ಅನ್ನ ಕೊಡುತ್ತದೆ.

ಒಬ್ಬನಿಗೆ ತಾನು  ಮಹಾಮಂತ್ರಿ ಆಗೇ ಬಿಟ್ಟೆ ಎಂಬ ಭ್ರಮೆ ಉಂಟಾಯಿತು. ತಕ್ಷಣ ವಿಧಾನ ಸೌಧದ ಒಳ ಹೋಗಿ ಮುಖ್ಯಮಂತ್ರಿ  ಆಸನದಲ್ಲಿ ಕುಳಿತು ತಕ್ಷಣ ಮಾಡಿದ್ದು, ರೈತರ  ಎಲ್ಲಾ ಸಾಲ ಮನ್ನಾ. ರೈತರ ಮೇಲಿನ ಮೊಕದ್ದಮೆ ವಜಾ. 24 ಗಂಟೆ ವಿದ್ಯುತ್, ರೈತರಿಗೆ ಪೆನ್ಶನ್. ಇದೆಲ್ಲಾ ಮಾಡಿದ್ದು ಬರೇ ಶಯನದ ಕನಸಿನಲ್ಲಿ. ಕನಸಿನಿಂದೇಳುವಾಗ ಮುಖ್ಯ ಮಂತ್ರಿಗಿರಿ ಅವರದ್ದಾಗಿರಲಿಲ್ಲ.   ಒಂದು ವೇಳೆ ಅದೇ ರಾಜಕಾರಣಿ ಮುಂದೆ ಮುಖ್ಯ ಮಂತ್ರಿಯೇ ಆದನೆಂದಿಟ್ಟುಕೊಳ್ಳೋಣ. ಆಗ ಈ ಹಿಂದೆ ಮಾಡಿದಂತೆ ಸಾಲಮನ್ನಾ ಮಾಡಲು ಮನಸ್ಸು…

Read more

ಶಹಬ್ಬಾಸ್ ಹೇಳಬೇಕು ಈ ರೈತರ ಬುದ್ದಿವಂತಿಕೆಗೆ

ಹಿರಿಯಡ್ಕದ  ಸುರೇಶ್ ನಾಯಕ್ ಇವರು ಕಳೆದ 8 ವರ್ಷಗಳಿಂದ  ಕಲ್ಲಂಗಡಿ   ಬೆಳೆಸುತ್ತಿದ್ದಾರೆ.  ಕಲ್ಲಂಗಡಿ  ಬೇಸಾಯದಲ್ಲಿ ಹೊಸ ಹೊಸ ಪದ್ದತಿಯನ್ನು ಅಳವಡಿಸಿಕೊಂಡು ಇತರರಿಗೆ ಮಾದರಿಯಾಗಿ ಕೃಷಿ ಮಾಡಿದವರು.  1 ಎಕ್ರೆಯಿಂದ ಪ್ರಾರಂಭಿಸಿ ಈಗ 14 ಎಕ್ರೆ ತನಕ ಬೆಳೆ ಬೆಳೆಸುತ್ತಾರೆ.  ಈ ವರ್ಷ ಕೊರೋನಾ ಮಹಾ ಮಾರಿಯಿಂದ ಹಣ್ಣು ಹಂಪಲು ಬೆಳೆದ ರೈತರು ಸಂಕಷ್ಟ ಅನುಭವಿಸಿದಂತೆ ಇವರೂ ಒಮ್ಮೆ ಕಂಗಾಲಾಗಿದ್ದರೂ ಹೇಗಾದರೂ ಅದರಲ್ಲಿ ಗೆದ್ದೇ ಬಿಟ್ಟರು. ಮಾಡಿದ್ದೇನು: ಬೆಳೆ ಬೆಳೆಯುವ ರೈತರಿಗೆ ಮಾರಾಟ ಮಾಡುವುದೂ ಗೊತ್ತಿರಬೇಕು. ಹಲವಾರು  ಸಲ…

Read more

ರೈತರ ನಷ್ಟಕ್ಕೆ ಪರಿಹಾರ ಇದ್ದರೆ ಇದೊಂದೇ

ತಾವು ಮಾಡದ ತಪ್ಪಿಗೆ ರೈತರು ಕಷ್ಟ ಅನುಭವಿಸುತ್ತಿದ್ದಾರೆ. ದ್ರಾಕ್ಷಿ ಬೆಳೆಗಾರರು ತಮ್ಮ ದ್ರಾಕ್ಷಿಯನ್ನು ತಿಪ್ಪೆಗೆ ಸುರಿದಿದ್ದಾರೆ. ಟೊಮೇಟೋ ಬೆಳೆದವರು ಕೊಯಿಲು ಮಾಡಲೇ ಇಲ್ಲ. ಇನ್ನು ಅನನಾಸು, ಕಲ್ಲಂಗಡಿ ಬಹುತೇಕ ಎಲ್ಲಾ ಬೆಳೆ ಬೆಳೆದವರೂ ತಲೆಗೆ ಕೈ ಇಟ್ಟು ಕುಳಿತಿದ್ದಾರೆ. ಯಾರಿಗೂ ವಿಮೆ ಇಲ್ಲ. ಇವರ ನಷ್ಟಕ್ಕೆ ಪರಿಹಾರ ಕೊಡುವುದು ಹೇಗೆ? ಸರಕಾರ ಸಾಲ ಮನ್ನಾ ಮಾಡಬಹುದೇ? ಬೆಳೆ ನಷ್ಟ ಕೊಡಬಹುದೇ? ಯಾವುದಕ್ಕೂ ಸರಕಾರದ ಖಜಾನೆಯಲ್ಲಿ ದುಡ್ಡು ಬೇಕಲ್ಲವೇ? ಇನ್ನು ಒಂದೆರಡು ತಿಂಗಳಲ್ಲಿ ಎಲ್ಲಾ ಚಿತ್ರಣ ಗೊತ್ತಾಗುತ್ತದೆ. ಸರಕಾರೀ…

Read more

ಹತ್ತಿ ಬೀಜದ ದರ ಏರಿದೆ- ರಾಯಧನ ಇಳಿದಿದೆ.

ಜೈವಿಕ ತಂತ್ರಜ್ಞಾನದ ಬಿಟಿ ಹತ್ತಿಗೆ ಬೇಯರ್ ಕಂಪೆನಿಗೆ ಕೊಡಬೇಕಾದ ರಾಯಲ್ಟಿಯನ್ನು  ಭಾರತ ಸರಕಾರ ಗಣನೀಯ ಪ್ರಮಾಣದಲ್ಲಿ ಕಡಿಮೆ ಮಾಡಿದೆ. ಆದರ ಪರಿಣಾಮ ಇಲ್ಲಿ ಹತ್ತಿ ಬೀಜದ ಬೆಲೆ ಕಡಿಮೆಯಾಗಬೇಕಿತ್ತು. ಆದರೆ ಬೆಲೆ  ಮಾತ್ರ 2.5 %  ಹೆಚ್ಚಳವಾಗಿದೆ. ನಾವು ಬೆಳೆಯುವ ಬಿಟಿ ಹತ್ತಿಯ ಬಿಟಿ ತಂತ್ರಜ್ಞಾನದ ಮೂಲ ಅಮೆರಿಕಾ ದೇಶದ ಮಾನ್ಸಂಟೋ ಕಂಪೆನಿ.  (ಈ ಕಂಪೆನಿಯನ್ನು ಜರ್ಮನ್ ಮೂಲದ ಬೇಯರ್ ಎಂಬ ಔಷಧ ಕಂಪೆನಿ ಖರೀದಿಸಿದೆ) ಇಲ್ಲಿ ಯಾವುದೇ ಕಂಪೆನಿ ಬಿಟಿ ಹತ್ತಿ ಬೀಜ ಉತ್ಪಾದಿಸಿದರೂ ಅದರ…

Read more
Caster plant in fence

ಮನುಕುಲವನ್ನು ಕಾಪಾಡುವ ವಾತಾವರಣ ಮಹತ್ವ ಅರಿಯೋಣ.

ಪ್ರತೀ ವರ್ಷ ಮಾರ್ಚ್ 23 ರಂದು ಜಾಗತಿಕ ಹವಾಮಾನ ಸಂಸ್ಥೆಯು ವಾತಾವರಣ ವಿಜ್ಞಾನ ದಿವಸವನ್ನು World Meteorological Day ಆಚರಿಸುತ್ತದೆ. 1961 ರಿಂದಲೂ ಇದು ಆಚರಿಸಲ್ಪಡುತ್ತಿದೆ. ಕಳೆದ ವರ್ಷ ಹವಾಮಾನ ಮತ್ತು ನೀರು ಬಗ್ಗೆ ಹೆಚ್ಚಿನ ಒತ್ತು ನೀಡಲಾಗಿತ್ತು. ಈ ವರ್ಷ ಭೂ ವ್ಯವಸ್ಥೆಯೊಳಗೆ ಸಾಗರ ಮತ್ತು ಹವಾಮಾನ ಎಂಬ ಧ್ಯೇಯದಲ್ಲಿ ಈ ದಿನವನ್ನು ಅಚರಿಸಲಾಗುತ್ತಿದೆ.   ಹವಾಮಾನದ ಸುಸ್ಥಿತಿ ಎಂಬುದು ಸುಖೀ ಸಂಸಾರದ ತರಹ. ಅದು ಇದ್ದರೆ ಮಾತ್ರ ಬದುಕು, ಇಲ್ಲವಾದರೆ ಅದು ನರಕ. ನಮಗೆ ನಮ್ಮ…

Read more

ಕಾಡು- ಮನುಕುಲದ ರಕ್ಷಕ- ತಿಳಿದಿರಲಿ.

ಕಾಡು ಮತ್ತು ಜೀವ ವೈವಿಧ್ಯ ಜೊತೆ ಜೊತೆಯಾಗಿ ಸಮತೋಲನದಲ್ಲಿದ್ದರೆ ಎಲ್ಲವೂ ಕ್ಷೇಮವಾಗಿರುತ್ತದೆ. ಇತ್ತೀಚಿನ ವರ್ಷಗಳಲ್ಲಿ ಈ ಸಮತೋಲನ ಹಳಿ ತಪ್ಪಲಾರಂಭಿಸಿದೆ. ಇದಕ್ಕೆ ಪ್ರಕೃತಿಯು ಮನುಕುಲದ ಮೇಲೆ ತನ್ನ ಪ್ರತಿರೋಧವನ್ನೂ ಒಡ್ಡುತ್ತಿದೆ. ಇದು ನಮಗೆಷ್ಟು ಅರಿವಿಗೆ ಬಂದಿದೆಯೋ ತಿಳಿಯದು. ಆದರೆ ಪ್ರಕೃತಿ ಮಾತ್ರ ತನ್ನ ಮೇಲೆ ಏನೇ ಘಾಸಿಯಾದರೂ ಅದಕ್ಕೆ ಪ್ರತಿಕ್ರಿಯೆ ತೋರಿಸುತ್ತದೆ. ಇಡೀ ಪ್ರಪಂಚದಲ್ಲಿ ಬುದ್ಧಿ ಉಳ್ಳ ಜೀವಿಗಳಾದ ಮಾನವ ಇದನ್ನು ಅರ್ಥ ಮಾಡಿಕೊಂಡು ನಮ್ಮಿಂದಾದ ತಪ್ಪನ್ನು ಸರಿಪಡಿಸಲು ಶ್ರಮಿಸಬೇಕಾಗಿದೆ. ಮಾರ್ಚ್ 21 ನೇ ದಿನಾಂಕವನ್ನು ವಿಶ್ವ…

Read more
error: Content is protected !!