ಚಳಿ ಇಳಿಮುಖ – ರಾಶಿ - ಚಾಲಿ 50,000!

ಉತ್ತರ ಭಾರತದ ಚಳಿ – ರಾಶಿ 50,000!- ಚಾಲಿ ಅನುಮಾನ.

ಉತ್ತರ ಭಾರತದಲ್ಲಿ ಚಳಿ ಹೆಚ್ಚಾದಾಗ ಸಂಸ್ಕರಣಾ ಉದ್ದಿಮೆಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಕೆಲಸ ನಡೆಯದ ಕಾರಣ ರಾಶಿ ಮತ್ತು ಚಾಲಿ ಎರಡಕ್ಕೂ ಬೇಡಿಕೆ ಕಡಿಮೆಯಾಗಿತ್ತು. ಈಗ  ಚಳಿ ಕಡಿಮೆಯಾಗಲಿಲ್ಲವಾದರೂ ಕೆಂಪಡಿಕೆ ಮತ್ತೆ ಚೇತರಿಸಿಕೊಳ್ಳಲಾರಂಭಿಸಿದೆ. ಚಾಲಿ ಸ್ಟಾಕು ಹೆಚ್ಚು ಇರುವ ಕಾರಣ ತಕ್ಷಣಕ್ಕೆ ಅನುಮಾನ ಎನ್ನುತ್ತಾರೆ. ಚಳಿ ಇದ್ದರೂ ಅಡಿಕೆಗೆ ಮತ್ತೆ ಬೇಡಿಕೆ ಪ್ರಾರಂಭವಾಗಿದೆ. ಬೆಲೆ ಚೇತರಿಕೆಯ  ಹಾದಿಯಲ್ಲಿದೆ. ಗುಟ್ಕಾ ಇತ್ಯಾದಿ ಅಡಿಕೆ ಸೇರಿಸಿದ ಉತ್ಪನ್ನ ತಯಾರಿಸುವಾಗ ಅವು ತೇವಾಂಶ ಎಳೆದುಕೊಳ್ಳಬಾರದು.  ವಿಶೇಷ ಚಳಿ, ಇಬ್ಬನಿ ಇದ್ದಾಗ ಅವುಗಳ ಸಂಸ್ಕರಣೆಗೆ…

Read more
ವ್ಯಾಕ್ಯೂಮ್ ಪ್ಯಾಕ್ ನಲ್ಲಿ ಕೃಷಿ ಉತ್ಪನ್ನಗಳು

ಕೃಷಿ ಉತ್ಪನ್ನಗಳ ರಕ್ಷಕ- ವ್ಯಾಕ್ಯೂಮ್ ಪ್ಯಾಕಿಂಗ್.

ಹಾಳಾಗುವ ಕೃಷಿ ಉತ್ಪನ್ನಗಳನ್ನು ರಕ್ಷಿಸಲು  ಗ್ರಾಹಕರಿಗೆ ಗುಣಮಟ್ಟದ ಉತ್ಪನ್ನಗಳು ದೊರೆಯುವಂತೆ ಮಾಡಲು  ವ್ಯಾಕ್ಯೂಮ್ (ನಿರ್ವಾತ) ಪ್ಯಾಕಿಂಗ್ ವ್ಯವಸ್ಥೆ ಎಂಬುದು ಅತೀ ಸೂಕ್ತ. ಇಲ್ಲಿ ದೊಡ್ಡ ಗಾತ್ರದ ಸಾಮಾನುಗಳು ಒತ್ತಲ್ಪಟ್ಟು  ಹದ ಗಾತ್ರಕ್ಕೆ ಬರುತ್ತವೆ. ಸ್ವಚ್ಚತೆ ಮತ್ತು ಆರೋಗ್ಯದ ದೃಷ್ಟಿಯಿಂದ ಇದು ಅತೀ ಅಗತ್ಯ. ಮಾರುಕಟ್ಟೆಯಿಂದ ತರುವ ಬಹಳಷ್ಟು ದಿನಸಿ ಸಾಮಗ್ರಿಗಳು ಅಂಗಡಿಯಿಂದ ತಂದು ಮನೆಯಲ್ಲಿ ಎರಡು ದಿನ ಇಟ್ಟು ಮತ್ತೆ ತೂಕ ಮಾಡಿದರೆ 50-100  ಗ್ರಾಂ ಕಡಿಮೆಯೇ. ಇನ್ನು ಜೀರಿಗೆಯು ಓಮದ ವಾಸನೆಯನ್ನೂ, ಮೆಣಸು ಸಾಬೂನಿನ ವಾಸನೆಯನ್ನೂ…

Read more
ಅಡಿಕೆ ಕ್ರಯ ಏರಲಿದೆ- ರಾಶಿ ಬೆಲೆ ಚೇತರಿಕೆ. ಚಾಲಿಯೂ ಏರಿಕೆ ಸೂಚನೆ

ಅಡಿಕೆ ಕ್ರಯ ಏರಲಿದೆ-  ರಾಶಿ ಬೆಲೆ ಚೇತರಿಕೆ. ಚಾಲಿಯೂ ಏರಿಕೆ ಸೂಚನೆ.

ಯಾವ ಲೆಕ್ಕಾಚಾರಕ್ಕೂ ಸಿಗದ ಅಡಿಕೆ ಮಾರುಕಟ್ಟೆ ಮತ್ತೆ ಚೇತರಿಕೆಯತ್ತ ಮುಖಮಾಡಿದೆ. ಸಾಮಾನ್ಯವಾಗಿ ವಸ್ತುವೊಂದರ ಬೆಲೆ ಬೇಡಿಕೆ ಮತ್ತು ಪೂರೈಕೆಯನ್ನು ಅವಲಂಭಿಸಿ ಹೆಚ್ಚು ಕಡಿಮೆ ಆಗುತ್ತಿರುತ್ತದೆ. ಆದರೆ ಅಡಿಕೆ ಹಾಗಿಲ್ಲ. ಬೆಳೆ ಹೆಚ್ಚಾದರೂ ಬೆಲೆ ಏರಬಹುದು. ಬೆಳೆ ಕಡಿಮೆಯಾದರೂ ಬೆಲೆ ಏರದೆ ಇರಬಹುದು. ಇದೆಲ್ಲಾ ಅಡಿಕೆ ಮಾರುಕಟ್ಟೆಯಲ್ಲಿ ಯಾವಾಗಲೂ ನಡೆಯುತ್ತಿರುವಂತದ್ದು.ವರ್ಷದುದ್ದಕ್ಕೂ ಗುಟ್ಕಾ ಫ್ಯಾಕ್ಟರಿ ನಡೆಯುತ್ತಿರುತ್ತದೆ. ಗುಟ್ಕಾ ತಿನ್ನುವವರು, ಪಾನ್ ತಿನ್ನುವವರು ಅದಕ್ಕೆ ರಜೆ / ವಿರಾಮ ಕೊಡುವ ಕ್ರಮವೇ ಇಲ್ಲ. ಆದರೂ  ಬೆಲೆ ಮಾತ್ರ ಒಮ್ಮೊಮ್ಮೆ ಏರುತ್ತಾ ಹೋಗುತ್ತದೆ….

Read more
ದಿನಾಂಕ:13-12-2022 ಚಾಲಿ, ಕೆಂಪುಅಡಿಕೆ, ಕರಿಮೆಣಸು, ರಬ್ಬರ್ , ಕಾಫೀ

ದಿನಾಂಕ:13-12-2022 ಚಾಲಿ,ಕೆಂಪುಅಡಿಕೆ, ಕರಿಮೆಣಸು, ರಬ್ಬರ್ , ಕಾಫೀ ಧಾರಣೆ.

ಚಾಲಿ ದರ ಭಾರೀ ಕುಸಿತ ಆಗಲಿಲ್ಲ.ಏರಿಕೆಯ ಸೂಚನೆಯೂ ಇಲ್ಲ.ಕೆಂಪುಅಡಿಕೆ ಧಾರಣೆ ಮಾತ್ರ ಯಾವ ಬೆಳೆಗಾರನೂ ಕಲ್ಪಿಸಿರದ ಮಟ್ಟಕ್ಕೆ ಬಂದಿದೆ.ಯಾಕೆ ಎಂಬ ಕಾರಣ ಯಾರಿಗೂ ಗೊತ್ತಿಲ್ಲ. ಗುಟ್ಕಾ ತಿನ್ನುವುದು ಕಡಿಮೆಯಾಗಿಲ್ಲ.ಗುಟ್ಕಾ ತಯಾರಿಕೆ ನಿಂತಿಲ್ಲ. ಆದರೆ ಅಡಿಕೆಗೆ ಬೆಲೆ ಇಲ್ಲ. ಕರಿಮೆಣಸು ಒಮ್ಮೆ ಚೇರಿಸಿಕೊಂಡರೂ  ಮತ್ತೆ ಮುಗ್ಗರಿಸಿದೆ. ರಬ್ಬರ್ ಬೆಲೆ ಏರಿಕೆ ಸಾಧ್ಯತೆ ಇಲ್ಲ.ಕೊಬ್ಬರಿಯೂ ಸಹ ನೆಲಕಚ್ಚಿದ ಸ್ಥಿತಿಯಲ್ಲಿದೆ. ಒಟ್ಟಿನಲ್ಲಿ ಕೃಷಿ ಉತ್ಪನ್ನಗಳ ಬೆಲೆ ಭಾರೀ ಅಸ್ತಿರವಾಗಿದೆ. ಶಿವಮೊಗ್ಗ ಮಾರುಕಟ್ಟೆಯಲ್ಲಿ ಕಳೆದ ವಾರದಿಂದ ಅಧಿಕ ಪ್ರಮಾಣದಲ್ಲಿ ಅಡಿಕೆ ಮಾರುಕಟ್ಟೆಗೆ ಬರುತ್ತಿದೆ. ಸಾಗರ,…

Read more

ಅಡಿಕೆ ಧಾರಣೆ ಕುಸಿಯುತ್ತಿದೆ – ಏನು ಕಾರಣ ಇರಬಹುದು? ಯಾವಾಗ ಏರಬಹುದು?

ಕಳೆದ ಒಂದು ತಿಂಗಳಿಂದ ಕೆಂಪಡಿಕೆ ಧಾರಣೆ ಶೇ.40 ರಷ್ಟು ಕಡಿಮೆಯಾಗಿದೆ. ಸಪ್ಟೆಂಬರ್ ತಿಂಗಳಲ್ಲಿ ಹಸಿ ಅಡಿಕೆ ಕ್ವಿಂಟಾಲಿಗೆ 7200 ತನಕ ಇದ್ದುದು, ಇಳಿಕೆಯಾಗುತ್ತಾ ಸಪ್ಟೆಂಬರ್ ಕೊನೆಗೆ 6600 ಕ್ಕೆ ಕುಸಿಯಿತು. ಹಾಗೆಯೇ ಕಡಿಮೆಯಾಗುತ್ತಾ  ಈಗ 5200-5000 ಕ್ಕೆ ಇಳಿದಿದೆ.ವರ್ತಮಾನ ಪರಿಸ್ಥಿತಿಯಲ್ಲಿ ಇನ್ನೂ ಇಳಿಕೆಯ ಸಾದ್ಯತೆಗಳು ಕಾಣಿಸುತ್ತಿದೆ. ಹಾಗೆಯೇ ಧಾರಣೆ 55,000 ಕ್ಕೆ ಏರಿದ್ದು, ಈಗ ಸರಾಸರಿ-40,000 ದ ಸಮೀಪಕ್ಕೆ ಬಂದಿದೆ. ಎಲ್ಲಾ ಅಡಿಕೆ ಬೆಳೆಗಾರರ ಕುತೂಹಲ ಧಾರಣೆ ಯಾವಾಗ ಏರಬಹುದು ಎಂಬುದು ಒಂದೇ. ಅಡಿಕೆ ಚೇಣಿ ವಹಿಸಿಕೊಳ್ಳುವವರು…

Read more
ಅಡಿಕೆ ಮಾರುಕಟ್ಟೆ - ಚಾಲಿ, ಕೆಂಪು ಯಾವುದು ಏರಬಹುದು? ಕರಿಮೆಣಸು ಏರಲಿದೆಯೇ?

ಅಡಿಕೆ ಮಾರುಕಟ್ಟೆ- ಚಾಲಿ, ಕೆಂಪು ಯಾವುದು ಏರಬಹುದು? ಕರಿಮೆಣಸು ಏರಲಿದೆಯೇ?

ಚಾಲಿ ಮಾರುಕಟ್ಟೆ ದರ ಸ್ವಲ್ಪ ಏರಿಕೆ ಆಗುವ ಮುನ್ಸೂಚನೆ ಕಾಣಿಸುತ್ತದೆ. ಕೆಂಪು ಸ್ವಲ್ಪ ಸಮಯದ ತನಕ ಅಸ್ಥಿರವಾಗಿ ಮುಂದುವರಿಯಬಹುದು. ಹಾಗೆಯೇ ಕರಿಮೆಣಸು ಮತ್ತೆ ಚೇತರಿಕೆ ಆಗುವ ಮುನ್ಸೂಚನೆ ಇದೆ. ಖಾಸಗಿಯವರು ಸಾಂಸ್ಥಿಕ ಖರೀದಿದಾರರಿಗಿಂತ ಸ್ವಲ್ಪ ಮುಂದೆ ಇದ್ದಾರೆ. ಹಾಗೆಯೇ ಗುಜರಾತ್ ಚುನಾವಣೆ ಇನ್ನೇನು ಎರಡು ದಿನಗಳಲ್ಲಿ ಮುಗಿಯಲಿದೆ. ಆ ನಂತರ ಬೇಡಿಕೆ ಹೆಚ್ಚಾಗಬಹುದು ಎಂಬ ನಿರೀಕ್ಷೆಯಲ್ಲಿ ವ್ಯಾಪಾರಿಗಳು ಚಾಲಿ ದಾಸ್ತಾನಿಗೆ ಮುಂದಾಗಿದ್ದಾರೆ. ಕೆಂಪಡಿಕೆ ಇನ್ನು 1-2 ತಿಂಗಳು ಸ್ವಲ್ಪ ಇಳಿಕೆಯಾಗಬಹುದು. ಕರಿಮೆಣಸು ಈ ತಿಂಗಳಲ್ಲಿ ಮತ್ತೆ 52500…

Read more
ಅಡಿಕೆ ಧಾರಣೆ ಹಿಂದೆ- ಕಾರಣ ಏನು? ಯಾವಾಗ ಚೇತರಿಕೆ

ಅಡಿಕೆ ಧಾರಣೆ ಹಿಂದೆ- ಕಾರಣ ಏನು? ಯಾವಾಗ ಚೇತರಿಕೆ ಆಗಬಹುದು?

ಬೆಳೆಗಾರರ ಬಹು ನಿರೀಕ್ಷೆಯ ಉತ್ತಮ ಧಾರಣೆ ಯಾಕೋ ಈ ವರ್ಷ ಈಡೇರಲಿಲ್ಲ. ಕಳೆದ ವರ್ಷ ಇದೇ ಸಮಯದಲ್ಲಿ ಇದ್ದ ಧಾರಣೆಗಿಂತ ಈ ವರ್ಷ ಕಡಿಮೆ. ಕಾರಣ ಎನಿರಬಹುದು? ಯಾವಾಗ ಚೇತರಿಕೆ ಆಗಬಹುದು ಎಂಬ ನಿರೀಕ್ಷೆಯಲ್ಲಿರುವ ಬೆಳೆಗಾರರಿಗೆ ಇಲ್ಲಿದೆ ಕೆಲವು ಅಗತ್ಯ ಮಾಹಿತಿ. ಈ ವರ್ಷ ಅಡಿಕೆ ಧಾರಣೆ ಕಳೆದ ವರ್ಷದಷ್ಟು ಏರಿಕೆ ಆಗುವ ನಿರೀಕ್ಷೆ ಸದ್ಯಕ್ಕೆ ಇಲ್ಲ. ಚಾಲಿ ಅಡಿಕೆ ಧಾರಣೆ ಮತ್ತೆ ಕ್ವಿಂಟಾಲಿಗೆ ರೂ.1000 ಕಡಿಮೆಯಾಗಿದೆ. ಡಬ್ಬಲ್ ಚೋಲ್ ಸಹ 1000 ದಷ್ಟು ಕಡಿಮೆಯಾಗಿದೆ. ಕೆಂಪಡಿಕೆಗೂ…

Read more
ನವೆಂಬರ್ 19-20-21-22-23 ದಿನಗಳಲ್ಲಿ ವಿಶೇಷ ಕಿಸಾನ್ ಮೇಳ.

ನವೆಂಬರ್ 19-20-21-22-23 ದಿನಗಳಲ್ಲಿ ವಿಶೇಷ ಕಿಸಾನ್ ಮೇಳ.

ನವೆಂಬರ್ ತಿಂಗಳು ದಿನಾಂಕ 19 ಶನಿವಾರದಿಂದ ಮೊದಲ್ಗೊಂಡು 20-21-22-23 ರ ಬುಧವಾರದ ತನಕ ನೆಟ್ಟಣದ ಕಿಡುವಿನಲ್ಲಿರುವ ಕೇಂದ್ರೀಯ ತೋಟಗಾರಿಕಾ ಬೆಳೆಗಳ ಸಂಶೋಧನಾ ಸಂಸ್ಥೆಯಲ್ಲಿ (CPCRI) ವಿಶೇಷ ಕಿಸಾನ್ ಮೇಳ ನಡೆಯಲಿದೆ. ಇದು ಇಲ್ಲಿನ ಇತಿಹಾಸದಲ್ಲೇ ಆತೀ ದೊಡ್ಡ  ರೈತ ಸಂಪರ್ಕ ಕಾರ್ಯಕ್ರಮವಾಗಿದ್ದು, ಇದಕ್ಕೆ ನಿಮ್ಮೆಲ್ಲರನ್ನೂ ಆಹ್ವಾನಿಸಲಾಗುತ್ತದೆ. ನೀವೂ ಬನ್ನಿ ನಿಮ್ಮ ಎಲ್ಲಾ ಮಿತ್ರರನ್ನೂ ಈ ಕಾರ್ಯಕ್ರಮಕ್ಕೆ ಬರುವಂತೆ ತಿಳಿಸಿ. CPCRI ಸಂಸ್ಥೆಯ ಕರ್ನಾಟಕದಲ್ಲಿರುವ ತೆಂಗು – ಅಡಿಕೆ ಬೀಜೋತ್ಪಾದನಾ ಸಂಸ್ಥೆಗೆ 50 ವರ್ಷಗಳ ಸಂಭ್ರಮ.1972 ರಲ್ಲಿ ದಕ್ಷಿಣ…

Read more
ಡ್ರಾಗನ್ ಹಣ್ಣಿನ ಬೆಳೆಯಿಂದ ರೈತರ ಆದಾಯ

ಡ್ರಾಗನ್ ಹಣ್ಣಿನ ಬೆಳೆಯಿಂದ ರೈತರ ಆದಾಯ ಹೆಚ್ಚಲಾರಂಭಿಸಿದೆ

ಡ್ರಾಗನ್ ಹಣ್ಣಿನ ಬೆಳೆಗೆ ಭಾರೀ ಮಹತ್ವ ಬರುತ್ತಿದ್ದು, ಮಾರುಕಟ್ಟೆಯಲ್ಲಿ ಬೇಡಿಕೆಯೂ ಉತ್ತಮವಾಗಿದೆ. ಈ ಬೆಳೆ ರೈತರ ಆದಾಯ ಹೆಚ್ಚಳಕ್ಕೆ ನೆರವಾಗುತ್ತಿದೆ. ನಮ್ಮ ದೇಶವಲ್ಲದೆ ಬೇರೆ ದೇಶಗಳಲ್ಲೂ ಡ್ರಾಗನ್ ಹಣ್ಣಿನ ಬೆಳೆ ಜನಪ್ರಿಅತೆ ಗಳಿಸುತ್ತಿದ್ದು, ಇದಕ್ಕೆ ಪ್ರಾಪಂಚಿಕ ಮಾರುಕಟ್ಟೆ ಇದೆ. ಇಲ್ಲೊಬ್ಬರು ಹೂವಿನ ಹಡಗಲಿಯ ಕಾಲ್ವಿ ಗ್ರಾಮದ ರೈತ  ಡ್ರಾಗನ್ ಹಣ್ಣಿನ ಬೆಳೆ ಬೆಳೆದು ಹೇಗೆ ಆದಾಯ ಹೆಚ್ಚಿಸಿಕೊಂಡರು ನೋಡೋಣ. ಕರ್ನಾಟಕ ರಾಜ್ಯ ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಕಾಲ್ವಿ ಗ್ರಾಮದ ಬಣಕಾರ ಶಿವನಾಗಪ್ಪ ದೊಡ್ಡತೋಟಪ್ಪ( 65) ಒಬ್ಬ…

Read more
ಇಂದಿನಿಂದ 4 ದಿನ ಬೆಂಗಳೂರು ಕೃಷಿಕರನ್ನು ಆಹ್ವಾನಿಸುತ್ತದೆ.

ಇಂದಿನಿಂದ 4 ದಿನ  ಬೆಂಗಳೂರು ಕೃಷಿಕರನ್ನು ಆಹ್ವಾನಿಸುತ್ತದೆ. 

ಬೆಂಗಳೂರಿಗೆ ಕೃಷಿಕರು ಹೋಗಬೇಕಿದ್ದರೆ ಅಲ್ಲಿ ಅವರ ಆಕರ್ಷಣೆಯ ವಿಷಯ ವಸ್ತು ಇರಬೇಕು. ಇಲ್ಲಿನ ಕೃಷಿ ವಿಶ್ವ ವಿಧ್ಯಾನಿಲಯವು ಕೃಷಿ ಮೇಳದ ಮೂಲಕ ರಾಜ್ಯ ಹೊರ ರಾಜ್ಯದ ಕೃಷಿಕರನ್ನು ಆಹ್ವಾನಿಸುತ್ತಿದೆ. ಇಂದಿನಿಂದ 4 ದಿನ ನವೆಂಬರ್  2022  ರ ದಿನಾಂಕ 3 -4-5-6 ರ ಗುರುವಾರ, ಶುಕ್ರವಾರ, ಶನಿವಾರ  ಮತ್ತು ಭಾನುವಾರಗಳಂದು ಬೆಂಗಳೂರು ಕೃಷಿ ವಿಶ್ವ ವಿಧ್ಯಾನಿಲಯದಲ್ಲಿ  (ಜಿಕೆವಿಕೆ GKVK)  ನಡೆಸಲಾದ ಎಲ್ಲಾ ಕೃಷಿ, ತೋಟಗಾರಿಕೆ ಮುಂತಾದ  ತಂತ್ರಜ್ಞಾನಗಳನ್ನು ರೈತರಿಗೆ ತಿಳಿಸಿಕೊಡುವ ಉತ್ಸವ ಇದಾಗಿರುತ್ತದೆ. ರೈತ ಇಲ್ಲಿಗೆ ಭೇಟಿ…

Read more
error: Content is protected !!