ಬೆಣ್ಣೆ ಹಣ್ಣುಗಳಲ್ಲಿ ಸರ್ವ ಶ್ರೇಷ್ಟವಾದ ಹಾಸ್ ತಳಿಯನ್ನು ಹೇಗೆ ಬೆಳೆಯಬೇಕು

ಬೆಣ್ಣೆ ಹಣ್ಣುಗಳಲ್ಲಿ ಸರ್ವ ಶ್ರೇಷ್ಟವಾದ ಹಾಸ್ ತಳಿಯನ್ನು ಹೇಗೆ ಬೆಳೆಯಬೇಕು?

ಹಾಸ್ ಹೆಸರಿನ ಬೆಣ್ಣೆಹಣ್ಣು ತಳಿ (Avocado) ಜಾಗತಿಕವಾಗಿ ಮನ್ನಣೆ ಪಡೆದ ಸರ್ವ ಶ್ರೇಷ್ಟ ಹಣ್ಣಾಗಿದ್ದು, ಇದನ್ನು ಕೆಲವು ನಿರ್ದಿಷ್ಟ ವಾತಾವರಣದಲ್ಲಿ ಮಾತ್ರ ಬೆಳೆಯಬಹುದು. ಈ ತಳಿಯ ಬೆಣ್ಣೆ ಹಣ್ಣಿಗೆ ಅದರದ್ದೇ ಆದ ವಿಶಿಷ್ಟ ಗುಣಗಳಿವೆ. ಹಾಗಾಗಿಯೇ ಇದಕ್ಕೆ ಉತ್ತಮ ಬೆಲೆ ಮತ್ತು ಬೇಡಿಕೆ. ಹಾಗಾದರೆ ಹ್ಯಾಸ್ ತಳಿ ಏನು, ಇದನ್ನು ಎಲ್ಲೆಲ್ಲಿ ಬೆಳೆದರೆ ಮಾತ್ರ ಫಲ ಪಡೆಯಬಹುದು ಎಂಬುದನ್ನು ತಿಳಿಯೋಣ. ಬೆಣ್ಣೆ ಹಣ್ಣು, ಅವಕಯಾಡೋ,ದಲ್ಲಿ ಹಲವಾರು ತಳಿಗಳಿವೆ. ಗಾತ್ರದಲ್ಲಿ, ಬಣ್ಣದಲ್ಲಿ, ರಚನೆಯಲ್ಲಿ  ಇರುವ ವ್ಯತ್ಯಾಸಕ್ಕನುಗುಣವಾಗಿ ತಳಿಗಳಿಗೆ ನಾಮಕರಣ…

Read more
ನೇರಳೆ ಮರವನ್ನು ಪೊದೆಯಾಗಿ ಬೆಳೆಸುವ ವಿಧಾನ

ನೇರಳೆ ಮರವನ್ನು ಪೊದೆಯಾಗಿ ಬೆಳೆಸುವ ವಿಧಾನ.

ನೇರಳೆ ಮರ ಇದು ನಮಗೆಲ್ಲಾ ಗೊತ್ತಿರುವಂತದ್ದು. ಮರ ಪೊದೆಯಾಗಿದ್ದರೆ ಕೊಯ್ಯುವುದು ಬಹಳ ಸುಲಭ. ಇದನ್ನು ತರಬೇತಿಗೊಳಿಸುತ್ತಾ ಪೊದೆಯಾಕಾರದಲ್ಲಿ ಬೆಳೆಸಲು ಸಾಧ್ಯ. ನೇರಳೆ ಹಣ್ಣು ಒಂದು ಆರೋಗ್ಯ ಸಂಜೀವಿನಿಯಾಗಿದ್ದು, ಇದರ ಹಣ್ಣಿಗೆ ಭಾರೀ ಬೇಡಿಕೆ. ಇದರ ಬೀಜಕ್ಕೂ ಸಹ ಬೆಲೆ ಇದ್ದು, ಎಲ್ಲಾ ಬೆಳೆಗಳ ಜೊತೆಗೆ ಸ್ವಲ್ಪ ನೇರಳೆ  ಬೆಳೆಯೂ ಇದ್ದರೆ  ಒಳ್ಳೆಯದು. ಹಳ್ಳಿಯ ಹಿರಿಯ ತಲೆಮಾರಿನ ಜನರಿಗೆ ನೇರಳೆ ಹಣ್ಣು , ಕುಂಟು ನೇರಳೆ ಹಣ್ಣು, ಹಾಗೆಯೇ ಇನ್ನಿತರ ಕಾಡು ಹಣ್ಣುಗಳನ್ನು ತಿಂದ ಅನುಭವ ಇದೆ. ಹಿಂದೆ…

Read more
ಅಡಿಕೆ ಮಾರುಕಟ್ಟೆ ಕುಸಿಯುತ್ತಿದೆ ! ಮತ್ತೆ ಯಾವಾಗ ಚೇತರಿಕೆ ಆಗಬಹುದು?

ಅಡಿಕೆ ಮಾರುಕಟ್ಟೆ ಕುಸಿಯುತ್ತಿದೆ ! ಮತ್ತೆ ಯಾವಾಗ ಚೇತರಿಕೆ ಆಗಬಹುದು?   

ಅಡಿಕೆ ಮಾರುಕಟ್ಟೆ ಅನಿರೀಕ್ಷಿತವಾಗಿ ಕುಸಿಯಲಾರಂಭಿಸಿದೆ. 45000 ದಿಂದ 40500 ಕ್ಕೆ ಕುಸಿಯಿತು. ಮುಂದಿನ ವಾರ ಮತ್ತೆ ಕುಸಿತವಾಗುವ ಸೂಚನೆ  ಇದೆ. ಈ ಕುಸಿತ ತಾತ್ಕಾಲಿಕವೇ ಅಥವಾ ಮತ್ತೆ ಏತರಿಕೆ ಆಗಹುದುದೇ ಎಂಬ ಕುತೂಹಲ ನಮ್ಮೆಲ್ಲರದ್ದು. ಒಂದು ತಿಂಗಳ ತನಕ ಈ ಅಸ್ತಿರತೆ ಮುಂದುವರಿಯಲಿದ್ದು, ಮತ್ತೆ ಚೇತರಿಕೆ ಆಗುವ ಸಾಧ್ಯತೆ  ಇದೆ. ಬೆಳೆಗಾರರು ನಿರಾಶರಾಗಬೇಕಾಗಿಲ್ಲ. ಅಡಿಕೆ ಮಾರುಕಟ್ಟೆ ಚೇತರಿಕೆ ಕಾಣುವ ಸೂಚನೆ ಇಲ್ಲ ಎಂಬುದಾಗಿ ಸುದ್ದಿಗಳು ಹರಡುತ್ತಿವೆ. ಆದರೆ ಕೆಲವು ಮೂಲಗಳ ಪ್ರಕಾರ ಮತ್ತೆ ಚೇತರಿಕೆ ಆಗುವ ಸಾಧ್ಯತೆ …

Read more
ಅಡಿಕೆ ಕಾಯಿಗಳು ಯಾಕೆ ಹೀಗಾಗುತ್ತವೆ? ಏನು ಪರಿಹಾರ?

ಅಡಿಕೆ ಕಾಯಿಗಳು ಯಾಕೆ ಹೀಗಾಗುತ್ತವೆ? ಏನು ಪರಿಹಾರ?

ಬಹಳಷ್ಟು ಅಡಿಕೆ ಬೆಳೆಗಾರರ ತೋಟದಲ್ಲಿ ಈಗ ಇಂತಹ ಕಾಯಿಗಳು ಉದುರಿ ಬೀಳುತ್ತಿವೆ. ಸರಿಯಾಗಿ ಬಲಿತು ಹಣ್ಣಾಗಿರದ, ಮೇಲ್ಮೈಯಲ್ಲಿ ಸುಟ್ಟಂತಹ ಕಲೆ ಇರುವ ಈ ಅಡಿಕೆಗೆ  ಗುಣಮಟ್ಟ ಇರುವುದಿಲ್ಲ. ಸಿಪ್ಪೆ ಅಂಟಿರುವ ಉಳ್ಳಿ ಅಡಿಕೆ ಆಗಬಹುದು.  ಒಡೆದ ಪಟೋರಾವೂ ಆಗಬಹುದು. ಇಲ್ಲವೇ ಕೆಂಪು ಬಣ್ಣದ ಕರಿಗೋಟು ಆಗಬಹುದು. ಹೀಗಾಗುವುದಕ್ಕೆ ಕಾರಣ ಏನು ಎಂಬುದು ಬಹಳಷ್ಟು ಕೃಷಿಕರಿಗೆ ಗೊತ್ತಿಲ್ಲ. ಇದು ಹೊಸ ಸಮಸ್ಯೆ ಅಲ್ಲವಾದರೂ ಈಗೀಗ ಇದರ ತೊಂದರೆ ಹೆಚ್ಚಾಗುತ್ತಿದೆ. ಅಡಿಕೆ ಬೆಳೆಗೆ ಈಗೀಗ ಒಂದಿಲ್ಲೊಂದು ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ.ಇದಕ್ಕೆ ಕಾರಣ…

Read more
ಬೆಳೆಗಾರರೇ ಎಚ್ಚರ! ಅಡಿಕೆ ಬೆಳೆ ಭವಿಷ್ಯ ಭಾರೀ ಅತಂತ್ರವಾಗಿದೆ

ಬೆಳೆಗಾರರೇ ಎಚ್ಚರ! ಅಡಿಕೆ ಬೆಳೆ ಭವಿಷ್ಯ ಭಾರೀ ಅತಂತ್ರವಾಗಿದೆ.

ಅಡಿಕೆ ಬೆಳೆ ಮುಂದಿನ ದಿನಗಳಲ್ಲಿ ಏನಾಬಗಬಹುದು, ಭವಿಷ್ಯದಲ್ಲಿ ಹೀಗೇ ಬೆಲೆ ಉಳಿಯಬಹುದೇ? ಎಂಬ ಕುತೂಹಲ ಎಲ್ಲರನ್ನೂ ಕಾಡುತ್ತಿದೆ. ಎಚ್ಚರ! ಅಡಿಕೆ ಭವಿಷ್ಯ ಭಾರೀ ಅತಂತ್ರವಾಗಿದೆ.ಪ್ರತೀಯೊಬ್ಬ ಕೃಷಿಕನ ಮನಸ್ಸಿನಲ್ಲೂ ಈ ಒಂದು ವಿಚಾರ ಕೊರೆಯುತ್ತಿದೆಯಾದರೂ  ಹೆಚ್ಚಿನವರು ಇನ್ನೂ ಪ್ರದೇಶ ವಿಸ್ತರಣೆ ಮಾಡುತ್ತಲೇ ಇದ್ದಾರೆ. ಆದರೆ ಅಡಿಕೆ ಈಗಾಗಲೇ ಸಂತೃಪ್ತ ಸ್ಥಿತಿಗೆ ಮುಟ್ಟಿದಂತಿದೆ. ಈ ಹಿಂದೆಯೂ ಮುಂದೆ ಅಡಿಕೆಗೆ ಭವಿಷ್ಯವಿಲ್ಲ. ನೆಡಬೇಡಿ ಎಂದು ಹೇಳುತ್ತಿದ್ದರು. ಆದರೆ  ಒಮ್ಮೆ ಬೆಲೆ ಕುಸಿದದ್ದೂ ಮತ್ತೆ ಮೇಲೇರಿತು. ಶ್ರೀಯುತ ಅಶೋಕ್ ಕುಮಾರ್ ಕರಿಕಳ ಅವರ…

Read more
ಅಡಿಕೆ ಸಸಿ ನೆಡುವವರು ಗಮನಿಸಿ- ಇಂತಹ ಅಡಿಕೆ ಸಸಿ ನೆಡಬೇಡಿ.

ಅಡಿಕೆ ಸಸಿ ನೆಡುವವರು ಗಮನಿಸಿ- ಇಂತಹ ಅಡಿಕೆ ಸಸಿ ನೆಡಬೇಡಿ.

ಅಡಿಕೆ ತೋಟ ಮಾಡಿದರೆ ನಮ್ಮ ಆರ್ಥಿಕ ಸ್ಥಿತಿ ಸ್ವಲ್ಪವಾದರೂ ಸುಧಾರಿಸಬಹುದು ಎಂದು ಎಲ್ಲರೂ ಈ ಕೃಷಿ ಮಾಡಲಾರಂಭಿಸಿದ್ದಾರೆ. ಬೆಳೆಯುವವರು ಹೆಚ್ಚಾದಂತೆ ಅದಕ್ಕನುಗುಣವಾಗಿ ಸಸಿಗಳೂ ಲಭ್ಯವಾಗಬೇಕು. ಹಲವಾರು ನರ್ಸರಿಗಳು ಈ ಕೆಲಸವನ್ನು ಮಾಡುತ್ತಿವೆ. ಸಸಿ ನರ್ಸರಿಯದ್ದಿರಲಿ, ಸ್ವಂತ ತಯಾರಿಸಿದ್ದು ಇರಲಿ, ನೀವು ನೆಡಲು ಉದ್ದೇಶಿಸಿರುವ ಗಿಡದಲ್ಲಿ ಈ ಚಿನ್ಹೆಗಳಿದ್ದರೆ ಅಂತಹ ಸಸಿ ನೆಡಬೇಡಿ. ಇದು ಎಲೆ ಚುಕ್ಕೆ ರೋಗ ತಗಲಿದ ಸಸಿಯಾಗಿರುತ್ತದೆ. ಇದನ್ನು ನೆಟ್ಟರೆ ಎಲೆ ಚುಕ್ಕೆ ರೋಗ ನಿಮ್ಮ ತೋಟಕ್ಕೆ ಹೊಸ ಅತಿಥಿ ಬಂತೆಂದೇ ತಿಳಿಯಿರಿ. ಅಡಿಕೆ…

Read more
ಸಧ್ಯವೇ ಅಡಿಕೆ ಮಾರುಕಟ್ಟೆ ಕುಸಿತ ಸಾಧ್ಯತೆ.

ಸಧ್ಯವೇ ಅಡಿಕೆ ಮಾರುಕಟ್ಟೆ ಕುಸಿತ  ಸಾಧ್ಯತೆ.

ಅಡಿಕೆ ಮಾರುಕಟ್ಟೆಯಲ್ಲಿ ದರ ಕುಸಿತದ ಸುದ್ದಿ ಹಬ್ಬುತ್ತಿದೆ. ಕೆಂಪಡಿಕೆ  ಕೊಯಿಲು ಪ್ರಾರಂಭವಾಗಿದೆ. ಚಾಲಿ ಅಡಿಕೆ ಮಾಡುವ ಪ್ರದೇಶಗಳಲ್ಲೂ  ಒಂದು ಕೊಯಿಲಿನ ಅಡಿಕೆ  ಹಣ್ಣಾಗಿ ಅಗಿದೆ. ಹೊಸತು ಹಳತಾಗಿದೆ. ಹೊಚ್ಚ ಹೊಸತು ಬರಲಾರಂಭಿಸಿದೆ. ಈ ಮಧ್ಯೆ ಅಡಿಕೆ ಧಾರಣೆ ಏರಿಕೆ ಆಗುವ ಸುಳಿವು ಇಲ್ಲ. ಹೊಸತು ಮಾರುಕಟ್ಟೆಗೆ ಬರುವ ಈ ಸಮಯಕ್ಕೆ  ಹಳೆ ಅಡಿಕೆಗೆ ದರ ಸ್ವಲ್ಪವಾದರೂ ಹೆಚ್ಚಾಗಬೇಕಿತ್ತು. ಆದರೆ  ಹಳೇ (ಡಬ್ಬಲ್) ಅಡಿಕೆಗೆ ಬೇಡಿಕೆಯೇ ಇಲ್ಲದ ಸ್ಥಿತಿ ಉಂಟಾಗಿದೆ. ಎಲ್ಲೋ ಒಂದೆಡೆ ಅಡಿಕೆ ಧಾರಣೆ ಕುಸಿಯುವ ಸುಳಿವು…

Read more
ಮೆಣಸಿನ ಬೆಳೆಯ ಈ ಸಮಸ್ಯೆಗೆ ಕಾರಣ ಮತ್ತು ಪರಿಹಾರ

ಮೆಣಸು ಬೆಳೆಗೆ ಈ ಸಮಸ್ಯೆ ಯಾಕೆ ಬರುತ್ತದೆ? ಪರಿಹಾರ ಏನು?

ಮೆಣಸು ಬೆಳೆಯಲ್ಲಿ ಎಲೆ ಮುರುಟುವಿಕೆ ಒಂದು ಸಮಸ್ಯೆಯಾದರೆ ಇನ್ನೊಂದು ಸಮಸ್ಯೆ  ಕಾಯಿ ಈ ರೀತಿ ಆಗಿ ಕೊಳೆತು ಹೋಗುವುದು. ಕೆಲವು ಪ್ರದೇಶಗಳಲ್ಲಿ ಈ ಸಮಸ್ಯೆ ಬಹಳಶ್ಟು ಹೆಚಾಗುತ್ತಿದ್ದು, ಮೆಣಸು ಬೆಳೆಯನ್ನೇ ಬಿಡುವ ವರೆಗೆ ಪರಿಸ್ಥಿತಿ ಬಿಗಡಾಯಿಸಿದೆ. ಇದು ಯಾವ ಕಾರಣಕ್ಕೆ ಹೀಗೆ ಆಗುತ್ತದೆ, ಕೀಟ ಸಮಸ್ಯೆಯೇ ಅಥವಾ ರೋಗವೇ ಎಂಬುದನ್ನು ಇಲ್ಲಿ ನೋಡೋಣ. ನಮ್ಮ ದೇಶದಲ್ಲಿ ಮೆಣಸು ಒಂದು ಪ್ರಾಮುಖ್ಯ ಸಾಂಬಾರ ಬೆಳೆ. ಇಲ್ಲಿನ ಮೆಣಸಿಗೆ ಜಾಗತಿಕ ಮನ್ನಣೆ ಇದೆ. ರಪ್ತು ಸಹ ಆಗುತ್ತದೆ. ಕೆಲವೊಮ್ಮೆ ಇಲ್ಲಿಂದ…

Read more
error: Content is protected !!