ಸಾವಯವ ಸಾರಜನಕ ಗೊಬ್ಬರಗಳ ಮೂಲ ಇವು.

ಸಾರಜನಕ ಎಂಬುದು ರಾಸಾಯನಿಕ ರೂಪದಲ್ಲಿರುವ ಯೂರಿಯಾ, ಅಮೋನಿಯಂ ಸಲ್ಫೇಟ್ ಅಥವಾ ನೈಟ್ರೇಟ್ ಮುಂತಾದ ಮೂಲಗಳಲ್ಲೇ ಬಳಸಬೇಕಾಗಿಲ್ಲ. ನಿಸರ್ಗ ಸಾರಜನಕ ಸತ್ವದ ಖಣಜ. ನಮ್ಮ ತುರ್ತು ಅವಶ್ಯಕತೆಗಾಗಿ ರಾಸಾಯನಿಕ ವಿಧಾನದ ಮೂಲಕ ಸಾರಜನಕ ಗೊಬ್ಬರವನ್ನು ಉತ್ಪಾದಿಸಿದ್ದು. ಮಣ್ಣಿನಲ್ಲಿ ಸಾಕಷ್ಟು ಸಾರಜನಕದ ಅಂಶ ಇದೆಯಾದರೂ ನಾವು ಯಾಕೆ ಬೇರೆ ಮೂಲದಿಂದ ಸಾರಜನಕವನ್ನು ಬಳಸುತ್ತಿದ್ದೇವೆ ಎಂಬುದು ಎಲ್ಲರ ಭಾವನೆ. ಇದು ಸತ್ಯ. ಕಾರಣ ಇಷ್ಟೇ ಇವು ಬೇರೆ ಬೇರೆ ಕಾರಣಗಳಿಂದ ನಷ್ಟವಾಗುತ್ತದೆ. ಇದನ್ನು ಪೂರ್ಣ ಉಳಿಸಲು ಅಸಾಧ್ಯ. ಪ್ರಯತ್ನ ಪಟ್ಟರೆ ಗರಿಷ್ಟ…

Read more

ಅಧಿಕ ಇಳುವರಿಗೆ ಸಹಾಯಕವಾಗುವ ಸಾವಯವ ಗೊಬ್ಬರಗಳು.

ರಾಸಾಯನಿಕ ಗೊಬ್ಬರಗಳು ಒಮ್ಮೆಗೆ  ಉತ್ತಮ ಫಲಿತಾಂಶ ಕೊಡಬಹುದು. ಆದರೆ ಅದು ಧೀರ್ಘ ಕಾಲದ ತನಕ ಕಷ್ಟ. ಮಣ್ಣಿನ ಫಲವತ್ತತೆಯಿಂದ ಮಾತ್ರ ಧೀರ್ಘಕಾಲಿಕ ಫಲಿತಾಂಶ ಪಡೆಯಲು ಸಾಧ್ಯ. ಧೀರ್ಘಾವಧಿ ಬೆಳೆಗಳಿಗೆ ಮಣ್ಣಿನ ಫಲವತ್ತತೆ ಪ್ರಾಮುಖ್ಯ. ಸಾವಯವ ಅಥವಾ ನೈಸರ್ಗಿಕ ಮೂಲವಸ್ತುಗಳಿಂದ ಮಾತ್ರ ಮಣ್ಣಿನ ಫಲವತ್ತತೆ ವೃದ್ದಿಯಾಗಲು ಸಾಧ್ಯ. ರಾಸಾಯನಿಕ ಗೊಬ್ಬರಗಳು ಎಲ್ಲವೂ ಆಮ್ಲೀಯ ಗುಣದವು. ಇದನ್ನು ಮಣ್ಣಿಗೆ ಹಾಕುವುದರಿಂದ ಮಣ್ಣು ಸ್ವಲ್ಪ ಮಟ್ಟಿಗೆ ಅಜೀರ್ಣಕ್ಕೊಳಗಾಗುತ್ತದೆ. ರಾಸಾಯನಿಕ ಗೊಬ್ಬರಗಳನ್ನು ಬಳಸುವುದರ ಜೊತೆಗೆ  ಸಾವಯವ ವಸ್ತುಗಳನ್ನೂ ಸೇರಿಸುತ್ತಿದ್ದರೆ ಮಣ್ಣು ಆರೋಗ್ಯವಾಗಿರುತ್ತದೆ. ಮಣ್ಣು…

Read more

ರಾಸಾಯನಿಕ ಮುಕ್ತ ಭತ್ತ ಬೇಸಾಯ ಹೀಗೆ.

ಸಮಗ್ರ  ಕೃಷಿ ಪದ್ದತಿ ಎಂದರೆ ಲಭ್ಯವಿರುವ ನಿಯಮಿತ ಸಂಪನ್ಮೂಲಗಳನ್ನು ಬಳಸಿಕೊಂಡು ಅಧಿಕ ಉತ್ಪಾದನೆ  ಪಡೆಯುವ  ಕೃಷಿ ಪದ್ದತಿ. ಇದರಲ್ಲಿ ಒಂದಕ್ಕೊಂದು ಅನುಕೂಲಗಳಿರುತ್ತವೆ. ಸ್ವಾವಲಂಬಿಯಾಗಿ ಬೆಳೆ ತೆಗೆಯಲು ಇದು ಸಹಕಾರಿ. ಭತ್ತದ ಬೆಳೆಗೆ ಯಾವುದೇ ಕೀಟನಾಶಕ- ರೋಗ ನಾಶಕ ಬಳಕೆ ತುಂಬಾ ಕಷ್ಟ ಹಾಗೆಯೇ  ಅಪಾಯಕಾರಿಯೂ ಸಹ. ಇದನ್ನು  ಬಳಸದೆ ಬೆಳೆ ಬೆಳೆಯಲು  ಭತ್ತದ ಜೊತೆಗೆ ಮೀನು, ಕೋಳಿ ಸಾಕಿ.  ಭತ್ತದ ಪೈರಿನ ಅಧಿಕ ಇಳುವರಿಗೆ ಮೇಲ್ ಸ್ಥರದಲ್ಲಿ ಕೋಳಿ  ಗೊಬ್ಬರಕೊಟ್ಟರೆ  ಮೀನು ಬೆಳೆ ಸಂರಕ್ಷಿಸುತ್ತದೆ. ಇದರಿಂದ ಕೀಟ-…

Read more

ಸಾವಯವ ಅಂಶ ಮತ್ತು ಬೆಳೆ ಉತ್ಪಾದಕತೆ.

ಮಣ್ಣು ಕಲ್ಲು ಖನಿಜಗಳ ಶಿತಿಲತ್ವದಿಂದ ಉಂಟಾದುದು. ಮಣ್ಣಿನಲ್ಲಿ ಹುಟ್ಟಿ ಬೆಳೆದ ಸಸ್ಯ, ಪ್ರಾಣಿಗಳ ತ್ಯಾಜ್ಯಗಳು ಮಣ್ಣಿಗೆ ಸೇರಲ್ಪಟ್ಟು ಅದು ಸಾವಯವ ಅಂಶವನ್ನು ಹೆಚ್ಚಿಸುತ್ತಾ ಬಂದಿದೆ. ಸಾವಯವ ಅಂಶ ಇಲ್ಲದ ವಿನಹ ಮಣ್ಣು ಜೀವಂತಿಕೆಯಲ್ಲಿರುವುದಿಲ್ಲ….. ಏನು ಆಗಿದೆ? ಇತ್ತೀಚಿನ ದಿನಗಳಲ್ಲಿ ಅತೀಯಾದ ರಾಸಾಯನಿಕ ಗೊಬ್ಬರ, ಕೀಟನಾಶಕ, ಕಳೆನಾಶಕಗಳ ಬಳಕೆಯಿಂದ ಮಣ್ಣು ತನ್ನ ಫಲವತ್ತತೆಯನ್ನು ಕಳೆದುಕೊಳ್ಳುತ್ತಿದೆ. ಹಾಗೇಯೇ ಮಣ್ಣಿನಲ್ಲಿರುವ ಸೂಕ್ಷ್ಮಾಣು ಜೀವಿಗಳ ಸಂಖ್ಯೆಯು ಕಡಿಮೆಯಾಗುತ್ತಿದೆ. ಅವುಗಳ ಅಲ್ಪ ಸ್ವಲ್ಪ ಪ್ರಮಾಣದಲ್ಲಿ ಸೂಕ್ಷ್ಮಾಣು ಜೀವಿಗಳು ಇದ್ದರೂ ಅವುಗಳ ಚಟುವಟಿಕೆಗೆ ಅನುಕೂಲಕರವಾಗಿಲ್ಲ. ಇದರಿಂದಾಗಿ…

Read more

ಸತ್ವಯುತ ಕಾಂಪೊಸ್ಟು ತಯಾರಿಕೆ ಹೀಗೆ.

ಕಾಂಪೋಸ್ಟು ಅದರಲ್ಲೇನಿದೆ. ಹೊಂಡ ಮಾಡುವುದು ಅದಕ್ಕೆ  ಎಲ್ಲಾ  ತ್ಯಾಜ್ಯಗಳನ್ನು  ಹಾಕುವುದು ಗೋಬರ್ ಗ್ಯಾಸ್ ಸ್ಲರಿಯನ್ನು  ಎರೆಯುವುದು. ಕೆಲವು ತಿಂಗಳಲ್ಲಿ ಕಾಂಪೋಸ್ಟು  ತಯಾರಾಗುತ್ತದೆ. ಇದು ನಿಜವಾಗಿಯೂ ಸೂಕ್ತ  ಕಾಂಪೋಸ್ಟು ತಾಂತ್ರಿಕತೆ ಆಲ್ಲ. ಇದರಲ್ಲಿ ಯಾವ ಪೋಷಕಗಳೂ ಇರುವುದಿಲ್ಲ. ಸಾವಯವ ತ್ಯಾಜ್ಯಗಳು ಹಾಕಿದ ತರಹವೇ ಯಾವುದೇ ರೂಪಾಂತರಗೊಳ್ಳದೆ ಇರುತ್ತವೆ. ಗುಂಡಿಯ  ಒಳಗಡೆ ನೀರು ಹೆಚ್ಚಾಗಿರುತ್ತದೆ. ಇದು ಸೂಕ್ಷ್ಮ ಜೀವಿಗಳನ್ನು ಬದುಕಲು ಬಿಡುವುದಿಲ್ಲ.  ಯಾವುದೇ ಸಾವಯವ ತ್ಯಾಜ್ಯ ಕಾಂಪೋಸ್ಟು ಕ್ರಿಯೆಗೆ ಒಳಪಟ್ಟಾಗ ಅದು ಹುಡಿ ಆಗಬೇಕು. ಗುಂಡಿ ಪದ್ದತಿಯಲ್ಲಿ ಅದು ಆಗುವುದಿಲ್ಲ….

Read more

ಸಾವಯವ ಕೃಷಿ- ಇದು ವ್ಯವಸ್ಥಿತ ರಾಜಕೀಯ.

ರೈತರೇ ನೀವು ಕೃಷಿ ಮಾಡುವವರೇ ಹೊರತು ಪಕ್ಷ ಕಟ್ಟುವವರಲ್ಲ. ಪಕ್ಷ ಕಟ್ಟುವ, ರಾಜಕೀಯ ಮಾಡುವ ಮನೋಸ್ಥಿತಿಯವರು ನಾವಲ್ಲ. ನಾವು ಸಾಧ್ಯವಾದಷ್ಟು ಒಗ್ಗಟ್ಟಾಗುವ ಬಗ್ಗೆ ಶ್ರಮಿಸೋಣ. ನಮಗೆ ಯಾವ ವಿಧಾನದ ಕೃಷಿ ಲಾಭದಾಯಕ ಎಂದೆಣಿಸುತ್ತದೆಯೋ ಅದನ್ನು ಮಾಡೋಣ.. ಕೃಷಿ ಮಾಡುವುದು ನಮ್ಮ ಬದುಕುವ ದಾರಿಗಾಗಿಯೇ ಹೊರತು ಪ್ರಚಾರಕ್ಕಾಗಿ ಅಲ್ಲ ತಾನೇ? ಇಲ್ಲಿ ಇದರ ಪ್ರಸ್ತಾಪ ಯಾಕೆಂದರೆ ಕೃಷಿಕರು ಅವರ ಹೊಟ್ಟೆ ಪಾಡಿಗಾಗಿ  ವೃತ್ತಿ ಮಾಡುವವರು. ಇವರ ಶ್ರಮದಲ್ಲಿ ಸ್ವಾರ್ಥ ಅಲ್ಲದೆ ಸಾಮಾಜಿಕ ಕಳಕಳಿಯೂ ಇದೆ. ಇದರಲ್ಲಿ ಮಧ್ಯಪ್ರವೇಶಕ್ಕೆ ಮೂರನೆಯವರಿಗೆ…

Read more
ಜೀವಾಮೃತ ಮಿಶ್ರಣ

ಜೀವಾಮೃತಕ್ಕೆ ಜೀವ ಕೊಡುವ ವಿಧಾನ.

ಜೀವಾಮೃತ, ಅಮೃತ ಪಾನಿ, ಅಲ್ಲದೆ ಯಾವುದೇ ಸೂಕ್ಷ್ಮಾಣು ಜೀವಿ ಮಿಶ್ರಣಗಳನ್ನು  ತಯಾರಿಸುವ ಸಮಯದಲ್ಲಿ ಬ್ಯಾರಲ್ ಗೆ ಹಾಕಿ ಕಲಕಬೇಕು ಎನ್ನುತ್ತಾರೆ. ಕಲಕುವುದರಿಂದ ಅದರಲ್ಲಿ ಜೀವಾಣುಗಳು ಹೆಚ್ಚಾಗುತ್ತದೆ. ಅವುಗಳಿಗೆ ಜೀವ ಬರುತ್ತದೆ.  ಸೂಕ್ಷ್ಮಾಣು ಜೀವಿಗಳು ಈ ಕ್ರಿಯೆಯಲ್ಲಿ  ಹೆಚ್ಚಿನ ಪ್ರಮಾಣದಲ್ಲಿ ಬೆಳವಣಿಗೆಯಾಗಿ ಸಂಖ್ಯಾಭಿವೃದ್ದಿಯಾಗುತ್ತವೆ. ಇದು ಮತ್ತೆ ಯಾಕೂ ಆಲ್ಲ. ನಾವು ಬಳಕೆ ಮಾಡುವ ಕಚ್ಚಾ ವಸ್ತುಗಳಲ್ಲಿ ಸೂಕ್ಷ್ಮಾಣು ಜೀವಿಗಳು ಇರುತ್ತವೆ. ಈ ಸೂಕ್ಷ್ಮಾಣು ಜೀವಿಗಳು  ಕನಿಷ್ಟ ಪ್ರಮಾಣದಲ್ಲಿದ್ದರೆ ಅದಕ್ಕೆ ಆಹಾರ ಕೊಟ್ಟು ಅದನ್ನು ಕೆವು ದಿನಗಳ ತನಕ  ಪೋಷಣೆ ಮಾಡಿ…

Read more
Dry leaf waste mulching

ದರಗು ಹಾಸಿದರೆ ನೀರು ಕಡಿಮೆ ಸಾಕು. ಮಣ್ಣು ಫಲವತ್ತಾಗುತ್ತದೆ.

ಚಳಿಗಾಲ ಬಂದಿದೆ. ಎಲ್ಲಾ ಮರಮಟ್ಟುಗಳೂ ತಮ್ಮ ಎಲೆಗಳನ್ನು ಉದುರಿಸಿವೆ. ನೆಲದಲ್ಲಿ ಬಿದ್ದಿರುವ ಈ ದರಗನ್ನು ಯಾವುದೇ  ಕಾಣಕ್ಕೆ  ಮಳೆ ನೀರಿನಲ್ಲಿ ಕೊಚ್ಚಿ ಹೋಗಿ ನಷ್ಟವಾಗಲು ಬಿಡಬೇಡಿ.ಹೊಲಕ್ಕೆ ಹಾಕಿ. ಮುಂದಿನ ವರ್ಷವೇ ಗಮನಾರ್ಹ ಬದಲಾವಣೆ ಗಮನಿಸಿ. ಫಲವತ್ತತೆ ನವೀಕರಣ:     ಜಪಾನ್ ದೇಶದ ಸಹಜ ಕೃಷಿಯ ಜನಕ ಎಂದೇ ಹೆಸರುವಾಸಿಯಾದ, ಫುಕುಫೋಕಾರವರು ತಾವು ಬೆಳೆಸಿ ಅಲ್ಲಿಂದ ತನಗೆ ಬೇಕಾದ ಫಸಲನ್ನು ಮಾತ್ರ ತೆಗೆದುಕೊಂಡು ಉಳಿದುದನ್ನು  ಅಲ್ಲೇ ಬಿಡುತ್ತಿದ್ದರಂತೆ. ಇದರಿಂದ ಕೃಷಿ ಮಾಡಿದ ಹೊಲದ ಫಲವತ್ತತೆ ವರ್ಷದಿಂದ ವರ್ಷ ಉತ್ತಮವಾಗುತ್ತಾ…

Read more

ಈ ಸಸ್ಯಗಳಲ್ಲಿ ವಿಶೇಷ ಗುಣಗಳು ಇವೆ.

ಕಳೆ ಸಸ್ಯಗಳೆಂದು ನಾವು ನಿರ್ಲಕ್ಷ್ಯ ಮಾಡುವ ಕೆಲವು ಸಸ್ಯಗಳು ಮಣ್ಣೀನ ಫಲವತ್ತತೆ  ಹೆಚ್ಚಿಸಲು ಸಹಕಾರಿ. ಅವುಗಳಲ್ಲಿ ಒಂದು ಕ್ರೊಟಲೇರಿಯಾ ಜಾತಿಯ ಸಸ್ಯ. ಸಸ್ಯಗಳು ಮತ್ತು ಮಣ್ಣು:  ಅಲ್ಪಾವಧಿಯ ಸಸ್ಯಗಳಾದ ಇವುಗಳನ್ನು ಹೊಲದಲ್ಲಿ ಬೆಳೆಯುವುದರಿಂದ ಮಣ್ಣಿನ ಭೌತಿಕ ಮತ್ತು ಜೈವಿಕ ರಚನೆ ಅಭಿವೃದ್ದಿಯಾಗುತ್ತದೆ. ಇಂತವುಗಳು  ನಮ್ಮ ಸುತ್ತಮುತ್ತ ಹಲವಾರು ಇವೆ. ಯಾವುದು ದ್ವಿದಳ ಕಾಳುಗಳನ್ನು ಕೊಡುವ ಸಸ್ಯಗಳಿವೆಯೋ ಅವೆಲ್ಲಾ ಪೋಷಕಾಂಶ ಕೊಡುವ ಸಸ್ಯಗಳು.  ಮಣ್ಣು  ಈ ತನಕ ಜೀವಂತವಾಗಿ ಉಳಿದುಕೊಂಡು ಬಂದುದು ಅದರಲ್ಲಿ ಆಶ್ರಯಿಸಿರುವ ಸೂಕ್ಷ್ಮ ಜೀವಿಗಳು, ಸಸ್ಯಗಳು…

Read more
ಗೊಬ್ಬರ ಮಾಡಿಕೊಡುವ ನೈಜ ಎರೆಹುಳು

ಗೊಬ್ಬರ ಮಾಡಿಕೊಡುವ ನೈಜ ಎರೆಹುಳು ಯಾವುದು ಗೊತ್ತೇ?

ವಿದೇಶೀ ಪ್ರವರ್ಗದ ಎರೆಹುಳುಗಳಿಂದ  ತಯಾರಿಸಿದ ಮಾರಾಟಕ್ಕೆ ಲಭ್ಯವಿರುವ ಎರೆ ಗೊಬ್ಬರ ಬಳಸಿದರೆ  ಅದ್ಭುತ ಇಳುವರಿ ಎಂದೆಲ್ಲಾ ಪ್ರಚಾರದ ಹಿಂದೆ ಸಾಕಷ್ಟು ಉತ್ಪೇಕ್ಷೆಗಳು ಇವೆ. ವಿದೇಶೀ ಎರೆಹುಳುಗಳು ಸಾವಯವ ವಸ್ತುಗಳನ್ನು ಪುಡಿ ಮಾಡಿಕೊಡುವ ಒಂದು ಜೀವಿಗಳು ಎಂಬುದಾಗಿ ಹೇಳಲ್ಪಟ್ಟಿದೆ. ನಮ್ಮೆಲ್ಲರ ಹೊಲದಲ್ಲಿ  ಇರುವ ಎರೆಹುಳುಗಳ ಕೆಲಸಕ್ಕೆ ಅವು ಸಹಕರಿಸುವ ಜೀವಿಗಳು ಅಷ್ಟೇ. ಮಣ್ಣಿನಲ್ಲಿ ಕೆಲಸ ಮಾಡಿ ಸಸ್ಯ ಬೆಳವಣಿಗೆ ಮತ್ತು ಮಣ್ಣಿನ ಸುಧಾರಣೆ ಮಾಡುವವುಗಳು  ಮಣ್ಣು ಜನ್ಯ ಎರೆ ಹುಳುಗಳು ಮಾತ್ರ. ಎರೆಹುಳು ಗೊಬ್ಬರ ಬಳಸಿದರೆ ಹಾಗಾಗುತ್ತದೆ , ಹೀಗಾಗುತ್ತದೆ ಎಂದೆಲ್ಲಾ ಹೇಳಿ ಚೀಲದಲ್ಲಿ ತುಂಬಿ…

Read more
error: Content is protected !!