ರಾಸಾಯನಿಕ + ಸಾವಯವ ಎರಡು ಬಳಸಿ ಇಳುವರಿ

ರಾಸಾಯನಿಕ + ಸಾವಯವ = ಇಳುವರಿ ಉತ್ತಮ.

ನಾನು ರಾಸಾಯನಿಕ ಬಿಟ್ಟು ಬೇರೆ ಬಳಸುವುದೇ ಇಲ್ಲ. ನಾನು ಗೊಬ್ಬರಕ್ಕಾಗಿ ಹಸು ಸಾಕುವುದೇ ಇಲ್ಲ. ಕಡಿಮೆ ಖರ್ಚಿನಲ್ಲಿ ಗೊಬ್ಬರ ಆಗುತ್ತದೆ. ನನಗೆ ಇಳುವರಿಗೆ ಯಾವ ತೊಂದರೆಯೂ ಆಗಿಲ್ಲ ಎಂಬ ತರ್ಕ ಮಾಡುವ ರೈತರು ಒಂದಲ್ಲ ಒಂದು ದಿನ ತಮ್ಮ ಈ ಮನೋಭಾವನೆಯನ್ನು ಬದಲಿಸುತ್ತಾರೆ. ಈ ರಾಸಾಯನಿಕ ಗೊಬ್ಬರಗಳು ಮಣ್ಣಿನ ಧಕ್ಕೆ ಸಹನೆ ಇರುವಷ್ಟು ಸಮಯ ಮಾತ್ರ ಪ್ರಯೋಜನಕಾರಿ. ನಂತರ ಅದು ಕೆಲವು ಸಮಸ್ಯೆಗಳನ್ನು ತಂದೊಡ್ಡುತ್ತದೆ. ಸಾವಯವ ತ್ಯಾಜ್ಯಗಳನ್ನು ಮಣ್ಣಿಗೆ ಸೇರಿಸುತ್ತಾ ಇದ್ದರೆ ಮಣ್ಣಿನ ರಚನೆ ಉತ್ತಮವಾಗಿ ರಸಗೊಬ್ಬರ…

Read more

ಹಳ್ಳಿಯ ಯುವಕರಿಗೆ ಉದ್ಯೋಗ ಕೊಡಬಲ್ಲ ಅಣಬೆ ಕೃಷಿ.

 ಆರ್ಥಿಕ ಸಂಕಷ್ಟದಿಂದ ಪಟ್ಟಣ ತೊರೆದು ಜನ ಹಳ್ಳಿಯೆಡೆಗೆ ಮುಖಮಾಡಿದ್ದಾರೆ. ಕೆಲವರಿಗೆ ಇನ್ನು ಪಟ್ಟಣದ ಸಹವಾಸವೇ ಬೇಡ ಎಂಬಂತಾಗಿದೆ.   ವೃತಿ ಅರಸುವ ಆಸಕ್ತರಿಗೆ  ಮನೆಯ ಕಡಿಮೆ ಸ್ಥಳಾವಕಾಶದಲ್ಲೂ  ಮಾಡಬಹುದಾದ ಲಾಭದ ಉದ್ದಿಮೆ ಅಣಬೆ ಬೇಸಾಯ. ವಿಶೇಷ ವಿಧ್ಯಾವಂತರೂ ಅಗಬೇಕಾಗಿಲ್ಲ. ಭಾರೀ ಬಂಡವಾಳವೂ ಬೇಕಾಗಿಲ್ಲ. ಇನ್ನೂ ಇದರೊಂದಿಗೆ ಜೇನು ಸಾಕಣೆಯಂತ ವೃತ್ತಿ ಮಾಡಿದರೆ ಮತ್ತೂ ಅನುಕೂಲ.     ಅಣಬೆ ಬೆಳೆಸಲು ಹೆಚ್ಚು ಬಂಡವಾಳ ಬೇಡ. ವೃತ್ತಿಯಲ್ಲಿ ಸ್ವಲ್ಪ ಶ್ರದ್ಧೆ ಇದ್ದರೆ ಸಾಕು. ಸೂಕ್ತ ತರಬೇತಿಯನ್ನು ಪಡೆದು ಪ್ರಾರಂಭಿಸಿದರೆ ಇದರಲ್ಲಿ ಹಿಂತಿರುಗಿ…

Read more

ಕಡಿಮೆ ಬೆಲೆಯ ಉತ್ತಮ ಜೈವಿಕ ಗೊಬ್ಬರಗಳು.

ಕೃಷಿ ಪದ್ಧತಿಯನ್ನು ಸುಸ್ಥಿರಗೊಳಿಸಲು ರಾಸಾಯನಿಕ ಗೊಬ್ಬರಗಳ ಬಳಕೆ ಮತ್ತು ಅವುಗಳ ಮೇಲಿನ ಅವಲಂಬನೆಯು ದೀರ್ಘ ಕಾಲದವರೆಗೂ ಮುಂದುವರೆಯಲು ಅಸಾಧ್ಯ.  ಸುಸ್ಥಿರ ಕೃಷಿಗೆ  ಮಣ್ಣಿನ ಆರೋಗ್ಯ ಅತ್ಯಗತ್ಯ. ಇದನ್ನು ಕಾಪಾಡುವಲ್ಲಿ ಹಸಿರು ಎಲೆ ಗೊಬ್ಬರ, ಜೈವಿಕ ಮತ್ತು ಸಾವಯವ ಗೊಬ್ಬರಗಳು ಪ್ರಮುಖ ಪಾತ್ರ ವಹಿಸುತ್ತವೆ. ಇಂದು ಹಲವಾರು ಖಾಸಗಿ ಜೈವಿಕ ಗೊಬ್ಬರ ಪೂರೈಕೆದಾರರು ಇದರ  ಸದುಪಯೋಗ  ಮಾಡಿಕೊಳ್ಳುತ್ತಿದ್ದಾರೆ. ಅದರೆ ಭಾರತೀಯ ತೋಟಗಾರಿಕಾ ಸಂಶೋಧನಾ  ಕೇಂದ್ರದಲ್ಲಿ ಇಂತಹ ಹಲವಾರು  ಸೂಕ್ಷ್ಮಾಣು ಜೀವಿಗಳ  ಉತ್ಪನ್ನಗಳನ್ನು ತಯಾರಿಕೆ ನಡೆಯುತ್ತಿದ್ದು, ಅರ್ಕಾ ಹೆಸರಿನಲ್ಲಿ ಇದು…

Read more

ಸಾವಯವ ಗೊಬ್ಬರ ನೀವೇ ಮಾಡುವುದು ಉತ್ತಮ.

ಸಾವಯವ ಗೊಬ್ಬರ ತಯಾರಿಸುವುದು  ನಮಗೇನೂ ಹೊಸತಲ್ಲ.  ಹತ್ತಿಪ್ಪತ್ತು ವರ್ಷದ  ಹಿಂದೆ ಇದನ್ನು ನಾವು ಕೊಂಡು ತರುತ್ತಿರಲಿಲ್ಲ. ನಮ್ಮಲ್ಲೇ ತಯಾರಿಸುತ್ತಿದ್ದೆವು. ಈಗ ನಮಗೆ ಹೊರಗಿನ ವಸ್ತು ಸುಂದರವಾಗಿ ಕಾಣುವ ಕಾರಣ ಅದಕ್ಕೆ ಮಾರು ಹೋಗುತ್ತಿದ್ದೇವೆ.  ನಮ್ಮಲೇ ಎಲ್ಲಾ ಪರಿಕರಗಳು ಇರುವಾಗ  ಯಾಕೆ ಬೇರೆ ಕಡೆಯಿಂದ ಗೊಬ್ಬರಗಳನ್ನು ತರಬೇಕು. ಯಾವ  ತಯಾರಕರಲ್ಲೂ ಮೂಲವಸ್ತುಗಳು ಅವರ  ಬಳಿ ಇಲ್ಲ. ಅವರೂ ಬೇರೆ ಕಡೆಯಿಂದ ತಂದು  ಹೊಸ ಚೀಲದಲ್ಲಿ ತುಂಬಿ ನಮಗೆ ಮಾರಾಟ ಮಾಡುವುದು. ಸಾವಯವ ಗೊಬ್ಬರ ನಾವು ಮಾಡಿದರೆ  ಚಿನ್ನ. ಕೊಂಡು…

Read more
leaf de composing on field

ತೋಟಕ್ಕೆ ಸೊಪ್ಪು ಹಾಕಿ- ಮಣ್ಣಿನ ಆರೋಗ್ಯ ಹೆಚ್ಚಿಸಿ.

ತೋಟಕ್ಕೆ, ಗದ್ದೆಗೆ  ಹಾಗೆಯೇ ಇನ್ನಿತರ ಬೆಳೆಗಳಿಗೆ ಅನಾದಿ ಕಾಲದಿಂದಲೂ  ರೈತರು ಸೊಪ್ಪು ಹಾಕುತ್ತಿದ್ದರು. ಸೊಪ್ಪು ಹಾಕುವುದರಿಂದ ತುಂಬಾ ಪ್ರಯೋಜನ ಇದೆ. ಇದು ಉತ್ತಮ ಬೇಸಾಯ ಕ್ರಮ.ಮಣ್ಣಿನ ಸೂಕ್ಷ್ಮಾಣು ಜೀವಿಗಳ ಉತ್ತಮ ಕಾರ್ಯಚಟುವಟಿಕೆಗೆ ನೆರವಾಗಲು ಹಸುರೆಲೆ ಗೊಬ್ಬರ ಸಹಾಯಕ. ಸೊಪ್ಪು ಎಂದರೆ ಹಸುರೆಲೆ ಗೊಬ್ಬರ. ಹಸುರೆಲೆಗಳಲ್ಲಿ ಮುಖ್ಯ ಹಾಗೂ ಲಘು ಪೋಷಕಾಂಶಗಳು ಇರುವ ಕಾರಣ ಇದು ಕರಗಿ ಮಣ್ಣಿಗೆ ಸೇರಿ ಪೋಶಕಾಂಶಗಳನ್ನು ಬಿಡುಗಡೆ ಮಾಡುತ್ತದೆ. ಸಾಮಾನ್ಯವಾಗಿ ಮಳೆಗಾಲದಲ್ಲಿ ಹಸಿ ಸೊಪ್ಪನ್ನು ಹಾಕುತ್ತಾರೆ. ಅದು ಮಳೆಗಾಲ ಕಳೆಯುವಾಗ ಕರಗಿ ಗೊಬ್ಬರವಾಗುತ್ತದೆ….

Read more

ಸೌರ ವಿದ್ಯುತ್ ಉತ್ಪಾದಿಸಿ – ಮಾರಾಟದಿಂದ ಆದಾಯ ಗಳಿಸಿ

ಸೂರ್ಯನ ಶಾಖದಲ್ಲೂ ದುಡ್ಡು ಮಾಡಬಹುದು ಎಂಬುದು ಸರಕಾರದ ಲೆಕ್ಕಾಚಾರ. ಇದು ಸೋಲಾರ್ ಎನರ್ಜಿ ಮನಿ. ಇದಕ್ಕೆ ಒಮ್ಮೆ ಬಂಡವಾಳ ಹಾಕಿದರೆ ಸಾಕು, ನಂತರ ಕೀಟ, ರೋಗ, ಮಾರುಕಟ್ಟೆ ಮುಂತಾದ ಸಮಸ್ಯೆಗಳೇ ಇಲ್ಲ. ನಿರಂತರ ಆದಾಯ  ಕೊಡುತ್ತಿರುತ್ತದೆ. ಉತ್ತರ ಕರ್ನಾಟಕದ ವರ್ಷದ ಹೆಚ್ಚಿನ ದಿನಗಳಲ್ಲಿ ಬಿಸಿಲು ಇರುವ ಕಡೆಗಳಲ್ಲಿ ಈಗ ಸೂರ್ಯನ ಬೆಳಕಿನಲ್ಲೂ ಹಣ ಮಾಡುವುದು ಸಾಧ್ಯವಾಗಿದೆ. ಸೌರ ವಿದ್ಯುತ್ ಉತ್ಪಾದಿಸಿ ಗ್ರಿಡ್ ಗೆ ಮಾರಿದರೆ ಅದಕ್ಕೆ ಹಣ ದೊರೆಯುತ್ತದೆ. ಹಲವಾರು ಜನ ಇದಕ್ಕೆ ಕೈ ಹಾಕಿದ್ದಾರೆ. ಕೆಲವು…

Read more

ಸಾವಯವ ಸಾರಜನಕ ಗೊಬ್ಬರಗಳ ಮೂಲ ಇವು.

ಸಾರಜನಕ ಎಂಬುದು ರಾಸಾಯನಿಕ ರೂಪದಲ್ಲಿರುವ ಯೂರಿಯಾ, ಅಮೋನಿಯಂ ಸಲ್ಫೇಟ್ ಅಥವಾ ನೈಟ್ರೇಟ್ ಮುಂತಾದ ಮೂಲಗಳಲ್ಲೇ ಬಳಸಬೇಕಾಗಿಲ್ಲ. ನಿಸರ್ಗ ಸಾರಜನಕ ಸತ್ವದ ಖಣಜ. ನಮ್ಮ ತುರ್ತು ಅವಶ್ಯಕತೆಗಾಗಿ ರಾಸಾಯನಿಕ ವಿಧಾನದ ಮೂಲಕ ಸಾರಜನಕ ಗೊಬ್ಬರವನ್ನು ಉತ್ಪಾದಿಸಿದ್ದು. ಮಣ್ಣಿನಲ್ಲಿ ಸಾಕಷ್ಟು ಸಾರಜನಕದ ಅಂಶ ಇದೆಯಾದರೂ ನಾವು ಯಾಕೆ ಬೇರೆ ಮೂಲದಿಂದ ಸಾರಜನಕವನ್ನು ಬಳಸುತ್ತಿದ್ದೇವೆ ಎಂಬುದು ಎಲ್ಲರ ಭಾವನೆ. ಇದು ಸತ್ಯ. ಕಾರಣ ಇಷ್ಟೇ ಇವು ಬೇರೆ ಬೇರೆ ಕಾರಣಗಳಿಂದ ನಷ್ಟವಾಗುತ್ತದೆ. ಇದನ್ನು ಪೂರ್ಣ ಉಳಿಸಲು ಅಸಾಧ್ಯ. ಪ್ರಯತ್ನ ಪಟ್ಟರೆ ಗರಿಷ್ಟ…

Read more

ಅಧಿಕ ಇಳುವರಿಗೆ ಸಹಾಯಕವಾಗುವ ಸಾವಯವ ಗೊಬ್ಬರಗಳು.

ರಾಸಾಯನಿಕ ಗೊಬ್ಬರಗಳು ಒಮ್ಮೆಗೆ  ಉತ್ತಮ ಫಲಿತಾಂಶ ಕೊಡಬಹುದು. ಆದರೆ ಅದು ಧೀರ್ಘ ಕಾಲದ ತನಕ ಕಷ್ಟ. ಮಣ್ಣಿನ ಫಲವತ್ತತೆಯಿಂದ ಮಾತ್ರ ಧೀರ್ಘಕಾಲಿಕ ಫಲಿತಾಂಶ ಪಡೆಯಲು ಸಾಧ್ಯ. ಧೀರ್ಘಾವಧಿ ಬೆಳೆಗಳಿಗೆ ಮಣ್ಣಿನ ಫಲವತ್ತತೆ ಪ್ರಾಮುಖ್ಯ. ಸಾವಯವ ಅಥವಾ ನೈಸರ್ಗಿಕ ಮೂಲವಸ್ತುಗಳಿಂದ ಮಾತ್ರ ಮಣ್ಣಿನ ಫಲವತ್ತತೆ ವೃದ್ದಿಯಾಗಲು ಸಾಧ್ಯ. ರಾಸಾಯನಿಕ ಗೊಬ್ಬರಗಳು ಎಲ್ಲವೂ ಆಮ್ಲೀಯ ಗುಣದವು. ಇದನ್ನು ಮಣ್ಣಿಗೆ ಹಾಕುವುದರಿಂದ ಮಣ್ಣು ಸ್ವಲ್ಪ ಮಟ್ಟಿಗೆ ಅಜೀರ್ಣಕ್ಕೊಳಗಾಗುತ್ತದೆ. ರಾಸಾಯನಿಕ ಗೊಬ್ಬರಗಳನ್ನು ಬಳಸುವುದರ ಜೊತೆಗೆ  ಸಾವಯವ ವಸ್ತುಗಳನ್ನೂ ಸೇರಿಸುತ್ತಿದ್ದರೆ ಮಣ್ಣು ಆರೋಗ್ಯವಾಗಿರುತ್ತದೆ. ಮಣ್ಣು…

Read more

ರಾಸಾಯನಿಕ ಮುಕ್ತ ಭತ್ತ ಬೇಸಾಯ ಹೀಗೆ.

ಸಮಗ್ರ  ಕೃಷಿ ಪದ್ದತಿ ಎಂದರೆ ಲಭ್ಯವಿರುವ ನಿಯಮಿತ ಸಂಪನ್ಮೂಲಗಳನ್ನು ಬಳಸಿಕೊಂಡು ಅಧಿಕ ಉತ್ಪಾದನೆ  ಪಡೆಯುವ  ಕೃಷಿ ಪದ್ದತಿ. ಇದರಲ್ಲಿ ಒಂದಕ್ಕೊಂದು ಅನುಕೂಲಗಳಿರುತ್ತವೆ. ಸ್ವಾವಲಂಬಿಯಾಗಿ ಬೆಳೆ ತೆಗೆಯಲು ಇದು ಸಹಕಾರಿ. ಭತ್ತದ ಬೆಳೆಗೆ ಯಾವುದೇ ಕೀಟನಾಶಕ- ರೋಗ ನಾಶಕ ಬಳಕೆ ತುಂಬಾ ಕಷ್ಟ ಹಾಗೆಯೇ  ಅಪಾಯಕಾರಿಯೂ ಸಹ. ಇದನ್ನು  ಬಳಸದೆ ಬೆಳೆ ಬೆಳೆಯಲು  ಭತ್ತದ ಜೊತೆಗೆ ಮೀನು, ಕೋಳಿ ಸಾಕಿ.  ಭತ್ತದ ಪೈರಿನ ಅಧಿಕ ಇಳುವರಿಗೆ ಮೇಲ್ ಸ್ಥರದಲ್ಲಿ ಕೋಳಿ  ಗೊಬ್ಬರಕೊಟ್ಟರೆ  ಮೀನು ಬೆಳೆ ಸಂರಕ್ಷಿಸುತ್ತದೆ. ಇದರಿಂದ ಕೀಟ-…

Read more
ಭತ್ತದ ಹುಲ್ಲಿನಲ್ಲಿ ಬೆಳೆಸಲಾದ ಅಣಬೆ

ಅಣಬೆ ಬೇಸಾಯದಿಂದ ಕೈತುಂಬಾ ವರಮಾನ.

ತಿನ್ನುವ ಅಣಬೆಗೆ ಉತ್ತಮ ಬೇಡಿಕೆ. ಪಟ್ಟಣಗಳಲ್ಲದೆ, ಹಳ್ಳಿಗಳಲ್ಲೂ ಸಹ ಅಣಬೆಯ ಉಪಯೋಗ ಪ್ರಾರಂಭವಾಗಿದೆ.    ಕಡಿಮೆ ಬಂಡವಾಳದಲ್ಲಿ  ಕಡಿಮೆ ಸ್ಥಳಾವಕಾಶದಲ್ಲಿ ಮಾಡಬಹುದಾದ ಕೃಷಿ ಪೂರಕ ವೃತ್ತಿ.  ಬೆಂಗಳೂರಿನ ಗ್ರಾಮಾಂತರ ಭಾಗಗಳಲ್ಲಿ ಹಲವರು ಜನ ಅಣಬೆ ಬೇಸಾಯ ಮಾಡುತ್ತಾರೆ. ಇದೇ ವೃತ್ತಿಯಲ್ಲಿ ಮೇಲೆ ಬಂದವರಿದ್ದಾರೆ. ಗೋವಾದಲ್ಲಿ  ಇದು ಅತೀ ಹೆಚ್ಚಿನ ಪ್ರಮಾಣದಲ್ಲಿ  ಇದೆ. ಹೆಚ್ಚಿನ ಕಡೆಗೆ ಗೋವಾದಿಂದ ಅಣಬೆ  ಸರಬರಾಜು ಆಗುತ್ತದೆ. ಇತರ ಕಡೆಗಳಲ್ಲಿ ಬೆಳೆಸುವವರ ಸಂಖ್ಯೆ  ತುಂಬಾ  ಕಡಿಮೆ. ಹೇಗೆ ಪ್ರಾರಂಭಿಸಬೇಕು: ಅಣಬೆ ಬೇಸಾಯ ಮಾಡುವ ಮುನ್ನ…

Read more
error: Content is protected !!