ಮಾದರಿ ಕರಿಮೆಣಸಿನ ತೋಟ

ಕರಿಮೆಣಸು ಬೆಳೆಗಾರರು ನೋಡಬೇಕಾದ ಮಾದರಿ ತೋಟ ಇದು.

ತೀರ್ಥಹಳ್ಳಿಯ ಗರ್ತಿಕೆರೆ ಸಮೀಪದ  ಕಾರ್ಗೋಡ್ಲುವಿನಲ್ಲಿ ಶ್ರೀಯುತ ಜೋಸೆಪ್ ಚಾಕೋ ಎಂಬವರು  ಕರಿಮೆಣಸಿನ ಮಾದರಿಯ  ತೋಟ ಮಾಡಿದ್ದಾರೆ. ಬಹುಷಃ ಕರಿಮೆಣಸಿನ ತೋಟ ಮಾಡಿದರೆ ಅದರಲ್ಲಿ ವರ್ಷಕ್ಕೆ 10-15% ರೋಗ ಬರುವ ಸಾಧ್ಯತೆ ಹೆಚ್ಚು. ಅದರೆ ಇಲ್ಲಿ  ಹಾಗಿಲ್ಲ. 3000 ಮೆಣಸಿನ ಬಳ್ಳಿಗಳಲ್ಲಿ ಶೇ.1 ಸರಿಪಡಿಸಬಹುದಾದ  ರೋಗ ಲಕ್ಷಣಗಳನ್ನು ಕಾಣಬಹುದು. 2018 ರಲ್ಲಿ ನಾನು ಇದೇ ತೋಟಕ್ಕೆ ಹೋಗಿದ್ದೆ. ಆಗ ಅಲ್ಲಿ ಹುಡುಕಿದರೂ ಒಂದು ಬಳ್ಳಿಯೂ ರೋಗ ತಗಲಿದ್ದು ಸಿಕ್ಕಿರಲಿಲ್ಲ. ಈಗಲೂ ಅಷ್ಟೇ ಒಂದೆರಡು ಬಳ್ಳಿಗಳಲ್ಲಿ ಕೆಲವು ಎಲೆಗಳು ಹಳದಿಯಾದದ್ದು…

Read more
ಶುಂಠಿ ತಳಿ ರೆಯೋಡಿಜೆನೆರಾ

ಶುಂಠಿ ಬೆಳೆಯುವ ರೈತರೆಲ್ಲರೂ ತಿಳಿದಿರಬೇಕಾದ ತಳಿ ಪರಿಚಯ.

ಶುಂಠಿ ಬೆಳೆಯುವ ರೈತರು ಬರೇ ಇಳುವರಿ ಒಂದನ್ನೇ ನೋಡುವುದಲ್ಲ. ಇಳುವರಿಯ ಜೊತೆಗೆ ಒಣ ತೂಕದ ಪ್ರಮಾಣ, ಅದರಲ್ಲಿ ನಾರಿನ ಅಂಶ ಹಾಗೆಯೇ ಅದರ ಓಲಿಯೋರೈಸಿನ್  ಎಣ್ಣೆ ಅಂಶ ಇವುಗಳನ್ನೂ ನೊಡಬೇಕು. ಮಾರುಕಟ್ಟೆಯಲ್ಲಿ  ಇಂತಹ ಆಯ್ಕೆ ತಳಿಗಳಿಗೆ ಬೇಡಿಕೆಯೇ ಬೇರೆ ಇರುತ್ತದೆ. ಬೆಲೆಯೂ ಹೆಚ್ಚು ದೊರೆಯುತ್ತದೆ. ಶುಂಠಿ (ಜಿಂಜಿಬರ್ ಆಪಿಸಿನೇಲ್) ಜಿಂಜಿಬರೆಸಿ ಕುಟುಂಬಕ್ಕೆ ಸೇರಿದ ಬಹುವಾರ್ಷಿಕ ವಾಣಿಜ್ಯ ಬೆಳೆ.   ಇದಕ್ಕೆ ಇರುವ ಬೇಡಿಕೆ ಮತ್ತು ಬೆಲೆ ಬಹಳಷ್ಟು ಪ್ರದೇಶ ವಿಸ್ತರಣೆಗೆ ಕಾರಣವಾಗಿದೆ. ರಾಜ್ಯದ ಕರಾವಳಿ, ಮಲೆನಾಡು, ಅರೆ…

Read more
ಒಂದು ಗಿಡದಲ್ಲಿ ಬೆಳೆದ ಅರಶಿನ, ಸಾಂಗ್ಲಿ ಸ್ಥಳೀಯ ತಳಿ

ಅರಿಶಿಣ ಬೆಳೆಯುವವರು ಯೋಗ್ಯ ತಳಿಗಳ ಬಗ್ಗೆ ತಿಳಿದಿರಿ.

ಅರಶಿನ ಒಂದು ಪ್ರಮುಖ  ಸಾಂಬಾರ ಬೆಳೆಯಾಗಿದ್ದು, ಉತ್ತರ ಕರ್ನಾಟಕದ  ಬಾಗಲಕೋಟೆ,  ಬೆಳಗಾವಿ, ಬಿಜಾಪುರದ ಕೆಲ ಭಾಗಗಳಲ್ಲಿಯೂ, ದಕ್ಷಿಣ ಕರ್ನಾಟಕದ ಮಂಡ್ಯ, ಕೊಳ್ಳೇಗಾಲ ಕಡೆ ಅಧಿಕ ಪ್ರಮಾಣದಲ್ಲೂ, ಉಳಿದ ಕಡೆಗಳಲ್ಲಿ ಅಲ್ಪ ಸ್ವಲ್ಪ ಪ್ರಮಾಣದಲ್ಲಿಯೂ ಬೆಳೆಯಲಾಗುತ್ತದೆ. ಇದು ಒಂದು ಔಷಧೀಯ ಮತ್ತು ಸಾಂಬಾರ ರೂಪದಲ್ಲಿ ಬಳಸಲ್ಪಡುವ ವಸ್ತುವಾಗಿರುವುದರಿಂದ ಉತ್ತಮ ಬೇಡಿಕೆ ಇದೆ. ಉಳಿದ ಸಾಂಬಾರ ಬೆಳೆಗಳಿಗಿಂತ ಇದರ ಬೆಳೆ ಸುಲಭ. ಭಾರತದಲ್ಲಿ ಹಲವಾರು ಅರಿಶಿಣ ತಳಿಗಳು ಲಭ್ಯವಿದ್ದು, ಕೃಷಿ ಪ್ರದೇಶಕ್ಕೆ ಅನುಗುಣವಾಗಿ ಸ್ಥಾನಿಕ ಹೆಸರುಗಳನ್ನು ಕೊಡಲಾಗಿದೆ. ಮುಖ್ಯವಾಗಿ ಜನಪ್ರಿಯ…

Read more
ಏಲಕ್ಕಿ ಬೆಳೆ

ಏಲಕ್ಕಿ ಬೆಳೆಯುತ್ತೀರಾ – ಇಲ್ಲಿದೆ ತಳಿಗಳ ಬಗ್ಗೆ ಮಾಹಿತಿ.

ಮಲೆನಾಡು, ಅರೆಮಲೆನಾಡಿನ ರೈತರು ಅಡಿಕೆ ತೋಟದಲ್ಲಿ ಲಾಭದಾಯಕ ಮಿಶ್ರ ಬೆಳೆಯ ಹುಡುಕಾಟದಲ್ಲಿದ್ದಾರೆ. ಇವರಿಗೆ ಯಾವ ತಳಿಯನ್ನು ಬೆಳೆದರ ಉತ್ತಮ , ಯಾವ ಯಾವ ಉತ್ತಮ ತಳಿಗಳಿವೆ ಎಂಬ ಬಗ್ಗೆ ಮಡಿಕೇರಿಯ ಅಪ್ಪಂಗಳದ ಸಾಂಬಾರ  ಬೆಳೆಗಳ ಪ್ರಾದೇಶಿಕ ಸಂಶೋಧನಾ ಸಂಸ್ಥೆಯ  ಮೂಲಕ ಈ ಮಾಹಿತಿ ಲಭ್ಯವಿದೆ. ಬೆಳೆಯುವ ಪ್ರದೇಶ, ಪುಷ್ಪಗೊಚ್ಚಲುಗಳ ಸ್ವಭಾವ, ಗಿಡಗಳ ಗಾತ್ರ ಮತ್ತು ಇತರ ಗುಣಗಳನ್ನು ನೋಡಿ ಏಲಕ್ಕಿಯ ಪ್ರಭೇಧಗಳನ್ನು ಮೂರು ವಿಧಗಳಾಗಿ ವಿಂಗಡಿಸಲಾಗಿದೆ. ಮಲಬಾರ್ ಪ್ರಭೇದದ ಗಿಡಗಳ ಕೊತ್ತುಗಳು ನೆಲದ ಮೇಲೆ ಹರಡಿರುತ್ತವೆ. ಈ…

Read more
ಸಾಂಬಾರ ಬೆಳೆಗಳ ಸಂಶೊಧನಾ ಸಂಸ್ಥೆ ಅಪ್ಪಂಗಳ ಮಡಿಕೇರಿ

ನೀವು ಸಾಂಬಾರ ಬೆಳೆಗಾರರೇ? ಇಲ್ಲಿಗೆ ಒಮ್ಮೆ ಭೇಟಿ ಕೊಡಬಹುದು.

ಸಾಂಬಾರ ಬೆಳೆಗಳಾದ ಏಲಕ್ಕಿ, ಕರಿಮೆಣಸು ಅರಶಿನ, ಶುಂಠಿ ಮುಂತಾದ ಬೆಳೆ ಬೆಳೆಯುವ ರೈತರು ವೈಜ್ಞಾನಿಕ ಬೆಳೆ ಮಾಹಿತಿ, ತಳಿ ಮಾಹಿತಿ ಬಯಸುವುದೇ ಆದರೆ ಕರ್ನಾಟಕದ ಮಡಿಕೇರಿಯಲ್ಲಿರುವ ಪ್ರಾದೇಶಿಕ ಸಾಂಬಾರ ಬೆಳೆಗಳ ಸಂಶೋಧನಾ ಸಂಸ್ಥೆಗೆ ಒಮ್ಮೆ ಭೇಟಿ ಕೊಡಿ. ಇಲ್ಲಿ ನಿಮಗೆ  ಬೇಕಾದ ಮಾಹಿತಿಗಳು ಲಭ್ಯವಿದೆ. ಮಡಿಕೇರಿಯ ಅಪ್ಪಂಗಳದ ಏಲಕ್ಕಿ ಸಂಶೋಧನಾ ಕೇಂದ್ರವನ್ನು 1961 ರಲ್ಲಿ ಮೈಸೂರು ಸರ್ಕಾರದ ಅವಧಿಯಲ್ಲಿ ಸ್ಥಾಪಿಸಲಾಯಿತು. ಕೇಂದ್ರದ ಆಡಳಿತಾತ್ಮಕ ನಿಯಂತ್ರಣವನ್ನು 1976 ರಲ್ಲಿ ಕಾಸರಗೋಡ್‍ನ ಕೇಂದ್ರ ತೋಟ ಬೆಳೆಗಳ ಸಂಶೋಧನಾ ಸಂಸ್ಥೆಗೆ ಹಸ್ತಾಂತರಿಸಲಾಯಿತು….

Read more
ಅಡಿಕೆ ತೋಟದಲ್ಲಿ ಏಲಕ್ಕಿ

ಅಡಿಕೆ ತೋಟದಲ್ಲಿ ಏಲಕ್ಕಿ ಬೆಳೆದರೆ ಲಾಭವಿದೆ.

ಸಾಂಬಾರ ಪದಾರ್ಥಗಳಲ್ಲಿ ರಾಣಿಯ ಸ್ಥಾನವನ್ನು ಅಲಂಕರಿಸಿದ ಬೆಳೆ ಅಂದರೆ ಏಲಕ್ಕಿ. ಅಂತರ ರಾಷ್ಟ್ರೀಯ  ಮಾರುಕಟ್ಟೆ ಜೊತೆಗೆ ದೇಶೀಯ ಮಾರುಕಟ್ಟೆ ಎರಡರಲ್ಲೂ ಯಾವಾಗಲೂ ಬೇಡಿಕೆ ಪಡೆದ ಬೆಳೆ. ಇದು ಮಲೆನಾಡು, ಅರೆಮಲೆನಾಡಿನ ಅಡಿಕೆ ತೋಟಗಳಲ್ಲಿ ಚೆನ್ನಾಗಿ ಬೆಳೆಯಬಲ್ಲುದು. ಅಡಿಯಷ್ಟೇ ಆದಾಯವನ್ನೂ ಕೊಡಬಲ್ಲುದು. ವಿಶಿಷ್ಟ ವಾತಾವರಣ ಬೆಳೆ: ಪಶ್ಛಿಮ ಘಟ್ಟದ ದಕ್ಷಿಣ ಭಾಗದ ನಿತ್ಯ ಹರಿದ್ವರ್ಣದ ಕಾಡುಗಳಲ್ಲಿ ಪರಿಮಳದ ಕಾಳನ್ನು ಬಿಡುತ್ತಿದ್ದ  ಸಸ್ಯವಾಗಿದ್ದ ಈ ಏಲಕ್ಕಿ, ಈಗ ರೈತರ ಹೊಲದಲ್ಲಿ  ಬೆಳೆಸಲ್ಪಡುತ್ತಿದೆ. ವನಿಲ್ಲಾ ಎಂಬ ಸಾಂಬಾರ ಪದಾರ್ಥದ ನಂತರ ಇದಕ್ಕೇ…

Read more
Ginger yield

ಶುಂಠಿ – ಗಡ್ಡೆ ತೂಕ ಬರಲು ಸೂಕ್ತ ಬೇಸಾಯ ವಿಧಾನ.

ಶುಂಠಿಯ ಸಸ್ಯ ಬೆಳೆವಣಿಗೆಯ ಮೇಲೆ ಗಡ್ಡೆ ಬೆಳೆವಣಿಗೆ ಇರುತ್ತದೆ. ಎಳವೆಯಲ್ಲಿ ಸಸ್ಯ ಚೆನ್ನಾಗಿ ಬೆಳೆದರೆ ಗಡ್ಡೆ ದೊಡ್ಡದಾಗುತ್ತದೆ. ಇದು ಸಸ್ಯದ ಮೊಳಕೆಗಳ ಮೇಲೆ ಅವಲಂಭಿತವಾಗಿದೆ. ಹೆಚ್ಚು ಮೊಳಕೆಗಳು ಆರೋಗ್ಯಕರ ಸಸ್ಯಗಳಿದ್ದಾಗ ಗಡ್ಡೆ ದೊಡ್ಡದಾಗಲೇ ಬೇಕು. ಬರೇ ಸಸ್ಯ ಬೆಳೆವಣಿಗೆ ಮಾತ್ರವಲ್ಲ ಸಮತೋಲನದ ಬೆಳೆವಣಿಗೆ ಎಂಬುದು ಎಲ್ಲಕ್ಕಿಂತ ಮುಖ್ಯ. ಕೆಲವು ಮನುಷ್ಯ ಸುಮಾರು 40-45 ವರ್ಷದ ತನಕ ಕಡಿಮೆ ತೂಕದವರಾಗಿರುತ್ತಾರೆ. ನಂತರದ ವರ್ಷಗಳಲ್ಲಿ ಶರೀರದಲ್ಲಿ ಮಾಂಸ ಹೆಚ್ಚಾಗದಿದ್ದರೂ ತೂಕ ಹೆಚ್ಚಾಗುತ್ತಾರೆ. ಕಾರಣ ಅವರ ಎಲುಬುಗಳ ತೂಕ ಹೆಚ್ಚಾಗಿರುತ್ತದೆ. ಹಾಗೆಯೇ…

Read more
ರೋಗ ಸೋಂಕು ರಹಿತ ಬಳ್ಳಿ

ಕರಿಮೆಣಸು – ಯಾವ ಬಳ್ಳಿ ಸಾಯುತ್ತದೆ- ಯಾವುದನ್ನು ಉಳಿಸಬಹುದು?

ಮಳೆಗಾಲ ಮೆಣಸಿನ ಬಳ್ಳಿಗೆ ತೀವ್ರವಾದ ತೊಂದರೆಯನ್ನು ಉಂಟು ಮಾಡುತ್ತದೆ. ಮಳೆಗಾಲ ಪ್ರಾರಂಭವಾದಾಗಿನಿಂದ ಮುಗಿಯುವ ತನಕ ಯಾವಾಗಲೂ ಬರಬಹುದಾದ ಬಳ್ಳಿ ಕೊಳೆ ರೋಗವನ್ನು (Phytophthora foot rot) ಪ್ರಾರಂಭಿಕ ಹಂತದಲ್ಲಿ ಗುರುತಿಸಿದರೆ ಬಳ್ಳಿಯನ್ನು ಬದುಕಿಸಬಹುದು. ರೋಗ  ಪ್ರಾರಂಭವಾಗುವಾಗ ಬಳ್ಳಿ ಯಾವ ಲಕ್ಷಣಗಳನ್ನು ತೋರಿಸುತ್ತದೆ ಎಂಬುದನ್ನು ನಮಗೆ ಗುರುತಿಸಲು ಸಾಧ್ಯವಿದ್ದರೆ ಮಾತ್ರ ನಿವಾರಣೆ ಮಾಡಲು ಸಾಧ್ಯ. ಬುಡ ಭಾಗದಲ್ಲಿ ಎಲೆ ಉದುರಿದೆಯೇ: ಆದಾರ ಮರಕ್ಕೆ ಹಬ್ಬಿದ ಬಳ್ಳಿಯ ಎಲೆಗಳಲ್ಲಿ ಮೊದಲ ಲಕ್ಷಣ ಕಂಡು ಬರುತ್ತದೆ. ರೋಗವು ಮೊದಲಾಗಿ ಬಳ್ಳಿಯ ಬೇರಿಗೆ…

Read more
ಸೂಕ್ತವಾದ ನಾಟಿ ವಿಧಾನ

ಕರಿಮೆಣಸು ಬಳ್ಳಿ/ಸಸಿ ಹೇಗೆ ನೆಡಬೇಕು?

ಕರಿಮೆಣಸು ಬೆಳೆಸಲು ಕೆಲವರು ಬಳ್ಳಿ ತುಂಡುಗಳನ್ನು ನಾಟಿ ಮಾಡುತ್ತಾರೆ. ಮತ್ತೆ ಕೆಲವರು ಪ್ಯಾಕೆಟ್  ಸಸಿ ನಾಟಿ ಮಾಡುತ್ತಾರೆ. ಎರಡೂ ಉತ್ತಮ. ಬಳ್ಳಿ ನಾಟಿ ಮಾಡುವವರಿಗೆ ಮುಂಗಾರು ಮಳೆ ಪ್ರಾರಂಭವಾಗುವ ಈ ಸಮಯ ಉತ್ತಮ. ಸಸಿ ನಾಟಿಯನ್ನು  ಯಾವಾಗಲೂ ಮಾಡಬಹುದು. ಬಳ್ಳಿ ತುಂಡುಗಳನ್ನು ನಾಟಿ ಮಾಡಿದರೆ ಅದು  ಮಣ್ಣಿನಲ್ಲಿ ಬೇರು ಬಿಡುವ ತನಕ ಒಣಗದೆ ಇರಬೇಕು. ಹಾಗಾಗಬೇಕಾದರೆ ಬಿಸಿಲು ಇರಬಾರದು. ಹೆಚ್ಚು ಮಳೆಯೂ ಇರಬಾರದು.  ಅದಕ್ಕೇ ಈ ಸಮಯ ಸೂಕ್ತ. ಈಗ ನೆಟ್ಟರೆ ಅನುಕೂಲ ಏನು? ಹಿತಮಿತವಾದ ಮಳೆ…

Read more
Pepper

ಕರಿಮೆಣಸು ಬಳ್ಳಿಗೆ ರೋಗ ಬಾರದಂತೆ ರಕ್ಷಣೆ ಹೀಗೆ.

ಮಳೆಗಾಲ ಬಂದರೆ ಸಾಕು ಕರಿಮೆಣಸಿನ ಬೆಳೆಗೆ ಯಾವಾಗ ರೋಗ ಬರುತ್ತದೆ ಎಂಬುದು ಯಾರಿಂದಲೂ ಊಹಿಸಲು ಸಾಧ್ಯವಿಲ್ಲ.ಇದು ಕರಿಮೆಣಸು ಮಾತ್ರವಲ್ಲ ತೀರಾ ಸಪುರ ( ತೆಲೆಕೂದಲು ತರಹದ ) ಬೇರುಗಳಿರುವ ಎಲ್ಲಾ ಬೆಳೆಗಳೂ ಮಳೆಗಾಲ ಅಥವಾ ನೀರು ಹೆಚ್ಚಾಗಿ ಬೇರಿಗೆ ಉಸಿರು ಕಟ್ಟಿದ ತರಹದ  ಸನ್ನಿವೇಶ ಬಂದಾಗ ರೋಗಕ್ಕೆ  ತುತ್ತಾಗುತ್ತದೆ. ಕೆಲವು ಕಡೆ ರೋಗ ಹೆಚ್ಚು, ಇನ್ನು ಕೆಲವು ಕಡೆ ಕಡಿಮೆ. ಇದಕ್ಕೆ ಕಾರಣ ಅವರ ನಿರ್ವಹಣೆ. ಕರಿಮೆಣಸಿನ ಬಳ್ಳಿಯ ಬುಡ ಭಾಗದಲ್ಲಿ ಸುಮಾರು 20 ನಿಮಿಷಗಳ ಕಾಲ…

Read more
error: Content is protected !!