ರೈತರಿಗೆ ಕೇಂದ್ರ ಸರಕಾರ ಕೊಡುತ್ತಿದೆ 4500-00 ರೂ. ಬಡ್ಡಿ ರಿಯಾಯಿತಿ.
ಭಾತರ ಸರಕಾರ ಕೃಷಿಕರ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು, ರೈತರು ಮಾಡಿದ 3ಲಕ್ಷ ವರೆಗಿನ ಸಾಲಕ್ಕೆ 4500-00 ರೂ. ಬಡ್ಡಿ ರಿಯಾತಿಯನ್ನು ಘೋಷಿಸಿದೆ. ಇದು ಈ ವರ್ಷಕ್ಕೆ ಮಾತ್ರವಲ್ಲ. ಮುಂದಿನ ವರ್ಷಕ್ಕೂ ಇದೆ. ಬ್ಯಾಂಕುಗಳ ಮೂಲಕ ಬೆಳೆ ಸಾಲ ( ಅಲ್ಪಾವಧಿ) ಪಡೆದಿರುವ ಎಲ್ಲಾ ರೈತರೂ ಈ ಕೊಡುಗೆಯ ಫಲಾನುಭವಿಗಳು. ಇದು ಬರೇ ಬೆಳೆ ಸಾಲ ಮಾತ್ರವಲ್ಲ, ಪಶು ಸಂಗೋಪನೆ, ಹೈನುಗಾರಿಕೆ, ಮೀನುಗಾರಿಕೆ, ಮತ್ತು ಕೋಳಿ ಸಾಕಣೆ ಎಲ್ಲದಕ್ಕೂ ಅನ್ವಯವಾಗುತ್ತದೆ. ರೈತರು ಬೆಳೆ ಬೆಳೆಯುವ ಸಮಯದಲ್ಲಿ ಬೇಕಾಗುವ ಹಣಕಾಸಿನ…
