ರೈತರಿಗೆ ಕೇಂದ್ರ ಸರಕಾರ ಕೊಡುತ್ತಿದೆ 4500-00 ರೂ. ಬಡ್ಡಿ ರಿಯಾಯಿತಿ.

ರೈತರಿಗೆ ಕೇಂದ್ರ ಸರಕಾರ ಕೊಡುತ್ತಿದೆ 4500-00 ರೂ. ಬಡ್ಡಿ ರಿಯಾಯಿತಿ.

ಭಾತರ ಸರಕಾರ ಕೃಷಿಕರ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು, ರೈತರು ಮಾಡಿದ 3ಲಕ್ಷ ವರೆಗಿನ ಸಾಲಕ್ಕೆ 4500-00 ರೂ. ಬಡ್ಡಿ ರಿಯಾತಿಯನ್ನು ಘೋಷಿಸಿದೆ. ಇದು ಈ ವರ್ಷಕ್ಕೆ ಮಾತ್ರವಲ್ಲ. ಮುಂದಿನ ವರ್ಷಕ್ಕೂ ಇದೆ. ಬ್ಯಾಂಕುಗಳ ಮೂಲಕ ಬೆಳೆ ಸಾಲ ( ಅಲ್ಪಾವಧಿ) ಪಡೆದಿರುವ ಎಲ್ಲಾ ರೈತರೂ ಈ ಕೊಡುಗೆಯ ಫಲಾನುಭವಿಗಳು. ಇದು ಬರೇ ಬೆಳೆ ಸಾಲ ಮಾತ್ರವಲ್ಲ, ಪಶು ಸಂಗೋಪನೆ, ಹೈನುಗಾರಿಕೆ, ಮೀನುಗಾರಿಕೆ, ಮತ್ತು ಕೋಳಿ ಸಾಕಣೆ ಎಲ್ಲದಕ್ಕೂ ಅನ್ವಯವಾಗುತ್ತದೆ. ರೈತರು ಬೆಳೆ ಬೆಳೆಯುವ ಸಮಯದಲ್ಲಿ  ಬೇಕಾಗುವ ಹಣಕಾಸಿನ…

Read more
ಕೃಷಿ ಸಹಕಾರಿ ಬ್ಯಾಂಕುಗಳ ಮೂಲಕ ಪೆಟ್ರೋಲ್ ಉತ್ಪನ್ನ ಮಾರಾಟ

ಕೃಷಿ ಸಹಕಾರಿ ಬ್ಯಾಂಕುಗಳ ಮೂಲಕ ಪೆಟ್ರೋಲ್ ಉತ್ಪನ್ನ ಮಾರಾಟ- ನಮಗೆಷ್ಟು ಲಾಭ?

ಕೃಷಿ ಸಹಕಾರಿ ಬ್ಯಾಂಕುಗಳು ಪೆಟ್ರೋಲ್ ಉತ್ಪನ್ನ ಮಾರಾಟ ಮಾಡಿ ಹೆಚ್ಚಿನ ಲಾಭ ಮಾಡಿಕೊಂಡರೆ ನಮಗೆ ಈಗ ಸಿಗುತ್ತಿರುವ ಪಾಲು ಬಂಡವಾಳದ ಮೊತ್ತ ಇನ್ನೂ ಹೆಚ್ಚಾಗಲಿದೆ. ನಾವು ಯಾವುದೇ ಕಡೆ ಹೂಡಿಕೆ ಮಾಡಿದರೂ ಸಿಗದಷ್ಟು ಲಾಭ ನಮ್ಮದೇ ಬ್ಯಾಂಕಿನ ಶೇರು ಬಂಡವಾಳದ ಮೂಲಕ ಸಿಗಲಿದೆ. ನಮ್ಮೂರಿನ ಸೊಸೈಟಿಯಲ್ಲಿ ಲಾಭ ಹೆಚ್ಚಾದರೆ ಅದರಿಂದ ನಮಗೇ ಭಾರೀ ಲಾಭ. ಭಾರತ ಸರಕಾರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರೀ ಸಂಘಗಳು (PACS Primary agriculture co operative society) ತಮ್ಮ ವ್ಯವಹಾರ ಕ್ಷೇತ್ರ…

Read more
ಅಡಿಕೆ -ದರ ಎರಿಕೆ

ಅಡಿಕೆ -ದರ ಏರಿಕೆಗೆ ಮುಹೂರ್ತ ಕೂಡಿ ಬರುವ ಮುನ್ಸೂಚನೆ.

ಈ ಹಿಂದೆ ನಾವು ಕೆಲವು ವರ್ತಕರು ಮತ್ತು  ಅನುಭವಿಗಳ ಹೇಳಿಕೆಯಂತೆ ಊಹಿಸಿದ್ದ ಬೆಲೆ ಏರಿಕೆಯ  ಕಾಲ ಈಗ ಕೂಡಿ ಬರುವ ಸೂಚನೆ ಕಾಣುತ್ತಿದೆ. ನಿನ್ನೆ ಪಟೋರಾ ಅಡಿಕೆಗೆ 20 ರೂ, ಜಂಪ್. ಇಂದು ಹಳೆ ಅಡಿಕೆಗೆ 10 ರೂ. ಜಂಪ್. ಇನ್ನೇನು ಮುಂದಿನ ವಾರದ ಒಳಗೆ ಚಾಲಿ ಮತ್ತು ಕೆಂಪಡಿಕೆ ಎರಡೂ ಏರಿಕೆ ಪ್ರಾರಂಭವಾಗುವ ಮುನ್ಸೂಚನೆ ಇದೆ. ದರ ಏರಿಕೆಯ ಮುಹೂರ್ತ ಖಾಸಗಿ ವ್ಯಾಪಾರಿಗಳಿಂದ ಪ್ರಾರಂಭವಾಗಿದೆ. ಈಗ ಏರಿಕೆ ಆಗುವುದು ಮುಂದಿನ ಮಳೆಗಾಲದ ಹಂಗಾಮಿಗೆ ದಾಸ್ತಾನು ಮಾಡಿಕೊಳ್ಳುವುದಕ್ಕೆ…

Read more
ಸ್ಥಳೀಯ ಹಸುವಿನ ಸಗಣಿಯ ಅಥವಾ ಗೋಮಯ

ವೈಜ್ಞಾನಿಕವಾಗಿಯೂ ಸಾಬೀತಾದ ಸ್ಥಳೀಯ ಹಸು ಸಗಣಿಯ ಈ ಉಪಯೋಗಗಳು.

ಪ್ರಪಂಚದಲ್ಲಿ ಕೇವಲ 12 ಗಂಟೆ ಒಳಗೆ ನಾವು ಕೊಡುವ ಹಸಿ, ಒಣ ಹುಲ್ಲನ್ನು ತಿಂದು ಜೀರ್ಣಿಸಿ ಅದನ್ನು ಸಗಣಿ ರೂಪದ ಗೊಬ್ಬರವಾಗಿ ಬುಟ್ಟಿಯಷ್ಟು ಇದ್ದುದನ್ನು ಬೊಗಸೆ ಯಷ್ಟಕ್ಕೆ ಪರಿವರ್ತಿಸಿಕೊಡುವ ಒಂದು ಜೀವಂತ ಗೊಬ್ಬರ ಮಾಡುವ ಯಂತ್ರ ಇದ್ದರೆ ಅದು ಹಸು/ಎಮ್ಮೆ/ಆಡು, ಕುರಿ ಮಾತ್ರ. ಅದರಲ್ಲೂ ನಮ್ಮ ಸುತ್ತಮುತ್ತ ಅನಾದಿ ಕಾಲದಿಂದ ಸಾಕಣೆಯಲ್ಲಿದ್ದ  ಸ್ಥಳೀಯ ಹಸುವಿನ ಈ ಸಗಣಿಯಲ್ಲೇ ಉಪಯೋಗ ಹೆಚ್ಚು.  ದೇಸೀ ಹಸು ಅಥವಾ ಸ್ಥಳೀಯ ನಾಟಿ ಹಸು ಅಥವಾ ಮೇಯಲು ಬಿಟ್ಟು  ಸಾಕುವ ಹಸುಗಳ ಸಗಣಿಯನ್ನು…

Read more
ರೈತರ ಹೊರಾಟ- PTI image

ರೈತ ಹೋರಾಟದಲ್ಲಿ ಸತ್ತವರಿಗೆ ಪರಿಹಾರವೇ ಇಲ್ಲವಂತೆ.

ಕೇಂದ್ರದ ಕೃಷಿ ಕಾಯಿದೆಯ ವಿರುದ್ದ ಹಗಲು ರಾತ್ರೆ ಎನ್ನದೆ  ಒಂದು ವರ್ಷಕ್ಕೂ ಹೆಚ್ಚಿನ ಕಾಲ ಧರಣಿ ಪ್ರತಿಭಟನೆ ಮಾಡಿದ ರೈತರ ಪೈಕಿಯಲ್ಲಿ ಸುಮಾರು 700 ಮಂದಿ ಸತ್ತಿದ್ದಾರೆ ಎಂಬುದಾಗಿ ಸುದ್ದಿಗಳಿತ್ತು. ಸತ್ತವರಿಗೆ ಪರಿಹಾರ ಕೊಡಬೇಕು ಎಂಬುದಾಗಿ ವಿರೋಧ ಪಕ್ಷಗಳು ಬೊಬ್ಬಿಟ್ಟರೂ ಪ್ರಯೋಜನ ಆಗಲಿಲ್ಲ. ಸತ್ತವರು ಬೀದಿ ನಾಯಿ ಸತ್ತಂತೆ ಆಯಿತಲ್ಲಾ ದುರ್ಗತಿ! ಈ ತನಕ ಭಾರತದ ಇತಿಹಾಸದಲ್ಲೇ ನಡೆದಿರದ ಸುಧೀರ್ಘ ರೈತ ಹೋರಾಟ ಜಯವನ್ನೇನೋ ಪಡೆಯಿತು. ಆದರೆ ರೈತರೆಂದು ಹೋರಾಟದಲ್ಲಿ ಭಾಗವಹಿಸಿದವರು ಸತ್ತರೆ ಅವರ ದಾಖಲೆಯೇ ಇಲ್ಲವೆಂದರೆ…

Read more
ಕಡಿಮೆ ನೀರಿನಲ್ಲಿ ಅಧಿಕ ಫಸಲು

ಅಡಿಕೆ ಮರಕ್ಕೆ ನೀರು ಎಷ್ಟು ಬೇಕು? ಹೆಚ್ಚು ಕೊಟ್ಟರೆ ಏನಾಗುತ್ತದೆ?

ಅಡಿಕೆ ಮರಕ್ಕೆ ನೀರು ಹೆಚ್ಚು ಬೇಕು ಎನ್ನುತ್ತಾರೆ ಅದು ತಪ್ಪು. ಹೆಚ್ಚು ನೀರು ಕೊಟ್ಟರೆ ಬೆಳೆ ಕಡಿಮೆ. ಯಾವುದೇ ಸಸ್ಯವಿರಲಿ ಅದಕ್ಕೆ ನೀರು ಬೇಡ. ಮಣ್ಣು ಹಸಿಯಾಗಿದ್ದರೆ ಸಾಕು. ಆಗ ಮರದ ಆರೋಗ್ಯ ಹಾಕಿದ ಗೊಬ್ಬರ ಎಲ್ಲವೂ ಸಮರ್ಪಕವಾಗಿ ಲಭ್ಯವಾಗುತ್ತದೆ. ಅಡಿಕೆ ಬೆಳೆಗಾರರು ಹೆಚ್ಚಾಗಿ ತೋಟಕ್ಕೆ  ಸ್ಪ್ರಿಂಕ್ಲರ್ ನೀರಾವರಿ ಮಾಡುತ್ತಾರೆ. ಮಳೆಗಾಲದ ತರಹವೇ ಅಥವಾ ಅದಕ್ಕಿಂತ ಹೆಚ್ಚಾಗಿ ನೆಲವನ್ನು ತೇವವಾಗಿ ಇಡುತ್ತಾರೆ. ಇದರಿಂದಾಗಿ ರೋಗ ರುಜಿನಗಳು ಹೆಚ್ಚಾಗುತ್ತದೆ. ಸುಳಿ ಕೊಳೆ, ಕಾಯಿ ಕೊಳೆ, ಮಿಡಿ ಉದುರುವುದೂ ಆಗುತ್ತದೆ….

Read more
10:26:26 ಗೊಬ್ಬರ

10:26:26 ಗೊಬ್ಬರ ಬಳಸುವವರು ಅಗತ್ಯವಾಗಿ ಗಮನಿಸಿ.

ಬಹಳ ಜನ  ರೈತರು ತಮ್ಮ ಬೆಳೆಗಳಿಗೆ 10:26:26 ರಸಗೊಬ್ಬರ ಬಳಸುತ್ತಿದ್ದು, ಅದನ್ನೊಂದೇ  ಬಳಕೆ ಮಾಡಿದರೆ ಏನಾಗುತ್ತದೆ ಎಂಬುದರ  ವಿಸ್ತೃತ ಮಾಹಿತಿ ಇಲ್ಲಿದೆ. ಅಡಿಕೆ ಬೆಳೆಗಾರರ ನೆಚ್ಚಿನ ಪೋಷಕಾಂಶಗಳ ಆಯ್ಕೆಯಲ್ಲಿ 10:26:26 ಎಂಬ ರಸಗೊಬ್ಬರವೂ ಒಂದು. ಸೊಸೈಟಿಗಳಲ್ಲಿ, ಗೊಬ್ಬರ ಮಾರಾಟದ ಅಂಗಡಿಯಲ್ಲಿ ಅತ್ಯಧಿಕ ಪ್ರಮಾಣದಲ್ಲಿ ದಾಸ್ತಾನು ಇರುವ ಗೊಬ್ಬರವೂ ಇದೇ. ಅಡಿಕೆ ಬೆಳೆಗಾರರು ಇರುವ ಪ್ರದೇಶಗಳಲ್ಲಿ ಇದರಷ್ಟು ಅಧಿಕ ಪ್ರಮಾಣದಲ್ಲಿ ಮಾರಾಟವಾಗುವ ರಸ ಗೊಬ್ಬರ ಬೇರೊಂದಿರಲಿಕ್ಕಿಲ್ಲ. ಈ ಗೊಬ್ಬರದ ಬಳಕೆಯಿಂದ ತೊಂದರೆ ಇಲ್ಲ. ಆದರೆ ಇದನ್ನೊಂದೇ ಬಳಕೆ ಮಾಡಿದರೆ …

Read more

ಸಾವಯವ ತ್ಯಾಜ್ಯ ಹುಡಿ ಮಾಡಬೇಕೇ? ಯಂತ್ರ ಬಾಡಿಗೆಗೆ ಇದೆ.

ಸಾವಯವ ತ್ಯಾಜ್ಯಗಳಾದ ತೆಂಗಿನ ಗರಿ, ಅಡಿಕೆ ಗರಿ ,ಸೊಪ್ಪು ಸದೆ ಇತ್ಯಾದಿಗಳನ್ನು  ಹುಡಿ ಮಾಡಿ ಬಳಕೆ ಮಾಡಿದರೆ ಅದು ವೇಗವಾಗಿ ಕರಗಿ ಗೊಬ್ಬರವಾಗುತ್ತದೆ. ಹೀಗೆ ಹುಡಿ ಮಾಡಲು ಯಂತ್ರಗಳು ಇವೆ. ಈ ಯಂತ್ರಗಳು ಭಾರೀಪ್ರಮಾಣದ ತ್ಯಾಜ್ಯಗಳನ್ನು  ಕೆಲವೇ ಗಂಟೆಗಳಲ್ಲಿ ಹುಡಿ ಮಾಡಿಕೊಡುತ್ತದೆ. ಪ್ರಸ್ತುತ ರೈತಾಪಿ ವರ್ಗದ ಜನರಿಗೆ ಸರ್ಕಾರವು ರಸಗೊಬ್ಬರದ ದರ ಏರಿಕೆ ಆಗಿರುವಂತಹ ಹಿನ್ನೆಲೆಯಲ್ಲಿ ದೇಶದ ಕೃಷಿ ಸಂಶೋಧನಾ ಅಧ್ಯಯನ ನಡೆಸಿ ಸಾವಯವ ಕೃಷಿಯನ್ನು ಅವಲಂಬಿಸಿದರೆ ಹೆಚ್ಚಿನ ಆದಾಯವನ್ನು ಗಳಿಸಬಹುದೆಂದು ಎಲ್ಲ ಪ್ರಗತಿಪರ ರೈತರು ಸಾವಯವ ಕೃಷಿಯನ್ನು…

Read more
ಫಲವತ್ತಾದ ಮಣ್ಣು

ಫಲವತ್ತತೆ ಕಳೆದುಕೊಳ್ಳುತ್ತಿರುವ ಕೃಷಿ ಭೂಮಿ- ಭವಿಷ್ಯದ ಆತಂಕ.

ನಮ್ಮ ದೇಶದ 50% ಕ್ಕೂ ಹೆಚ್ಚಿನ ಕೃಷಿ ಭೂಮಿ ಸಾರ ಕಳೆದುಕೊಂಡು  ಬರಡಾಗುತ್ತಿರುವುದು ಭಾರತ ಸರಕಾರದ ಅಧ್ಯಯನಗಳಿಂದ ತಿಳಿದು ಬಂದಿದೆ. ಅಧ್ಯಯನದ ವರದಿ ಇರಲಿ. ನಮಗೆಲ್ಲಾ ಈ ವಿಚಾರ ಗಮನಕ್ಕೆ ಬಂದಿರುವಂತದ್ದೇ. ನಮ್ಮ ಕೃಷಿ ಭೂಮಿಯಲ್ಲಿ ಬೆಳೆ ಏನೋ ಹಿಂದಿಗಿಂತ ಹೆಚ್ಚು ಬರಬಹುದು. ಆದರೆ ಖರ್ಚು ಮಾತ್ರ ದಿನದಿಂದ ದಿನಕ್ಕೆ  ಹೆಚ್ಚಾಗುತ್ತಿದೆ. ಇತರ  ಬೆಳೆ ನಿರ್ವಹಣೆ ಸಮಸ್ಯೆಗಳೂ ಹೆಚ್ಚಾಗುತ್ತಿದೆ. ಇದಕ್ಕೆ ಕಾರಣ ಬೇರೆ ಏನೂ ಅಲ್ಲ. ಮಣ್ಣು ತನ್ನ ಸಾರವನ್ನು ಸ್ವಲ್ಪ ಸ್ವಲ್ಪವೇ ಕಳೆದುಕೊಳ್ಳುತ್ತಿದೆ. ಇದು ಗಂಭೀರ…

Read more
error: Content is protected !!