ಸುಣ್ಣ ಹೆಚ್ಚಾದ ಬೋರ್ಡೋ ದ್ರಾವಣ

ಬೋರ್ಡೋ ದ್ರಾವಣಕ್ಕೆ ಸುಣ್ಣ ಹೆಚ್ಚಾದರೆ ಏನಾಗುತ್ತದೆ?

ಬೋರ್ಡೋ ದ್ರಾವಣ ತಯಾರಿಸಲು ಬಳಸುವ ಮೂಲವಸ್ತುಗಳೆಂದರೆ  ಮೈಲುತುತ್ತೆ ಮತ್ತು ಸುಣ್ಣ. ಇವೆರಡರ ಸರಿಯಾದ ಮಿಶ್ರಣಕ್ಕೆ ಬೋರ್ಡೋ ದ್ರಾವಣ ಎಂದು ಕರೆಯುತ್ತಾರೆ. ಇಲ್ಲಿ ಸಮಪಾಕ ಎಂಬ ಒಂದು ತತ್ವ ಇದೆ. ಇದನ್ನು ಪಾಲಿಸದಿದ್ದರೆ  ಅದು ಸರಿಯಾದ ಮಿಶ್ರಣ ಆಗಲಾರದು. ಇದನ್ನು ಪ್ರತೀಯೊಬ್ಬ ರೈತರೂ ತಿಳಿದಿರಬೇಕು. ಅಡಿಕೆ ಮರದ ಕೊಳೆ ರೋಗ ನಿಯಂತ್ರಣಕ್ಕೆ ಹಾಗೆಯೇ ಇನ್ನಿತರ ಬೆಳೆಗಳ ಕೊಳೆ ರೋಗದ ಶಿಲೀಂದ್ರಗಳನ್ನು ತಡೆಯಲು ಶಿಫಾರಿತ ಪ್ರಮಾಣದ ಬೋರ್ಡೋ ದ್ರಾವಣ ಎಂದರೆ ಶೇ. 1 . ಅಂದರೆ 1 ಕಿಲೋ ಮೈಲು…

Read more
ಮಳೆಗಾಲಕ್ಕೆ ಮುಂಚೆ ಔಷಧಿ ಸಿಂಪಡಿಸಿದರೆ ಈ ರೀತಿ ಲೇಪನ ಆಗಿ ಉತ್ತಮ ರಕ್ಷಣೆ ಸಿಗುತ್ತದೆ.

ಮಳೆಗಾಲಕ್ಕೆ ಮುಂಚೆ ಔಷಧಿ  ಸಿಂಪರಣೆಯಿಂದ ಪ್ರಯೋಜನ ಏನು?

ಅಡಿಕೆ ಬೆಳೆಗಾರರು ಮಳೆಗಾಲ ಪ್ರಾರಂಭವಾದ ನಂತರ ಕೊಳೆ ಔಷಧಿ ಸಿಂಪಡಿಸಿದರೆ ಸಾಕು ಎಂದು  ಭಾವಿಸಿದ್ದರೆ ಅದು ತಪ್ಪು. ಮಳೆ ಪ್ರಾರಂಭವಾಗುವ ಮುನ್ಸೂಚನೆ ಸಿಕ್ಕಿದ ತಕ್ಷಣ ಕೊಳೆ ಔಷಧಿ ಸಿಂಪರಣೆ ಮಾಡಿದರೆ ತುಂಬಾ ಪ್ರಯೋಜನ ಇದೆ.ಕೊಳೆ ರೋಗ ಬಾರದಂತೆ ರಕ್ಷಣೆ (preventive) ನೀಡುವ ಎಲ್ಲಾ ಔಷಧಿಗಳೂ ರೋಗ ಬರುವ ಮುಂಚೆ ಬಳಕೆ ಮಾಡಿದರೆ ಮಾತ್ರ ಫಲಪ್ರದವಾಗಿರುತ್ತವೆ. ಅಡಿಕೆ ಬೆಳೆಗಾರರಲ್ಲಿ ಹೆಚ್ಚಿನವರು ಸರಿಯಾಗಿ ಮಳೆ ಬಂದು ತಂಪಾದ ನಂತರ ಕೊಳೆ ರೋಗ ಬಾರದಂತೆ ತಡೆಯುವ ಬೋರ್ಡೋ ದ್ರಾವಣ ಅಥವಾ ಇನ್ಯಾವುದೋ…

Read more
ಬಾಳೆಯ ಈ ಶಿಲೀಂದ್ರ ರೋಗಕ್ಕೆ ಏನು ಪರಿಹಾರ ?

ಬಾಳೆಯ ಈ ಶಿಲೀಂದ್ರರೋಗಕ್ಕೆ ಏನು ಪರಿಹಾರ ?

ಮಳೆಗಾಲ ಪ್ರಾರಂಭವಾಗಿ ಮುಗಿಯುವ ಸಮಯಕ್ಕೆ ಬಾಳೆ ಬೆಳೆಯಲ್ಲಿ ಎಲೆ  ಹಳದಿಯಾಗುವ ಸಮಸ್ಯೆ ಎಲ್ಲೆಡೆಯೂ ಕಾಣಿಸುತ್ತದೆ. ಇದನ್ನು ಉಪಚರಿಸದೇ ಬಿಟ್ಟರೆ  ಗಿಡ ಬಾರೀ ಸೊರಗುತ್ತದೆ. ಗೊನೆಯೂ ಚೆನ್ನಾಗಿ ಬರುವುದಿಲ್ಲ. ಮಿತಿ ಮೀರಿದರೆ ಬಾಳೆ ಸಾಯುವುದೂ ಇದೆ. ಇದಕ್ಕೆ ಏನು ಉಪಚಾರ ಮಾಡಬೇಕು. ಯಾವ ಮುನ್ನೆಚ್ಚರಿಕೆ ಅಗತ್ಯ ಎಂಬ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ. ಬಾಳೆಯ ಎಲೆಗೆ ಬರುವ  ಎರಡು ಪ್ರಮುಖ ರೋಗಗಳೆಂದರೆ  ಎಲೆ ಹಳದಿಯಾಗಿ ಒಣಗುವುದು ಮತ್ತು ಎಲೆಗಳು ಗುಚ್ಚವಾಗುತ್ತಾ ಬಂದು ಸಸ್ಯ ಸತ್ತು ಹೋಗುವುದು. ಮೊದಲನೆಯ ಸಮಸ್ಯೆಗೆ…

Read more
ಕುಂಟು ನೇರಳೆ-ಹೂವು

ಎಲ್ಲಿ ಹೋದವೋ ಕುಂಟುನೇರಳೆ-ಕುಂಟಾಲ ಮರಗಳು!

ಕುಂಟು ನೇರಳೆ , ಕುಂಟಾಲ ಎಂಬ ಕಾಡು ಸಸ್ಯ ಒಂದು ಕಾಲದಲ್ಲಿ ಎಲ್ಲಾ ಕಡೆಯಲ್ಲೂ  ಕಾಣಸಿಗುತ್ತಿದ್ದ ಸಸ್ಯವಾಗಿತ್ತು. ಈಗ ಅದು ಭಾರೀ ಕ್ಷೀಣಗೊಳುತ್ತಿದ್ದು, ಪರಿಸರದ ಅಸಮತೋಲನಕ್ಕೆ ಇದೂ ಒಂದು ಕಾರಣವಾಗಿದೆ. ಈ ಸಸ್ಯವನ್ನು ಅವಲಂಭಿಸಿ ಬದುಕುವ ಒಂದಷ್ಟು ಜೀವಿಗಳು ಆಹಾರವಿಲ್ಲದೆ ಬೇರೆ ಬೆಳೆ ಆಶ್ರಯಿಸುವಂತಾಗಿದೆ. ಕುಂಟು ನೇರಳೆ, ಅಥವಾ ಕುಂಟಾಲ ಇದು ನೇರಳೆ ಜಾತಿಯ ಸಸ್ಯವಾಗಿದ್ದು, ಹಿಂದೆ ಎಲ್ಲಾ ಕಡೆ ಇದರ ಸಸ್ಯಗಳು, ಮರಗಳು ಇದ್ದವು.ಇದರ ವೈಜ್ಞಾನಿಕ ಹೆಸರು Syzygium caryophyllatum  , ಹೆಚ್ಚು ಎತ್ತರಕ್ಕೆ ಬೆಳೆಯದ…

Read more
ಹಳಸಲು ಮಣ್ಣು – ಇದರಿಂದ ಕೃಷಿಗೆ ಎನೇನು ತೊಂದರೆ

ಹಳಸಲು ಮಣ್ಣು – ಇದರಿಂದ ಕೃಷಿಗೆ ಎನೇನು ತೊಂದರೆ?

ಅಡುಗೆ ಮಾಡಿದ ಪದಾರ್ಥ  ಹಳಸಲು ಆಗುವುದು ಗೊತ್ತು. ಇನ್ನು ಮಣ್ಣು ಹಳಸುವುದು ಇದು ಯಾವುದಪ್ಪಾ ಹೊಸ ವಿಷಯ?  ಇದೇನೂ ಹೊಸ ವಿಷಯವಲ್ಲ. ನಮ್ಮ ಹಿರಿಯರಿಗೆ ಇದು ಗೊತ್ತಿತ್ತು. ನಮಗೆ ಮಾತ್ರ ಇದು ಗೊತ್ತಿಲ್ಲ. ಹಳಸುಮಣ್ಣು  ಒಂದು ರೀತಿಯಲ್ಲಿ ಸಸ್ಯ ಬೆಳವಣಿಗೆಗೆ ವಿಷ ಎಂತಲೇ ಹೇಳಬಹುದು. ಬಹುತೇಕ ಜನ ಇಂತಹ ಹಾಕಿ ಬೆಳೆ ಹಾಳು ಮಾಡಿಕೊಂಡವರಿದ್ದಾರೆ. ಬಹಳಷ್ಟು ಜನ ರೈತರು ಹೀಗೆ ಮಾಡಿಕೊಂಡು ಬೆಳೆ ಹಾಳು ಮಾಡಿಕೊಂಡವರಿದ್ದಾರೆ. ಏನಿದು ಮಣ್ಣು ಹಳಸುವುದು ನೋಡೋಣ. ಮಣ್ಣು ಯಾವಾಗಲೂ ಹಿತಮಿತ ತೇವಾಂಶದಿಂದ…

Read more
ಔಷಧಿ ಸಿಂಪರಣೆ ಮಾಡುವ ಸರಿಯಾದ ವಿಧಾನ.

 ಔಷಧಿ ಸಿಂಪರಣೆ ಮಾಡುವ ಸರಿಯಾದ ವಿಧಾನ.

ಭೆಳೆ ಸಂರಕ್ಷಣೆಗೆ ಔಷಧಿ ಸಿಂಪರಣೆ ಅನಿವಾರ್ಯ.ರೈತರು ಅವರವರು ಬೆಳೆಸುವ ಬೆಳೆಗೆ ಕೀಟಕ್ಕೆ ಕೀಟನಾಶಕವನ್ನೂ ರೋಗಕ್ಕೆ ರೋಗನಾಶವನ್ನೂ ಸಿಂಪರಣೆ ಮಾಡುತ್ತಾರೆ. ಆದರೆ ಹೆಚ್ಚಿನವರು ಸಿಂಪರಣೆ ವಿಚಾರದಲ್ಲಿ  ಸ್ವಲ್ಪ ಅಜಾಗರೂಕತೆ ಅಥವಾ ಅನಾವ್ಯಯವನ್ನು ಮಾಡುತ್ತಾರೆ.  ಸಮರ್ಪಕ  ಸಿಂಪರಣಾ ವಿಧಾನವನ್ನು ಪಾಲಿಸಿದರೆ ಖರ್ಚೂ ಉಳಿತಾಯ. ಪರಿಸರಕ್ಕೂ ಕಡಿಮೆ. ಸುಮಾರು ವರ್ಷಕ್ಕೆ ಹಿಂದೆ ಒಮ್ಮೆ ಉಡುಪಿಯ ಮಲ್ಲಿಗೆ ಬೆಳೆಯುವ ಪ್ರದೇಶಕ್ಕೆ ಹೋಗಿದ್ದೆ. ಅಲ್ಲಿ ಮಲ್ಲಿಗೆ ಬೆಳೆಯುವ ಕೆಲವರು ಔಷಧಿ ಸಿಂಪಡಿಸುವ ಕ್ರಮವನ್ನು ಕೇಳಿದಾಗ ಆಶ್ಚರ್ಯವಾಯಿತು. ಅಂಗಡಿಯವರು ಕೊಟ್ಟ ಕೀಟನಾಶಕ ಅಥವಾ ರೋಗನಾಶಕವನ್ನು ತಂದು…

Read more
Super potassium humate flake type.

The Role of Potassium Humate in Enhancing Horticulture Crop Performance

In the realm of sustainable agriculture and modern horticulture, Potassium Humate or humic acid has emerged as a powerful bio-stimulant and soil conditioner. Derived from humic substances—naturally occurring organic matter found in leonardite or lignite—Potassium Humate contains a rich blend of humic and fulvic acids bonded with potassium. It plays a significant role in improving…

Read more
ಜೇಡಗಳು ಅಪಾಯಕಾರಿ ಅಲ್ಲ. ಅವು ಉಪಕಾರಿಗಳು.

ಜೇಡಗಳು ಅಪಾಯಕಾರಿ ಅಲ್ಲ. ಅವು ಉಪಕಾರಿಗಳು.

ಜೇಡಗಳು ಪ್ರಕೃತಿಯಲ್ಲಿ ಎಲ್ಲಾ ಕಡೆ ಕಂಡುಬರುವ ಕೀಟ ಜೀವಿಗಳು. ಇವುಗಳನ್ನು ರೈತನ ಮಿತ್ರ  ಎಂದೇ ಹೇಳಬಹುದು. ಕೃಷಿ ಮತ್ತು ತೋಟಗಾರಿಕಾ ಬೆಳೆಗಳ ರಕ್ಷಣೆಯಲ್ಲಿ ಇವುಗಳ ಪಾತ್ರ ವಿಶಿಷ್ಟವಾದುದು. ಇವುಗಳನ್ನು ಬೇಟೆಗಾರ ಕೀಟಗಳು ಎಂದು ಕರೆಯಲಾಗುತ್ತದೆ. ಜೇಡಗಳನ್ನು  ಕಂಡಾಕ್ಷಣ ಅದನ್ನು ಕೊಲ್ಲುತ್ತೇವೆ. ಯಾಕೆ ಎಂದು ಹೆಚ್ಚಿನವರಿಗೆ ಗೊತ್ತಿಲ್ಲ. ಅವು ಕಚ್ಚುತ್ತದೆ, ಕಚ್ಚಿದರೆ ಅದು ವಿಷ ಅದಕ್ಕಾಗಿ ಅದನ್ನು ಕೊಲ್ಲಬೇಕು ಎಂಬುದಾಗಿ ಹಿರಿಯರು ಹೇಳಿದ್ದನ್ನು ಕಿರಿಯರು ಪಾಲಿಸುತ್ತಾರೆ. ಕೆಲವೇ ಕೆಲವು ಕಚ್ಚುವವುಗಳು. ಬಹುತೇಕ ಉಪದ್ರವ ಕೊಡದ ಉಪಕಾರಿಗಳು. ಇವು ನೆಲದಲ್ಲಿ…

Read more
ಕೊಕ್ಕೋ ಬೆಳೆಗೆ ಶಿಲೀಂದ್ರನಾಶಕ ಸಿಂಪರಣೆ ಏಕೆ ಅಗತ್ಯ ?

ಕೊಕ್ಕೋ  ಬೆಳೆಗೆ ಶಿಲೀಂದ್ರನಾಶಕ ಸಿಂಪರಣೆ  ಏಕೆ ಅಗತ್ಯ ?  

ಮಳೆಗಾಲದಲ್ಲಿ ಕೊಕ್ಕೋ ಬೆಳೆ ಉಳಿಸಿಕೊಳ್ಳಬೇಕಾದರೆ ಶಿಲೀಂದ್ರ ನಾಶಕದ ಸಿಂಪರಣೆ ಅತ್ಯಗತ್ಯ. ಕೊಕ್ಕೋ ಬೆಳೆ ಶಿಲೀಂದ್ರ ರೋಗಕ್ಕೆ ಬೇಗ ತುತ್ತಾಗುವ ಬೆಳೆಯಾಗಿದ್ದು ಮಳೆಗಾಲ ಪೂರ್ವದಲ್ಲೇ ಸಿಂಪರಣೆ ಮಾಡಿದರೆ ಉತ್ತಮ. ಮಳೆಗಾಲ ಮುಗಿಯುವ ತನಕ ತಿಂಗಳಿಗೆ ಒಮ್ಮೆಯಂತೆ ಬೋರ್ಡೋ ದ್ರಾವಣ ಅಥವಾ ಇನ್ನಿತರ ಶಿಲೀಂದ್ರ ನಾಶಕವನ್ನು ಸಿಂಪಡಿಸುತ್ತಾ ಇದ್ದರೆ ಉತ್ತಮ ಫಸಲು ಪಡೆಯಬಹುದು. ಕೊಕ್ಕೋ ಎಂಬುದು ವರ್ಷ ಪೂರ್ತಿ ಬೆಳೆ ಇರುವ ಮಿಶ್ರ ಬೆಳೆ . ಕೆಲವು ಸೀಸನ್ ಗಳಲ್ಲಿ  ಸ್ವಲ್ಪ ಕಡಿಮೆಯಾಗಬಹುದು. ಕೆಲವು ಸೀಸನ್ ನಲ್ಲಿ ಹೆಚ್ಚಾಗಬಹುದು. ಆದರೆ…

Read more
ಹುತ್ತಗಳಿಂದ ಕೃಷಿಕರಿಗೆ ಏನು ಲಾಭ? ಕಡಿಮೆಯಾಗಲು ಕಾರಣ ಏನು?

ಹುತ್ತಗಳಿಂದ ಕೃಷಿಕರಿಗೆ ಏನು ಲಾಭ? ಕಡಿಮೆಯಾಗಲು ಕಾರಣ ಏನು?

ನಮ್ಮ ಸುತ್ತಮುತ್ತ ಎಲ್ಲಾ ಕಡೆಯಲ್ಲಿ ಕಾಣಸಿಗುತ್ತಿದ್ದ ಹುತ್ತಗಳು ಈಗ ಅಪರೂಪವಾಗಲಾರಂಭಿಸಿದೆ.  ಇದು ನಮ್ಮ ಹೊಲದ ಮಣ್ಣು  ಸಾವಯವ ಅಂಶ ಕಳೆದುಕೊಡಿರುವುದರ ಸೂಚನೆ. ಬಯಲು ಸೀಮೆಯ ಕಡೆ, ಕಾಡು ಇರುವಲ್ಲಿ ಮಾನವ ಹಸ್ತಕ್ಷೇಪ ಇಲ್ಲದ ಕಡೆ ಸ್ವಲ್ಪ ಮಟ್ಟಿಗೆ ಹುತ್ತಗಳು ಕಾಣಸಿಕ್ಕರೆ ಉಳಿದೆಡೆ ಹುತ್ತಗಳಿಲ್ಲ. ವಿಶೇಷವಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹುತ್ತಗಳ ಸಂಖ್ಯೆಯೇ ಕ್ಷೀಣಿಸುತ್ತಿದೆ! ಹುತ್ತಗಳು ಇಲ್ಲದಿದ್ದರೆ ಗೆದ್ದಳು ಇಲ್ಲವಲ್ಲಾ ಒಳ್ಳೆಯದೇ ಅಯಿತಲ್ಲಾ ಎಂದು ಭಾವಿಸಬೇಡಿ. ಹುತ್ತಗಳು ನಮ್ಮ ಭೂಮಿಯ ಫಲವತ್ತತೆಯ ಸಂಕೇತ. ಹುತ್ತಗಳು ಬೆಳೆಯುವುದು ಭೂಮಿಯಲ್ಲಿರುವ ಸಾವಯವ…

Read more
error: Content is protected !!