ತೆಂಗಿನ ಮರದಲ್ಲಿ ಕಾಯಿ ಹೆಚ್ಚುವಿಕೆ ಒಂದು ಕುತೂಹಲ.

ತೆಂಗು ಬೆಳೆಯುವವರೆಲ್ಲರೂ ತಿಳಿದಿರಬೇಕಾದ ಪ್ರಮುಖ ಸಂಗತಿ ಅದರಲ್ಲಿ ಕಾಯಿಗಳು ಹೇಗೆ ಆಗುತ್ತವೆ ಎಂಬುದು. ತೆಂಗಿನ ಮರದಲ್ಲಿ ಹೂ ಗೊಂಚಲು ಆಗುತ್ತದೆ. ಅದರಲ್ಲಿ ಮಿಡಿಗಳು ಬೆಳೆದು ಅದು ಕಾಯಿಯಾಗುತ್ತದೆ ಎಂದಷ್ಟೇ ತಿಳಿದರೆ ಸಾಲದು. ಈ ಪ್ರಕ್ರಿಯೆಯಲ್ಲಿ ಯಾರೆಲ್ಲಾ ಪಾತ್ರ ವಹಿಸುತ್ತಾರೆ. ಇವರೇನಾದರೂ ಕೈಕೊಟ್ಟರೆ ಏನಾಗುತ್ತದೆ ಎಂಬುದನ್ನು ತಿಳಿಯಲೇ ಬೇಕು. ಹೂ ಗೊಂಚಲು ತನ್ನಷ್ಟಕ್ಕೇ ಕಾಯಿ ಕಚ್ಚುವುದಲ್ಲ. ಅದು ಬೇರೆ ಜೀವಿಗಳನ್ನು ಅವಲಂಭಿಸಿ ಆಗುತ್ತದೆ. ಸೃಷ್ಟಿಯ ಈ ವೈಚಿತ್ರ್ಯವನ್ನು ಪ್ರತೀಯೊಬ್ಬ ರೈತರು ತಿಳಿಯಲೇ ಬೇಕು. ತೆಂಗಿನ ಸಸಿ ಉತ್ತಮ ಆರೈಕೆಯಲ್ಲಿ…

Read more
Organic University

ಕರ್ನಾಟಕದಲ್ಲಿ ಸಾವಯವ ಕೃಷಿಗಾಗಿ ವಿಶ್ವ ವಿಧ್ಯಾನಿಲಯ!

ಮಾನ್ಯ ಕೃಷಿ ಮಂತ್ರಿಗಳು ಸಾವಯವ ಕೃಷಿ ಸಂಶೋಧನೆಗಾಗಿ ಒಂದು ವಿಶ್ವ ವಿಧ್ಯಾನಿಲಯವನ್ನು ಸ್ಥಾಪಿಸಬೇಕು ಎಂಬ ಚಿಂತನೆ ನಡೆಸಿದ್ದಾರೆ. ಸುಮಾರು 10 ವರ್ಷಕ್ಕೆ ಹಿಂದೆ ನಮ್ಮ ರಾಜ್ಯದಲ್ಲಿ ಎರಡು ಕೃಷಿ ವಿಶ್ವ ವಿಧ್ಯಾನಿಲಯಗಳಿದ್ದವು. ಮತ್ತೊಂದು ಕೃಷಿ ವಿಶ್ವ ವಿಧ್ಯಾನಿಲಯ ಸೇರ್ಪಡೆಯಾಯಿತು. ತೋಟಗಾರಿಕಾ ವಿಶ್ವ ವಿಧ್ಯಾನಿಲಯವಾಯಿತು. ಪಶು ಸಂಗೋಪನಾ ವಿಶ್ವ ವಿಧ್ಯಾನಿಲಯ, ತೋಟಗಾರಿಕೆ ಮತ್ತು  ಕೃಷಿ ಜಂಟಿ ವಿಶ್ವ ವಿಧ್ಯಾನಿಲಯಗಳಾಯಿತು. ಇನ್ನು  ಉಳಿದದ್ದು ಸಾವಯವ ಕೃಷಿ ಒಂದೇ ಏನೋ ಎಂಬುದು ಮಾನ್ಯ ಕೃಷಿ ಸಚಿವರ ಇಂಗಿತದಲ್ಲಿ ಕಾಣುತ್ತದೆ. ಹಾಲೀ ಇರುವ…

Read more

ಸ್ವಸ್ಥ ಆರೋಗ್ಯಕ್ಕೆ ಬೇಕು – ಸುರಕ್ಷಿತ ಆಹಾರ.

ನಾವು ತಿನ್ನುವ ಆಹಾರ ಸುರಕ್ಷಿತವಾಗಿದ್ದರೆ ಎಲ್ಲವೂ ಕ್ಷೇಮ. ಇಂದು ಆಗುತ್ತಿರುವ ಕೆಲವು ಅನಾಹುತಗಳಿಗೆ ಮೂಲ ಕಾರಣ ನಮ್ಮ ಆಹಾರ ಅಭ್ಯಾಸಗಳು. ಇದನ್ನು ಸ್ವಲ್ಪ ಸ್ವಲ್ಪವೇ ಸರಿ  ಮಾಡಿಕೊಂಡು ಬದುಕುವುದನ್ನು ಕಲಿಯೋಣ. ಈ ದಿನದಿಂದಲೇ  ಅದನ್ನು ಪ್ರಾರಂಭಿಸೊಣ. ಕೃಷಿ ಕ್ಷೇತ್ರದಲ್ಲಿ ಆಹಾರ ಉತ್ಪಾದನೆಯಾಗುವಾಗಲೇ ಅದು  ಆರೋಗ್ಯಕ್ಕೆ ಕಂಠಕವಾದ ಒಳಸುರಿಗಳಿಂದ ಕಲುಷಿತವಾಗುತ್ತದೆ. ಇನ್ನು ದಾಸ್ತಾನು ಕ್ಷೇತ್ರದಲ್ಲಿ ಇನ್ನಷ್ಟು ಅದು ಕಲುಷಿತವಾಗುತ್ತದೆ. ಮಾರಾಟ ಕ್ಷೇತ್ರದಲ್ಲಿ   ಎಲ್ಲಾ ಕಡೆಯಲ್ಲೂ ಕಲುಷಿತಗೊಂಡು ಅದು ಗ್ರಾಹಕನಿಗೆ ದೊರೆಯುತ್ತದೆ. ಅದು ಒಟ್ಟಾರೆ ಯಾಗಿ ಮನುಕುಲದ ದೇಹಾರೋಗ್ಯಕ್ಕೆ ಹಾನಿಕಾರಕ…

Read more
ಸತ್ವ ಉಳ್ಳ ಲಂಟಾನ ಸಸ್ಯ

ಈ ಸಸ್ಯಗಳಲ್ಲಿ ವಿಶೇಷ ಗುಣಗಳು ಇವೆ.

ನಮ್ಮ ಸುತ್ತಮುತ್ತ ಇರುವ ಕೆಲವು ಗಿಡಗಳು ಬೇರೆ ಬೇರೆ ಸತ್ವಗಳನ್ನು ಒಳಗೊಂಡಿವೆ. ಕೆಲವು ಪೋಷಕವಾಗಿಯೂ  ಮತ್ತೆ ಕೆಲವು ಕೀಟ – ರೋಗ ನಿಯಂತ್ರಕವಾಗಿಯೂ ಕೆಲಸ ಮಾಡುತ್ತವೆ. ಇತ್ತೀಚಿನ ದಿನಗಳಲ್ಲಿ ಇವುಗಳನ್ನು ಕಳೆ ನಾಶಕಗಳು ಬಲಿ ತೆಗೆದುಕೊಳ್ಳುತ್ತಿವೆ. ರೈತರೇ ಇವುಗಳನ್ನು ಅನವಶ್ಯಕ  ಕೊಲ್ಲಬೇಡಿ. ಅದರ ಸದುಪಯೋಗ ಮಾಡಿಕೊಳ್ಳಿ. ಏನಿದೆ ಸತ್ವ: ಸಾಮಾನ್ಯವಾಗಿ ಸಾವಯವ ವಿಧಾನದಲ್ಲಿ ಬೇಸಾಯ ಮಾಡುವಾಗ ಸಾರಜನಕ ಮೂಲವನ್ನು ಬೇಕಾದಷ್ಟು ಪ್ರಮಾಣದಲ್ಲಿ  ಹೊಂದಿಸಿಕೊಳ್ಳಲಿಕ್ಕಾಗುತ್ತದೆ. ಆದರೆ ರಂಜಕ ಮತ್ತು  ಪೊಟ್ಯಾಶಿಯಂ ಸತ್ವಗಳನ್ನು ಬೇಕಾದಷ್ಟು ಪ್ರಮಾಣದಲ್ಲಿ  ಹೊಂದಿಸಿಕೊಳ್ಳುವುದು ಕಷ್ಟವಾಗುತ್ತದೆ. ಇದರಿಂದ…

Read more
ಈಗ ಅಡಿಕೆಗೆ ಬೋರ್ಡೋ ಸಿಂಪರಣೆ ಮಾಡಬಹುದೇ

ಈಗ ಅಡಿಕೆಗೆ ಬೋರ್ಡೋ ಸಿಂಪರಣೆ ಮಾಡಬಹುದೇ?

ಮಳೆಗಾಲದಲ್ಲಿ ಕೊಳೆ ನಿವಾರಣೆಗೆ ಸಿಂಪಡಿಸುವ ಬೋರ್ಡೋ ದ್ರಾವಣವನ್ನು ಈಗ ಸಿಂಪಡಿಸುವುದರಿಂದ ಅನುಕೂಲ ಏನು? ಇಲ್ಲಿದೆ ಸಂಪೂರ್ಣ ಮಾಹಿತಿ. ಕೊಳೆ ರೋಗಕ್ಕೆ ಸಿಂಪಡಿಸುವ ಮೈಲುತುತ್ತೆ ಮತ್ತು ಸುಣ್ಣ ಇವುಗಳ ಸಮತೋಲಿತ ಮಿಶ್ರಣಕ್ಕೆ ಬೋರ್ಡೋ ದ್ರಾವಣ Bordeaux mixture ಎನ್ನುತ್ತಾರೆ. ಈ ದ್ರಾವಣವು ಶೇ. 1  ರ ಪ್ರಮಾಣದಲ್ಲಿ ಸಿಂಪಡಿಸಬೇಕು ಎಂಬುದು ಶಿಫಾರಸು. ಇದು ತಟಸ್ಥ ಮಿಶ್ರಣವಾಗಿರಬೇಕು. ಇದರಿಂದ ಫಲ ಹೆಚ್ಚು. ಇದನ್ನು ಮಳೆ ಬಂದ ನಂತರವೇ ಸಿಂಪಡಿಸಬೇಕಾಗಿಲ್ಲ. ಮಳೆ ಬರುವ ಮುಂಚೆಯೂ ಇದನ್ನು ಸಿಂಪರಣೆ ಮಾಡಬಹುದು. ಈಗಾಗಲೇ ಅಡಿಕೆ…

Read more
banana plantation

ಬಾಳೆ ಬೆಳೆಯುವಾಗ ಕಂದುಗಳನ್ನು ನಿಯತ್ರಿಸುವುದು ಹೇಗೆ?

ಬಾಳೆ ಬೆಳೆಗಾರರಿಗೆ ಕಂದುಗಳ ನಿಯಂತ್ರಣ ಒಂದು ದೊಡ್ಡ ಸಮಸ್ಯೆ. ಕಂದುಗಳು ಕಡಿಮೆಯಾದಷ್ಟೂ ಬಾಳೆ ಗೊನೆ ಚೆನ್ನಾಗಿ ಬರುತ್ತದೆ. ಬಾಳೆ ನೆಟ್ಟು ಸುಮಾರು 5-6 ತಿಂಗಳಿಗೆ ಕಂದುಗಳು ಬರಲಾರಂಭಿಸುತ್ತವೆ. ಕಂದುಗಳು ಬಂದ ನಂತರ ಇರುವ ಆಹಾರ ಅವುಗಳಿಗೂ ಹಂಚಿಕೆಯಾಗಬೇಕು. ಆಗ ಹೆಚ್ಚು ಹೆಚ್ಚು ಗೊಬ್ಬರಗಳನ್ನು ಕೊಡಬೇಕು. ಕಂದುಗಳನ್ನು ನಿಯಂತ್ರಿಸಿಕೊಂಡರೆ ಬಾಳೆಗೆ ಪೋಷಕಾಂಶ ಹಾಗೂ ನೀರಾವರಿ ಕಡಿಮೆ ಸಾಕಾಗುತ್ತದೆ. ಬಾಳೆ ಗೊನೆ ಪುಷ್ಟಿಯಾಗಿ ಬೆಳೆಯುತ್ತದೆ.  ಹಾಗಾದರೆ ಬಾಳೆಯಲ್ಲಿ ಕಂದುಗಳನ್ನು ತೆಗೆಯುವ ವಿಧಾನ ಹೇಗೆ? ಕಂದುಗಳ ನಿಯಂತ್ರಣಕ್ಕೂ ಬಾಳೆಯ ಅಧಿಕ ಇಳುವರಿಗೂ…

Read more
ಬೂದಿ

ಕೃಷಿ ಸುಣ್ಣ – ಯಾವುದನ್ನು ಹಾಕಿದರೆ ಹೇಗೆ?

ಪ್ರಾದೇಶಿಕವಾಗಿ ಕೃಷಿ ಸುಣ್ಣದ ನೈಸರ್ಗಿಕ ಮೂಲಗಳು ಬೇರೆ ಬೇರೆ ಇರುತ್ತವೆ. ಸಾಮಾನ್ಯವಾಗಿ ಕರಾವಳಿ ಪ್ರದೇಶದಲ್ಲಿ ಕಪ್ಪೆ ಚಿಪ್ಪಿನಲ್ಲಿ ಸುಣ್ಣದ ಅಂಶ ಇದ್ದರೆ, ಅರೆ ಮಲೆನಾಡು ಮತ್ತು ಮೈದಾನ ಪ್ರದೇಶಗಳಲ್ಲಿ ಸುಣ್ಣದ ಕಲ್ಲುಗಳು, ಡೊಲೋ ಮೈಟ್  ಖನಿಜಗಳು ನೈಸರ್ಗಿಕ ಸುಣ್ಣದ ಮೂಲಗಳಾಗಿವೆ. ಇದಲ್ಲದೆ ಕೆಲವು ಕಾರ್ಖಾನೆಗಳ ತ್ಯಾಜ್ಯಗಳಲ್ಲೂ ಸುಣ್ಣದ ಅಂಶ ಇರುತ್ತದೆ. ಎಲ್ಲಿ ಯಾವುದು ಅಗ್ಗದಲ್ಲಿ ಲಭ್ಯವೋ ಅದನ್ನು  ಬಳಕೆ ಮಾಡಬೇಕು. ಬರೇ ಸುಣ್ಣದ ಅಂಶ ಮಾತ್ರ ಇರುವ ಮೂಲವಸ್ತುವನ್ನು ಬಳಕೆ ಮಾಡುವ ಬದಲಿಗೆ ಮೆಗ್ನೀಶಿಯಂ ಸಹ ಇರುವ…

Read more
ಸುಪ್ರೀಮ್ ಕೋರ್ಟ್

ಸುಪ್ರೀಮ್ ಕೋರ್ಟ್ ನ್ಯಾಯಮೂರ್ತಿಗಳು ಕೃಷಿಕರ ಬಗ್ಗೆ ತೋರಿದ ಕಳಕಳಿ.

ಎಲ್ಲರೂ ಕೃಷಿಕರು ಹಾಗೆ ಮಾಡುತ್ತಾರೆ, ಹೀಗೆ ಮಾಡುತ್ತಾರೆ. ಪರಿಸರ ಹಾನಿ ಮಾಡುತ್ತಾರೆ. ಮಾಲಿನ್ಯ ಮಾಡುತ್ತಾರೆ ಎಂದು ತಗಾದೆ ತೆಗೆಯುವವರು. ಇವರೆಲ್ಲರಿಗೂ ಒಂದು ರೀತಿಯಲ್ಲಿ  ಚಾಟಿ ಏಟಿನ ತರಹ ಪ್ರಶ್ನೆಯೊಂದನ್ನು ಭಾರತದ ಸುಪ್ರೀಮ್ ಕೋರ್ಟ್ ನ್ಯಾಯಾಧೀಶರಾದ ಶ್ರೀ ಎನ್ ವಿ ರಮಣ ಇವರು ಕೇಳಿದ್ದಾರೆ. ಎಲ್ಲಾ ತಕರಾರಿನಲ್ಲೂ ರೈತರ ವಿಷಯಗಳನ್ನು ನ್ಯಾಯಾಲಯದ ಕಟ್ಟಲೆಗೆ ತರುವುದು ಸೂಕ್ತವಲ್ಲ. ರೈತರು ಅವರ ಆರ್ಥಿಕ ಮೂಲಕ್ಕನುಗುಣವಾಗಿ ಕೆಲವು ಸಣ್ಣ ಪುಟ್ಟ ತಪ್ಪುಗಳನ್ನು ಕೃಷಿ ಕಾಯಕದಲ್ಲಿ ಮಾಡಬಹುದಾದರೂ ಅದನ್ನು ನಾವು ಬೇರೆ ತಪ್ಪುಗಳಿಗೆ ಹೋಲಿಸಿದರೆ…

Read more
ನ್ಯಾನೊ ಸಾರಜನಕ (ಸಾಂದರ್ಭಿಕ ಚಿತ್ರ

ಶ್ರೀಲಂಕಾಕ್ಕೆ ಮತ್ತೆ ಭಾರತದಿಂದ ಸಾರಜನಕ ಗೊಬ್ಬರ.

ನೆರೆಕರೆಯವರೊಂದಿಗೆ ಉತ್ತಮ ಬಾಂಧವ್ಯ ಬೆಳೆಸುವ ಇರಾದೆಯಲ್ಲಿ ಭಾರತ ಸರಕಾರವು ಮತ್ತೆ ಶ್ರೀಲಂಕಾದ ಕೃಷಿಯನ್ನು ಮೇಲೆ ಎತ್ತಲು ನ್ಯಾನೋ ಸಾರಜನಕ ಗೊಬ್ಬರವನ್ನು ವಿಮಾನದಲ್ಲಿ ಕಳುಹಿಸಿಕೊಟ್ಟಿದೆ.  ಭಾರತದ ಔದಾರ್ಯವೋ ಚೀನಾಕ್ಕೆ ಸೆಡ್ದೋ ಒಟ್ಟಿನಲ್ಲಿ ಭಾರತ ಶ್ರೀಲಂಕಾಕ್ಕೆ ಬೆಂಬಲವಾಗಿ ನಿಂತಿದೆ. ನ್ಯಾನೋ ಯೂರಿಯಾ ಭಾರತದಲ್ಲಿ ಇಫ್ಕೋ ಸಂಸ್ಥೆ ಇತ್ತೀಚೆಗಷ್ಟೇ ಬಿಡುಗಡೆ ಮಾಡಿದ್ದು, ಭಾರತದ   ರೈತರು ಇದನ್ನು ಎಷ್ಟು ಬಳಕೆ ಮಾಡಿದ್ದಾರೋ ಗೊತ್ತಿಲ್ಲ. ಶ್ರೀಲಂಕಾಕ್ಕೆ ಅದೇ ನ್ಯಾನೋ ಸಾರಜನಕವನ್ನು ಕಳುಹಿಸಲಾಗಿದೆಯೋ ಬೇರೆ ಕಳುಹಿಸಲಾಗಿದೆಯೋ ಮಾಹಿತಿ ಇಲ್ಲ. ಶ್ರೀಲಂಕಾದ ಸಾವಯವ ಕೃಷಿಗೆ ಸಹಾಯ ಎನ್ನುತ್ತಿರುವ…

Read more

ಆರೋಗ್ಯಬೇಕೇ- ಕೀಟನಾಶಕ ಮಿತಿಗೊಳಿಸಿ.

ಅಡಿಕೆ ಉಳಿಯಬೇಕು. ದುಡ್ಡು ಆಗಬೇಕು ನಿಜ. ಆದರೆ ದುಡ್ಡಿನಲ್ಲಿ ಆರೋಗ್ಯವನ್ನು ಖರೀದಿಸಲಿಕ್ಕೆ ಆಗುವುದಿಲ್ಲ. ಅನಾರೋಗ್ಯ ಬಂದರೆ ನಮ್ಮ ಸಂಪಾದನೆಯಲ್ಲಿ ಆಸ್ಪೆತ್ರೆಯವರು- ವೈದ್ಯರು ಪಾಲುದಾರರಾಗುತ್ತಾರೆ. ಅವರನ್ನು ಸಾಕುವ ಕೆಲಸ ಬೇಡ. ಅಡಿಕೆ ಬೆಳೆಗಾರರಿಗೆ ಸಲಹೆಗಳ ಸುರಿಮಳೆಗಳೇ ಹರಿದು ಬರುತ್ತಿವೆ. ಯಾವ ರೈತರು ಪ್ರಧಾನ ಮಂತ್ರಿಗಳ ಕೃಷಿ ವಿಕಾಸ ಯೋಜನೆಯ 6000 ರೂ. ಫಲಾನುಭವಿಗಳಿದ್ದಾರೆಯೋ ಅವರಿಗೆ  ಮೊಬೈಲ್ ನಂಬ್ರಕ್ಕೆ ಸಂದೇಶಗಳು ಬರುತ್ತಿವೆ. ಇದರಲ್ಲೆಲ್ಲಾ ಅಷ್ಟು ಇಷ್ಟು ರಾಸಾಯನಿಕ ಬಳಕೆ ಮಾಡಿ ಬೆಳೆ ಸಂರಕ್ಷಿಸಿಕೊಳ್ಳಿ ಎಂಬ ಸಂದೇಶ ಇದೆ. ರೈತರೇ ಇದನ್ನು…

Read more
error: Content is protected !!