ಸೌತೆ ಬೆಳೆಯ ಹೊಲ

ಸೌತೆ ಬೆಳೆಯಲ್ಲಿ ಹೆಚ್ಚು ಕಾಯಿ ಪಡೆಯುವ ವಿಧಾನ .

ಸೌತೇ ಸುಮಾರಾಗಿ ಬೇಸಿಗೆಯಲ್ಲಿ ಎಲ್ಲರೂ ಬೆಳೆಸುವ ತರಕಾರಿ ಬೆಳೆ. ಸೌತೆ ಬೆಳೆಯಲ್ಲಿ ಕೆಲವು ಟ್ರಿಮ್ಮಿಂಗ್ ಮಾಡುವುದರಿಂದ ಬೇಗ ಮತ್ತು ಹೆಚ್ಚು ಇಳುವರಿ ಪಡೆಯಬಹುದು. ಟೊಮೇಟೋ, ಆಲೂಗಡ್ಡೇ ನಂತರ ಅತೀ ಹೆಚ್ಚು ಬಳಕೆಯಗುವ ತರಕಾರಿ ಸೌತೆ. ಸೌತೆ ಬೆಳೆಯನ್ನು ಹೆಚ್ಚು ನಿಗಾವಹಿಸಿ ಬೆಳೆದಾಗ ಉತ್ತಮ ಲಾಭವೂ ಇದೆ. ಸೌತೆಯಲ್ಲಿ ಎರಡು ಪ್ರಕಾರಗಳು. ಒಂದು ಉದ್ದದ ಕಾಯಿಗಳನ್ನು ಬಿಡುವ ಕೇರಳ ಮೂಲದ ಸೌತೆ. ದಕ್ಷಿ ಣ ಕರ್ನಾಟಕದ ದುಂಡಗೆಯ ತಳಿ. ತೂಕ ಸುಮಾರಾಗಿ ಏಕ ಪ್ರಕಾರವಾಗಿರುತ್ತದೆ. ಕೆಲವು ಪ್ರದೇಶಗಳಲ್ಲಿ ಇನ್ನೂ…

Read more

ಪಶು ಆಹಾರ ನೀವೇ ಮಾಡಿಕೊಳ್ಳಿ-ಲಾಭವಿದೆ.

ಹೈನುಗಾರಿಕೆ ಮಾಡುತ್ತಿದ್ದಿರಾ? ನೀವು ನಿಮ್ಮ ಹೈನು ರಾಸುಗಳಿಗೆ ಹುಲ್ಲು ಬಿಟ್ಟು ಬೇರೆ ಎಲ್ಲವನ್ನೂ ತರುವುದು ಹೊರಗಡೆಯಿಂದ. ಇದು ನಿಮ್ಮ ಆ ವೃತ್ತಿಯನ್ನು  ಹೆಚ್ಚು ಸಮಯ ಮುನ್ನಡೆಸಲು ಬಿಡುವುದಿಲ್ಲ. ಕಾರಣ ನಿಮ್ಮ ಆದಾಯದ ಬಹುಪಾಲು ಅವರ ಕೈ ಸೇರುತ್ತದೆ. ಅವರು ಬೇಗ ಮೇಲೇರುತ್ತಾರೆ. ನೀವು ಹೈನು ಗಾರಿಕೆ ಬೇಡ ಎಂದು ಹಸು ಮಾರಾಟ ಮಾಡಿ ಮತ್ತೆ ಹಿಂದಿನ ಸ್ಥಿತಿಗೇ ಬರುತ್ತೀರಿ. ಕೊಂಡು ತರುವ ಪಶು ಆಹಾರ: ಮಾರುಕಟ್ಟೆಯಲ್ಲಿ ತರಾವಳಿಯ ಪಶು ಆಹಾರಗಳಿವೆ. ಸ್ಪರ್ಧೆಗಾಗಿ  ದರ ವೆತ್ಯಾಸಗಳೂ ಇವೆ. ಹಾಲು…

Read more
ರಾಸಾಯನಿಕ ಮುಕ್ತ ಕೀಟ ನಿಯಂತ್ರಣ

ರಾಸಾಯನಿಕ ಮುಕ್ತ ಕೀಟ-ರೋಗ ನಿಯಂತ್ರಿಸುವ ವಿಧಾನಗಳು.

ಗುಡ್ಡಕ್ಕೆ ಗುಡ್ಡ ಅಡ್ದ ಇದ್ದೇ ಇದೆ. ಸ್ವಲ್ಪ ಯೋಚನೆ  ಮಾಡಿದರೆ ಕೆಲವು ಸರಳ, ಸುರಕ್ಷಿತ ಬೆಳೆ ಸಂರಕ್ಷಣಾ ವಿಧಾನಗಳು  ಗೊತ್ತಾಗುತ್ತವೆ. ಇದೇ ಸಿದ್ದಾಂತದಲ್ಲಿ, ಕೃಷಿ ಬೆಳೆಗಳ ಕೆಲವು ರೋಗ ಮತ್ತು ಕೀಟಗಳನ್ನು ನೈಸರ್ಗಿಕವಾಗಿ  ರಾಸಾಯನಿಕ  ಬಳಕೆ ಇಲ್ಲದೆ ನಿಯಂತ್ರಿಸಬಹುದು ಎಂದು ಕಂಡುಕೊಳ್ಳಲಾಗಿದೆ. ಇದನ್ನು ಜೈವಿಕ ಕೀಟ- ರೋಗ ನಿಯಂತ್ರಣ ಎನ್ನುತ್ತಾರೆ. ಇದು  ಯಾರಿಗೂ ಯಾವ ರೀತಿಯಲ್ಲೂ ಅಪಾಯ ಇಲ್ಲದ ಜೀವಾಣುಗಳಾಗಿದ್ದು, ಎಲ್ಲದರ ಮೂಲ ಮಣ್ಣೇ ಆಗಿರುತ್ತದೆ. ಒಂದು ತೋಟದಲ್ಲಿ ಎಲ್ಲದಕ್ಕೂ ರೋಗ ಅಥವಾ ಕೀಟ ಸಮಸ್ಯೆ ಉಂಟಾಗಿ,ಕೆಲವು…

Read more
ಹಾಲು ಕರೆಯುವುದು

ಕರು ಹಾಕದಿದ್ದರೂ ಹಾಲು ಕರೆಯಬಹುದು.

ಕರು ಇಲ್ಲದೆ ಹಾಲು ಪಡೆಯುವ ವಿಧಾನ ಇದೆ. ಇದನ್ನು ಬಳಸಿ, ಅದರಿಂದ ಹಾಲು ಕರೆಯಬಹುದು,  ಮತ್ತೆ ಆ ಹಸು ಕರು ಹಾಕುವಂತೆ  ಮಾಡಲೂ ಇದು ಸಹಕಾರಿ. ಹಲವು ಕಾರಣಗಳಿಂದ ರಾಸುಗಳು ಬೆದೆಗೆ ಬಾರದೇ ಇರುವುದು, ಬೆದೆಗೆ ಬಂದರೂ ಗರ್ಭ ಕಟ್ಟದೇ ಇರುವುದು, ಗರ್ಭ ಕಟ್ಟಿದರೂ ಪದೇ ಪದೇ ಗರ್ಭಪಾತವಾಗುವುದು ಇತ್ಯಾದಿ ಕಾರಣಗಳಿಂದ ರಾಸುಗಳು ಕರು ಹಾಕಲು ಸಾಧ್ಯವಾಗದೇ ಬರಡು ಜಾನುವಾರುಗಳೆಂದು ಕರೆಯಿಸಿಕೊಳ್ಳುತ್ತವೆ.. ಅದಕ್ಕೆ ತಜ್ಞ ವೈದ್ಯರಿಂದ ಆಧುನಿಕ ಚಿಕಿತ್ಸೆಗಳ ಮೂಲಕ ಎಲ್ಲಾ ಪ್ರಯತ್ನಗಳೂ ವಿಫಲವಾದಾಗ ರೈತರು ಹತಾಶೆಯಿಂದ…

Read more
ಶುಂಠಿ - ಉತ್ತಮ ಬೀಜದ ಗಡ್ಡೆ ಆಯ್ಕೆ.

ಶುಂಠಿ – ಉತ್ತಮ ಬೀಜದ ಗಡ್ಡೆ ಆಯ್ಕೆ.

ಶುಂಠಿಯ ಬಿತ್ತನೆ  ಗಡ್ಡೆ ಮಾರಲು ಅದೆಷ್ಟು ಏಜೆಂಟರೋ. ಈಗಲೇ ಅವರ ವ್ಯವಹಾರ ಕುದುರುವುದು. ಅಮಾಯಕ  ಹೊಸ ಬೆಳೆಗಾರರು ಇವರ ಬಲೆಗೇ ಬೀಳುವುದು.  ಹೆಚ್ಚಿನ ರೈತರು ಬೀಜದ ಗಡ್ಡೆ ಆಯ್ಕೆ ಮಾಡುವಾಗ ತಪ್ಪುತ್ತಾರೆ. ಇದರಿಂದ ಮುಂದೆ ಬೆಳೆಯಲ್ಲಿ ರೋಗಗಳು ಖಾಯಂ ಆಗುತ್ತವೆ.ಶುಂಠಿಯ ಬೆಳೆಯಲ್ಲಿ ರೋಗ ಮುಕ್ತ  ಬಿತ್ತನೆ ಗಡ್ದೆಯೇ ಪ್ರಮುಖ ಹೆಜ್ಜೆ ! ಶುಂಠಿ ಬೆಳೆಸಬೇಕೆಂದಿರುವಿರಾದರೆ ನೀವು ಬೆಳೆ  ಇರುವ ಹೊಲವನ್ನು ನೋಡಿ ಬೀಜದ ಗಡ್ಡೆ ಆಯ್ಕೆ ಮಾಡಬೇಕು ಎನ್ನುತ್ತಾರೆ. ಹಲವಾರು ವರ್ಷಗಳಿಂದ ಶುಂಠಿ ಬೆಳೆಯುವ ಅನುಭವಿಗಳು ತಮಗೆ…

Read more

ತೆಂಗು – ಹೈಬ್ರೀಡ್ ತಳಿ ಮಾತ್ರ ಬೆಳೆಸಿ.

ಹೈಬ್ರೀಡ್ ತಳಿಗಳು ಎಂದರೆ ಎರಡು ಉತ್ತಮ ತಳಿಗಳ ಮಧ್ಯೆ ಕ್ರಾಸಿಂಗ್ ಮಾಡಿ ಪಡೆಯಲಾದ ಹೊಸ ತಳಿ.   ಹೈಬ್ರೀಡ್  ಎಂದರೆ ಖಾತ್ರಿಯಾಗಿ ಅಧಿಕ ಇಳುವರಿ ನೀಡಬಲ್ಲ ತಳಿಗಳು. ಹೈಬ್ರೀಡ್ ಬೆಳೆದರೆ ಬೇಗ ಇಳುವರಿ ಪ್ರಾರಂಭವಾಗಿ, ಕೊಯಿಲು ಸುಲಭವಾಗುತ್ತದೆ.  ನಮ್ಮ ಸುತ್ತಮುತ್ತ ಇರುವ ಬಹುತೇಕ ತಳಿಗಳು ಎತ್ತರದ ತಳಿಗಳು. ಇದರಲ್ಲಿ ಫಸಲು ಪ್ರಾರಂಭವಾಗಲು 5-7 ವರ್ಷ ಬೇಕು. ಹಾಗೆಯೇ ನಮ್ಮಲ್ಲಿ ಕೆಲವು ಹತ್ತಿರದ ಗಂಟಿನ ಗಿಡ್ಡ ತಳಿಗಳಾದ ಗೆಂದಾಳಿ(COD, CYD) ಹಸಿರು (CGD Gangabondam) ತಳಿಗಳು ಇವೆ. ಗಿಡ್ಡ ತಳಿಯ…

Read more

ಮಂಗ-ಪಕ್ಷಿಗಳಿಂದ ಬೆಳೆ ರಕ್ಷಣೆ.

ಹಣ್ಣು ಹಂಪಲು  ಬೆಳೆಯಲ್ಲಿ  ಸುಮಾರು 50 % ಕ್ಕೂ ಹೆಚ್ಚು ಹಣ್ಣು ಹಕ್ಕಿ- ಬಾವಲಿ, ಮಂಗ, ಅಳಿಲು ನವಿಲು ಮತ್ತು ಪತಂಗಗಳಿಂದ ಹಾನಿಯಾಗುತ್ತದೆ. ಕೆಲವು ತಿಂದು ಹಾಳಾದರೆ ಮತ್ತೆ ಕೆಲವು ಗಾಯ ಮಾಡಿ  ಹಾಳು ಮಾಡುತ್ತವೆ. ಇದನ್ನು ತಡೆಯಲು ಇರುವ ಏಕೈಕ ಉಪಾಯ  ಬಲೆ ಹಾಕುವುದು.. ಬಲೆ ಹಾಕುವ ಪದ್ದತಿ ಸುಮಾರು 25-30 ವರ್ಷಗಳಿಂದ ದ್ರಾಕ್ಷಿ ಬೇಸಾಯದಲ್ಲಿ ಚಾಲ್ತಿಯಲ್ಲಿ  ಇತ್ತು. ಈಗ ಇದು ಬಹುತೇಕ ಹಣ್ಣಿನ ಬೆಳೆಗಳಲ್ಲಿ ಬಳಸಲ್ಪಡುತ್ತದೆ. ಬಲೆ ಇಲ್ಲದಿದ್ದರೆ ಹಣ್ಣೇ ಇಲ್ಲ. ಬೇಸಿಗೆಯಲ್ಲಿ ಬಹುತೇಕ…

Read more

5 ವರ್ಷದೊಳಗೆ ನೀರು ಬರಿದಾಗುತ್ತದೆ. ಎಚ್ಚರ . !!

ಅಂತರ್ಜಲ ಒಂದು ಸಂಗ್ರಹಿತ ಜಲ ಮೂಲ. ಇದನ್ನು ಎಷ್ಟು ಹಿತಮಿತವಾಗಿ ಬಳಕೆ ಮಾಡುತ್ತೇವೆಯೋ ಅಷ್ಟು ಸಮಯ ಅದು ನೀರು ಕೊಡುತ್ತಿರುತ್ತದೆ. ಅಂತರ್ಜಲವನ್ನು ನಾವು ಸಾಮೂಹಿಕವಾಗಿ ಉಳಿಸುವ ಪ್ರಯತ್ನ ಮಾಡಿದರೆ ಉಳಿಸಬಹುದು. ಈಗ ನಾವು  ಮಾಡುತ್ತಿರುವ ಅನಾಚಾರದಲ್ಲಿ ಇದು ಕೆಲವೇ ಸಮಯದಲ್ಲಿ ನಮಗೆ ಕೈ ಕೊಡುತ್ತದೆ. ರಾಜ್ಯ – ದೇಶದಾದ್ಯಂತ ಅಂತರ್ಜಲ ಮಟ್ಟ ಕುಸಿಯುತ್ತಿದೆ. ಸುಮಾರು 25  ವರ್ಷದ ಹಿಂದೆ ಅಂತರ್ಜಲ ಮಟ್ಟ 250 ಅಡಿಯಲ್ಲಿದ್ದುದು, ಈಗ 500 ಅಡಿಗೆ ಮುಟ್ಟಿದೆ. ಅಪವಾದವಾಗಿ ಕೆಲವು ಕಡೆ ಸ್ವಲ್ಪ ಮೇಲೆಯೇ…

Read more

ಉತ್ತಮ ಮೆಣಸಿಗೆ 40 ರೂ. ಬೆಲೆ ಹೆಚ್ಚು.

ನಾವು ಹೆಚ್ಚಾಗಿ ಕೊಯಿಲಿನ ಸಮಯದಲ್ಲಿ ಅವಸರ ಮಾಡುತ್ತೇವೆ. ಇನ್ನೇನು ಜನವರಿ ಬಂದಿದೆ. ಕರಿಮೆಣಸು ಬೆಳೆದು ಹಣ್ಣಾದರೆ ಹಕ್ಕಿಗಳು ತಿಂದು ನಷ್ಟವಾಗುತ್ತದೆ ಎಂದು ಬಲಿಯುವ ಮುನ್ನ ಕೊಯಿಲಿಗೆ ಪ್ರಾರಂಭಿಸುತ್ತೇವೆ. ಇದರಿಂದ ನಾವು 25 % ಕ್ಕೂ ಹೆಚ್ಚು ತೂಕ ನಷ್ಟ ಮಾಡಿಕೊಳ್ಳುತ್ತೇವೆ. ಈ ನಷ್ಟವನ್ನು ಕಡಿಮೆ ಮಾಡಿಕೊಂಡರೆ 1 ಕ್ವಿಂಟಾಲು ಇಳುವರಿ ಪಡೆಯುವ ಬದಲು ಇನ್ನೂ 25 ಕಿಲೋ ಹೆಚ್ಚು ಪಡೆಯಬಹುದು ಎಂಬುದು ಕೆಲವು ಉತ್ತಮ ಮೆಣಸು ಬೆಳೆಗಾರರ ಅಭಿಪ್ರಾಯ. ಉತ್ತಮ ಗಾರ್ಬಲ್ ಮಾಡಿದ ಮೆಣಸಿಗೆ  ಇತರ ಮೆಣಸಿಗಿಂತ…

Read more

ಮೆಣಸಿನ ಎಲೆ ಮುರುಟುವಿಕೆ ನಿಯಂತ್ರಣ

ಮೆಣಸಿನ ಕಾಯಿಯ ಅತೀ ದೊಡ್ದ ಆರ್ಥಿಕ ಬೆಳೆಯಾಗಿದ್ದು, ಮೆಣಸು ಬೆಳೆಗಾರರು ಈ ಬೆಳೆ ಉಳಿಸಿಕೊಳ್ಳುವುದಕ್ಕಾಗಿ ಸಾಕಷ್ಟು ಖರ್ಚು ಮಾಡುತ್ತಾರೆ. ಇದರಲ್ಲಿ ಹೆಚ್ಚಿನ ಪಾಲು ಕೀಟ ನಿರ್ವಹಣೆಗೇ ತಗಲುತ್ತದೆ. ಈ ಕೀಟಗಳಲ್ಲಿ ಮುಖ್ಯವಾದುದು, ಥ್ರಿಪ್ಸ್ ನುಶಿ ಮತ್ತು ಜೇಡರ ನುಶಿ. ಯಾರೇ ಬೆಳೆ ಬೆಳೆದರೂ ಈ ಕೀಟ ಅವರನ್ನು  ಬಿಟ್ಟಿದ್ದಿಲ್ಲ. ಇನ್ನೇನು ಸಸಿ ಬೆಳೆದು ಹೂ ಬಿಡಲು ಪ್ರಾರಂಭವಾಗುತ್ತದೆ ಎನ್ನುವಾಗಈ ಕೀಟ ಹಾಜರ್. ಎಲೆಗಳು ಮುರುಟಿಕೊಂಡು ಅಲ್ಲಿಗೇ ಬೆಳೆವಣಿಗೆ ಕುಂಠಿತವಾಗುತ್ತದೆ. ಥಿಪ್ಸ್ ನುಶಿ ಏನು – ಹೇಗೆ: ಇದು…

Read more
error: Content is protected !!