ಇಲಾಖೆಗಳ ಮುಖಾಂತರ ಕೀಟನಾಶಕ ಮಾರಾಟ!.

ಬೆಳೆಒಳಸುರಿಗಳಾದ ಕೀಟನಾಶಕ – ರೋಗನಾಶಕ- ಕಳೆನಾಶಕ ಬಳಸಿ ಕೃಷಿಕರ ಆರೋಗ್ಯ ಕೆಡುತ್ತದೆ. ಪರಿಸರದ ಜೀವ ವೈವಿಧ್ಯಗಳ ಮೇಲೆ  ತುಂಬಾ ತೊಂದರೆ ಆಗುತ್ತದೆ. ಇದನ್ನು ಹಿತ ಮಿತ ಬಳಸಲು ನಮ್ಮ ದೇಶದ ಕೃಷಿಕರಿಗೆ ವೈಜ್ಞಾನಿಕ ಶಿಕ್ಷಣ ಇಲ್ಲ. ಕಾನೂನು ಕಟ್ಟು ನಿಟ್ಟು ಮಾಡಿದರೆ , ಮದುವೆಯಾಗಿ ಮಕ್ಕಳನ್ನು ಮಾಡಬಾರದು ಎಂದು ತಾಕೀತು ಮಾಡಿದಂತಾತ್ತದೆ. ಇದೆಲ್ಲಕ್ಕೂ ಪರಿಹಾರ ನಮ್ಮ ದೇಶದ ಕೃಷಿ ತೋಟಗಾರಿಕೆ ಅಭಿವೃದ್ದಿ ಇಲಾಖೆಗಳೇ ಇದನ್ನು ರೈತರಿಗೆ ಮಾರಾಟ ಮಾಡುವುದು ಸರಿಯಲ್ಲವೇ?. ಹೊಸ  ಮಸೂದೆ: ಭಾತರ ಸರಕಾರ ಕಳಪೆ…

Read more

ವಿಷ ಮಿಶ್ರಿತ -ನೇಂದ್ರ ಬಾಳೆ ಹಣ್ಣು

ಊಟದ ಹೊತ್ತಾಗಿತ್ತು. ಕೆ ಎಸ್ ಆರ್ ಟಿ ಸಿ ಬಸ್ ನವರ ಊಟದ ಹೋಟೆಲಿನಲ್ಲಿ ಉಣ್ಣಲು ಮನಸ್ಸು ಕೇಳಲಿಲ್ಲ. ಬಾಳೆ ಹಣ್ಣು ತಿನ್ನೋಣ ಎಂದು ಗುಂಡ್ಯದಲ್ಲಿ ಒಂದು ಅಂಗಡಿಯಲ್ಲಿ ಬಾಳೆ ಹಣ್ಣು ಕೇಳಿದರೆ ಅಂಗಡಿಯವನು ಹೇಳುತ್ತಾನೆ, ಈಗ ನೇಂದ್ರ ಬಿಟ್ಟರೆ ಬೇರೆ ಬಾಳೆ ಹಣ್ಣೇ ಇಲ್ಲ. ಒಂದೆಡೆ ಮಂಗಗಳ ಕಾಟ. ಇನ್ನೊಂದೆಡೆ ಬೆಲೆ ಇಲ್ಲ. ಎಲ್ಲರೂ ಹೆಚ್ಚು ಬೆಲೆ  ದೊರೆಯುತ್ತದೆ ಎಂದು ನೇಂದ್ರವನ್ನೇ ಬೆಳೆಯುತ್ತಾರೆ. ಇದರಿಂದಾಗಿ ಸ್ಥಳೀಯ ಬಾಳೆ ಕಾಯಿಯೇ ಕಡಿಮೆಯಾಗಿದೆ.  ಫೋರೇಟ್ ಹಾಕಿದರೆ ಮಂಗಸಹ ಬರುವುದಿಲ್ಲವಂತೆ….

Read more

ಬೇಗ ಬೆಳೆಯುವ, ನಾರು ಇಲ್ಲದ ಹರಿವೆಯ ತಳಿಗಳು.

ಹರಿವೆ ಸೊಪ್ಪು ಒಂದು ಪೌಷ್ಟಿಕ ತರಕಾರಿ. ಇದನ್ನು ಅಮರಾಂತಸ್,(Amaranthus sp) ದಂಟಿನ ಸೊಪ್ಪು ಎಂಬ ಹೆಸರುಗಳಿಂದ ಕರೆಯಲಾಗುತ್ತದೆ.  ದೇಹದ ರಕ್ಷಣೆಗೆ ಬೇಕಾದ ಜೀವ ಸತ್ವಗಳನ್ನು ಒದಗಿಸುವ ಸೊಪ್ಪು ತರಕಾರಿ. ಸಾವಿರಾರು ವರ್ಷಗಳಿಂದಲೂ ಇದು ನಮ್ಮ ದೇಶದಲ್ಲಿ ಬೆಳೆಯಲ್ಪಡುತ್ತಿತ್ತು. ಭಾರತವೇ ಇದರ ಮೂಲ ಎನ್ನಬಹುದು. ಬೇರೆ ದೇಶಗಳಲ್ಲೂ ಇದು ಬೆಳೆಯಲ್ಪಡುತ್ತಿದೆ.           ಹರಿವೆಯಲ್ಲಿ ನೂರಾರು ಪ್ರಬೇಧಗಳಿವೆ. ದಂಟಿನ ಉದ್ದೇಶಕ್ಕೆ, ಸೊಪ್ಪಿನ ಉದ್ದೇಶಕ್ಕೆ, ಬೀಜದ ಉದ್ದೇಶಕ್ಕೆ  ಮತ್ತೆ ಕೆಲವು ಕಳೆ ಸಸ್ಯಗಳಾಗಿಯೂ ಇವೆ. ವಾಣಿಜ್ಯ ತಳಿಗಳು: ದೇಶದ…

Read more
ತೆಂಗಿನ ಕಾಂಡದಲ್ಲಿ ರಕ್ತ ಸೋರುವುದೇಕೆ?

ತೆಂಗಿನ ಕಾಂಡದಲ್ಲಿ ರಕ್ತ ಸೋರುವುದೇಕೆ?

ಕಾಂಡ ಎಂದರೆ ಅದರಲ್ಲಿ ಎಲ್ಲಾ ಜೀವ ಸತ್ವಗಳೂ ಸರಬರಾಜು ಆಗುವ ಸ್ಥಳ. ಇಲ್ಲಿ ಯಾವುದೇ ಗಾಯವಾದರೂ ರಕ್ತ ಸ್ರವಿಸಿದಂತೆ ರಸಸ್ರಾವ ಆಗುತ್ತದೆ.ಗಾಯ ಅಲ್ಲದೆ ಕೆಲವು ರೋಗ ಕಾರಕಗಳ ಸೋಂಕಿನಿಂದಲೂ ರಸಸ್ರಾವ ಆಗುತ್ತದೆ. ಇದನ್ನು ಸ್ಟೆಮ್ ಬ್ಲೀಡಿಂಗ್ ಎನ್ನುತ್ತಾರೆ. ಇದೊಂದು ಪ್ರಮುಖ ರೋಗವಾಗಿದ್ದು, ತೆಂಗು ಬೆಳೆಯುವ ಬಹುತೇಕ ಪ್ರದೇಶಗಳಲ್ಲಿ  ಇದೆ. ಮೊದಲಾಗಿ ಇದು ಶ್ರೀಲಂಕಾ ದೇಶದಲ್ಲಿ ಕಂಡು ಬಂತು. ನಂತರ ನಮ್ಮ ದೇಶ ಮತ್ತು ತೆಂಗು ಬೆಳೆಯಲಾಗುವ ಇತರ ದೇಶಗಳಿಗೂ ಪ್ರಸಾರವಾಯಿತು. ಹೇಗೆ ರೋಗ ಬರುತ್ತದೆ: ಕಾಂಡದಲ್ಲಿ ರಸ…

Read more
lettuce

ಈ ಸೊಪ್ಪು ತರಕಾರಿಗಳಿಗೆ ಭಾರೀ ಬೇಡಿಕೆ.

ಕಾಲಸ್ಥಿತಿಗನುಗುಣವಾಗಿ ಮನುಷ್ಯನ ಆಹಾರಾಭ್ಯಾಸಗಳು ಮೇಲ್ದರ್ಜೆಗೇರುತ್ತವೆ. ಈಗ ಅಧಿಕ ಸತ್ವಾಂಶಗಳ ವಿದೇಶೀ ತರಕಾರಿಗಳ ಸರದಿ. ಈ ಸೊಪ್ಪು –ತರಕಾರಿಗಳಲ್ಲಿ ದೇಹ ಪೋಷಕ ಗಳು ಹೇರಳವಾಗಿದ್ದು, ಬೆಳೆಸಿದವರಿಗೆ ಕೈತುಂಬಾ ಸಂಪಾದನೆಯೂ ದೊರೆಯುತ್ತದೆ. ಇದು ನಮ್ಮ ರಾಜ್ಯದ ಎಲ್ಲಾ ಕಡೆ ಬೆಳೆಯುತ್ತದೆ. ನಮ್ಮಲ್ಲಿ ಉತ್ತರ ಕರ್ನಾಟಕದ ಕಡೆ ಉಟದ ಜೊತೆಗೆ ಕೆಲವು ಸೊಪ್ಪು ತರಕಾರಿ- ಈರುಳ್ಳಿ, ಮೂಲಂಗಿ ಕೊಡುವುದು ವಾಡಿಕೆ.   ಅದೇ ರೀತಿಯಲ್ಲಿ ವಿದೇಶಗಳಲ್ಲಿ ಕೆಲವು ಸೊಪ್ಪು ತರಕಾರಿಗಳನ್ನು ಜೊತೆಗೆ ಕೊಡುತ್ತಾರೆ. ಈ ಅಭ್ಯಾಸ ಈಗ ನಮ್ಮ ನಗರಗಳ ಪ್ರತಿಷ್ಟಿತ…

Read more

ಪಪ್ಪಾಯ – ಇದು ಸಂಜೀವಿನಿ ಸಸ್ಯ.

ರೋಗ ಇರಲಿ  ಇಲ್ಲದಿರಲಿ. ಕೆಲವು ಹಣ್ಣು ಹಂಪಲು ಸೊಪ್ಪು ತರಕಾರಿಗಳು ಔಷಧೀಯ ಗಿಡಗಳನ್ನು ಅಲ್ಪ ಸ್ವಲ್ಪಬಳಕೆ ಮಾಡುತ್ತಾ ಇದ್ದರೆ  ದೇಹಕ್ಕೆ ರೋಗ ನಿರೋಧಕ ಶಕ್ತಿ ಬರುತ್ತದೆ. ರೋಗ ಬಾರದಂತೆಯೂ, ಬಂದರೆ  ಬೇಗ ಗುಣಮುಖವಾಗುವಂತೆಯೂ ಇದು ನೆರವಾಗುತ್ತದೆ. ಇಂತಹ ಗಿಡಗಳಲ್ಲಿ ಒಂದು ಪಪ್ಪಾಯಿ. ಪಪ್ಪಾಯಿ ಶಕ್ತಿ ಗಿಡ: ಪಪ್ಪಾಯಿ ತಿನ್ನುವಾಗ ಅದರ ಸಿಪ್ಪೆ ಮತ್ತು ಬೀಜಗಳನ್ನು ಎಸೆಯಲಾಗುತ್ತದೆ. ಆದರೆ ಬೀಜದಲ್ಲೂ ಉತ್ತಮ ಔಷಧೀಯ ಗುಣಗಳು ಇವೆ ಎನ್ನುತ್ತಾರೆ. ಪಪ್ಪಾಯ ಬೀಜದಲ್ಲಿ  ಲಿವರ್ ಸಂಬಂಧಿತ ಕಾಯಿಲೆ ದೂರ ಮಾಡುವ ಶಕ್ತಿ…

Read more

ಕೊಕ್ಕೋ ಬೆಳೆದರೆ ಪ್ರೂನಿಂಗ್ ಅಗತ್ಯ.

ಕೊಕ್ಕೋವನ್ನು  ಅಡಿಕೆ, ತೆಂಗಿನ ತೋಟದಲ್ಲಿ ಮಿಶ್ರ ಬೆಳೆಯಾಗಿ ಬೆಳೆಯಬಹುದು. ಕೊಕ್ಕೋ ಸಸ್ಯಗಳನ್ನು  ಉತ್ತಮವಾಗಿ ಆರೈಕೆ ಮಾಡಿದಲ್ಲಿ ಹೆಚ್ಚುವರಿ ಕೊಡು ಪಡೆಯಬಹುದು. ನಾವು ಕಂಡುಕೊಂಡಂತೆ  ಅರೆಮಲೆನಾಡು  ಭಾಗದಲ್ಲಿ ಕೊಕ್ಕೋ ಬಹಳ ಉತ್ತಮವಾಗಿ ಬರುತ್ತದೆ. ರೋಗ ತೊಂದರೆ ಇಲ್ಲ. ಕೊಕ್ಕೋ ಸಸ್ಯವು ವರ್ಷದಲ್ಲಿ ಎರಡು ಬಾರಿ ಹೂ ಬಿಟ್ಟು ಎರಡು  ಬೆಳೆ  ಕೊಡುತ್ತದೆ. ಮೊದಲನೇ ಬೆಳೆ ಬೇಸಿಗೆ ಕಾಲದಲ್ಲೂ ಎರಡನೇ ಬೆಳೆ ಮಳೆಗಾಲದಲ್ಲೂ  ದೊರೆಯುತ್ತದೆ. ಹೂವು ಬಿಟ್ಟು 6 ತಿಂಗಳಿಗೆ  ಬೆಳೆಯುತ್ತದೆ. ಮಾರ್ಚ್ ತಿಂಗಳಿನಿಂದ ಜುಲೈ ತನಕ ಅಧಿಕ ಇಳುವರಿ….

Read more
ಬೇರು ಹುಳ ಬಾಧಿತ ತೆಂಗು

ತೆಂಗಿಗೂ ತೊಂದರೆ ಮಾಡುತ್ತಿದೆ- ಬೇರು ಹುಳ

ಎಷ್ಟೇ ಪೊಷಕಾಂಶ ಒದಗಿಸಿದರೂ ಸ್ಪಂದಿಸದೆ, ಮರದ ಗರಿಗಳು ಸದಾ ತಿಳಿ ಹಸುರು ಬಣ್ಣದಲ್ಲಿದ್ದರೆ, ಇಳುವರಿ ತೀರಾ ಕಡಿಮೆ  ಇರುವುದೇ ಆಗಿದ್ದರೆ   ಅಂತಹ ಮರಕ್ಕೆ ಬೇರು ಹುಳದ ತೊಂದರೆ  ಇದೆ ಎಂದು ಸಂಶಯ ಪಡಬಹುದು. ತೆಂಗಿನ ಮರಕ್ಕೆ  ಸಾಕಷ್ಟು ನೀರು ಒದಗಿಸಿ- ಗೊಬ್ಬರ ಕೊಡಿ ಒಂದು ವರ್ಷ ತನಕ ಕಾಯಿರಿ. ಎಲೆಗಳು ಹಸುರಾಗದೇ, ಗರಿಗಳು ಹೆಚ್ಚದೇ ಇದ್ದರೆ ಅಂತಹ ಮರಗಳಿಗೆ ಬೇರು ಹುಳ ಬಾಧಿಸಿದೆ ಎಂದು ಖಾತ್ರಿ ಮಾಡಿಕೊಳ್ಳಬಹುದು. ಕರ್ನಾಟಕದ ಅಡಿಕೆ ಬೆಳೆಯುವ ಪ್ರದೇಶಗಳಲ್ಲೆಲ್ಲಾ ಬಹುತೇಕ ಹೆಚ್ಚು ಕಡಿಮೆ …

Read more

ಗರಿ ಕತ್ತರಿಸಿ- ಅಡಿಕೆ ಸಸಿ ಬೆಳೆವಣಿಗೆ ಹೆಚ್ಚಿಸಿ.

ಅಡಿಕೆ ಸಸಿ ಬೆಳೆಸುವಾಗ ಮೊದಲೆರಡು  ವರ್ಷ ಉತ್ತಮವಾಗಿ ಬೆಳೆಸಿದರೆ ಅದರ ಭವಿಷ್ಯವೇ ಬದಲಾಗುತ್ತದೆ. ಮೊದಲ ಎರಡು ವರ್ಷ  ಬೆಳೆವಣಿಗೆ  ಉತ್ತೇಜಿಸಲು ಎಲೆ ಪ್ರೂನಿಂಗ್  ಸಹಕಾರಿ. ಇದನ್ನು ಕೆಲವು ರೈತರು ಮಾಡಿ ನೋಡಿದ್ದಾರೆ. ಹಿಂದೊಂಮ್ಮೆ ಅಡಿಕೆ ಸಸ್ಯದ ಗರಿ ಕತ್ತರಿಸಿ ಸಸ್ಯವನ್ನು ಕುಬ್ಜವಾಗಿಸಬಹುದು ಎಂಬ ಪ್ರಚಾರ ಬಹಳ ಸುದ್ದಿಯಾಗಿತ್ತು. ಆದರೆ ಅದರ ಹಿಂದೆ ಹೋದಾಗ ತಿಳಿದದ್ದು ಸಸಿ ಗಿಡ್ಡವಾಗುವುದಲ್ಲ. ಸಸ್ಯ ಬೆಳವಣಿಗೆ ಸ್ವಲ್ಪ ಹೆಚ್ಚಳವಾಗುವುದು. ಹಾಗೆಂದು ಎಲೆಗಳನ್ನೆಲ್ಲಾ ಕತ್ತರಿಸುವುದಲ್ಲ. ಹಿತ ಮಿತ ಪ್ರೂನಿಂಗ್ ಅಷ್ಟೇ.  ಮನುಷ್ಯ ಸಣ್ಣ ಪ್ರಾಯದಲ್ಲಿ …

Read more

ಕೆಂಪಡಿಕೆ ರಾಶಿ- 40,000 ಆಗಬಹುದು ಎನ್ನುತ್ತಾರೆ.

ಉತ್ತರ ಭಾರತದ ವ್ಯಾಪಾರಿಗಳು ಅಡಿಕೆ ಬೇಕು ಎಂದು ಕೇಳಿಕೊಂಡು ಬರುತ್ತಿದ್ದಾರೆ. ಈ ಕಾರಣದಿಂದ ಸ್ಥಳೀಯ ವ್ಯಾಪಾರಿಗಳು ದರವನ್ನು ಸ್ವಲ್ಪ ಸ್ವಲ್ಪವೇ ಏರಿಕೆ ಮಾಡುತ್ತಿದ್ದಾರೆ. ಒಂದು ವಾರದಿಂದ ಚಾಲಿ ದರ ಕ್ವಿಂಟಾಲಿಗೆ 300 ರೂ. ಹೆಚ್ಚಳವಾಗಿದೆ. ಕೆಂಪು ಅಡಿಕೆಯ ಬೆಲೆ 2000 ರೂ. ಹೆಚ್ಚಾಗಿದೆ. 3-4 ವರ್ಷಗಳಿಂದ ಕೆಂಪಡಿಕೆಯಲ್ಲಿ ದರದಲ್ಲಿ ಏನೂ ದೊಡ್ಡ ಏರಿಕೆ ಆಗದ ಕಾರಣ ಈ ಬಾರಿ ಸ್ವಲ್ಪ ಏರಿಕೆ ಆಗುವ ಸಾಧ್ಯತೆ ಇದೆ ಎನ್ನುತ್ತಾರೆ ಕೆಲವು  ವ್ಯಾಪಾರದ ಅನುಭವಿಗಳು. ಕೆಲವು ಮೂಲಗಳ ಪ್ರಕಾರ ಈಗ…

Read more
error: Content is protected !!