ಕೃಷಿಕರು ಮೋಸಕ್ಕೊಳಗಾಗುವ ಅಮಾಯಕರು.

ಕೃಷಿಕ ಎಂದರೆ ಕಿಸಕ್ಕೆಂದು ನಗೆಯಾಡುವ ಈ ಸಮಾಜ, ಅವರ ಹಣಕಾಸಿನ ಚಲಾವಣೆಯಲ್ಲೇ ತಮ್ಮ ಬದುಕನ್ನು ರೂಪಿಸಿಕೊಳ್ಳುತ್ತಾರೆ.  ನಯವಾಗಿ ರೈತನಿಗೆ ದೊಡ್ದ ದೊಡ್ದ ಟೋಪಿಯನ್ನೂ ಹಾಕುವವರೂ ಇವರೇ.  ಕೃಷಿಕರ ಹುಟು ಗುಣ:  ‘ಮೋಸ ಹೋಗುವವರು ಇದ್ದ ಕಾರಣ ಮೋಸ ಮಾಡುವವರು ಇರುತ್ತಾರೆ’ ಇದು ಹೇಳಲಿಕ್ಕೆ ಮಾತ್ರ ಆಗುತ್ತದೆಯೇ ಹೊರತು ಮೋಸ ಹೋಗುವುದಲ್ಲ. ಕೃಷಿಕರು ಹುಟ್ಟು ಗುಣದಲ್ಲಿ ಸಜ್ಜನ ಗುಣದವರು. ಇವರು ಯಾರಿಗೂ ವಂಚನೆ ಮಾಡುವುದಿಲ್ಲ. ಬೇರೆಯವರು ಮೋಸ ಮಾಡುತ್ತಾರೆ ಎಂದು ಕಲ್ಪನೆಯನ್ನೂ ಮಾಡುವುದಿಲ್ಲ. ಕೃಷಿಕರಲ್ಲಿ ಲಾಭ ಬಡುಕತನ ಇಲ್ಲ….

Read more
ಸತ್ವ ಉಳ್ಳ ಲಂಟಾನ ಸಸ್ಯ

ಈ ಸಸ್ಯಗಳಲ್ಲಿ ವಿಶೇಷ ಗುಣಗಳು ಇವೆ.

ನಮ್ಮ ಸುತ್ತಮುತ್ತ ಇರುವ ಕೆಲವು ಗಿಡಗಳು ಬೇರೆ ಬೇರೆ ಸತ್ವಗಳನ್ನು ಒಳಗೊಂಡಿವೆ. ಕೆಲವು ಪೋಷಕವಾಗಿಯೂ  ಮತ್ತೆ ಕೆಲವು ಕೀಟ – ರೋಗ ನಿಯಂತ್ರಕವಾಗಿಯೂ ಕೆಲಸ ಮಾಡುತ್ತವೆ. ಇತ್ತೀಚಿನ ದಿನಗಳಲ್ಲಿ ಇವುಗಳನ್ನು ಕಳೆ ನಾಶಕಗಳು ಬಲಿ ತೆಗೆದುಕೊಳ್ಳುತ್ತಿವೆ. ರೈತರೇ ಇವುಗಳನ್ನು ಅನವಶ್ಯಕ  ಕೊಲ್ಲಬೇಡಿ. ಅದರ ಸದುಪಯೋಗ ಮಾಡಿಕೊಳ್ಳಿ. ಏನಿದೆ ಸತ್ವ: ಸಾಮಾನ್ಯವಾಗಿ ಸಾವಯವ ವಿಧಾನದಲ್ಲಿ ಬೇಸಾಯ ಮಾಡುವಾಗ ಸಾರಜನಕ ಮೂಲವನ್ನು ಬೇಕಾದಷ್ಟು ಪ್ರಮಾಣದಲ್ಲಿ  ಹೊಂದಿಸಿಕೊಳ್ಳಲಿಕ್ಕಾಗುತ್ತದೆ. ಆದರೆ ರಂಜಕ ಮತ್ತು  ಪೊಟ್ಯಾಶಿಯಂ ಸತ್ವಗಳನ್ನು ಬೇಕಾದಷ್ಟು ಪ್ರಮಾಣದಲ್ಲಿ  ಹೊಂದಿಸಿಕೊಳ್ಳುವುದು ಕಷ್ಟವಾಗುತ್ತದೆ. ಇದರಿಂದ…

Read more
ಕಾಡು ಹಣ್ಣು ತಿನ್ನುತ್ತಿರುವ ಗುಬ್ಬಿ

ಗುಬ್ಬಿಗಳ ನಾಶಕ್ಕೆ ಟವರ್ ಮಾತ್ರ ಕಾರಣವಲ್ಲ.

ಗುಬ್ಬಿಗಳ ಸಂಖ್ಯೆ ಕಡಿಮೆಯಾಗಲು ಒಂದು ಕಾರಣ ಮೊಬೈಲ್ ಟವರ್ ಎನ್ನಲಾಗುತ್ತದೆ. ಆದರೆ ಮೊಬೈಲ್ ಟವರ್ ಬರುವ ಮುಂಚೆಯೇ ಇವು ಕಡಿಮೆಯಾಗಲಾರಂಭಿಸಿವೆ ಗೊತ್ತೇ? ಗುಬ್ಬಿಗಳ ನಾಶಕ್ಕೆ ಮೊಬೈಲ್ ಟವರ್ ಒಂದೇ ಕಾರಣ ಅಲ್ಲ. ನಮ್ಮ ಕೃಷಿ ಚಟುವಟಿಕೆ ಮತ್ತು ಹವಾಮಾನಗಳೂ ಒಂದು ಕಾರಣ. ಗುಬ್ಬಿಗಳು ಹಿಂದೆ ನಾವು ಸಣ್ಣವರಿದ್ದಾಗ ಮನೆಯ ಮಾಡಿನ ಸಂದುಗಳಲ್ಲಿ , ಚಾವಡಿಯ  ಆಡ್ದದ ಎಡೆಯಲ್ಲಿ ಗೂಡು ಕಟ್ಟಿ ಕುಳಿತುಕೊಳ್ಳುತ್ತಿತ್ತು. ಅದು ತನ್ನಷ್ಟಕ್ಕೇ ಅಲ್ಲಿಗೆ ಬಂದು ವಾಸ್ತವ್ಯ ಮಾಡುವುದು ವಾಡಿಕೆ. ಗುಬ್ಬಿಗಳು ಮನೆಯ ಮಕ್ಕಳಂತೆ ಆಗಿದ್ದವು.  ಅದು…

Read more

ಸಾವಯವ ಅಂಶ ಇಲ್ಲದಿದ್ದರೆ ಬೆಳೆ ಬರಲಾರದು.

ಕೃಷಿ ಮಾಡುವಾಗ ರಾಸಾಯನಿಕ ಗೊಬ್ಬರ ಒಂದನ್ನೇ ಮಣ್ಣಿಗೆ ಕೊಡುತ್ತಾ ಇದ್ದರೆ, ನಿಧಾನವಾಗಿ ಮಣ್ಣಿನ ರಚನೆ ಕೆಳಮಟ್ಟಕ್ಕೆ ಇಳಿಯುತ್ತದೆ. ಮಣ್ಣಿನ ರಚನೆ ವ್ಯತ್ಯಾಸವಾದರೆ ರಸಗೊಬ್ಬರಗಳು ಕೆಲಸ ಮಾಡುವುದಿಲ್ಲ. ಯಾವುದೇ ರಸ ಗೊಬ್ಬರಗಳನ್ನು ನೇರವಾಗಿ ಸಸ್ಯಗಳು ಬಳಕೆ ಮಾಡಿಕೊಳ್ಳಲಾರವು. ಮಣ್ಣಿನ ಜೀವಾಣುಗಳ ಸಹಕಾರದಿಂದ ಅವು ಸಸ್ಯಗಳಿಗೆ ಲಭ್ಯವಾಗುತ್ತದೆ. ಮಣ್ಣಿನಲ್ಲಿ ಜೀವಾಣುಗಳು ಇದ್ದರೆ ಅದು ಜೀರ್ಣಕ್ಕೊಳಪಡುತ್ತದೆ. ಫಲವತ್ತತೆ ಕಡಿಮೆಯಾದ ಮಣ್ಣಿನಲ್ಲಿ ಜೀವಾಣುಗಳ ಸಂಖ್ಯೆ ಕಡಿಮೆಯಾಗುತ್ತದೆ. ಆಗ ರಸ ಗೊಬ್ಬರಗಳ ಕ್ಷಮತೆಯೂ ಕಡಿಮೆಯಾಗುತ್ತದೆ. ಆದ ಕಾರಣ ಅಧಿಕ ಇಳುವರಿಗೆ  ಅಗತ್ಯವಿದ್ದರೆ ರಸಗೊಬ್ಬರ ಹಿತ…

Read more
Mite infection

ತರಕಾರಿ ಬೆಳೆಗಳಲ್ಲಿ ಎಲೆ ಮುರುಟುವುದಕ್ಕೆ ಸುರಕ್ಷಿತ ಪರಿಹಾರ.

ಚಳಿಗಾಲದಲ್ಲಿ ಹೆಚ್ಚಾಗಿ ಕಂಡು ಬರುವ ಈ ಎಲೆ ಮುರುಟುವ ಸಮಸ್ಯೆಗೆ ಕಾರಣ ಏನು ಮತ್ತು ಸುರಕ್ಷಿತ ಪರಿಹಾರ ಯಾವುದು ಎಂಬ ಬಗ್ಗೆ ಮಾಹಿತಿ ಇಲ್ಲಿದೆ. ತರಕಾರಿ  ಬೆಳೆ ವಾಣಿಜ್ಯಿಕವಾಗಿ ಮಾಡಿದರೂ ಈ ಸಮಸ್ಯೆ ಇದೆ.  ಮನೆಬಳಕೆಗೆ ಬೇಕಾದಷ್ಟೇ ಮಾಡಿದರೂ ಈ ಸಮಸ್ಯೆ  ಬೆನ್ನು ಬಿಡುವುದಿಲ್ಲ. ತರಕಾರಿ ಬೆಳೆಗಳು ವಿಶೇಷವಾಗಿ ರಾಸಾಯನಿಕ ಮುಕ್ತವಾಗಿದ್ದರೆ ಬೆಳೆಗಾರರಿಗೂ ಒಳ್ಳೆಯದು. ಬಳಕೆದಾರರಿಗೂ  ಒಳ್ಳೆಯದು. ಕೃಷಿಕರು ಕೀಟನಾಶಕ ಬಳಸುವುದರಿಂದ ಮೊದಲಾಗಿ ದೊಡ್ಡ ದುಷ್ಪರಿಣಾಮ ಉಂಟಾಗುವುದು ಸಿಂಪಡಿಸಿದವರಿಗೆ. ಅದನ್ನು ಉಸಿರಾಡಿದವರಿಗೆ, ಮೈಗೆ ಕೈಗೆ ತಾಗಿಸಿಕೊಂಡವರಿಗೆ ಪ್ರಾಥಮಿಕ…

Read more
ಅಡಿಕೆ ಮಾರುಕಟ್ಟೆ- ಕೆಂಪಡಿಕೆ ಹಿಂದೆ- ಚಾಲಿ ಮುಂದೆ.

 ಅಡಿಕೆ ಮಾರುಕಟ್ಟೆ- ಕೆಂಪಡಿಕೆ ಹಿಂದೆ- ಚಾಲಿ ಮುಂದೆ.   

ರಾಜ್ಯದ ಅಡಿಕೆ ಮಾರುಕಟ್ಟೆಯಲ್ಲಿ ದಿನಾಂಕ 11-08-2023ರ ಶುಕ್ರವಾರ ಒಟ್ಟು ಸುಮಾರು 425 ಟನ್  ಅಡಿಕೆ ವ್ಯವಹಾರ ನಡೆದಿದೆ. ಕಳೆದ ವಾರ ಯಾವುದೋ  ಸುದ್ದಿಯ ಕಾರಣಕ್ಕೆ ಕೆಂಪಡಿಕೆ ಧಾರಣೆಯಲ್ಲಿ  ಇಳಿಕೆ ಕಂಡು ಬಂತು. ಚಾಲಿ ಅಡಿಕೆಯ ಧಾರಣೆಯಲ್ಲಿ ಏರಿಕೆ ಆಗುತ್ತಾ ಇದೆ. ಆಗಸ್ಟ್  ತಿಂಗಳು ಸಪ್ಟೆಂಬರ್ ತಿಂಗಳಲ್ಲಿ ಇನ್ನೂ ಸ್ವಲ್ಪ ಏರಿಕೆ ಆಗಬಹುದು ಎಂಬ ಆಶಾಭಾವನೆ  ಮಾರಾಟಗಾರರ ಮಾಹಿತಿಯಿಂದ ಕೇಳಿ ಬರುತ್ತಿದೆ. ಕೆಂಪಡಿಕೆ ಧಾರಣೆ ಇಳಿಕೆ ತಾತ್ಕಾಲಿಕವಾಗಿದ್ದು, ತಿಂಗಳಾಂತ್ಯಕ್ಕೆ  ಇದೆ. ಕ್ವಿಂಟಾಲಿಗೆ ರೂ.1000 ದಷ್ಟಾದರೂ ಏರಬಹುದು ಎನ್ನುತ್ತಾರೆ. ಕಳೆದ…

Read more
ಬಟರ್ ಪ್ರೂಟ್ ಕಾಂಡ ಕೊರಕ ದುಂಬಿ ಕೊರೆದ ಭಾಗ

ಬಟರ್ ಫ್ರೂಟ್ ಮರಗಳು ಸಾಯುವುದಕ್ಕೆ ಕಾರಣ ಮತ್ತು ಪರಿಹಾರ.

ಬಟರ್ ಫ್ರೂಟ್ ಬೆಳೆ ಈಗ ಎಲ್ಲೆಂದರಲ್ಲಿ ಭಾರೀ ಪ್ರಮಾಣದಲ್ಲಿ ಬೆಳೆಯುತ್ತಿರುವ ಬೆಳೆಯಾಗಿದ್ದು, ಕಾಶ್ಮೀರದಿಂದ ಕನ್ಯಾಕುಮಾರಿಯ ವರೆಗೂ ಈ ಬೆಳೆಯ ಬಗ್ಗೆ ಜನ ಉತ್ಸುಕರಾಗಿದ್ದಾರೆ. ಬಹಳಷ್ಟು ಜನ  ಬೆಳೆ ಬೆಳೆಯಲು ಮುಂದಾಗಿದ್ದಾರೆ. ಆದರೆ ಬಹಳಷ್ಟು ಜನ ಬೆಳೆಸಿದ ಸಸಿ/ ಫಲ ಕೊಡುತ್ತಿರುವ  ಮರ ಕಾಣು ಕಾಣುತ್ತಿದ್ದಂತೆ  ಸಾಯುತ್ತಿವೆ.  ಮರಗಳು ಸಾಯುವುದಕ್ಕೆ ಕಾರಣ ಕಾಂಡ ಕೊರಕ ಕೀಟ. ಇದನ್ನು ನಿಯಂತ್ರಿಸದೆ ಇದ್ದರೆ ಆಕಾಂಕ್ಷೆಯಲ್ಲಿ ಬೆಳೆದ ಬೆಳೆ ನಾಶವಾಗುತ್ತದೆ. ಇದರ ನಿಯಂತ್ರಣ ವಿಧಾನ ಹೀಗೆ. ಬಟರ್ ಫ್ರೂಟ್ (Avocado) ಸಸ್ಯ ಸ್ವಲ್ಪ…

Read more

ಇಳುವರಿ ಕಡಿಮೆಯಾಗಲು ಕಾರಣ ಏನು ಗೊತ್ತೇ?

ಕೆಲವು ದೇಶಗಳಿಗೆ ಹೋಲಿಕೆ ಮಾಡಿದರೆ ನಮ್ಮ ಯಾವುದೇ ಬೆಳೆಯ ಇಳುವರಿ 50% ಕ್ಕೂ ಕಡಿಮೆ. ಬೇಸಾಯದ ಖರ್ಚು 50% ಹೆಚ್ಚು. ಇದು ಯಾಕೆ ಹೀಗಾಗುತ್ತಿದೆ ಎಂಬುದರ ಮಾಹಿತಿ ಇಲ್ಲಿದೆ. ವಿಯೆಟ್ನಾಂ ದೇಶದ ಕೃಷಿಯ ಮುಂದೆ ನಮ್ಮ ಕೃಷಿ ಏನೂ ಅಲ್ಲ. ಮಲೇಶಿಯಾದಲ್ಲಿ ತೆಂಗಿನ ಮರದಲ್ಲಿ 200 ಕ್ಕೂ ಹೆಚ್ಚು ಕಾಯಿಗಳಾಗುತ್ತವೆ. ಬ್ರೆಝಿಲ್ ನ ಕಾಫಿಯ ಇಳುವರಿ ನಮ್ಮದಕ್ಕಿಂತ ದುಪ್ಪಟ್ಟು. ಅದೇ ರೀತಿಯಲ್ಲಿ ಚೀನಾ ದೇಶದಲ್ಲೂ ನಮ್ಮಲ್ಲಿ ಬೆಳೆಯಲಾಗುವ ಎಲ್ಲಾ ನಮೂನೆಯ ಬೆಳೆಗಳಲ್ಲಿ ಇಳುವರಿ ತುಂಬಾ ಹೆಚ್ಚಾಗಿದೆ. ಎಲ್ಲಾ…

Read more
Nut meg mace

ಅಡಿಕೆ ತೋಟಕ್ಕೆ ಅತ್ಯುತ್ತಮ ಮಿಶ್ರ ಬೆಳೆ ಜಾಯೀಕಾಯಿ.

ಅಡಿಕೆ ತೋಟದಲ್ಲಿ ವಾರ್ಷಿಕ ಮಿಶ್ರ ಬೆಳೆಗಳಿಗಿಂತ  ಬಹುವಾರ್ಷಿಕ ಮಿಶ್ರ ಬೆಳೆಗಳಿದ್ದರೆ ತಲೆಬಿಸಿ ಇಲ್ಲ. ಮರ ಸಾಂಬಾರವಾದ ಜಾಯೀಫಲ ಎಂಬುದು  ಅಡಿಕೆ ಮರಗಳ ಜೊತೆಗೆ ಯಾವುದೇ ಸ್ಪರ್ಧೆ ನಡೆಸದೆ, ಒಂದೆಡೆ ಆದಾಯ ಮತ್ತೊಂದೆಡೆ ಗಾಳಿ ಮತ್ತು ಬಿಸಿಲು ತಡೆಗೆ ಸಹಕರಿಸುವ  ಧೀರ್ಘಾವಧಿಯ ಬೆಳೆ. ಅಡಿಕೆ ತೋಟಕ್ಕೆ ಹೊಂದುವ ಮಿಶ್ರ ಬೆಳೆಗಳಲ್ಲಿ ಕರಿಮೆಣಸು, ಕೊಕ್ಕೋ ಬಹುವಾರ್ಷಿಕ ಮಿಶ್ರ ಬೆಳೆಗಳು. ಆದರೆ ಅವುಗಳ ರಕ್ಷಣೆ, ನಿರ್ವಹಣೆಯ ತೆಲೆಬಿಸಿ ದೊಡ್ಡದು. ಮರ ಸಾಂಬಾರವಾದ  ಜಾಯೀ ಫಲಕ್ಕೆ ಇದೆಲ್ಲಾ ಯಾವುದೂ ಇಲ್ಲ. ನೆಟ್ಟರೆ ಬೆಳೆಯುತ್ತಿರುತ್ತದೆ….

Read more
ಬಟರ್ ಪ್ರೂಟ್ ನ ವಿಶೇಷ ತಳಿ ಹಾಸ್

ಬಟರ್ ಪ್ರೂಟ್ ನಲ್ಲಿ ಅಧಿಕ ಇಳುವರಿಯ ವಿಶೇಷ ತಳಿಗಳು.

ಬೆಣ್ಣೆ ಹಣ್ಣು, ಬಟರ್ ಪ್ರೂಟ್ ಅಥವಾ ಅವೆಕಾಡೋ (Avocado)ಈಗ ಭಾರೀ ಪ್ರಚಲಿತದಲ್ಲಿರುವ ಹಣ್ಣಿನ ಬೆಳೆಯಾಗಿದೆ. ತಾಜಾ ಹಣ್ಣಿಗಾಗಿ, ಸಂಸ್ಕರಣೆ ಉದ್ದೇಶಕ್ಕೆ ಚೆನ್ನಾಗಿ ಹೊಂದಿಕೆಯಾಗುವುದರಿಂದ  ಈ ಹಣ್ಣಿಗೆ ಪ್ರಾಮುಖ್ಯ ಸ್ಥಾನ ಬಂದಿದೆ. ಇದರ ಆರೋಗ್ಯ ಗುಣ ಮತ್ತು ಬೇಡಿಕೆಯಿಂದಾಗಿ ಮಾರುಕಟ್ಟೆಯಲ್ಲಿ ಉತ್ತಮ ದರವೂ ಲಭ್ಯ. ಇತ್ತೀಚೆಗೆ 2015 ರ ತರುವಾಯ ಈ ಹಣ್ಣಿಗೆ ಭಾರೀ ಜನಪ್ರಿಯತೆ ದೊರಕಿತು. ತಳಿ ಹುಡುಕಾಟ, ತಳಿ ಅಭಿವೃದ್ದಿ ಸಸ್ಯೋತ್ಪಾದನೆ ಅವಕಾಡೋ ಹಣ್ಣನ್ನು ಪ್ರಮುಖ ಹಣ್ಣಿನ ಬೆಳೆಗಳ ಸ್ಥಾನದಲ್ಲಿ ತಂದು ನಿಲ್ಲಿಸಿದವು.ಹಾಸ್ ಎಂಬ ವಿಶೇಷ…

Read more
error: Content is protected !!