ರಾಸಾಯನಿಕ ಕೀಟ-ರೋಗ ನಾಶಕಗಳ ಬದಲಿಗೆ ಜೈವಿಕ ಪರ್ಯಾಯ

ರಾಸಾಯನಿಕ ಕೀಟ-ರೋಗ ನಾಶಕಗಳ ಬದಲಿಗೆ ಜೈವಿಕ ಪರ್ಯಾಯ.

ಬೆಳೆಗಳಿಗೆ ಹಾನಿ ಮಾಡುವ ಕೀಟ – ರೋಗ ನಿಯಂತ್ರಣಕ್ಕೆ ವಿಷ ರಾಸಾಯನಿಕಗಳೇ ಅಂತಿಮ ಅಲ್ಲ. ಇವುಗಳಿಗೆ ಪರ್ಯಾಯ ಇದೆ. ಅದರ ಬದಲಿಗೆ ಜೈವಿಕ ಕೀಟ –ರೋಗ ನಿಯಂತ್ರಕಗಳು ಇವೆ. ಇವು ಉತ್ತಮವಾಗಿ ಕೆಲಸ ಮಾಡುತ್ತವೆ. ರಾಸಾಯನಿಕ ಕೀಟ ರೋಗ ನಿಯಂತ್ರಗಳೇ ಅಂತಿಮ ಅಲ್ಲ. ಗುಡ್ಡಕ್ಕೆ ಗುಡ್ಡ ಅಡ್ದ ಇದ್ದೇ ಇದೆ. ಸ್ವಲ್ಪ ಯೋಚನೆ  ಮಾಡಿದರೆ ಕೆಲವು ಸರಳ , ಸುರಕ್ಷಿತ ಉಪಾಯಗಳು ಗೊತ್ತಾಗುತ್ತವೆ. ಇದೇ ಸಿದ್ದಾಂತದಲ್ಲಿ, ಕೃಷಿ ಬೆಳೆಗಳ ಕೆಲವು ರೋಗ ಮತ್ತು ಕೀಟಗಳನ್ನು ನೈಸರ್ಗಿಕ ಉಪಾಯಗಳಿಂದಲೇ…

Read more
ಹಳೆಯ ಬೋರ್ ವೆಲ್ ರಿ-ಡ್ರಿಲ್ಲಿಂಗ್

ಹಳೆಯ ಬೋರ್ ರಿ-ಡ್ರಿಲ್ಲಿಂಗ್-  ಇದು ಲಾಭದಾಯಕವೇ?

ಹಿಂದೆ ಡ್ರಿಲ್ ಮಾಡಲಾದ  ಹಳೆಯ ಬೋರ್ ವೆಲ್ ಅನ್ನು ಮತ್ತೆ ಆಳ ಮಾಡಿದರೆ ಹೆಚ್ಚು ನೀರು ಪಡೆಯಬಹುದು. ಇದು ಒಂದಷ್ಟು ಜನ ರೈತರ ಇಚ್ಚೇ. ಹಳೆಯ ಬೋರ್ ವೆಲ್ ಆಳ ಮಾಡಿದರೆ ಇರುವ ನೀರಿಗೆ ತೊಂದರೆ ಇಲ್ಲ. ಆಳದಲ್ಲಿ ಹೆಚ್ಚಿನ ನೀರು ಸಿಕ್ಕರೆ ಅದು ಲಾಭ. ಹೇಗೂ 250-300 ಅಡಿ ಕೊರೆದು ಆಗಿದೆ. ಇನ್ನು ಸ್ವಲ್ಪ ತೋಡಿದರೆ ಖರ್ಚು ಕಡಿಮೆ, ರಿಸ್ಕ್ ಸಹ ಕಡಿಮೆ ಎಂಬುದು ರೈತರ ತರ್ಕ. ಈ ಬಗ್ಗೆ ಬೋರ್ ವೆಲ್ ಡ್ರಿಲ್ಲಿಂಗ್ ಮತ್ತು…

Read more
ಕೃಷಿ ಮತ್ತು ಮನುಕುಲಕ್ಕೆ ಆತಂಕ ಉಂಟುಮಾಡುತ್ತಿದೆ ಪ್ರಕೃತಿಯ ಮುನಿಸು

ಕೃಷಿ ಮತ್ತು ಮನುಕುಲಕ್ಕೆ ಆತಂಕ ಉಂಟುಮಾಡುತ್ತಿದೆ ಪ್ರಕೃತಿಯ ಮುನಿಸು.

ಪ್ರಕೃತಿ ಅನುಕೂಲಕರವಾಗಿದ್ದರೆ ಮಾತ್ರ ಮನುಕುಲ ಕ್ಷೇಮದಿಂದ ಇರಲು ಸಾಧ್ಯ. ಈಗ ಪ್ರಕೃತಿ ಮುನಿಸಿಕೊಂಡಂತಿದೆ. ಹವಾಮಾನ ಬದಲಾಗುತ್ತಿದೆ. ನಾವು ಹೊಟ್ಟೆ ಹೊರೆಯಲು ಬೆಳೆಸುವ ಬೆಳೆಗಳ ಮೇಲೆ ಹಾಗೂ ನಮ್ಮೆಲ್ಲರ ಆರೋಗ್ಯದ ಮೇಲೆ ಇದರ ದುಶ್ಪರಿಣಾಮ ಉಂಟಾಗಲಾರಂಭಿಸಿದೆ. ಮುಂದಿನ ದಿನಗಳಲ್ಲಿ ಕೃಷಿ ಉತ್ಪಾದನೆ ಕುಂಠಿತವಾಗಲಿದೆ ಎಂಬುದಾಗಿ ತಜ್ಞರು ಸರಕಾರಕ್ಕೆ ವರದಿ ನೀಡಿದ್ದಾರೆ. ಜನ ಆನಾರೋಗ್ಯ ಸಮಸ್ಯೆಯಿಂದ  ಬಳಲು ಸ್ಥಿತಿ ಉಂಟಾಗಿದೆ. ಹವಾಮಾನ ಬದಲಾವಣೆಯ ಬಿಸಿ ಈ ವರ್ಷ ಕೃಷಿ ಕ್ಷೇತ್ರಕ್ಕೆ ವಿಪರೀತವಾಗಿ ಬಾಧಿಸುವ ಸಾಧ್ಯತೆ ಇದೆ. ಶಿವರಾತ್ರೆ ಕಳೆದ ಮೇಲೆ…

Read more
ಅಡಿಕೆಯ ಕಥೆ ಏನಾಗಿದೆ? ಯಾಕೆ ದಿನದಿಂದ ದಿನಕ್ಕೆ ದರ ಇಳಿಯುತ್ತಿದೆ?

ಅಡಿಕೆಯ ಕಥೆ ಏನಾಗಿದೆ? ಯಾಕೆ ದಿನದಿಂದ ದಿನಕ್ಕೆ ದರ ಇಳಿಯುತ್ತಿದೆ?

ಅಡಿಕೆಯ ಕಥೆ ಹೇಳತೀರದಾಗಿದೆ. ದಿನದಿಂದ ದಿನಕ್ಕೆ ದರ ಕುಸಿಯುತ್ತಿದೆ.  ಅಡಿಕೆ ಕೊಳ್ಳುವ ವರ್ತಕರಿಗೆ ಅಡಿಕೆ ತರುವವರನ್ನು ನೋಡಿದರೆ ಸಿಟ್ಟು ಬರುವಂತ ಸ್ಥಿತಿ. ಎಲ್ಲರಲ್ಲೂ ಅಷ್ಟೋ ಇಷ್ಟೋ ದಾಸ್ತಾನು ಇದೆ.  ಮಾರಾಟ  ಆಗದೆ ಖರೀದಿಗೆ ದುಡ್ಡಿಲ್ಲದ ಸ್ಥಿತಿ ಈ ಮಧ್ಯೆ  ಬೆಳೆಗಾರರು ದುಂಬಾಲು ಬಿದ್ದು ಮಾರಾಟಕ್ಕೆ ಮುಂದಾಗಿದ್ದಾರೆ. ಮಾರುಕಟ್ಟೆಗೆ ತಾಳಿಕೊಳ್ಳಲಾಗದ ಸ್ಥಿತಿಯಲ್ಲಿ ಅಡಿಕೆ ಮಾರಾಟಕ್ಕೆ ಬಂದರೆ ದರ ಮತ್ತಷ್ಟು ಕುಸಿಯುತ್ತದೆ.ಇದು ಸತ್ಯ. ಈಗ ಇದೇ ಆಗಿರುವುದು. ಸತ್ಯವೋ ಸುಳ್ಳೋ ಒಟ್ಟಾರೆಯಾಗಿ ಹಳೆ ಚಾಲಿಯನ್ನು ಉತ್ತರ ಭಾತರದ ವ್ಯಾಪಾರಿಗಳು ಬೇಡ…

Read more
ಅಡಿಕೆ ಗಿಡ ಮಾಡಲು ಮೊಳಕೆ ಬರಿಸುವ ಸೂಕ್ತ ವಿಧಾನ

ಅಡಿಕೆ ಗಿಡ ಮಾಡಲು ಮೊಳಕೆ ಬರಿಸುವ ಸೂಕ್ತ ವಿಧಾನ.

ಅಡಿಕೆ ಗಿಡ ಮಾಡುವಾಗ ಬೀಜದ ಗೋಟು ಅಥವಾ ಹಣ್ಣು ಅಡಿಕೆಯನ್ನು ಗರಿಷ್ಟ ಪ್ರಮಾಣದಲ್ಲಿ ಮೊಳಕೆ ಬರುವಂತೆ ಮಾಡಲು ಕೆಲವು ಸರಳ ಕ್ರಮಗಳನ್ನು ಅನುಸರಿಸಬೇಕು. ಸಾಮಾನ್ಯವಾಗಿ ನಾವು 100 ಬೀಜಗಳನ್ನು ಮೊಳಕೆ ಬರಿಸಲು ಇಟ್ಟರೆ ಅದರಲ್ಲಿ  60-80 ರಷ್ಟು ಮಾತ್ರ ಮೊಳಕೆ ಪಡೆಯುತ್ತೇವೆ. ಇದು ನಾವು ಮೊಳಕೆಗೆ ಇಡುವ ಕ್ರಮ ಸರಿಯಿಲ್ಲದೆ ಆಗುವ ಸಮಸ್ಯೆ. ಸರಿಯಾದ ಮೊಳಕೆಗೆ ಇಡುವ ವಿಧಾನ ಹೀಗಿದೆ. ಅಡಿಕೆ ತೋಟ ಇದ್ದವರು ಹಣ್ಣಾಗಿ ಬಿದ್ದು, ಹೆಕ್ಕಲು ಸಿಕ್ಕದೆ ಅವಿತುಕೊಂಡು ಬಾಕಿಯಾದ ಅಡಿಕೆ ಹೇಗೆ ತನ್ನಷ್ಟೆಕ್ಕೆ…

Read more
ಅಡಿಕೆ ಮಾರುಕಟ್ಟೆಯಲ್ಲಿ ತಲ್ಲಣಿಕೆ. ಮುಂದಿದೆ ಭಾರೀ ಅನಿಶ್ಚಿತತೆ

ಅಡಿಕೆ ಮಾರುಕಟ್ಟೆಯಲ್ಲಿ ತಲ್ಲಣಿಕೆ. ಮುಂದಿದೆ ಭಾರೀ ಅನಿಶ್ಚಿತತೆ.

ಅಡಿಕೆ ಮಾರುಕಟ್ಟೆಯಲ್ಲಿ ಭಾರೀ ತಲ್ಲಣಿಕೆ ಉಂಟಾಗಿದ್ದು, ವ್ಯಾಪಾರಿಗಳಿಗೇ ಅಂಜಿಕೆ ಹುಟ್ಟಿದೆ. ಎಲ್ಲಾ ಅಡಿಕೆ ವರ್ತಕರಿಗೂ ಮುಂದೇನಾಗುವುದೋ ಎಂಬ ಚಿಂತೆ ಉಂಟಾಗಿದೆ. ಇರುವ ದಾಸ್ತಾನನ್ನು ಹೇಗಾದರೂ ವಿಲೇವಾರಿ ಮಾಡುವ ಚಿಂತೆಯಲ್ಲಿದ್ದಾರೆ. ಖರೀದಿದಾರರು ಭಾರೀ ಕಡಿಮೆ ಬೆಲೆಗೆ ಕೇಳುತ್ತಿದ್ದಾರೆ. ಈಗಿನ ಪರಿಸ್ಥಿತಿಯಲ್ಲಿ ಧಾರಣೆ ಕುಸಿತವೂ ಆಗಬಹುದು. ಹೀಗೆಯೇ ಮುಂದುವರಿಯಲೂ ಬಹುದು.   ಚಾಲಿ ಅಡಿಕೆ ಮಾರುಕಟ್ಟೆಯಲ್ಲಿ ಚೋಲ್ ಅಡಿಕೆ ಬೇಡ ಎಂಬ ಸ್ಥಿತಿ ಉಂಟಾಗಿ ಅಘೋಷಿತ ದರ ಕುಸಿತ ಉಂಟಾಗಿದೆ. ಖರೀದಿದಾರರಲ್ಲಿ ಭಾರೀ ಪ್ರಮಾಣದ ಸ್ಟಾಕು ಇದೆ ಎಂಬ ವರ್ತಮಾನ ಇದೆ….

Read more
ಸೀಬೆ ಸಸ್ಯದ ಎಲೆ ಹೀಗೆ ಬಣ್ಣ ಕಳೆದುಕೊಳ್ಳುವುದಕ್ಕೆ ಕಾರಣ

ಸೀಬೆ ಸಸ್ಯ ಸೊರಗುವುದಕ್ಕೆ ಕಾರಣ ಮತ್ತು ಪರಿಹಾರ

ಸೀಬೆ (ಪೇರಳೆ) ಹಣ್ಣು ಹಂಪಲು ಬೆಳೆಗಳಲ್ಲಿ  ಲಾಭದಾಯಕ ಹಣ್ಣಿನ ಬೆಳೆಯಾಗಿದೆ. ಇದು ಎಲ್ಲಾ ಪ್ರದೇಶಕ್ಕೂ ಹೊಂದಿಕೆಯಾಗುವ ಹಣ್ಣಿನ ಬೆಳೆ. ಕೆಲವು ಪ್ರದೇಶಗಳಲ್ಲಿ ಸೀಬೆ ಸಸ್ಯ ಏನೇ ಮಾಡಿದರೂ ಏಳಿಗೆ ಆಗುವುದಿಲ್ಲ. ಸಸ್ಯದ ಎಲೆಗಳು ತಿಳಿ ಹಳದಿ ಬಣ್ಣ ಮತ್ತು ತಾಮ್ರದ ಬಣ್ಣದ ಮೂಲಕ ತನ್ನ ಅನಾರೋಗ್ಯವನ್ನು ತೋರಿಸುತ್ತದೆ. ಸೀಬೆ ಸಸ್ಯದ ಎಲೆಗಳು ಹೀಗೆ ಆದರೆ ಅವು ಒಂದು ರೀತಿಯ ಪರಾವಲಂಭಿ ಜಂತು ಹುಳದ ಬಾಧೆ ಎನ್ನಬಹುದು. ಇದನ್ನು ಕರಾರುವಕ್ಕಾಗಿ ತಿಳಿಯಲು ಒಂದು ಬೇರನ್ನು ಅಗೆದು ನೋಡಿ. ನಮ್ಮ…

Read more
ದ್ರಾಕ್ಷಿ ಬೆಳೆಯ ರೋಗ

ದ್ರಾಕ್ಷಿ ಬೆಳೆಯ ಈ ರೋಗ ನಿಯಂತ್ರಣ.

ರೈತರು ಎಷ್ಟೇ ವ್ಯವಸ್ಥಿತವಾಗಿ ಬೆಳೆ ಬೆಳೆದರೂ ಕೆಲವು ವಾತಾವರಣ ಸಂಬಂಧಿತ ಮತ್ತು ಸಸ್ಯ ಮೂಲ ಸಂಬಂಧಿತ ರೋಗಗಳು  ಫಸಲು ಕೊಡುವ ಸಮಯದಲ್ಲಿ ಹೆಚ್ಚುತ್ತವೆ. ಇದಂತದ್ದರಲ್ಲಿ ಒಂದು ಎಲೆ- ಕಾಯಿ- ಹಣ್ಣು  ಕೊಳೆಯುವ ಚಿಬ್ಬು ರೋಗ. ಇದನ್ನು ಮುಂಜಾಗ್ರತೆ ವಹಿಸಿಯೇ ನಿಯಂತ್ರಣ ಮಾಡಿಕೊಳ್ಳಬೇಕು.   ರೋಗ ಲಕ್ಷಣ  ಹೀಗಿರುತ್ತದೆ:   ದ್ರಾಕ್ಷಿ ಹಣ್ಣುಗಳ ಮೇಲೆ ಕಪ್ಪು ಚುಕ್ಕೆಗಳು ಉಂಟಾಗಿ ಹಣ್ಣಿನ ನೋಟ ಅಸಹ್ಯವಾಗಿ ಕಾಣುವುದು ರೋಗದ ಲಕ್ಷಣ. ಇದಕ್ಕೆ ಅಂತ್ರಾಕ್ನೋಸ್ ರೋಗ ಎನ್ನುತ್ತಾರೆ. ಇದು ಕೇವಲ ಹಣ್ಣು ಆಗುವಾಗ…

Read more
ಜಾನುವಾರುಗಳಿಗೆ ಸಿಡುಬು ರೋಗ- ಪಶುಗಳು ಸಂತತಿಯ ವಿನಾಶಕ್ಕೆ ಕಾರಣವಾಗಬಹುದೇ

ಜಾನುವಾರುಗಳಿಗೆ ಸಿಡುಬು ರೋಗ- ಪಶು ಸಂತತಿಯ ವಿನಾಶಕ್ಕೆ ಕಾರಣವಾಗಬಹುದೇ?

ಪಶುಗಳ ಅದರಲ್ಲೂ ದನಗಳ ಚರ್ಮಗಂಟು ರೋಗ ತೀವ್ರ ರೂಪ ತಳೆಯುತ್ತಿದ್ದು, ಈಗಾಗಲೇ ಸಾವಿರಾರು ಹಸುಗಳು ಮರಣ ಹೊಂದಿವೆ. ಸಾವಿರಾರು ಜೀವನ್ಮರಣ ಹೋರಾಟದಲ್ಲಿವೆ. ಕೊರೋನಾ, ಅಥವಾ ಸಿಡುಬು  ತರಹದ ಸಾಂಕ್ರಾಮಿಕ ರೋಗವೊಂದು  ಹಸು ಸಾಕುವರ ಮನೆಯಲ್ಲಿ ಸೂತಕದ ವಾತಾವರಣವನ್ನು ಉಂಟುಮಾಡಿದೆ. ಯಾವಾಗ  ಯಾವುದಕ್ಕೆ ಬರಬಹುದೋ ಎಂಬ ಆತಂಕ ಉಂಟಾಗಿದೆ. ಹೊಸ ತಲೆಮಾರಿಗೆ ಕೊರೋನಾ ರೋಗ ಹೇಗೆ ಮನುಷ್ಯ ಮನುಷ್ಯರನ್ನು ದೂರ ದೂರ ಮಾಡುವ ಸನ್ನಿವೇಶ ಉಂಟು ಮಾಡಿತ್ತು ಎಂಬುದರ ಅರಿವು ಇದೆ. ಸುಮಾರು 70 ರ ದಶಕದಲ್ಲಿ ಸಿಡುಬು…

Read more
ಸಾಲ್ಯುಬಲ್ ಗೊಬ್ಬರ

ಸಾಲ್ಯುಬಲ್ ಗೊಬ್ಬರ ಬಳಸುವವರು ಇದನ್ನು ಮೊದಲು ತಿಳಿದುಕೊಳ್ಳಿ

ಹಸಿರು ಕ್ರಾಂತಿಯ ಪರಿಣಾಮದಿಂದ ನಮ್ಮ ಕೃಷಿಗೆ  ರಾಸಾಯನಿಕ ಗೊಬ್ಬರಗಳ ಪರಿಚಯವಾಯಿತು. ಇದರಲ್ಲಿ ಸಾಂಪ್ರದಾಯಿಕ ಗೊಬ್ಬರಗಳಿಗಿಂತ ಹೆಚ್ಚು ಸಾರಾಂಶಗಳು ಇರುವುದಕ್ಕೆ ಅದನ್ನು ರಸ ಗೊಬ್ಬರ ಎಂಬ ಹೆಸರಿನೊಂದಿಗೆ  ಕರೆಯಲಾಯಿತು. ಇದಕ್ಕೆ ನಂತರದ ಸೇರ್ಪಡೆ ಸಾಲ್ಯುಬಲ್ ಗೊಬ್ಬರಗಳು.(Water soluble fertilizers) ಏನಿದು ರಸಗೊಬ್ಬರ: ರಸ ಗೊಬ್ಬರಗಳಲ್ಲಿ ಮೂರು ಮುಖ್ಯವಾದವುಗಳು. ಅದು ಸಾರಜನಕ , ರಂಜಕ ಮತ್ತು ಪೊಟ್ಯಾಶಿಯಂ. ಇದನ್ನು ಯೂರಿಯಾ , ಸೂಪರ್ ಫೋಸ್ಪೇಟ್ ಮತ್ತು ಮ್ಯುರೇಟ್ ಆಫ್ ಪೊಟ್ಯಾಶ್ ಗಳು. ಅದನ್ನು ಉತ್ಪಾದಿಸಿಕೊಡುವವರು ಅದರಲ್ಲಿ ಬೇರೆ ಬೇರೆ ಸಂಯುಕ್ತ…

Read more
error: Content is protected !!