ಆಷಾಢದಲ್ಲಿ (ಆಟಿ) ಬಾಳೆದಂಡು ಯಾವ ಉದ್ದೇಶಕ್ಕೆ ತಪ್ಪದೆ ತಿನ್ನಬೇಕು

ಆಷಾಢದಲ್ಲಿ (ಆಟಿ) ಇದನ್ನು ಯಾವ ಉದ್ದೇಶಕ್ಕೆ ತಪ್ಪದೆ ತಿನ್ನಬೇಕು?

ಆಷಾಢ ಮಾಸದಲ್ಲಿ ಕೆಲವು ಆಹಾರ ವಸ್ತುಗಳನ್ನು ತಪ್ಪದೆ ತಿನ್ನಬೇಕು, ಇದರಲ್ಲಿ ಸಾಕಷ್ಟು  ಆರೋಗ್ಯ ಗುಣಗಳಿವೆ ಎಂಬುದೇ ನಮ್ಮ ಹಿರಿಯರು ಹೇಳಿರುವ ಉದ್ದೇಶ. ಇದರಲ್ಲಿ ಬಾಳೆ ದಂಡು ಒಂದು. ಬಾಳೆ ದಂಡನ್ನು ಬೇರೆ ಬೇರೆ ಅಡುಗೆಗಳ ಮೂಲಕ ಬಳಸಬಹುದಾಗಿದ್ದು , ಇದನ್ನು ತಿನ್ನುವುದರಿಂದ ಆರೋಗ್ಯಕ್ಕೆ ಒಳ್ಳೆಯದು. ಈ ದಂಡಿನಲ್ಲಿ ಹಲವಾರು ಪೋಷಕಾಂಶಗಳಿರುವ ಕಾರಣ  ದೇಹಕ್ಕೆ ಶಕ್ತಿ ಕೊಡುತ್ತದೆ. ಆಷಾಢ ಮಾಸದಲ್ಲಿ  ಮಳೆ ಹೆಚ್ಚು. ಹಿಂದೆಲ್ಲಾ ಈ ತಿಂಗಳಲ್ಲಿ  ವಾರಗಟ್ಟಲೆ ನಿರಂತರ ಮಳೆ ಬರುವುದು, ಮನೆಯಿಂದ ಹೊರಗೆ ತಲೆ ಹಾಕುವುದಕ್ಕೂ…

Read more
ಅಡಿಕೆ ಮಾರುಕಟ್ಟೆ ಸ್ಥಿತಿ ಮುಂದೆ ಏನಾಗಬಹುದು? ಹೊಸ ಚಾಲಿ 50000 ನಿರೀಕ್ಷೆ.

ಅಡಿಕೆ ಮಾರುಕಟ್ಟೆ ಸ್ಥಿತಿ ಮುಂದೆ ಏನಾಗಬಹುದು? ಹೊಸ ಚಾಲಿ 50000 ನಿರೀಕ್ಷೆ.

ಅಡಿಕೆ ಧಾರಣೆ ಏರಿಕೆಗೆ ಮುಹೂರ್ತ ಕೂಡಿ ಬಂದಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ಹೊಸ ಹುರುಪು ಪ್ರಾರಂಭವಾಗಿದೆ. ಈ ವರ್ಷ ಮತ್ತೆ ದರ ಉತ್ತುಂಗಕ್ಕೆ ಏರುವ ಸಾಧ್ಯತೆ ಇದೆ ಎಂಬುದಾಗಿ ಕೆಲವು ವ್ಯಾಪಾರಿಗಳು ಹೇಳುತ್ತಿದ್ದಾರೆ. ಈಗಿನ ಮಾರುಕಟ್ಟೆ  ದರ ಏರಿಕೆ ಗಮನಿಸಿದರೆ ಇನ್ನೂ ದರ ಏರಿಕೆಯಾಗುತ್ತಲೇ ಇರಬಹುದು ಎಂದೆನ್ನಿಸುತ್ತದೆ. ಇಂದಿನ ಅಡಿಕೆ ದಾರಣೆಯ ಕಥೆ ಕೇಳಬೇಕು. ಹಳೆ ಅಡಿಕೆ ಖಾಸಗಿ ಮಾರುಕಟ್ಟೆಯಲ್ಲಿ 57000 ತನಕ ಮುಟ್ಟಿದೆ. ಬೆಳಗ್ಗೆ ಇದ್ದ ದರಕ್ಕಿಂತ  ಸಂಜೆ ಮತ್ತೆ 500 ರೂ. ಹೆಚ್ಚು. ಹಾಗೆಯೇ ಹೊಸ…

Read more
ಬೀದರ್ ನಲ್ಲೂ ಸೇಬು ಬೆಳೆಯುತ್ತದೆ

ಬೀದರ್ ನಲ್ಲೂ  ಸೇಬು ಬೆಳೆಯುತ್ತದೆ- ಬೆಳೆದು ನೋಡಿದ್ದಾರೆ ಅಪ್ಪಾರಾವ್ ಭೋಸಲೆ

ಬೀದರ್ ಜಿಲ್ಲೆಯ ಕೆಂಪು ಮಣ್ಣಿನಲ್ಲಿ ಸೇಬು ಬೆಳೆ ಬೆಳೆಯಬಹುದು. ಇದು ಕಾಶ್ಮೀರದಲ್ಲಿ ಮಾತ್ರ ಬೆಳೆಯುವ ಬೆಳೆಯಲ್ಲ. ಇದನ್ನು ಅಪ್ಪಾರಾವ್ ಭೋಸಲೆ  ಎಂಬ ಪ್ರಗತಿಪರ ರೈತರು  ಬೆಳೆದು ತೋರಿಸಿದ್ದಾರೆ. ಕೆಲವೊಂದು ಬೆಳೆಗಳು ಸಾಂಪ್ರದಾಯಿಕವಾಗಿ ನಿರ್ದಿಷ್ಟ ಪ್ರದೇಶದಲ್ಲಿ ಮಾತ್ರ ಬೆಳೆಯುವಂತದ್ದು ಎಂದು ಇತರರು ಅದರ ಗೋಜಿಗೆ ಹೋಗುವುದಿಲ್ಲ. ಕೆಲವೇ ಕೆಲವು ಆಸಕ್ತರು, ಬಂದರೆ ಬರುತ್ತದೆ, ಹೋದರೆ ಹೋಗುತ್ತದೆ ಎಂದು ಬೆಳೆಸಿ ನೋಡುವ ಮನಸ್ಸು ಮಾಡುತ್ತಾರೆ. ಕೆಲವೊಮ್ಮೆ ಅದು ಯಶಸ್ವಿಯೂ ಆಗುತ್ತದೆ. ಇಂತಹ ಉದಾಹರಣೆ ಸಾಕಷ್ಟು ಇದೆ. ಸಾಂಪ್ರದಾಯಿಕ ಪ್ರದೇಶ,  ವಾತಾವರಣ,…

Read more
ರೈತರ ಆದಾಯ 60% ಹೆಚ್ಚಳವಾಗಿದೆ

ರೈತರ ಆದಾಯ 60% ಹೆಚ್ಚಳವಾಗಿದೆ. ಹೇಗೆ?

[et_pb_section admin_label=”section”] [et_pb_row admin_label=”row”] [et_pb_column type=”4_4″][et_pb_text admin_label=”Text”] ಭಾತರ  ಸರಕಾರ 2022 ಕ್ಕೆ ರೈತರ ಆದಾಯ ದ್ವಿಗುಣಗೊಳಿಸುವ ಗುರಿ ಹೊಂದಿತ್ತು. ಆದರೆ ಮಹಾಮಾರಿ ಕೊರೋನಾ ಬಿಡದ ಕಾರಣ ಆ ಗುರಿ ಸ್ವಲ್ಪ ಮುಂದೆ ಹೋಗಿದೆ. ಆದರೂ ಲೆಕ್ಕಾಚಾರ ಹಾಕಿ ಸರಕಾರ ಹೇಳುತ್ತಿದೆ, 2012-13 6424 ಇದ್ದ ಕೃಷಿಕ ಕುಟುಂಬದ ಯಜಮಾನದ ಆದಾಯ 2018-19 ಕ್ಕೆ 10,218 ಕ್ಕೆ ಏರಿಕೆಯಾಗಿದೆ. ಇದರಂತೆ ಕೃಷಿಕನ ಆದಾಯ ಈಗಾಗಲೇ ಸುಮಾರು 60% ಹೆಚ್ಚಳವಾದಂತಾಗಿದೆ! ಭಾರತ ಸರಕಾರದ ಕೃಷಿ ಮತ್ತು ರೈತ…

Read more
ಕೃಷಿ ಅರಣ್ಯ ದೊಂದಿಗೆ ಅರಶಿನ ಬೆಳೆ

ಕೃಷಿ ಅರಣ್ಯ ದೊಂದಿಗೆ ಅರಶಿಣ ಬೆಳೆಸಿ ಮೌಲ್ಯವರ್ದನೆ.

ಕಲಬುರಗಿ ತಾಲೂಕಿನ ಹಾಗರಗಾ ಗ್ರಾಮದಲ್ಲಿ ನಲವತ್ತೆರಡು ವರ್ಷದ ಲಕ್ಷ್ಮೀಕಾಂತ ಹಿಬಾರೆಯವರು ಬಿರುಬಿಸಿಲಿನ  ನಾಡಾದರೂ ತಮ್ಮ 2.5 ಎಕರೆ ಬರಡು ಭೂಮಿಯಲ್ಲಿ ಉತ್ತಮ ಬೆಳೆ ಬೆಳೆದಿದ್ದಾರೆ. ಸಹಜ ಮತ್ತು ನೈಸರ್ಗಿಕ  ಕೃಷಿ ಅರಣ್ಯ ಪ್ರದೇಶದಲ್ಲಿ ಔಷಧಿಯುಕ್ತ ಅರಶಿಣವನ್ನು ಮಿಶ್ರ ಬೆಳೆಯಾಗಿ ಬೆಳೆದು ಉತ್ತಮ ಆದಾಯ ಸಂಪಾದಿಸಿದ್ದಾರೆ. ಮುಖ್ಯವಾಗಿ ಅರಶಿನ ಹುಡಿ ಮಾಡಿ ಮೌಲ್ಯವರ್ಧನೆ ಮಾಡಿದ್ದೇ ಈ ಲಾಭಕ್ಕೆ ಕಾರಣ. ಲಕ್ಷ್ಮೀಕಾಂತ ಹಿಬಾರೆಯವರು ಕಳೆದ 10 ವರ್ಷದಿಂದ ಕೃಷಿ ಅರಣ್ಯ ಬೇಸಾಯ ಮಾಡುತ್ತಿದ್ದಾರೆ. ಇವರ ಹೊಲದಲ್ಲಿ ಬೆಳೆದಿರುವ ಬಗೆಬಗೆಯ ಅರಣ್ಯ…

Read more
ಬೆಳೆ ಯೋಜನೆ ಇದ್ದರೆ ತೆಂಗಿನ ಬೆಳೆಯೂ ಲಾಭದಾಯಕ

ಬೆಳೆ ಯೋಜನೆ ಇದ್ದರೆ ತೆಂಗಿನ ಬೆಳೆಯೂ ಲಾಭದಾಯಕವೇ.

ತೆಂಗು ಬೆಳೆ ಲಾಭದಾಯಕ ಎಂದರೆ ಎಲ್ಲರೂ ನಗುತ್ತಾರೆ. ಆದರೆ ತೆಂಗಿನ ಬೆಳೆಯೊಂದರಿಂದಲೇ ಲಾಭ ಇಲ್ಲ. ಅದರ ಜೊತೆಗೆ ಬೇರೆ ಬೇರೆ ಬೆಳೆ ಬೆಳೆಸಬೇಕು. ಉತ್ತಮ ಇಳುವರಿ ಕೊಡುವ ತಳಿಗಳನ್ನು ಆಯ್ಕೆ ಮಾಡಬೇಕು. ಇಂತಹ ಬೆಳೆ ಯೋಜನೆಯಿಂದ ತೆಂಗಿನ ಬೆಳೆ ಸಹ ಲಾಭದಾಯಕಬಲ್ಲದು ಎನ್ನುತ್ತಾರೆ  ಈ ರೈತ. ಹೈಬ್ರೀಡ್ ತಳಿಯ ತೆಂಗು, ಅದರ ಮಧ್ಯಂತರದಲ್ಲಿ ಬಾಳೆ,  ಅರಶಿನ, ಸುವರ್ಣ ಗಡ್ಡೆ,  ನೀರಿನ ಕೆರೆಯಲ್ಲಿ ಮೀನು ಸಾಕಾಣಿಕೆ, ಬೀಜೋತ್ಪಾದನೆಗಾಗಿ ಭತ್ತದ ಬೆಳೆ, ಬೇಸಿಗೆಯಲ್ಲಿ ಭಾರೀ ಲಾಭ ಕೊಡುವ ಲಿಂಬೆ, ಹಲಸು,…

Read more
ಮಳೆ ಬರುವ ಮುನ್ಸೂಚನೆ

ಎಷ್ಟು ಸಮಯದ ತನಕ  ಮಳೆ ಬರುವ ಮುನ್ಸೂಚನೆ ಇದೆ?

ಜಾಗತಿಕ ತಾಪಮಾನದ ವ್ಯತ್ಯಯದಿಂದಾಗಿ ಮಳೆಯ ಲಯ ತಪ್ಪಿದೆ. ಅಕಾಲದಲ್ಲಿ ಮಳೆಯಾಗುವುದು, ಹಂಚಿಕೆ ವ್ಯತ್ಯಾಸವಾಗುವುದು ಕಳೆದ ಮೂರು ವರ್ಷಗಳಿಂದ ನೊಡುತ್ತಿದ್ದೇವೆ. ಕಳೆದ ವರ್ಷ ಡಿಸೆಂಬರ್ ತನಕವೂ ಮಳೆ ಬಂದು ಕೃಷಿಕರಿಗೆ  ಬಹಳಷ್ಟು ತೊಂದರೆ ಅಗಿದೆ. ಈ ವರ್ಷ 2022 ಜುಲೈ ತಿಂಗಳು, ಇಡೀ ಋತುಮಾನದಲ್ಲಿ ಬರುವ ಮಳೆಯ ¾ ಪ್ರಮಾಣದಷ್ಟು ಈಗಾಗಲೇ ಬಂದಾಗಿದೆ. ಇನ್ನು ಮಳೆ ಕಡಿಮೆಯಾಗಬಹುದೇ? ಎಷ್ಟು ಸಮಯದ ತನಕ ಮುನ್ಸೂಚನೆ ಇದೆ ಎಂಬುದರ ಮಾಹಿತಿ ಇಲ್ಲಿದೆ. ಮಳೆಯ ಪ್ರಮಾಣ ಭಾರೀ ಹೆಚ್ಚಳವಾಗಿದೆಯೋ ಅಥವಾ ಹಂಚಿಕೆ ವ್ಯತ್ಯಾಸವಾಗಿದೆಯೋ…

Read more
ಅ ಸಾಮಾನ್ಯ ಮಳೆ

ಈಗ ಬಂದದ್ದು  ಸಾಮಾನ್ಯ ಮಳೆಯೇ? ಆಮ್ಲ ಮಳೆಯೇ?

ಮಳೆ ಎಂದರೆ ಮಳೆ ಅದರಲ್ಲಿ ವಿಶೇಷ ಏನಿದೆ? ಖಂಡಿತವಾಗಿಯೂ ಇದೆ. ಮಳೆ ನೀರು ಸಾಮಾನ್ಯ ನೀರಿನಂತೆ ಕಂಡರೂ ಅದರ ಗುಣ ವ್ಯತ್ಯಾಸಗಳು ಸಸ್ಯಗಳು , ಮನುಷ್ಯರು, ಪ್ರಾಣಿ ಪಕ್ಷಿಗಳು ಮತ್ತು ಸೂಕ್ಷ್ಮಾಣು ಜೀವಿಗಳ ಮೇಲೆ ಮೇಲೆ ವ್ಯತಿರಿಕ್ತ ಪರಿಣಾಮ ಉಂಟು ಮಾಡುತ್ತವೆ. ಈ ವರ್ಷದ ಮಳೆ ಅಂತಹ ಸನ್ನಿವೇಶವನ್ನು ಉಂಟು ಮಾಡಿದೆ. ಮಳೆ ಎಂಬುದು ಮೇಘ ಸ್ಪೋಟ ಆದಂತೆ ಬರುತ್ತಿದ್ದು, ಕಣ್ಣಿಗೆ ಕಾಣುವಂತ ಕೆಲವು ತೊಂದರೆಗಳು ಮತ್ತು ಕಣ್ಣಿಗೆ ಕಾಣದ ಕೆಲವು ತೊಂದರೆಗಳು ಉಂಟಾಗಿವೆ. ಈ ವರ್ಷದ…

Read more
ಹೊಲದಲ್ಲಿ ಎರೆಹುಳ

ಹೊಲದಲ್ಲಿ ಎರೆಹುಳಗಳು ಕಡಿಮೆಯೇ ? ಕಾರಣ ಏನು?

ಮಣ್ಣು  ಅಥವಾ ಹೊಲ ಅನೇಕ ತರಹದ ಕಶೇರುಕ ಮತ್ತು ಅಕಶೇರುಕ ಜೀವಿಗಳಿಗೆ ಆಶ್ರಯತಾಣ. ಇಲಿ ಹೆಗ್ಗಣ ,ಅಳಿಲುಗಳಿಂದ ಹಿಡಿದು, ಇರುವೆ ಗೆದ್ದಲು, ಜೇಡ, ನುಶಿ, ಮೈಟ್, ಬಸವನ ಹುಳು ಎರೆಹುಳು, ಕಪ್ಪೆ ಚಿಪ್ಪಿನ ಹುಳು, ಶತಪದಿಗಳು, ಸಹಸ್ರಪದಿಗಳು,  ಎರೆಹುಳುಗಳು ಹಾಗೆಯೇ ಹಲವಾರು ಕಣ್ಣಿಗೆ ಕಾಣದ ಸೂಕ್ಷ್ಮಾಣು ಜೀವಿಗಳು ಎಲ್ಲವೂ ಮಣ್ಣಿನಲ್ಲಿಯೇ ಬದುಕುವ ಜೀವಿಗಳು. ಮಣ್ಣು ಇಲ್ಲದಿದ್ದರೆ ಅವು ಇಲ್ಲ. ಅವು ಇಲ್ಲದಿದ್ದರೆ ಮಣ್ಣಿಗೆ ಜೀವಂತಿಕೆ ಇಲ್ಲ. ಹೊಲ ಎರೆಹುಳಗಳಿಗೆ ಆಹಾರ ಕೊಡದ ಸ್ಥಿತಿಯಲ್ಲಿ ಇದ್ದರೆ ಅಲ್ಲಿ ಅವುಗಳ…

Read more
ದಿನಾಂಕ.12-07-2022 ದವಸ ಧಾನ್ಯ, ತರಕಾರಿ, ಹಣ್ಣು ಹಂಪಲು ಮಾರುಕಟ್ಟೆ.

ದಿನಾಂಕ.12-7-22 ದವಸ ಧಾನ್ಯ, ತರಕಾರಿ, ಹಣ್ಣು ಹಂಪಲು ಮಾರುಕಟ್ಟೆ.

ರಾಜ್ಯದಲ್ಲಿ ಇಂದು ದಿನಾಂಕ.12-07-22 ದವಸ ಧಾನ್ಯ, ತರಕಾರಿ, ಹಣ್ಣು ಹಂಪಲು, ಬಾಳೆ ಕಾಯಿ ಇತ್ಯಾದಿಗಳ ಮಾರುಕಟ್ಟೆ ಧಾರಣೆ ಹೀಗಿತ್ತು. ಗೋಧಿ; ಮೆಕ್ಸಿಕನ್, 2100, 2280 ಸೋನ, 2400, 2550  ಕೆಂಪು , 1900, 3200  ಬಿಳಿ , 1970, 3902  ಜವರಿ , 1869, 3712 ಸ್ಥಳೀಯ , 1812, 3200 ಸಾಧಾರಣ , 2600, 2800  ಗಿರಣಿ ಗೋಧಿ , 2300, 2500  ಶರಬತಿ , 2000, 2800  ಭತ್ತ, ,  ಭತ್ತ-1 , 1021,…

Read more
error: Content is protected !!