12-07-2022 ಅಡಿಕೆ, ಕರಿಮೆಣಸು, ಕಾಫಿ, ಶುಂಠಿ ಕೊಬ್ಬರಿ ಧಾರಣೆ

ದಿನಾಂಕ 12-07-2022 ಅಡಿಕೆ, ಕರಿಮೆಣಸು, ಕಾಫಿ, ಶುಂಠಿ ಕೊಬ್ಬರಿ ಧಾರಣೆ.

ಇಂದು ದಿನಾಂಕ 12-07-2022 ಮಂಗಳವಾರ  ರಾಜ್ಯ ವಿವಿಧ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿ ಅಡಿಕೆ, ಕರಿಮೆಣಸು ಶುಂಠಿ, ಕಾಫಿ,ರಬ್ಬರ್, ಕೊಬ್ಬರಿ ಧಾರಣೆ ಹೀಗಿದೆ. ಚಾಲಿ ಅಡಿಕೆ ಧಾರಣೆ: ಕ್ವಿಂಟಾಲು. ಹೊಸ ಚಾಲಿ ಸ್ವಲ್ಪ ಚೇತರಿಕೆ ಆಗಿದೆ. ವ್ಯಾಪಾರಿಗಳು ಸ್ವಲ್ಪ ವಿಚಾರಣೆ ಮಾಡುತ್ತಿದ್ದಾರೆ. ಸ್ವಲ್ಪ ಸ್ವಲ್ಪ ಹೊಸತಕ್ಕೆ ಏರಿಕೆ ಆಗಬಹುದು. ಹಳೆಯ ಅಡಿಕೆಯೇ ಇಲ್ಲ ಎಂಬ ಸ್ಥಿತಿ. ಆದರೂ ಬೆಳ್ತಂಗಡಿಯಲ್ಲಿ ಅತ್ಯಧಿಕ 109 ಚೀಲ ನಿನ್ನೆ ಮಾರಾಟವಾಗಿದೆ. BANTWALA, 12/07/2022, Coca, 27, 12500, 25000, 22500 BANTWALA,…

Read more
ಅಡಿಕೆ ಧಾರಣೆ:ದಿನಾಂಕ:11-07-2022

ರಾಜ್ಯದಾದ್ಯಂತ ಅಡಿಕೆ ಧಾರಣೆ:ದಿನಾಂಕ:11-07-2022 ಸೋಮವಾರ.

ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಇಂದು ಜುಲೈ ಎರಡನೇ ವಾರದ ಪ್ರಥಮ ಸೋಮವಾರ ದಿನಾಂಕ  11-07-2022 ಅಡಿಕೆ ಧಾರಣೆ ಸ್ಥಿರವಾಗಿತ್ತು. ಚಾಲಿ ಅಡಿಕೆಯ ಧಾರಣೆ ಹೊಸತು ಸ್ವಲ್ಪ ಏರಿಕೆ ಕಂಡು ಬಂದಿದೆ. ಇಂದಿನಿಂದ ಪ್ರಾರಂಭವಾಗಿ ಸ್ವಲ್ಪ ಸ್ವಲ್ಪವೇ ಹೊಸ ಅಡಿಕೆ ದರ ಏರುತ್ತಾ ಎರಡು ತಿಂಗಳ ಒಳಗೆ ಹಳೆ ಅಡಿಕೆ ಮತ್ತು ಹೊಸ ಅಡಿಕೆಯ ಬೆಲೆ ಹತ್ತಿರ ಬರಬಹುದು ಎಂಬುದಾಗಿ ವ್ಯಾಪಾರಿಗಳು ಹೇಳುತ್ತಾರೆ. ಕೆಂಪಡಿಕೆ ಧಾರಣೆ ಸ್ಥಿರವಾಗಿದೆ. ಹಳೆ ಚಾಲಿಗೆ ಹೆಚ್ಚು ಬೆಲೆ ಇದೆ. ಆದರೆ ಬರುವುದು ತೀರಾ…

Read more
ಕರಿಮೆಣಸಿಗೆ ರೋಗ ಬಾರದಂತೆ ತಡೆಯುವ ವಿಧಾನ

ಕರಿಮೆಣಸು ರೋಗ ಬಾರದಂತೆ ತಡೆಯಲು ಏನು ಮಾಡಬೇಕು?

ಮಳೆಗಾಲ ಬಂದಿದೆ. ಇನ್ನು ಅಡಿಕೆ ಕರಿಮೆಣಸು ಬೆಳೆಗಾರರಿಗೆ ಬೆಳೆ ಉಳಿಸಿಕೊಳ್ಳುವುದೇ ಚಿಂತೆ. ಕೆಲವರು ಒಂದು ಬಾರಿ ಔಷಧಿ ಸಿಂಪಡಿಸಿದ್ದಾರೆ. ಕೆಲವರು ಸಿಂಪರಣೆ ಮಾಡಿಯೇ ಇಲ್ಲ. ಇತ್ತಂಡಕ್ಕೂ ಒಂದೇ ಚಿಂತೆ ರೋಗ ಬರಬಹುದೇ ಎಂದು. ಅಡಿಕೆ ಬೆಳೆಗೆ ರೋಗ ಹೇಗೆ ಬರುತ್ತದೆಯೋ ಹಾಗೆಯೇ ಅಡಿಕೆಯ ಮಿಶ್ರ ಬೆಳೆಯಾದ ಕರಿಮೆಣಸಿಗೆ ಮಳೆಗಾಲದಲ್ಲಿ ರೋಗ ಸಾಧ್ಯತೆ ಹೆಚ್ಚು. ರೋಗ ತಡೆಯುವ ವಿಧಾನಗಳನ್ನು ಚಾಚೂ ತಪ್ಪದೆ ಅನುಸರಿಸಿದರೆ  ರೋಗ ಸಾಧ್ಯತೆಯನ್ನು ಕಡಿಮೆ ಮಾಡಬಹುದು. ಮಳೆಗಾಲ ಪ್ರಾರಂಭದಲ್ಲಿ ಕರಿಮೆಣಸಿಗೆ ಬರುವ ಪ್ರಮುಖ ರೋಗ ಎಂದರೆ…

Read more
ಎರೆ ಹುಳುಗಳು

ಎರೆಹುಳು ಬಗ್ಗೆ ನಾವು ತಿಳಿಯಬೇಕಾದ ವಾಸ್ತವ ಸಂಗತಿ.

ಎರೆಗೊಬ್ಬರ ಎಂದರೆ ಅದು ಸಂಪಧ್ಭರಿತ ಗೊಬ್ಬರ ಅಲ್ಲ. ಅದು ಒಂದು ಸಾವಯವ ವಸ್ತುಗಳನ್ನು ಹುಡಿ ಮಾಡಿದ ಮಿಶ್ರಣ ಅಷ್ಟೇ. ಇದು ಬೆಳೆಗೆ ದೊರೆಯಬೇಕಾದರೆ ಮಣ್ಣಿನಲ್ಲಿರುವ ಸ್ಥಳೀಯ ಎರೆಹುಳುಗಳು ಕೆಲಸ  ಮಾಡಲೇ ಬೇಕು. ಎರೆಹುಳ ಏನು? ಎರೆಹುಳು ಎಂಬ ದುಂಡು ಹುಳ (ಅನೆಲಿಡಾ) ಜಾತಿಗೆ ಸೇರಿದ ಜೀವಿಯು  ಸಾವಯವ ತ್ಯಾಜ್ಯಗಳನ್ನು  ರೂಪಾಂತರಿಸಿ ಕೊಡುತ್ತದೆ. ಇದನ್ನು  ಬೆಳೆಗಳಿಗೆ ಗೊಬ್ಬರವಾಗಿ ಬಳಕೆ ಮಾಡಿದಾಗ ಅಧ್ಬುತ ಇಳುವರಿ ಬರುತ್ತದೆ, ಮಣ್ಣು  ಶ್ರೀಮಂತವಾಗುತ್ತದೆ. ಸಾವಯವ ಕೃಷಿ ಎಂಬ ಅಹಿಂಸಾತ್ಮಕ  ಕೃಷಿ ವಿಧಾನಕ್ಕೆ ಇದು ಒಂದು ಸರಳ…

Read more
ಕೃಷಿ ಸಹಕಾರಿ ಬ್ಯಾಂಕುಗಳ ಮೂಲಕ ಪೆಟ್ರೋಲ್ ಉತ್ಪನ್ನ ಮಾರಾಟ

ಕೃಷಿ ಸಹಕಾರಿ ಬ್ಯಾಂಕುಗಳ ಮೂಲಕ ಪೆಟ್ರೋಲ್ ಉತ್ಪನ್ನ ಮಾರಾಟ- ನಮಗೆಷ್ಟು ಲಾಭ?

ಕೃಷಿ ಸಹಕಾರಿ ಬ್ಯಾಂಕುಗಳು ಪೆಟ್ರೋಲ್ ಉತ್ಪನ್ನ ಮಾರಾಟ ಮಾಡಿ ಹೆಚ್ಚಿನ ಲಾಭ ಮಾಡಿಕೊಂಡರೆ ನಮಗೆ ಈಗ ಸಿಗುತ್ತಿರುವ ಪಾಲು ಬಂಡವಾಳದ ಮೊತ್ತ ಇನ್ನೂ ಹೆಚ್ಚಾಗಲಿದೆ. ನಾವು ಯಾವುದೇ ಕಡೆ ಹೂಡಿಕೆ ಮಾಡಿದರೂ ಸಿಗದಷ್ಟು ಲಾಭ ನಮ್ಮದೇ ಬ್ಯಾಂಕಿನ ಶೇರು ಬಂಡವಾಳದ ಮೂಲಕ ಸಿಗಲಿದೆ. ನಮ್ಮೂರಿನ ಸೊಸೈಟಿಯಲ್ಲಿ ಲಾಭ ಹೆಚ್ಚಾದರೆ ಅದರಿಂದ ನಮಗೇ ಭಾರೀ ಲಾಭ. ಭಾರತ ಸರಕಾರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರೀ ಸಂಘಗಳು (PACS Primary agriculture co operative society) ತಮ್ಮ ವ್ಯವಹಾರ ಕ್ಷೇತ್ರ…

Read more
ಅಡಿಕೆಗೆ ದರ ಏರಿದೆ- ಇನ್ನೂ ಏರುತ್ತದೆ

ಅಡಿಕೆಗೆ ದರ ಏರಿದೆ- ಇನ್ನೂ ಏರುತ್ತದೆ ಎಂಬ ಸುದ್ದಿ !

ಸಾಮಾನ್ಯವಾಗಿ ಮಳೆಗಾಲ ಪ್ರಾರಂಭದ ಒಂದೆರಡು ತಿಂಗಳು ಮಾರುಕಟ್ಟೆ ಸ್ವಲ್ಪ ಮಬ್ಬಾಗಿರುತ್ತದೆ. ಕೃಷಿಕರು ಅವರ ಹೊಲದ ಕೆಲಸದಲ್ಲಿ ಹೆಚ್ಚಾಗಿ ತೊಡಗಿಸಿಕೊಂಡಿರುತ್ತಾರೆ.  ಜೊತೆಗೆ ಹವಾಮಾನವೂ ವ್ಯವಹಾರಕ್ಕೆ ಸ್ವಲ್ಪ ಅನುಕೂಲಕರವಾಗಿ ಇರುವುದಿಲ್ಲ. ಹಾಗಾಗಿ ಬಹುತೇಕ ಕೃಷಿ ಉತ್ಪನ್ನಗಳ ಬೆಲೆ ಸ್ವಲ್ಪ ಇಳಿಕೆಯೇ ಆಗುವುದು.  ಮಳೆಗಾಲ ಒಮ್ಮೆ ಸೆಟ್ ಆದ ಮೇಲೆ ಮತ್ತೆ ವ್ಯವಹಾರ ಚುರುಕಾಗುತ್ತದೆ. ಇದು ಹಿಂದಿನಿಂದಲೂ ನಡೆದುಕೊಂಡು ಬಂದಂತದ್ದು. ಈಗ ಮತ್ತೆ ಮಾರುಕಟ್ಟೆ ಚೇತರಿಕೆಯನ್ನು ಕಾಣುತ್ತಿದೆ. ಅಡಿಕೆ ದರ ಏರಿದೆ. ಇನ್ನೂ ಸ್ವಲ್ಪ ಸ್ವಲ್ಪವೇ ಏರಿಕೆ ಆಗಬಹುದು ಎನ್ನುವ ಸುದ್ದಿ…

Read more
40000 ಬಿಟ್ಟುಕೊಟ್ಟ ಮಂಗ

ಮಂಗಗಳು 40000 ಬಿಟ್ಟುಕೊಟ್ಟವು! ನೀವೂ ಹೀಗೆ ಮಾಡಬಹುದು..

ಪ್ರತೀಯೊಬ್ಬ ಕೃಷಿಕರೂ ಮಂಗಗಳ ಕಾಟದಿಂದ ತೆಂಗಿನ ಕಾಯಿ, ಕೊಕ್ಕೋ ಮುಂತಾದ ಬೆಳೆಗಳನ್ನು ಗಣನೀಯ ಪ್ರಮಾಣದಲ್ಲಿ ನಷ್ಟ ಮಾಡಿಕೊಳ್ಳುತ್ತಿದ್ದಾರೆ.ನಾನೂ ಈ ಕಾಟದಿಂದಾಗಿ ನನ್ನ ಅನನಾಸು ಬೆಳೆಯನ್ನು ಬಿಡಬೇಕಾಯಿತು. ತೆಂಗಿನ ಫಲಕ್ಕಾಗಿ ಕೊಕ್ಕೋ ವನ್ನು ಬಿಡಬೇಕಾಯಿತು. ಆದಾಗ್ಯೂ ಈ ವರ್ಷ ಮಂಗಗಳು ನನಗೆ 40000 ಕ್ಕೂ ಹೆಚ್ಚಿನ ಮೌಲ್ಯದ ಕೊಕ್ಕೋ ಬೆಳೆಯ ಆದಾಯ ಉಳಿಸಿಕೊಟ್ಟವು. ಈ ವಿಧಾನವನ್ನು ಎಲ್ಲರೂ ಪಾಲಿಸಿದರೆ ಮಂಗಗಳ ಕಾಟದಿಂದ ತಪ್ಪಿಸಿಕೊಳ್ಳಲು ಕಷ್ಟವಿಲ್ಲ.  ಅದು ಹೇಗೆ ವಿವರ ಇಲ್ಲಿದೆ. ಮಂಗಗಳ ಕಾಟ ಹೆಚ್ಚಾಗಲು  ಮೂಲ ಕಾರಣ ನಾವು….

Read more
ಚೆಂಡು ಹೂವು

ಚೆಂಡು ಹೂವು- ನೈಸರ್ಗಿಕ ಕೀಟ ನಾಶಕ ಸಸ್ಯ.

ಚೆಂಡು ಹೂವು ಈಗ ಒಂದು ಲಾಭದಾಯಕ ಪುಷ್ಪ ಬೆಳೆ. ಇದು ಮಣ್ಣಿಗೂ, ವಾತಾವರಣಕ್ಕೂ, ಒಳ್ಳೆಯ ಬೆಳೆ. ಇದನ್ನು ಪುಷ್ಪ ಬೆಳೆಯಾಗಿ ಬೆಳೆಸುವುದಲ್ಲದೆ ಹೊಲದಲ್ಲಿ ಅಲ್ಲಲ್ಲಿ  ಬೆಳೆದರೆ ಮಣ್ಣಿನ ಕೆಲವು ಜಂತು ಹುಳಗಳೂ ನಿವಾರಣೆ ಆಗುತ್ತದೆ.ಮದುವೆ, ಸಮಾರಂಭಗಳಲ್ಲಿ ಚೆಂಡು ಹೂವಿನ ಅಲಂಕಾರ ಮಾಡಿದರೆ ಒಂದೆಡೆ ಸೊಗಸು.ಅದನ್ನು ಬಿಸಾಡಿದಲ್ಲಿ ಸೊಳ್ಳೆಗಳೂ ಉತ್ಪತ್ತಿಯಾಗಲಾರವು. ಅಷ್ಟು ಇದೆ ಅದರಲ್ಲಿ ವಿಷೇಶ ಗುಣಗಳು. ರಾಸಾಯನಿಕ ಕೀಟ ನಾಶಕಕ್ಕೆ ಬದಲಿ: ನಾವು ಎಲ್ಲದಕ್ಕೂ ರಾಸಾಯನಿಕ ಕೀಟನಾಶಕಗಳನ್ನೇ ಕೇಳುತ್ತೇವೆ. ನಮಗೆ ಸಲಹೆ ಕೊಡುವವರೂ ಅದನ್ನೇ ಸೂಚಿಸುತ್ತಾರೆ. ನಿಜವಾಗಿಯೂ…

Read more
ನಾಟಿ ಹಸು,ಕರು

ಒಂದು ನಾಟಿ ಹಸು ಖರೀದಿಗೆ 25000 ಸಹಾಯಧನ !

ನಾಟಿ ಹಸುಗಳ ಸಂತತಿ ಕಡಿಮೆಯಾಗುತ್ತಿದೆ. ಸಾವಯವ ವಸ್ತುಗಳಿಲ್ಲದೆ ಕೃಷಿ ಕೃತಕವಾಗುತ್ತಿದೆ. ಹಾಗಾಗಿ ನಮ್ಮ ಕೃಷಿ ಪದ್ದತಿ ಇನ್ನು ಸ್ವಲ್ಪ ಹಿಂದಿನ ಕಾಲದತ್ತ ಹೋಗಬೇಕಾಗಬಹುದು. ನಮ್ಮ ಹಿರಿಯರು ಸೊಪ್ಪು ಸದೆ, ಸಗಣಿ ಗೊಬ್ಬರ  ಮುಂತಾದವುಗಳ  ಮೂಲಕ ಕೃಷಿ ಮಾಡುತ್ತಿದ್ದರೋ ಅದೇ ಕ್ರಮವನ್ನು ಅನುಸರಿಸಬೇಕಾಗುತ್ತದೆ. ಅದಕ್ಕೆ ನಮ್ಮಲ್ಲಿ ಈಗ ಕೊರತೆ ಎಂದರೆ ಹಸುಗಳು. ಸಿಹಿ ಇದ್ದಲ್ಲಿ ಇರುವೆ ಬರುತ್ತದೆ ಎಂಬಂತೆ ಹಸು ಸಾಕಬೇಕಿದ್ದರೆ ಅದರಲ್ಲಿ ಸಾಕುವವರಿಗೆ ಲಾಭ ಬೇಕು. ಈ ಅಂಶವನ್ನು ಮನಗಂಡು ಹರ್ಯಾಣ ಸರಕಾರ ದೇಶದಲ್ಲೇ ಮೊದಲಬಾರಿಗೆ ಕೃಷಿಕರು…

Read more
error: Content is protected !!