ಕೊಕ್ಕೋ ಬೆಳೆದರೆ ನೀರು ಕಡಿಮೆ ಸಾಕು.

ಪ್ರತೀಯೊಂದೂ ಬೆಳೆಗೂ ಅದಕ್ಕೆ ಸೂಕ್ತವಾದ ತಾಪಮಾನ ಪ್ರಾಮುಖ್ಯ ಅಂಶ. ಕಡಿಮೆಯೂ ಆಗಬಾರದು, ಹೆಚ್ಚೂ ಆಗಬಾರದು.  ತಾಪಮಾನದ ಏರು ಪೇರನ್ನು ನಿಯಂತ್ರಿಸಲು ಸಸ್ಯಗಳಿಂದ ಮಾತ್ರ ಸಾಧ್ಯ. ಜೊತೆಗೆ ಮಣ್ಣಿನ ಫಲವತ್ತೆತೆ ಹೆಚ್ಚುತ್ತಾ ಇದ್ದರೆ ಮಾತ್ರ ಇಳುವರಿ ಸ್ಥಿರವಾಗಿರುವುದು. ಇದಕ್ಕೆಲ್ಲಾ   ಸಹಾಯವಾದ ಬೆಳೆ  ಕೊಕ್ಕೋ. ಇದು ತಾಪಮಾನ ಕಡಿಮೆ ಮಾಡುತ್ತದೆ. ಮಣ್ಣಿನ ಫಲವತ್ತತೆ  ಹೆಚ್ಚಿಸುತ್ತದೆ. ನೀರಿನ ಆವೀಕರಣ ತಡೆಯುತ್ತದೆ. ನೆಲಕ್ಕೆ ಬಿಸಿಲು ಹೆಚ್ಚು ಬಿದ್ದಷ್ಟೂ ಹೆಚ್ಚು ಹೆಚ್ಚು ನೀರಾವರಿ ಮಾಡಬೇಕಾಗುತ್ತದೆ. ನೆಲದ ಮೇಲು ಭಾಗದಲ್ಲಿ ಸಸ್ಯದ ಹಸಿರು ಹೊದಿಕೆ  ಇದ್ದಷ್ಟೂ…

Read more
ಆಷಾಢ ಅಮಾವಾಸ್ಯೆಯೂ – ಪಾಲೆ ಮರದ ಚೆಕ್ಕೆಯೂ...

ಆಷಾಢ ಅಮಾವಾಸ್ಯೆಯೂ – ಪಾಲೆ ಮರದ ಚೆಕ್ಕೆಯೂ…

ಆಟಿ ಅಥವಾ ಆಷಾಡ ಮಾಸದ ಅಮವಾಸ್ಯೆಯಂದು ಬೆಳ್ಳಂಬೆಳಗ್ಗೆ  ಪಾಲೆ/ ಮದ್ದಾಲೆ ಮರದ ಚೆಕ್ಕೆಯನ್ನು ತೆಗೆದು ಅದರ  ರಸವನ್ನು ಸೇವಿಸುವ ಅನಾದಿ ಕಾಲದ ಕ್ರಮದ ಕುರಿತಾಗಿ,  ಯಾಕೆ ಏನು ಎಂಬ ಕುತೂಹಲ  ಇದ್ದವರಿಗೆ ಸಮಯೋಚಿತವಾಗಿ  ವೈಜ್ಞಾನಿಕ ಅಂಶಗಳ ಅನಾವರಣ ಇಲ್ಲಿದೆ. ಓದಿಕೊಂಡು ಭಕ್ತಿ ಭಾವದಿಂದ ಇದನ್ನು ಮಾಡಿ.  ಪಾಲೆ ಕೆತ್ತೆ ರಸ ಸೇವನೆಗೆ ಜಾತಿ ಧರ್ಮದ ಯಾವ ಅಬ್ಯಂತರವೂ ಇಲ್ಲ. ಇದು ಮಾನವನ ಆರೋಗ್ಯ ದೃಷ್ಟಿಯಿಂದ ಹಿರಿಯರು ಮಾಡಿಕೊಂಡು ಬಂದ ಕ್ರಮ.  ಬಹುಶಃ ನಮ್ಮ ಹಿರಿಯರು ವೈಜ್ಞಾನಿಕ ಶಿಕ್ಷಣ…

Read more
ಬಾಳೆ ಗೊನೆಗೆ ಕವರ್ ಹಾಕಿರುವುದು- Covering for banana bunch

ಬಾಳೆ ಗೊನೆಗೆ ಕವರ್ ಹಾಕಿದರೆ ಹೆಚ್ಚು ಬೆಲೆ.

ಈಗ ಮಾರುಕಟ್ಟೆಯಲ್ಲಿ ದೊರೆಯುವ ಬಾಳೆ ಹಣ್ಣುಗಳನ್ನು ಸರಿಯಾಗಿ ಗಮನಿಸಿದ್ದೀರಾ? ಅವುಗಳ ಮೇಲೆ ಒಂದೇ ಒಂದು ಕಲೆ ಕೂಡಾ ಇರುವುದಿಲ್ಲ. ಹಣ್ಣು ತಿನ್ನುವ ಮುಂಚೆ ಅದನ್ನು ತೊಳೆದು ತಿನ್ನಬೇಕು ಎನ್ನುತ್ತಾರೆ. ಆದರೆ ಇದನ್ನು ಕೈತೊಳೆದು ಮುಟ್ಟುಬೇಕು ಎಂಬಷ್ಟು ಸ್ವಚ್ಚವಾಗಿರುತ್ತದೆ. ಹಣ್ಣು ನೋಡಿದರೆ ಎಂತವನಿಗೂ  ಕೊಳ್ಳುವ ಮನಸ್ಸಾಗಬೇಕು.  ಇದು ಗಾಳೆ ಗೊನೆಗೆ ಕವರ್ ಹಾಕಿ ಬೆಳೆದ ಕಾಯಿಯಾಗಿದ್ದು, ಮಾರುಕಟ್ಟೆಯಲ್ಲಿ ಇದಕ್ಕೆ ಉತ್ತಮ ಬೇಡಿಕೆ. ಮುಂದಿನ ದಿನಗಳಲ್ಲಿ ಇದು ಮಾಮೂಲಿಯಾಗಲಿದೆ.  ಬಹಳ ಹಿಂದಿನಿಂದಲೂ ವಿದೇಶಗಳಿಗೆ ರಪ್ತು ಮಾಡುವ ಉದ್ದೇಶದ ಬಾಳೆ ಕಾಯಿಗಳಿಗೆ…

Read more
ನವೆಂಬರ್ 19-20-21-22-23 ದಿನಗಳಲ್ಲಿ ವಿಶೇಷ ಕಿಸಾನ್ ಮೇಳ.

ನವೆಂಬರ್ 19-20-21-22-23 ದಿನಗಳಲ್ಲಿ ವಿಶೇಷ ಕಿಸಾನ್ ಮೇಳ.

ನವೆಂಬರ್ ತಿಂಗಳು ದಿನಾಂಕ 19 ಶನಿವಾರದಿಂದ ಮೊದಲ್ಗೊಂಡು 20-21-22-23 ರ ಬುಧವಾರದ ತನಕ ನೆಟ್ಟಣದ ಕಿಡುವಿನಲ್ಲಿರುವ ಕೇಂದ್ರೀಯ ತೋಟಗಾರಿಕಾ ಬೆಳೆಗಳ ಸಂಶೋಧನಾ ಸಂಸ್ಥೆಯಲ್ಲಿ (CPCRI) ವಿಶೇಷ ಕಿಸಾನ್ ಮೇಳ ನಡೆಯಲಿದೆ. ಇದು ಇಲ್ಲಿನ ಇತಿಹಾಸದಲ್ಲೇ ಆತೀ ದೊಡ್ಡ  ರೈತ ಸಂಪರ್ಕ ಕಾರ್ಯಕ್ರಮವಾಗಿದ್ದು, ಇದಕ್ಕೆ ನಿಮ್ಮೆಲ್ಲರನ್ನೂ ಆಹ್ವಾನಿಸಲಾಗುತ್ತದೆ. ನೀವೂ ಬನ್ನಿ ನಿಮ್ಮ ಎಲ್ಲಾ ಮಿತ್ರರನ್ನೂ ಈ ಕಾರ್ಯಕ್ರಮಕ್ಕೆ ಬರುವಂತೆ ತಿಳಿಸಿ. CPCRI ಸಂಸ್ಥೆಯ ಕರ್ನಾಟಕದಲ್ಲಿರುವ ತೆಂಗು – ಅಡಿಕೆ ಬೀಜೋತ್ಪಾದನಾ ಸಂಸ್ಥೆಗೆ 50 ವರ್ಷಗಳ ಸಂಭ್ರಮ.1972 ರಲ್ಲಿ ದಕ್ಷಿಣ…

Read more
ಉತ್ತಮ ಅಡಿಕೆ ಸಸಿಗಳು

ಅಡಿಕೆ ಬೆಳೆಗಾರರು ಸ್ವಲ್ಪ ಚಾಲಿ ಅಡಿಕೆ ತಳಿಗಳನ್ನೂ ಬೆಳೆಸಿ.

ಎಲ್ಲರೂ ಕೆಂಪಡಿಕೆಗೆ ಹೊಂದುವ ತಳಿಗಳನ್ನೇ ಬೆಳೆಸಿದರೆ ಒಂದಿಲ್ಲೊಂದು ದಿನ  ಕೆಂಪಡಿಕೆ ಮಾರುಕಟ್ಟೆ ಏನಾಗಬಹುದು  ಯೋಚಿಸಿ? ಅಂತಹ ಕಷ್ಟದ ದಿನ ಬಂದರೆ  ರೈತರಿಗೆ ಚಾಲಿ ನೆರವಿಗೆ ಬರಲೂಬಹುದು. ಎಲ್ಲಾ ಅಡಿಕೆ ಚಾಲಿಗೆ ಹೊಂದುವುದಿಲ್ಲ. ಇದಕ್ಕೆ ಕರಾವಳಿಯ ತಳಿಗಳೇ ಸೂಕ್ತ. ಕಳೆದ ವರ್ಷ ಅಡಿಕೆ ಗಿಡಗಳಿಗೆ ಬಂದ ಬೇಡಿಕೆಯನ್ನು ನೋಡಿ ಈ ವರ್ಷ  ನರ್ಸರಿಗಳು ಮಾಡಿದ ಸಸಿ  ಅಷ್ಟಿಷ್ಟಲ್ಲ. ಆದರೆ  ಕರಾವಳಿಯ ಉಭಯ ಜಿಲ್ಲೆಗಳಲ್ಲಿ ಈ ವರ್ಷ ಅಡಿಕೆ ಗಿಡ ಕೇಳುವವರಿಲ್ಲ.  ಹಾಗೆಂದು ಮಲೆನಾಡು, ಅರೆಮಲೆನಾಡು ಮುಂತಾದ ಕಡೆಯ ನರ್ಸರಿಗಳಲ್ಲಿ…

Read more
ಅಡಿಕೆ ಮಾರುಕಟ್ಟೆಯಲ್ಲಿ ತಲ್ಲಣಿಕೆ. ಮುಂದಿದೆ ಭಾರೀ ಅನಿಶ್ಚಿತತೆ

ಅಡಿಕೆ ಮಾರುಕಟ್ಟೆಯಲ್ಲಿ ತಲ್ಲಣಿಕೆ. ಮುಂದಿದೆ ಭಾರೀ ಅನಿಶ್ಚಿತತೆ.

ಅಡಿಕೆ ಮಾರುಕಟ್ಟೆಯಲ್ಲಿ ಭಾರೀ ತಲ್ಲಣಿಕೆ ಉಂಟಾಗಿದ್ದು, ವ್ಯಾಪಾರಿಗಳಿಗೇ ಅಂಜಿಕೆ ಹುಟ್ಟಿದೆ. ಎಲ್ಲಾ ಅಡಿಕೆ ವರ್ತಕರಿಗೂ ಮುಂದೇನಾಗುವುದೋ ಎಂಬ ಚಿಂತೆ ಉಂಟಾಗಿದೆ. ಇರುವ ದಾಸ್ತಾನನ್ನು ಹೇಗಾದರೂ ವಿಲೇವಾರಿ ಮಾಡುವ ಚಿಂತೆಯಲ್ಲಿದ್ದಾರೆ. ಖರೀದಿದಾರರು ಭಾರೀ ಕಡಿಮೆ ಬೆಲೆಗೆ ಕೇಳುತ್ತಿದ್ದಾರೆ. ಈಗಿನ ಪರಿಸ್ಥಿತಿಯಲ್ಲಿ ಧಾರಣೆ ಕುಸಿತವೂ ಆಗಬಹುದು. ಹೀಗೆಯೇ ಮುಂದುವರಿಯಲೂ ಬಹುದು.   ಚಾಲಿ ಅಡಿಕೆ ಮಾರುಕಟ್ಟೆಯಲ್ಲಿ ಚೋಲ್ ಅಡಿಕೆ ಬೇಡ ಎಂಬ ಸ್ಥಿತಿ ಉಂಟಾಗಿ ಅಘೋಷಿತ ದರ ಕುಸಿತ ಉಂಟಾಗಿದೆ. ಖರೀದಿದಾರರಲ್ಲಿ ಭಾರೀ ಪ್ರಮಾಣದ ಸ್ಟಾಕು ಇದೆ ಎಂಬ ವರ್ತಮಾನ ಇದೆ….

Read more
ಬೋರ್ಡೋ ದ್ರಾವಣ ಸಿಂಪಡಿಸಿದ ಮರ

ಬೋರ್ಡೋ ದ್ರಾವಣ ತಾಯಾರಿಕೆ ವಿಧಾನ ಇದು.

ಸುಣ್ಣ ಮತ್ತು ಮೈಲು ತುತ್ತೆಯನ್ನು ಸರಿಯಾದ ಪ್ರಮಾಣದಲ್ಲಿ ಮಿಶ್ರಣ ಮಾಡಿ ತಯಾರಿಸುವ ದ್ರಾವಣಕ್ಕೆ ಬೋರ್ಡೋ  ದ್ರಾವಣ (Bordeaux mixture )ಎಂದು ಹೆಸರು. ಇದು  ಕೊಳೆಯುವ ರೋಗಕ್ಕೆ ಕಾರಣವಾದ  ಶಿಲೀಂದ್ರದ ಬೀಜಾಣುಗಳನ್ನು ಮೊಳಕೆಯೊಡೆಯದಂತೆ  ಪ್ರತಿಬಂಧಿಸುವ ಶಕ್ತಿಯನ್ನು ಹೊಂದಿದೆ. ಪ್ರಾನ್ಸ್ ದೇಶದ ಬೊರ್ಡೋ ಎಂಬ ಪ್ರದೇಶದಲ್ಲಿ ದ್ರಾಕ್ಷಿ ತೋಟಗಳಲ್ಲಿ ಸಸ್ಯಾಣುಗಳಿಂದ ಉಂಟಾಗುವ ರೋಗವನ್ನು ನಿಯಂತ್ರಿಸಲು ಈ ಸಾಮಾಗ್ರಿಗಳ ಪಾಕವನ್ನು ಬಳಸಲಾಗುತ್ತಿತ್ತಂತೆ. ಅದನ್ನು ಮೈಸೂರು ಪ್ರಾಂತ್ಯದಲ್ಲಿ ಅಡಿಕೆ ಬೆಳೆಯುವ ಪ್ರದೇಶಗಳಲ್ಲಿ ಪರಿಚಯಿಸಿದವರು  ಲೆಸ್ಲಿ ಸಿ ಕೋಲ್ ಮನ್ Leslie Charles Coleman…

Read more
ಸಮತೋಲನ ಗೊಬ್ಬರ ಕೊಟ್ಟ ಮರದ ಲಕ್ಷಣ

ಸಾರಜನಕ – ಸಸ್ಯ ಬೆಳವಣಿಗೆಯ ಟಾನಿಕ್.

ಬೆಳೆಗಳ ಪೋಷಣೆಗೆ ಪ್ರಮುಖ ಆಹಾರವಾಗಿ ಸಾರಜನಕ , ರಂಜಕ ಮತ್ತು ಪೊಟ್ಯಾಷ್ ಎಂಬ ಮೂರು ಪೋಷಕಗಳು ಬೇಕು. ಇದನ್ನು ರಾಸಾಯನಿಕ ಮೂಲದಲ್ಲೂ, ನೈಸರ್ಗಿಕ ಮೂಲದಲ್ಲೂ ಪಡೆಯಬಹುದು. ಸಾರಜನಕ ಯಾವುದೇ ಮೂಲದ್ದು ಇರಲಿ, ಅದನ್ನು ಸಸ್ಯಕ್ಕೆ ಬೇಕಾದಷ್ಟು ಬಳಕೆ ಮಾಡಿದರೆ ಅದು ಟಾನಿಕ್. ಇಲ್ಲವಾದರೆ ಇದು ಹಾನಿಕರ. ಸಸ್ಯ ಬೆಳವಣಿಗೆಗೆ ಸುಮಾರು 64 ಪೋಷಕಾಂಶಗಳು ಬೇಕಾಗುತ್ತವೆ. ಅದರಲ್ಲಿ ಬಹುಸಂಖ್ಯೆಯ ಪೋಷಕಗಳು ಮಣ್ಣಿನಲ್ಲಿ, ಗಾಳಿಯಲ್ಲಿ, ನೀರಿನಲ್ಲಿ ಇರುತ್ತವೆ. ಆಯ್ದ ಸುಮಾರು 16  ಪೋಷಕಾಂಶಗಳು  ಅಗತ್ಯವಾಗಿ ಬೇಕಾಗುತ್ತವೆ. ಅದರಲ್ಲಿ ಅಗ್ರ ಫಂಕ್ತಿಯದ್ದು…

Read more
Wilt damage

ಬದನೆಯ ಕಾಯಿ ಕೊಳೆಯಲು ಕಾರಣ ಮತ್ತು ಪರಿಹಾರ.

ಬದನೆ ಬೆಳೆಯುವವರು ಎದುರಿಸುತ್ತಿರುವ ಕಾಯಿ ಕೊಳೆಯುವ ಸಮಸ್ಯೆ ಒಂದು ರೋಗವಾಗಿದ್ದು, ಇದಕ್ಕೆ ಸಮರ್ಪಕ ಪರಿಹಾರ ನೈರ್ಮಲ್ಯ ಮಾತ್ರ. ಬದನೆ ಬೆಳೆಗಾರರ ಹೊಲದಲ್ಲಿ ನೋಡಿದರೆ ಕೊಯಿದ ಬದನೆಯ ಅರ್ಧ ಪಾಲು ಹೊಲದ ಮೂಲೆಯಲ್ಲಿ ಬಿಸಾಡಿದ್ದು ಸಿಗುತ್ತದೆ. ಬದನೆ ಎಲ್ಲಿ ಬೆಳೆದರೂ ಪರಿಸ್ಥಿತಿ ಹೀಗೆಯೇ. ಇದು ಒಂದು ಸೊರಗು ರೋಗ.  ಇದಕ್ಕೆ ಬೇಸಾಯ ಪದ್ದತಿಯಲ್ಲಿ ಮಾರ್ಪಾಡು ಮತ್ತು ನೈರ್ಮಲ್ಯ ಮಾತ್ರ ಸೂಕ್ತ ಪರಿಹಾರ. ಬದನೆ  ಬೆಳೆ ಎಷ್ಟು ಇಳುವರಿ ಬಂದರೂ  ಬೆಳೆಗಾರರಿಗೆ ಸಿಗುವುದು ಅರ್ಧ ಮಾತ್ರ. ಉಳಿದವು ಕೊಳೆಯುತ್ತದೆ. ಇತ್ತೀಚಿನ…

Read more
coconut garden

ತೆಂಗು- ಕಾಂಡದಲ್ಲಿ ರಸ ಸೋರುವುದನ್ನು ಹೀಗೆ ನಿಲ್ಲಿಸಬಹುದು

ಹಾಸನ ಜಿಲ್ಲೆಯ ತೆಂಗು ರಾಜ್ಯದಲ್ಲೇ ಹೆಸರುವಾಸಿ. ಚನ್ನರಾಯಪಟ್ಟಣದ ತೆಂಗು ಎಂದರೆ ಹೆಸರುವಾಸಿ. ಆದರೆ ಇಲ್ಲೆಲ್ಲಾ ಈಗ ಪ್ರಾರಂಭವಾಗಿದೆ  ಕಾಂಡದಲ್ಲಿ ರಸ ಸೋರುವ  ಸಮಸ್ಯೆ. ಇದಕ್ಕೆ ಪರಿಹಾರ ಇಲ್ಲಿದೆ. ಹಾಸನ ಜಿಲ್ಲೆಯಲ್ಲಿ ಉತ್ತಮ  ಆದಾಯ ಕೊಡುವಂತಹ ಬೆಳೆ. ಈ ಜಿಲ್ಲೆಗಳಲ್ಲಿ ತೆಂಗಿನ ಪ್ರದೇಶ ವರ್ಷ ವರ್ಷವೂ ಹೆಚ್ಚಾಗುತ್ತಿದೆ. ತೆಂಗಿನ ಪ್ರದೇಶ ವಿಸ್ತರಣೆ ಆದಷ್ಟು ಇಳುವರಿ ಹೆಚ್ಚಾಗುತ್ತಿಲ್ಲ. ಹೊಸ ತೋಟಗಳಲ್ಲಿ ಇಳುವರಿ ಇದ್ದರೂ ಹಳೆ ಮರಗಳಿಗೆ  ಭಾರೀ ಪ್ರಮಾಣದಲ್ಲಿ  ರೋಗ ಮತ್ತು ಕೀಟ ಬಾಧೆ ಕಾಣಿಸಿಕೊಳ್ಳುತ್ತಿವೆ. ಕಾಡದ ರಸ ಸೊರುವಿಕೆ,…

Read more
error: Content is protected !!