ಡ್ರಿಪ್ ಸಮಸ್ಯೆ ಕೊಡುತ್ತಿದೆಯೇ ? ಕಾರಣ ಇಲ್ಲಿದೆ.
ಸರಕಾರ ಡ್ರಿಪ್ ನೀರಾವರಿಗೆ ಸಹಾಯಧನ ಕೊಡುತ್ತದೆ ಎಂದು ಹನಿ ನೀರಾವರಿ ಮಾಡಿಸಿಕೊಳ್ಳಬೇಡಿ. ನಿಮಗೆ ಅದರ ಮೇಲ್ವಿಚಾರಣೆ ಮಾಡಲು ಜ್ಞಾನ ಇದ್ದರೆ ಮಾತ್ರ ಮಾಡಿಕೊಳ್ಳಿ. ಗರಿಷ್ಟ ಪ್ರಮಾಣದಲ್ಲಿ ನೀರು ಉಳಿಸುವ ನೀರಾವರಿ ವ್ಯವಸ್ಥೆ ಎಂದರೆ ಹನಿ ನೀರಾವರಿ. ಇದು ಸಸ್ಯಗಳಿಗೆ ಎಷ್ಟು ನೀರು ಬೇಕೋ ಅಷ್ಟನ್ನು ಮಾತ್ರ ಒದಗಿಸಿಕೊಡುವ ವ್ಯವಸ್ಥೆ. ಗಂಟೆಗೆ ಕೆಲವೇ ಲೀಟರುಗಳಷ್ಟು ನೀರನ್ನು ಸಸ್ಯದ ಬೇರು ವಲಯದ ಒಂದು ಅಥವಾ ಎರಡು ಕಡೆಗೆ ತೊಟ್ಟಿಕ್ಕುವ ಈ ವ್ಯವಸ್ಥೆ ಉತ್ತಮ ಹೌದು ಆದರೆ ಮಣ್ಣು, ನೀರು ಮುಂತಾದವುಗಳನ್ನು …
100 ತೆಂಗಿನ ಮರಕ್ಕೆ 10000 ಕಾಯಿ ಹೇಗೆ ಪಡೆಯಲು ಬೇಕಾದ ಆರೈಕೆ.
ತೆಂಗಿನ ಮರವೊಂದರ ಇಳುವರಿ ಸಾಮರ್ಥ್ಯದಷ್ಟನ್ನು ನಾವು ಪಡೆಯುತ್ತಿಲ್ಲ. ಯಾರಿಗೆ 100 ತೆಂಗಿನ ಮರಕ್ಕೆ 10,000 ತೆಂಗಿನಕಾಯಿ ಆಗುತ್ತದೆಯೋ ಅವರಿಗೆ ತೆಂಗು ಕೃಷಿ ಲಾಭದಾಯಕ. 10000 ಕಾಯಿಗಿಂತ ಹೆಚ್ಚು ಪಡೆಯಲು ಹಾಕಬೇಕಾದ ಗೊಬ್ಬರ ಮತ್ತು ಮಾಡಬೇಕಾದ ಆರೈಕೆ ಇವು. ತೆಂಗು ಒಂದು ಏಕದಳ ಸಸ್ಯ. ಇದಕ್ಕೆ ತಾಯಿ ಬೇರು ಇಲ್ಲ. ಇರುವ ಎಲ್ಲಾ ಹಬ್ಬು ಬೇರುಗಳೂ ಆಹಾರ ಸಂಗ್ರಹಿಸಿ ಕೊಡುವ ಬೇರುಗಳಾಗಿದ್ದು, ನಿರಂತರವಾಗಿ ನಿರ್ದಿಷ್ಟ ಪ್ರಮಾಣದ ಪೋಷಕಗಳನ್ನು ಕೊಟ್ಟರೆ ಇದು ಗರಿಷ್ಟ ಇಳುವರಿಯನ್ನು ಕೊಡಬಲ್ಲುದು. ತೆಂಗಿನ ಉತ್ತಮ ಇಳುವರಿಗೆ …
ಉತ್ತಮ ಹಸುವಿನ ಆಯ್ಕೆಗೆ ಸೂಕ್ಷ್ಮ ಪರೀಕ್ಷೆಗಳು.
ಕೊಳ್ಳುವ ಹಸು ಮಾಲಕರು ಹೇಳಿದಂತೆ ಹಾಲು ಕೊಡುತ್ತದೆಯೇ, ಅವರು ಹೇಳುವುದರಲ್ಲಿ ಸತ್ಯ ಇದೆಯೇ ಎಂಬುದನ್ನು ಕೊಳ್ಳುವವರು ಪರೀಕ್ಷೆ ಮಾಡುವುದು ಅವನ ಹಕ್ಕು. ಇದಕ್ಕೆ ಕೊಡುವವರು ಆಕ್ಷೇಪ ಮಾಡಬಾರದು. ಹಾಲಿನ ಪರೀಕ್ಷೆ ಮತ್ತು ಹಾಲು ಹಿಂಡುವಾಗಿನ ಕೆಲವು ಪರೀಕ್ಷೆಗಳನ್ನು ಮಾಡಿ ಹಸುಕೊಂಡರೆ ಒಳ್ಳೆಯದು. ಹಾಲು ಇಳುವರಿ ಪರೀಕ್ಷೆ : ಹಸುವಿನಿಂದ ಒಂದೂವರೆ ದಿನದಲ್ಲಿ 3 ಬಾರಿ ಹಾಲನ್ನು ಕರೆದು, ದಿನಕ್ಕೆ ಎಷ್ಟು ಹಾಲು ಕೊಡುತ್ತದೆಂದು ತಿಳಿದುಕೊಳ್ಳಬಹುದು. ಹಸು ಬೇಗ ಹಾಲು ತೊರೆ ಬಿಡಬೇಕು. ಮೊಲೆಗಳು ಗಟ್ಟಿಯಾಗಿರಬಾರದು. ನಾಲ್ಕು ಮೊಲೆಗಳಿಂದ…
ಮೆಣಸಿನ ಬೆಳೆಯ ಈ ಸಮಸ್ಯೆಗೆ ಕಾರಣ ಮತ್ತು ಪರಿಹಾರ.
ಮೆಣಸಿನ ಬೆಳೆಯಲ್ಲಿ ಅತೀ ದೊಡ್ಡ ಸಮಸ್ಯೆ ಎಂದರೆ ಎಲೆ ಮುರುಟುವಿಕೆ. ಮೆಣಸು ಬೆಳೆಯುವ ಎಲ್ಲಾ ಪ್ರದೇಶಗಳಲ್ಲೂ ಈ ಸಮಸ್ಯೆ ಕಾಣಿಸುತ್ತದೆ. ಇದರಿಂದಾಗಿ ಭಾರೀ ಪ್ರಮಾಣದ ಇಳುವರಿ ಕಡಿಮೆಯಾಗುತ್ತದೆ. ಈ ರೋಗ ಯಾವ ಕಾರಣಕ್ಕೆ ಬರುತ್ತದೆ. ಯಾವ ಸಮಯದಲ್ಲಿ ಇದು ಹೆಚ್ಚು. ಇದನ್ನು ಹೇಗೆ ನಿಯಂತ್ರಿಸಬಹುದು ಎಂಬುದರ ಪೂರ್ಣ ಮಾಹಿತಿ ಇಲ್ಲಿದೆ. ಮೆಣಸನ್ನು ಜಗತ್ತಿನ ಎಲ್ಲಾ ಜನರೂ ಒಂದು ಪ್ರಮುಖ ಮಸಾಲೆ ವಸ್ತುವಾಗಿ ಬಳಕೆ ಮಾಡುತ್ತಾರೆ. ಎಲ್ಲಾ ದೇಶಗಳಲ್ಲೂ ಇದು ಒಂದು ಪ್ರಮುಖ ವಾಣಿಜ್ಯ ಬೆಳೆಯೂ ಹೌದು. ಮಸಾಲೆ…
Human Urine – The Forgotten Gold Manure
Do you know the benefits of human urine? Don’t hesitate — it’s like liquid gold, a natural manure that’s freely and abundantly available. From ancient times, farmers have understood the value of animal excreta in farming. Cow dung, sheep droppings, and poultry manure have long been used as natural fertilizers to enrich the soil. But…
ರೈತ ಸಮುದಾಯ ಆರೋಗ್ಯ- ಪಾಲಿಸಬೇಕಾದ ಸರಳ ಅಭ್ಯಾಸಗಳು.
ರೈತರು ರಾಷ್ಟ್ರಕ್ಕೆ ಆಹಾರವನ್ನು ಒದಗಿಸುತ್ತಾರೆ, ಆದರೆ ತಮ್ಮದೇ ಆರೋಗ್ಯದ ವಿಚಾರದಲ್ಲಿ ಅವರು ಬಹುಮಟ್ಟಿಗೆ ನಿರ್ಲಕ್ಷಿತರಾಗಿದ್ದಾರೆ. ಅವರ ವೃತ್ತಿ ನಿಜವಾಗಿ ಉಳಿದೆಲ್ಲಾ ವೃತ್ತಿಗಿಂತ ಆರೋಗ್ಯಪೂರ್ಣ ಜೀವನಕ್ಕೆ ಪೂರಕ. ಆದರೆ ತಿಳಿದೋ ತಿಳಿಯದೆಯೋ ನಾವು ಈ ಅವಕಾಶದಿಂದ ವಂಚಿತರಾಗುತ್ತಿದ್ದೇವೆ. ಕೃಷಿ ಎಂದರೆ ಕೇವಲ ಒಂದು ಉದ್ಯೋಗವಲ್ಲ — ಅದು ನಮ್ಮ ಆರೋಗ್ಯ ರಕ್ಷಕ ವೃತ್ತಿ. ಸರ್ಕಾರಿ ನೌಕರರಿಗೆ ಸರ್ಕಾರದ ಆರೋಗ್ಯ ಸೌಲಭ್ಯಗಳು, ವಿಮೆ ಇರುತ್ತದೆ. ಕೂಲಿಕಾರ್ಮಿಕರಿಗೂ ಕೆಲವು ಭದ್ರತೆಗಳು ದೊರೆಯುತ್ತವೆ. ಆದರೆ, ಭೂಮಿಯ ಮಾಲೀಕನಾದ ರೈತ ತನ್ನ ಕೂಲಿಕಾರ್ಮಿಕರ ಆರೋಗ್ಯದ…
ರಾಶಿ ಅಡಿಕೆ, ಚಾಲಿ, ಕರಿಮೆಣಸು ದರ ಏರಿಕೆ- ದಿನಾಂಕ: 16-11-2021 ಮಂಗಳವಾರ.
ಇಂದು ದಿನಾಂಕ 16-11-2021 ರ ಮಂಗಳವಾರ ಉತ್ತರ ಕನ್ನಡದ ಪ್ರಮುಖ ಮಾರುಕಟ್ಟೆ ಶಿರಸಿ, ಯಲ್ಲಾಪುರ, ಸಿದ್ದಾಪುರಗಳಲ್ಲಿ ರಾಶಿ ಅಡಿಕೆ ಧಾರಣೆ ಸ್ವಲ್ಪ ಏರಿಕೆಯಾಗಿದೆ. ಹೆಚ್ಚಾಗಿ ಚಾಲಿಯೇ ಮಾಡಲಾಗುವ ಕರಾವಳಿಯ ಭಾಗಗಳಲ್ಲಿ ಹೊಸ ಚಾಲಿಗೂ ಕ್ವಿಂಟಾಲಿಗೆ ರೂ. 500 ಹೆಚ್ಚಾಗಿದೆ. ಹಳೆ ಚಾಲಿಗೆ ಕೆಲವು ಕಡೆ 500 ಇನ್ನು ಕೆಲವು ಕಡೆ 700 ರೂ. ಹೆಚ್ಚಳವಾಗಿದೆ. ಕೆಂಪು ಚಾಲಿ ಎರಡೂ ಅನಿಶ್ಚಿತವಾಗಿದೆ. ಕರಿಮೆಣಸಿಗೆ ಸಕಲೇಶಪುರದಲ್ಲಿ ಗರಿಷ್ಟ 54,000 ಆಗಿದೆ. ಏರಿಕೆ ಇರುವಾಗ ತೃಪ್ತಿಯಲ್ಲಿ ಮಾರಾಟ ಮಾಡುವುದೇ ಜಾಣತನ ಎಂದೇ…
ಅಕಾಲಿಕ ಮಳೆ- ಮುಂದಿನ ತೊಂದರೆಗಳು ಮತ್ತು ಮುಂಜಾಗ್ರತೆ.
ಯಾರೂ ಗ್ರಹಿಸಿರದ ಈ ಸಮಯದಲ್ಲಿ ಮಳೆಯಾಗಿದೆ. ರೈತರಿಗೆ ಬಹಳ ತೊಂದರೆ ಆಗಿದೆ. ಕರ್ನಾಟಕದಲ್ಲಿ ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕಗಳಲ್ಲೆಲ್ಲಾ ಅಕಾಲಿಕ ಮಳೆಯಾಗುತ್ತಿದೆ.ಬರೇ ಕರ್ನಾಟಕ ಮಾತ್ರವಲ್ಲ ಮಹಾರಾಷ್ಟ್ರ, ತಮಿಳುನಾಡು, ಕೇರಳ, ಮುಂತಾದ ರಾಜ್ಯಗಳಲ್ಲಿಯೂ ಮಳೆ ಸುರಿಯುತ್ತಿದೆ. ಬಂಗಾಳ ಕೊಲ್ಲಿಯ ವಾಯುಭಾರ ಕುಸಿತ ಇದಕ್ಕೆ ಕಾರಣವಾಗಿದ್ದು, ಈ ಮಳೆ ಇನ್ನೂ ಮುಂದಿನ 3 ದಿನಗಳ ತನಕ ವೂ ಮುಂದುವರಿದು ಪ್ರಮಾಣ ಹೆಚ್ಚಾಗಲಿದೆ. The weather is expected to remain more or less the same for…
ಜಾಯಿ ಸಾಂಬಾರ – ಬೀಜದ ಸಸಿಯೇ ಲಾಭದಾಯಕ.
ಜಾಯಿ ಸಾಂಬಾರದ (Nutmeg spice) ಬೆಳೆಗಾರರಿಗೆ ಬೀಜದ ಗಿಡ ಉತ್ತಮವೋ ಅಥವಾ ಕಸಿ ಗಿಡವೋ ಎಂಬ ಸಂದೇಹಕ್ಕೆ ಇಲ್ಲಿದೆ ನಿಖರ ಉತ್ತರ. ಈ ಸಾಂಬಾರ ಬೆಳೆಗೆ ಈಗ ಬ್ರಾರೀ ಟ್ರೇಂಡ್ ಉಂಟಾಗಿದೆ. ಇದರ ಅವಕಾಶವನ್ನು ಬಳಕೆ ಮಾಡಿಕೊಂಡು ಬೀಜದ ಗಿಡಕ್ಕಿಂತ ಕಸಿ ಗಿಡ ಸೂಕ್ತ ಉತ್ತಮ ಎಂಬ ಪ್ರಚಾರವೂ ಚಾಲ್ತಿಯಲ್ಲಿದೆ. ಇದೆಲ್ಲಾ ಕೈಯಿಂದ ಕೊಯ್ಯುಲಿಕ್ಕಾಗುವುದನ್ನು ದೋಟಿ ಬಳಸಿ ಕೊಯ್ದಂತೆ ಎಂದರೂ ತಪ್ಪಾಗಲಾರದು. ಬೀಜದ ಗಿಡಕ್ಕೆ ಜನ ಹೇಳುವಂತೆ ಅಂತಹ ವೀಕ್ ಪಾಯಿಂಟ್ ಗಳು ಇಲ್ಲ. ಕಸಿ ಗಿಡವೂ…
