ಹೃದಯ ಶ್ರೀಮಂತಿಕೆಯ ಕೃಷಿಕರು.

ಕೃಷಿಕರು ಹಣದಲ್ಲಿ ಶ್ರೀಮಂತರಲ್ಲದಿದ್ದರೂ ಹೃದಯ ಶ್ರೀಮಂತರು.

ನಾವು ಕೃಷಿಕರು ಬಡವರು. ನಮಗೆ ಏನೂ ಇಲ್ಲ ಎಂದು ಯಾವತ್ತೂ ಹೇಳಬೇಡಿ. ಕೃಷಿರಾದವರೇ ಸಮಾಜದಲ್ಲಿ ತೃಪಿಯ ಜೀವನ ನಡೆಸು ಹೃದಯ ಶ್ರೀಮಂತರು. ಬಡತನ, ಶ್ರೀಮಂತಿಕೆ ಮುಖ್ಯವಲ್ಲ. ಬಡವನಾದವನೇ ಮುಂದೆ ಶ್ರೀಮಂತನಾಗುವುದು. ಸಿರಿವಂತನಾದವನೇ ನಂತರ ಬಡವನಾಗುವುದು. ಇದೊಂದು ಚಕ್ರ. ಕೃಷಿಕರ ಜೀವನ ಕ್ರಮ ಎಂಬುದು ಸಮಾಜದಲ್ಲಿ ಯಾರೂ ಗಳಿಸದ ಸುಖೀ ಬದುಕನ್ನು ಅನುಭವಸಲಿಕ್ಕಾಗಿಯೇ ಇರುವುದು. ಸ್ವಾವಲಂಭಿ ಬದುಕು ಎಂಬುದು ಇದ್ದರೆ ಅದು ಕೃಷಿ ವೃತ್ತಿಯಲ್ಲಿ ಮಾತ್ರ. ಇಲ್ಲಿ ನಮಗೆ ನಾವೇ ಮಾಲಕರು. ಹೊಟ್ಟೆಗೆ ತಿನ್ನುವುದಕ್ಕೇನೂ ಕಡಿಮೆ ಇಲ್ಲ. ತಿಂದು…

Read more
ಮಳೆ ಬಂತು ಮಳೆ

ದಿನಾಂಕ 17/11/21 ರಿಂದ 24/11/2021 ತನಕ ಒಂದು ವಾರದ ಕಾಲ ರಾಜ್ಯದಲ್ಲಿ ಮಳೆ.

ಏನು ಮಳೆಯ ಆವಾಂತರವೋ ತಿಳಿಯದು. ಚಳಿಗಾಲ ಬರಬೇಕಾದ ಸಮಯವಾದರೂ ಮಳೆಗಾಲಕ್ಕೆ ನಮ್ಮನ್ನಗಲಲು  ಮನಸ್ಸಿಲ್ಲ. ಒಂದಿಲ್ಲೊಂದು ವಾಯುಭಾರ ಕುಸಿತ. ಈ ಭಾರಿ ಅರಬೀ ಸಮುದ್ರ ಹಾಗೂ ಬಂಗಾಳ ಕೊಲ್ಲಿ ಎರಡರಲ್ಲೂ ವಾಯು ಭಾರ ಕುಸಿತ ಉಂಟಾಗಿದ್ದು, ದಕ್ಷಿಣ ಭಾರತದ ರಾಜ್ಯಗಳಲ್ಲಿ ಮಳೆ ಇದೆ. ಕರ್ನಾಟಕದಲ್ಲಿ ದಿನಾಂಕ 17/11/21 ರಿಂದ 23/11/2021 ತನಕ ಒಂದು ವಾರದ ಕಾಲ ರಾಜ್ಯದಲ್ಲಿ ಮಳೆ ಬರುವ ಮುನ್ಸೂಚನೆ ಇರುತ್ತದೆ. ಇನ್ನೊಂದು ವಾರದಲ್ಲಿ ಜನ  ತರಕಾರಿ ತಿನ್ನುವುದಕ್ಕೂ ಕಷ್ಟ ಪಡಬೇಕಾಗಬಹುದು.ಗ್ರಾಹಕರು ತರಕಾರೀ ಬೆಳೆಗಾರರಿಗೆ ಬಂಪರ್ ಲಾಭ…

Read more
ಫಸ್ಟ್ ಕ್ವಾಲಿಟಿ ಚಾಲಿ

ರಾಶಿ ಅಡಿಕೆ, ಚಾಲಿ, ಕರಿಮೆಣಸು ದರ ಏರಿಕೆ- ದಿನಾಂಕ: 16-11-2021 ಮಂಗಳವಾರ.

ಇಂದು ದಿನಾಂಕ 16-11-2021 ರ ಮಂಗಳವಾರ  ಉತ್ತರ ಕನ್ನಡದ ಪ್ರಮುಖ ಮಾರುಕಟ್ಟೆ ಶಿರಸಿ, ಯಲ್ಲಾಪುರ, ಸಿದ್ದಾಪುರಗಳಲ್ಲಿ  ರಾಶಿ ಅಡಿಕೆ ಧಾರಣೆ ಸ್ವಲ್ಪ ಏರಿಕೆಯಾಗಿದೆ. ಹೆಚ್ಚಾಗಿ ಚಾಲಿಯೇ ಮಾಡಲಾಗುವ ಕರಾವಳಿಯ ಭಾಗಗಳಲ್ಲಿ ಹೊಸ ಚಾಲಿಗೂ ಕ್ವಿಂಟಾಲಿಗೆ ರೂ. 500 ಹೆಚ್ಚಾಗಿದೆ. ಹಳೆ ಚಾಲಿಗೆ ಕೆಲವು ಕಡೆ 500  ಇನ್ನು ಕೆಲವು ಕಡೆ 700 ರೂ. ಹೆಚ್ಚಳವಾಗಿದೆ. ಕೆಂಪು ಚಾಲಿ ಎರಡೂ ಅನಿಶ್ಚಿತವಾಗಿದೆ. ಕರಿಮೆಣಸಿಗೆ ಸಕಲೇಶಪುರದಲ್ಲಿ ಗರಿಷ್ಟ 54,000 ಆಗಿದೆ. ಏರಿಕೆ ಇರುವಾಗ ತೃಪ್ತಿಯಲ್ಲಿ ಮಾರಾಟ ಮಾಡುವುದೇ ಜಾಣತನ ಎಂದೇ…

Read more
ಸುಪ್ರೀಮ್ ಕೋರ್ಟ್

ಸುಪ್ರೀಮ್ ಕೋರ್ಟ್ ನ್ಯಾಯಮೂರ್ತಿಗಳು ಕೃಷಿಕರ ಬಗ್ಗೆ ತೋರಿದ ಕಳಕಳಿ.

ಎಲ್ಲರೂ ಕೃಷಿಕರು ಹಾಗೆ ಮಾಡುತ್ತಾರೆ, ಹೀಗೆ ಮಾಡುತ್ತಾರೆ. ಪರಿಸರ ಹಾನಿ ಮಾಡುತ್ತಾರೆ. ಮಾಲಿನ್ಯ ಮಾಡುತ್ತಾರೆ ಎಂದು ತಗಾದೆ ತೆಗೆಯುವವರು. ಇವರೆಲ್ಲರಿಗೂ ಒಂದು ರೀತಿಯಲ್ಲಿ  ಚಾಟಿ ಏಟಿನ ತರಹ ಪ್ರಶ್ನೆಯೊಂದನ್ನು ಭಾರತದ ಸುಪ್ರೀಮ್ ಕೋರ್ಟ್ ನ್ಯಾಯಾಧೀಶರಾದ ಶ್ರೀ ಎನ್ ವಿ ರಮಣ ಇವರು ಕೇಳಿದ್ದಾರೆ. ಎಲ್ಲಾ ತಕರಾರಿನಲ್ಲೂ ರೈತರ ವಿಷಯಗಳನ್ನು ನ್ಯಾಯಾಲಯದ ಕಟ್ಟಲೆಗೆ ತರುವುದು ಸೂಕ್ತವಲ್ಲ. ರೈತರು ಅವರ ಆರ್ಥಿಕ ಮೂಲಕ್ಕನುಗುಣವಾಗಿ ಕೆಲವು ಸಣ್ಣ ಪುಟ್ಟ ತಪ್ಪುಗಳನ್ನು ಕೃಷಿ ಕಾಯಕದಲ್ಲಿ ಮಾಡಬಹುದಾದರೂ ಅದನ್ನು ನಾವು ಬೇರೆ ತಪ್ಪುಗಳಿಗೆ ಹೋಲಿಸಿದರೆ…

Read more
ಬೇಯಿಸಿದ ಬೆಟ್ಟೆ ಅಡಿಕೆ

ಅಡಿಕೆ ಧಾರಣೆ ದಿನಾಂಕ: 15-11-2021 ಸೋಮವಾರ. ಚಾಲಿ ಏರಿಕೆ- ಕೆಂಪು ಸ್ಥಿರ.

ದಿನಾಂಕ 15-11-2021 ಸೋಮವಾರ ಅಡಿಕೆ, ಕೊಬ್ಬರಿ, ಹಸಿ ಶುಂಠಿ ರಬ್ಬರ್, ಕಾಫೀ. ಏಲಕ್ಕಿ ಧಾರಣೆಗಳು ಹೆಚ್ಚೂ ಆಗದೆ ಕಡಿಮೆಯೂ ಆಗದೆ ಹಿಂದಿನ ಶುಕ್ರವಾರದ ಧಾರಣೆಯಂತೆ ಮುಂದುವರಿದಿದೆ. ಚಾಲಿ ಖಾಸಗಿಯವರಲ್ಲಿ  ದರ 50,500 ತನಕ ಏರಿಕೆಯಾಗಿದೆ. ಕ್ಯಾಂಪ್ಕೋ ಮಾತ್ರ 500  ಗರಿಷ್ಟ ದರವನ್ನು ಸೂಚಿಸಿದೆ.ಡಬ್ಬಲ್ ಚೋಳ್ 51,500 ತನಕ ಖರೀದಿ ದರ ಇದೆ. ಆದರೆ ಅಡಿಕೆ ಇಲ್ಲ. ಕರಿಮೆಣಸು ಮಾತ್ರ ಮೇಲೆಕ್ಕೆ ಏರಿದೆ. ಒಮ್ಮೆ ಇಳಿಕೆಯಾದರೂ ಸಹ ಶುಕ್ರವಾರ ಏರಿಕೆ ಪ್ರಾರಂಭವಾಗಿ ಇಂದು ಮತ್ತೆ ಪುನಃ ಏರಿದೆ. ಸಲಕೇಶಪುರದಲ್ಲಿ…

Read more
ಪೊಟ್ಯಾಶ್

ಪೊಟ್ಯಾಶ್ ಗೊಬ್ಬರ ಯಾಕೆ ಸಿಗುತ್ತಿಲ್ಲ. ಕಾರಣ ಏನು ಗೊತ್ತೇ?

ಎಲ್ಲಾ ಬೆಳೆಗಳಿಗೂ ಈ ಸಮಯದಲ್ಲಿ ಅಗತ್ಯವಾಗಿ ಬೇಕಾಗುವ ಮ್ಯುರೇಟ್ ಆಫ್ ಪೊಟ್ಯಾಶ್ ಗೊಬ್ಬರ ಈಗ ಮಾರುಕಟ್ಟೆಯಲ್ಲಿ ಯಾಕೆ ಸಿಗುತ್ತಿಲ್ಲ ? ಕಾರಣ ಮತ್ತೇನೂ ಅಲ್ಲ. ವಿದೇಶದಿಂದ ತರಿಸಲು ಅವರು ಹಣ ಹೆಚ್ಚು ಕೇಳುತ್ತಿದ್ದಾರೆ.  ಅವರ ದರವನ್ನು ಕೊಟ್ಟು ಖರೀದಿಸಿದರೆ ಇಲ್ಲಿ ಈಗಿನ ದರಕ್ಕಿಂತ ದುಪ್ಪಟ್ಟು ದರಕ್ಕೆ ಮಾರಾಟ ಮಾಡಬೇಕಾಗುತ್ತದೆಯಂತೆ. ಹಾಗಾಗಿ ಪೊಟ್ಯಾಶ್ ಮುಂದಿನ ವಾರ ಬರುತ್ತದೆ ಎನ್ನುತ್ತಾ ಈಗಾಲೇ ಒಂದು ತಿಂಗಳು ಮುಂದೂಡಿ ಆಗಿದೆ. ಇನ್ನೆಷ್ಟು ಕಾಯಬೇಕೊ ತಿಳಿಯದು. ಮ್ಯುರೇಟ್ ಅಫ್ ಪೊಟ್ಯಾಶ್ ಗೊಬ್ಬರ ಕೆನಡಾ, ರಶಿಯಾ,…

Read more
ಚಾಲೀ ಆಡಿಕೆ ಲಾಟ್

ಏರುಗತಿಯತ್ತ ಅಡಿಕೆ ಧಾರಣೆ- ದಿನಾಂಕ:12-11-2021 ಶುಕ್ರವಾರ.

ಇಂದು ದಿನಾಂಕ 12-11-2021 ಶುಕ್ರವಾರ ರಾಜ್ಯದಾದ್ಯಂತ ಅಡಿಕೆ ಧಾರಣೆಯನ್ನು ಗಮನಿಸಿದಾಗ ಚಾಲಿಯೂ ಸೇರಿದಂತೆ , ಕೆಂಪಡಿಕೆಗೂ ತುಸು ದರ ಏರಿಕೆ ಸೂಚನೆಗಳು ಕಂಡು ಬರುತ್ತಿದೆ. ಶಿರಸಿಯಲ್ಲಿ ಇಂದು ಚಾಲಿ ಮತ್ತು ಕೆಂಪು ರಾಶಿ ನಿನ್ನೆಗಿಂತ ಸ್ವಲ್ಪ ಹೆಚ್ಚಿನ ದರಕ್ಕೆ ಖರೀದಿ ಆಗಿದೆ.  ಹೊಸನಗರ ಮಾರುಕಟ್ಟೆಯಲ್ಲಿಯೂ ತುಸು ಹೆಚ್ಚು ದರಕ್ಕೆ ಖರೀದಿ ಆಗಿದೆ. ನಾಳೆ ಎರಡನೇ ಶನಿವಾರ ಇದ್ದಾಗ್ಯೂ ದರ ಸ್ವಲ್ಪ ಏರಿಕೆ ಆಗಿದೆ ಎಂದರೆ  ಸೋಮವಾರವೂ ಕ್ವಿಂಟಾಲಿಗೆ 200-500 ಏರಿಕೆ ಆಗಬಹುದು. ಸರಾಸರಿ ದರ ಕನಿಶ್ಟ ದರಗಳ…

Read more
ಕೆಂಪಡಿಕೆ

ಅಡಿಕೆ ಧಾರಣೆ ದಿನಾಂಕ- 09-11-2021 ಮಂಗಳವಾರ ಸ್ಥಿರ ಧಾರಣೆ.

09-11-2021 ಮಂಗಳವಾರ  ಅಡಿಕೆ ಧಾರಣೆ ಸ್ಥಿರವಾಗಿಯೂ  ಕರಿಮೆಣಸು ಸ್ವಲ್ಪ ಇಳಿಕೆಯೂ ಕೊಬ್ಬರಿ, ಕಾಫಿ ಹಾಗೂ ರಬ್ಬರ್ ಧಾರಣೆ ಸ್ಥಿರವಾಗಿ ಮುಂದುವರಿದಿದೆ. ಅಡಿಕೆಯ ಧಾರಣೆಗೆ ಯಾವ ಅಂತಂಕವೂ ಇಲ್ಲ. ಯಾವ ಸುದ್ದಿಗೂ ಬೆಳೆಗಾರರು ಗಮನ ಕೊಡಬೇಕಾಗಿಲ್ಲ. ಅಡಿಕೆ ಬೆಳೆಗಾರರ ಸುದ್ದಿಗೆ ಯಾವ ಸರಕಾರವೂ ಬರುವುದಿಲ್ಲ.ಅಡಿಕೆ ಬ್ಯಾನ್ ಮುಂತಾದ ಪ್ರಸ್ತಾಪ ಕೇವಲ ತಾತ್ಕಾಲಿಕ ಮಾತ್ರ. ಇಂದು ಅಡಿಕೆ ಧಾರಣೆ: BANTWALA, 09/11/2021, Coca, 26, 12500, 25000, 22500 BANTWALA, 09/11/2021, New Variety, 3, 27500, 42500, 40000…

Read more
ಕೆಂಪು ಅಡಿಕೆ ರಾಶಿ

ಅಡಿಕೆ ನಿಷೇಧದ ಪ್ರಸ್ತಾಪಕ್ಕೆ ಅಂಜಬೇಕಾಗಿಲ್ಲ. ಇದು ಕಲ್ಲು ಎಸೆಯುವ ಪ್ರಯತ್ನ ಅಷ್ಟೇ.

ಕೆಲವರಿಗೆ ಕಲ್ಲು ಎಸೆಯುವುದರಲ್ಲಿ ಮಜಾ. ಕಲ್ಲನ್ನು ಎಸೆದು ನೋಡುತ್ತಾರೆ , ಬಿದ್ದರೆ ಹಣ್ಣು ಲಾಭ. ಹೋದರೆ ಒಂದು ಕಲ್ಲು ಮಾತ್ರ. ಇದು ಈ ಹಿಂದೆ ಪಶ್ಚಿಮ ಬಂಗಾಲ ಸರಕಾರ ಗುಟ್ಕಾ, ಪಾನ್ ಮಸಾಲ ಮುಂತಾದ ಉತ್ಪನ್ನಗಳ ಮಾರಾಟ ಮತ್ತು ಉತ್ಪಾದನೆ ಮೇಲೆ ಹೇರಿದ ನಿಷೇಧಕ್ಕೂ, ಹಾಗೆಯೇ ಉತ್ತರಾಖಾಂಡದ ಸಂಸದರು ಪ್ರಧಾನಿ ಮೋದಿಯವರಿಗೆ ಅಡಿಕೆ ನಿಷೇಧ ಮಾಡಬೇಕೆಂದು ಬರೆದ ಪತ್ರಕ್ಕೂ ಇರುವ ಒಳ ಮರ್ವ. ಉತ್ತಾರಕಾಂಡದ ಸಂಸದ ನಿಶಿಕಾಂತ್ ದುಬೆ ಇವರು ಅಡಿಕೆ ತಿನ್ನುವುದರಿಂದ ಆರೋಗ್ಯ ಸಮಸ್ಯೆ ಉಂಟಾಗುತ್ತದೆ….

Read more
Farmer Mr. Subraya

Farmer earns annually Rs.3 Lakhs by intercrop with Arecanut.

Don’t depend on single crop like arecanut. Go for intercrops.Choose suitable intercrop and get maximum income from it. Annually he is getting Rs. 3 lakhs above income from intercrop. This is the advice of Mr. Subraya, a farmer from Dalavayi Hosakoppa of Soraba taluk Shivamogga dist. Karnataka.  Farmer is Executive engineer in BSNL and now…

Read more
error: Content is protected !!