
ಅಡಿಕೆ ಖರೀದಿಗೆ ದುಡ್ಡಿಲ್ಲ- ಕರಿಮೆಣಸಿಗೆ ಬೇಡಿಕೆ -07-10-2021 ರ ಧಾರಣೆ.
ಅಡಿಕೆಗೆ ದರ ಏರಿಸಿದ್ದು ಯಾಕೋ?ಇಳಿಸಿದ್ದು ಯಾಕೋ? ಈ ಆಟದಲ್ಲಿ ಅದೆಷ್ಟು ಬೆಳೆಗಾರರ ಆಸೆ ನಿರಾಸೆಯಾಗಿದೆ ! ವರ್ತಕರು ನಷ್ಟ ಅನುಭವಿಸಿದ್ದಾರೆ! ದೊಡ್ಡ ಕುಳಗಳ ಮಧ್ಯೆ ಸಣ್ಣ ಕುಳಗಳು ರಚ್ಚಾಪಚ್ಚವಾಗಿಬಿಟ್ಟವೋ ಎಂಬ ಸ್ಥಿತಿ ಉಂಟಾಗಿದೆ. ಅಡಿಕೆ ಮಾರುಕಟ್ಟೆ ಎಂಬುದು ಬಹುಷಃ ಯಾವ ಅಂಜನ ಜ್ಯೋತಿಷ್ಯಕ್ಕೂ ಸಿಕ್ಕದ ಒಂದು ಗುಟ್ಟಾಗಿ ಉಳಿದಿದೆ. ಕೆಂಪಡಿಕೆ ಮತ್ತೆ ಇಳಿಕೆಯಾಗಿದ್ದು ಗರಿಷ್ಟ ದರ 45,000 ದ ಅಸು ಪಾಸಿಗೆ ಇಳಿಕೆಯಾಗಿದೆ. ಶಿರಸಿ ಯಲ್ಲಾಪುರದಲ್ಲಿ ಹೊಸ ರಾಶಿ ಬಾರದ ಕಾರಣ ಸ್ವಲ್ಪ ಹೆಚ್ಚು ದರ ಇದೆ….