ಅಡಿಕೆ- ಟೆಂಡರ್ ಪ್ರಾಂಗಣದಲ್ಲಿ

ಅಡಿಕೆ ಖರೀದಿಗೆ ದುಡ್ಡಿಲ್ಲ- ಕರಿಮೆಣಸಿಗೆ ಬೇಡಿಕೆ -07-10-2021 ರ ಧಾರಣೆ.

ಅಡಿಕೆಗೆ ದರ ಏರಿಸಿದ್ದು ಯಾಕೋ?ಇಳಿಸಿದ್ದು ಯಾಕೋ? ಈ ಆಟದಲ್ಲಿ ಅದೆಷ್ಟು ಬೆಳೆಗಾರರ ಆಸೆ ನಿರಾಸೆಯಾಗಿದೆ ! ವರ್ತಕರು ನಷ್ಟ ಅನುಭವಿಸಿದ್ದಾರೆ! ದೊಡ್ಡ ಕುಳಗಳ ಮಧ್ಯೆ ಸಣ್ಣ ಕುಳಗಳು ರಚ್ಚಾಪಚ್ಚವಾಗಿಬಿಟ್ಟವೋ ಎಂಬ ಸ್ಥಿತಿ ಉಂಟಾಗಿದೆ.  ಅಡಿಕೆ ಮಾರುಕಟ್ಟೆ ಎಂಬುದು ಬಹುಷಃ ಯಾವ ಅಂಜನ ಜ್ಯೋತಿಷ್ಯಕ್ಕೂ ಸಿಕ್ಕದ ಒಂದು ಗುಟ್ಟಾಗಿ ಉಳಿದಿದೆ. ಕೆಂಪಡಿಕೆ ಮತ್ತೆ ಇಳಿಕೆಯಾಗಿದ್ದು ಗರಿಷ್ಟ ದರ 45,000 ದ ಅಸು ಪಾಸಿಗೆ ಇಳಿಕೆಯಾಗಿದೆ. ಶಿರಸಿ ಯಲ್ಲಾಪುರದಲ್ಲಿ ಹೊಸ ರಾಶಿ ಬಾರದ ಕಾರಣ ಸ್ವಲ್ಪ ಹೆಚ್ಚು ದರ ಇದೆ….

Read more
ಸ್ಪ್ರೆಡ್ಡರ್ ಅಥವಾ ಅಂಟು ಇಲ್ಲದೆ ಸಿಂಪಡಿಸಿದ ದ್ರಾವಣ

ಬೋರ್ಡೋ ಸಿಂಪಡಿಸುವಾಗ ಸ್ಪ್ರೆಡ್ಡರ್ ಬಳಕೆ ಬೇಕೇ, ಬೇಡವೇ?

ಬೋರ್ಡೋ ದ್ರಾವಣ ಸಿಂಪಡಿಸುವಾಗ ಹಿಂದೆ ರಾಳ ಎಂಬ ವಸ್ತುವನ್ನು ಬಳಕೆ ಮಾಡುತ್ತಿದ್ದರು. ಅದು ಒಂದು ಮರದ ಮೇಣವಾಗಿತ್ತು. ಈಗ ಅದರ ಬದಲಿಗೆ ಆಧುನಿಕ ಹೆಸರಿನ ಉತ್ಪನ್ನಗಳು ಬಂದಿವೆ. ಬಟ್ಟೆಯೊಂದನ್ನು ನೀರಿನಲ್ಲಿ ಹಾಕಿ. ಆಗ ಅದರ ಎಲ್ಲಾ ಭಾಗಗಳೂ ಏಕ ಪ್ರಕಾರ ಒದ್ದೆಯಾಗುವುದಿಲ್ಲ. ಅದನ್ನು ಸಾಬೂನಿನ ದ್ರಾವಣದಲ್ಲಿ ಹಾಕಿ, ಎಲ್ಲಾ ಭಾಗಗಳೂ ಒದ್ದೆಯಾಗುತ್ತದೆ. ಇದಕ್ಕೆ ಕಾರಣ ಸಾಬೂನಿನಲ್ಲಿರುವ ಪ್ರಸರಕ ಗುಣ.   ಈ ತತ್ವದ ಮೇಲೆ ಕೃಷಿಯಲ್ಲಿ ಸ್ಪ್ರೆಡ್ಡರುಗಳ ಬಳಕೆ ಅಗತ್ಯವಾಯಿತು. ಸ್ಪ್ರೆಡ್ಡರ್ ಬಳಸಿದಾಗ ನೀವು ಸಿಂಪಡಿಸಿದ ದ್ರಾವಣ…

Read more
ಜೀವಾಮೃತ ಸಾರ

“ಜೀವಾಮೃತ” ಇದರಲ್ಲಿ ಏನಿರುತ್ತದೆ ಗೊತ್ತೇ?

ಜೀವಾಮೃತ ಎಂಬುದು  ಸುಮಾರು 10-15 ವರ್ಷಗಳಿಂದೀಚೆಗೆ ನಮಗೆ ಪರಿಚಯವಾದ  ಹೆಸರು. ಅದಕ್ಕೂ ಮುಂಚೆ ಒಬ್ಬರು ಇಂಥಹ ತಯಾರಿಕೆಯನ್ನು ಅಮೃತ ಪಾನಿ ಎಂದು ಕರೆದಿದ್ದರು. ಈಗ ಮತ್ತೆ ಗೋ ಕೃಪಾಮೃತ ಎಂಬ  ಉತ್ಪನ್ನ ಹೆಚ್ಚು ಸುದ್ದಿಯಲ್ಲಿದೆ. ಇವೆಲ್ಲವೂ ಜೈವಿಕವಾಗಿ ಮಣ್ಣನ್ನು ಶ್ರೀಮಂತಗೊಳಿಸಲು ಇರುವ ಬೆಳೆ ಪೋಷಕಗಳು. ಇದರಲ್ಲಿ ಏನು ಇದೆ ಎನ್ನುದಕ್ಕಿಂತ ಇದನ್ನು ಬಳಕೆ ಮಾಡಿದರೆ ಹಾನೀ ಏನೂ ಇಲ್ಲ ಎಂಬುದಂತೂ ಸತ್ಯವಾದದ್ದು. ಕೃಷಿ ಮಾಡುವ ಮಣ್ಣು ಜೈವಿಕವಾಗಿ ಸಂಪಧ್ಭರಿತವಾಗಿದ್ದರೆ  ಎಲ್ಲಾ ಕೃಷಿಯೂ ಸರಾಗ. ಯಾವುದೇ ಮಣ್ಣು ಜೈವಿಕತೆಯಿಂದ…

Read more

ಕೊಳೆ ರೋಗ ಬಂದಿದೆಯೇ?ಹಾಗಿದ್ದರೆ ನೀವು ಮಾಡಬೇಕಾದ ಅಗತ್ಯ ಕೆಲಸ ಏನು?

ಈ ವರ್ಷ ಮಳೆಯ ಅರ್ಭಟ ಸ್ವಲ್ಪ ಕಡಿಮೆಯಾದ ಕಾರಣ ಕೊಳೆ ರೋಗ ಬಂದ ಪ್ರಮಾಣ ತುಂಬಾ ಕಡಿಮೆ. ಒಂದು ವೇಳೆ ಕೊಳೆ ರೋಗ ಬಂದಿದ್ದರೆ ನೀವು ತೋಟದಲ್ಲಿ ಏನು ಮಾಡಬೇಕು. ಇದರ ಪ್ರತಿಫಲ ಏನು ಇಲ್ಲಿದೆ ಮಾಹಿತಿ. ಅಡಿಕೆ ಮರಗಳಲ್ಲಿ ಕಾಯಿಗಳು ಬಲಿಯುತ್ತಿರುವಾಗ ಒಂದು ಶಿಲೀಂದ್ರ ಕಾಯಿಯ ಒಳಗೆ ಹೋಗಿ ಅದನ್ನು ಹಾನಿ ಮಾಡಿ ಕೊಳೆಯುವಂತೆ ಮಾಡುತ್ತದೆ. ಈ ಶಿಲೀಂದ್ರವು ಒಂದು ಪರಾವಲಂಭಿ ಜೀವಿಯಾಗಿದ್ದು, ಅಡಿಕೆಯ ಕಾಯಿಯ ಒಳಗೆ ಅದು ಸಂಖ್ಯಾಭಿವೃದ್ದಿಯಾಗಿ  ಅಲ್ಲಿಂದ ಹೊರ ಬರುವ ಸಮಯಕ್ಕೆ…

Read more
ಅಡಿಕೆ ರಾಸಿ

ಮುಂದಿನ ತಿಂಗಳಲ್ಲಿ ಅಡಿಕೆ ಧಾರಣೆ ಹೇಗಾಗಬಹುದು?

ಜನವರಿ 2022 ಅಡಿಕೆ ಬೆಳೆಗಾರರು ಹೊಸ ಚಾಲಿ ಅದೂ ಸಾಧಾರಣ ಗುಣಮಟ್ಟದ ಅಡಿಕೆಗೆ ಕಿಲೋ 430-440  ತನಕ ಪೆಡೆದಿದ್ದರು. ಫೆಬ್ರವರಿಯಲ್ಲಿ ಧಾರಣೆ ಕುಂಟುತ್ತಾ  ಸಾಗಿದೆ.  ಕ್ಯಾಂಪ್ಕೋ ಬೆಂಬಲದಲ್ಲಿ ದರ ಬೀಳಲಿಲ್ಲ ಎನ್ನಲಾಗುತ್ತಿದೆ. ಖಾಸಗಿಯವರು ದರ ಇಳಿಸಿ, ನಾವು ಸ್ಪರ್ಧೆಗೆ ಇಲ್ಲ ಎಂದು ಹಿಂದೆ ಸರಿದಿದ್ದಾರೆ. ಈ ಎಲ್ಲಾ ಕಾರಣಗಳಿಂದ ಮುಂದಿನ ತಿಂಗಳು ಚಾಲಿ ಅಡಿಕೆ ದರ ಸ್ವಲ್ಪ ಹಿಂದೆ ಬರುವ ಸಾಧ್ಯತೆ ಕಂಡು ಬರುತ್ತಿದೆ. ಆದಾಗ್ಯೂ ಸ್ವಲ್ಪ ಪ್ರಮಾಣದಲ್ಲಿ  ಆಮದು ಆಗಿದೆಯಾದರೂ, ಇದನ್ನು ಸರಕಾರದ ಗಮನಕ್ಕೆ ತಂದು…

Read more
ಮದುವೆಯ ಸಂಧರ್ಭ

ಕೃಷಿಕರ ಮಕ್ಕಳಿಗೆ ಮದುವೆ ಭಾಗ್ಯ- ಯಾಕೆ ಕಷ್ಟವಾಗುತ್ತಿದೆ? ಪರಿಹಾರ ಏನು?

ಬಹಳ ಜನ ಯುವಕರಿಗೆ ಕೃಷಿ ವೃತ್ತಿಯೇ ಆಗಬಹುದು ಎಂಬ ಆಸೆ ಇದೆ. ಅದರೆ ನಮಗೆ ಹೆಣ್ಣು ಸಿಗದೆ ಮದುವೆ ಭಾಗ್ಯದಿಂದ ವಂಚಿತರಾದೇವೋ ಏನೋ ಎಂಬ ಆತಂಕದಿಂದ, ಬೇರೆ ಉದ್ಯೋಗವನ್ನೇ  ಹುಡುಕುತ್ತಿದ್ದಾರೆ.ವಾಸ್ತವಾಗಿ ಪರಿಸ್ಥಿತಿಯೂ ಹೀಗೇ ಇದೆ. ಬರೇ ಕೃಷಿಕರಿಗೆ ಮಾತ್ರವಲ್ಲ. ಸಮಾಜದಲ್ಲಿ ಯಾರಿಗೆ ಖಾತ್ರಿಯ ಸಂಪಾದನೆ ಮೂಲ ಇಲ್ಲವೋ,ಯಾರಿಗೆ ಮೈ ಕೈ ಕೊಳಕು ಆಗದ ಬಿಳಿಕಾಲರಿನ ಉದ್ಯೋಗ ಇಲ್ಲವೋ, ಅವರಿಗೆಲ್ಲಾ ಈಗ ಮದುವೆಯೆಂಬ ಜೀವನದ ಅತ್ಯಂತ ಪ್ರಮುಖ ಘಟ್ಟ ಅನಿಶ್ಚಿತ. ಸರಕಾರಿ ಉದ್ಯೋಗ, ಸಾಪ್ಟ್ವೇರ್ ಮಂತಾದ ಅಧಿಕ ಸಂಪಾದನೆಯ…

Read more
ಕರಿಮೆಣಸಿಗೆ ಬೋರ್ಡೋ ದ್ರಾವಣ ಸಿಂಪಡಿಸಿದಾಗ

ಕರಿಮೆಣಸಿಗೆ ಬೋರ್ಡೋ ಸಿಂಪರಣೆ ಯಾಕೆ ಮತ್ತು ಹೇಗೆ?

ಕರಿಮೆಣಸಿಗೆ ಬಹಳ ಜನ ರೈತರು ಬೋರ್ಡೋ ಸಿಂಪರಣೆ ಮಾಡುವ ವಿಧಾನ ಸರಿಯಾಗಿಲ್ಲ. ಅದರ ಸೂಕ್ತ ವಿಧಾನ ಹೀಗೆ. ಹೆಚ್ಚಿನ ಬೆಳೆಗಾರರು ಕರಿಮೆಣಸಿಗೆ ಬೋರ್ಡೋ ದ್ರಾವಣ ಸಿಂಪಡಿಸುತ್ತೀರಾ ಎಂದರೆ ನಾವು ಅಡಿಕೆಗೆ ಹೊಡೆಯುವಾಗ ಅದು ಹಾರಿ ಅದಕ್ಕೂ ಬೀಳುತ್ತದೆ. ಅಷ್ಟೇ  ಸಾಕಾಗುತ್ತದೆ ಎನ್ನುತ್ತಾರೆ. ಮತ್ತೆ ಕೆಲವರು ಸಿಂಪರಣೆ ಮಾಡುವವರಿದ್ದರೂ ಸಹ ಎಲೆಗಳೆಲ್ಲಾ ಬಿಳಿ ಬಿಳಿ ಆಗುವಂತೆ ಸಿಂಪರಣೆ  ಮಾಡುತ್ತಾರೆ.  ಇದು ಯಾವುದೂ ವೈಜ್ಞಾನಿಕವಾಗಿ ಸೂಕ್ತ ವಿಧಾನ ಅಲ್ಲ. ಇದರಿಂದ ರೋಗ ಪ್ರವೇಶಕ್ಕೆ ತಡೆ ಉಂಟಾಗುವುದಿಲ್ಲ. ರೋಗ ಬಾರದಿದ್ದರೆ ಚಾನ್ಸ್….

Read more
ಮೈದಾನ ಪ್ರದೇಶಕ್ಕೆ ಹೊಂದುವ ನೀರಾವರಿ ಬೇಕಾಗದ ಗೋಡಂಬಿ ತಳಿಗಳು.

ಮೈದಾನ ಪ್ರದೇಶಕ್ಕೆ ಹೊಂದುವ ನೀರಾವರಿ ಬೇಕಾಗದ ಗೋಡಂಬಿ ತಳಿಗಳು.

ಅರೆ ಮಲೆನಾಡು ಮತ್ತು ಬಯಲು ಸೀಮೆಗಳಾದ ತುಮಕೂರು, ಶಿರಾ, ಕೊಲಾರ, ರಾಮನಗರ, ಹಾಗೆಯೇ ಬಾಗಲಕೋಟೆ, ಬೆಳಗಾವಿಯ ಕೆಲವು ಭಾಗಗಳಲ್ಲಿ  ರೈತರು ಈಗಾಗಲೇ ಗೇರು ಬೆಳೆಸುತ್ತಿದ್ದು, ಇಲ್ಲಿನ ಹವಾಮಾನದಲ್ಲಿ ಉತ್ತಮ ಇಳುವರಿ ಬರುತ್ತಿದೆ. ಇಲ್ಲಿನ ಒಣ ಭೂಮಿಗೆ ಇದು ಚೆನ್ನಾಗಿ ಹೊಂದಿಕೊಂಡು ನೀರಾವರಿ ಮಾಡುವುದಿದ್ದರೂ ಅತೀ ಕಡಿಮೆ ನೀರಾವರಿ ಸಾಕು. ಬಾಗಲಕೋಟೆಯ ತೋಟಗಾರಿಕಾ ವಿಶ್ವವಿಧ್ಯಾನಿಲಯ, ಹುಲಕೋಟಿಯ ಕೃಷಿ ಸಂಶೋಧನಾ ಕೇಂದ್ರ, ಚಿಂತಾಮಣಿಯ ತೋಟಗಾರಿಕಾ ಸಂಶೋಧನಾ  ಕೇಂದ್ರಗಳು ಗೋಡಂಬಿ ಬೆಳೆಯನ್ನು  ಬೆಳೆಸುವ ರೈತರಿಗೆ ಮನವರಿಕೆ ಮಾಡಿಕೊಡಲು ಶ್ರಮಿಸುತ್ತಿದ್ದಾರೆ. ಮೈದಾನ ಪ್ರದೇಶಕ್ಕೆ…

Read more
ಅಡಿಕೆ ಮರದ ಸಿಂಗಾರಕ್ಕೆ ಸಿಂಪರಣೆ

ಅಡಿಕೆ- ಸಿಂಗಾರಕ್ಕೆ ಸಿಂಪರಣೆ ಮಾಡುವವರಿಗೆ ಇಲ್ಲಿದೆ ಮಾಹಿತಿ.

ಬೇಸಿಗೆಯಲ್ಲಿ ಅಡಿಕೆ ಕಾಯಿ ಉದುರುವ ಸಮಸ್ಯೆಗಾಗಿ ಬೆಳೆಗಾರರು ಸಿಂಗಾರಕ್ಕೆ ಸಿಂಪರಣೆ ಮಾಡುತ್ತಾರೆ. ಯಾವಾಗ ಸಿಂಗಾರಕ್ಕೆ ಕೀಟ- ರೋಗಗಳಿಂದ ತೊಂದರೆ ಉಂಟಾಗುತ್ತದೆ ಎಂದು ತಿಳಿದು ಆ ಸಮಯಕ್ಕೆ ಸರಿಯಾಗಿ ಸಿಂಪರಣೆ ಮಾಡಬೇಕು.  ಕೀಟವೋ, ರೋಗವೋ ಎಂಬುದನ್ನು ಗಮನಿಸಿ ಅದಕ್ಕೆ ಬೇಕಾದ ಔಷಧಿಯನ್ನು ಸಿಂಪಡಿಸಬೇಕು.   ಮೊಡ ಕವಿದ ವಾತಾವರಣ, ಮಳೆಯಾದ ಸಮಯ ಅಡಿಕೆ ಬೆಳೆಗೆ ಕೆಲವೊಂದು ಸಮಸ್ಯೆಗಳನ್ನು  ತರುತ್ತದೆ. ಅದನ್ನು ತಡೆಯಲು ಆ ವಾತಾವರಣ ಇರುವಾಗಲೇ ಕ್ರಮ ಕೈಗೊಂಡರೆ ಫಲ ಹೆಚ್ಚು.ಎಲ್ಲಾ ಬೆಳೆಗಳಿಗೂ ಅನುಕೂಲಕರ ವಾತಾವರಣ ಎಂದರೆ ಹಿತ…

Read more
ಅಲಸಂಡೆ ಬೆಳೆ

ರೋಗ- ಕೀಟಗಳ ಹಾನಿ ಕಡಿಮೆ ಮಾಡಲು ತರಕಾರಿ ಬೆಳೆಗೆ ಮಲ್ಚಿಂಗ್ ಶೀಟು ಹಾಕಿ.

ಇಂದು ನಾವು ಹೇರಳವಾಗಿ ತರಕಾರಿಗಳನ್ನು ಬೆಳೆದು ಬಳಸುತ್ತಿದ್ದರೆ, ಆ ಯಶಸ್ಸಿನ ಹಿಂದೆ ಮಲ್ಚಿಂಗ್ ಶೀಟು ಎಂಬ ತಂತ್ರಜ್ಞಾನದ ಕೊಡುಗೆ ಬಹಳ ಇದೆ. ಇದು ಇಲ್ಲವಾಗಿದ್ದರೆ ಬಹುಶಃ 25-30% ಬೆಳೆ ಕಡಿಮೆಯಾಗಿ, ರೈತರಿಗೆ ಲಾಭವೂ ಕಡಿಮೆಯಾಗುತ್ತಿತ್ತು. ಪ್ರತೀ ವರ್ಷವೂ ತರಕಾರಿ ಬೆಳೆಯುವರಿಗೆ ಒಂದಿಲ್ಲೊಂದು ತೊಂದರೆ.  ಬಾರೀ ಪ್ರಮಾಣದಲ್ಲಿ  ಮಳೆ ಹೊಡೆತಕ್ಕೆ ಸಿಕ್ಕಿ ಬೆಳೆ ಹಾಳಾಗುತ್ತದೆ. ಬೇಸಿಗೆಯಲ್ಲಿ ನೀರೊತ್ತಾಯವಾಗುತ್ತದೆ. ಕಳೆ ಬರುತ್ತದೆ. ಹುಳ ಬರುತ್ತದೆ. ಇದಕ್ಕೆಲ್ಲಾ ಮಲ್ಚಿಂಗ್ ಶೀಟು ಹಾಕಿ ಬೆಳೆದರೆ ಅಷ್ಟೊಂದು ಹಾನಿಇಲ್ಲ. ಕಾರಣ ಇಷ್ಟೇ. ಅಧಿಕ ತೇವಾಂಶವಾಗುವುದನ್ನು…

Read more
error: Content is protected !!