ಕಿಸಾನ್ ಸಮ್ಮಾನ್ ಫಲಾನುಭವಿ ರೈತ

ರೈತರಿಂದ ಕಿಸಾನ್ ಸಮ್ಮಾನ್ ನಿಧಿ ದುರುಪಯೋಗ- ಮರುಪಾವತಿಗೆ ಆದೇಶ.

ಭಾರತ ಸರಕಾರ ಕೃಷಿಕರಿಗೆ ಸನ್ಮಾನ ಮಾಡುವುದಕ್ಕಾಗಿ ಕೊಡುತ್ತಿರುವ ವಾರ್ಷಿಕ 6000 ರೂ.ಗಳಿಗೂ ನಕಲಿ ರೈತರು ನುಸುಳಿದ್ದಾರಂತೆ. ಕೇಂದ್ರ ಕೃಷಿ ಮಂತ್ರಿಗಳಾದ ನರೇಂದ್ರ ಸಿಂಗ್ ತೋಮರ್ ಇವರು ಪಾರ್ಲಿಮೆಂಟ್ ಗೆ ನೀಡಿದ ಹೇಳಿಕೆಯಂತೆ, ನಮ್ಮ ದೇಶದಲ್ಲಿ ಅರ್ಹತೆ ಇಲ್ಲದ  ಸುಮಾರು 42 ಲಕ್ಷ  ಮಂದಿ, ಸುಮಾರು 3000 ಕೋಟಿ ಮೊತ್ತದ ಕಿಸಾನ್ ಸಮ್ಮಾನ್ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರಂತೆ. ಸರಕಾರ ಇದೆಲ್ಲದರ ಲೆಕ್ಕ ತೆಗೆದಿದೆ. ಮತ್ತು ಅದನ್ನು ಪಾವಾಸು ಪಡೆಯಲು ಮುಂದಾಗಿದೆ. ಸರಕಾರಕ್ಕೆ ಜನ ಮೋಸ ಮಾಡುವುದೋ ಅಥವಾ ಸರಕಾರ…

Read more
ಹಣ್ಣು ನೊಣ ಬಾಧೆಯಿಂದ ಹಾಳಾಗುವ ಹಾಗಲಕಾಯಿ

ಹಾಗಲಕಾಯಿ- ಹೀರೆಕಾಯಿ ಹಾಳಾಗುವುದಕ್ಕೆ ಕಾರಣ ಏನು ಗೊತ್ತೇ?

ನಾವೆಲ್ಲಾ ಬೆಳೆಸುವ ಹೀರೆಕಾಯಿ, ಹಾಗಲಕಾಯಿ, ಪಡುವಲ ಕಾಯಿ ಮುಳ್ಳು ಸೌತೆ ಹಾಳಾಗುವುದಕ್ಕೆ ಕಾರಣ ಒಂದು ನೊಣ. ಈ ನೊಣದ ಸಂತತಿ ಇತ್ತೀಚಿನ ದಿನಗಳಲ್ಲಿ ಬಹಳ ಹೆಚ್ಚಳವಾಗಿದ್ದು, ಯಾವುದೇ ಬೆಳೆಯನ್ನು ಬಿಡದ ಸ್ಥಿತಿ ಬಂದಿದೆ. ಹಿಂದೆ ಕೆಲವು ಸಿಹಿ ಹಣ್ಣು , ತರಕಾರಿಗಳಿಗೆ ಮಾತ್ರ ಇದ್ದ ಇದರ ಕಾಟ ಈಗ ಬಹುತೇಕ ಎಲ್ಲಾ  ತರಕಾರಿಗಳಿಗೂ ಬಂದಿದೆ. ತೊಂಡೆಯನ್ನೂ ಬಿಡುತ್ತಿಲ್ಲ. ಪಪ್ಪಾಯಿಯನ್ನೂ ಬಿಡುತ್ತಿಲ್ಲ.  ಇವುಗಳ ನಿಯಂತ್ರಣ ಒಂದು ಸಾಹಸವೇ ಆಗಿದೆ. ಹಣ್ಣು ನೊಣ Drosophila melanogaster  ಎಂದು ಕರೆಯಲ್ಪಡುವ  ಒಂದು…

Read more
ಅಕ್ಕಿ ಆಗುವ ಭತ್ತದ ಪೈರಿಗೆ ಸಿಂಪರಣೆ

ನಮ್ಮ ಕೃಷಿ ಉತ್ಪನ್ನಗಳು ಯಾಕೆ ವಿದೇಶಗಳಲ್ಲಿ ತಿರಸ್ಕೃತವಾಗುತ್ತದೆ?

ನಮ್ಮಲ್ಲಿ 90% ಕ್ಕೂ ಹೆಚ್ಚಿನ ರೈತರು ಮಿತಿಗಿಂತ ಹೆಚ್ಚು  ಕೀಟನಾಶಕ ಬಳಸುತ್ತಾರೆ. ಬಹುತೇಕ ಕೃಷಿಕರಿಗೆ ಯಾವ ಹಂತದಲ್ಲಿ ಯಾವ ಕೀಟನಾಶಕ ಬಳಸಬೇಕು ಎಂದು ತಿಳಿದಿಲ್ಲ. ನಾವು ಬಳಸುವ ಕೀಟ ನಾಶಕ ರೋಗನಾಶಕ ಎಷ್ಟು ಸಮಯ ಬೆಳೆಯಲ್ಲಿ ಉಳಿಯುತ್ತದೆ ಎಂಬುದೂ ಗೊತ್ತಿಲ್ಲ. ಅಂಗಡಿಯವರು ಕೊಟ್ಟದ್ದನ್ನು, ಸ್ವಲ್ಪ ಸ್ಟಾಂಗ್ ಇದ್ದರೆ ಒಳ್ಳೆಯದೆಂದು ಬಾಟಲಿಯನ್ನೇ ಕ್ಯಾನಿಗೆ ಸುರಿದು  ಸಿಂಪಡಿಸುವ ಕಾರಣ ಅವು ಬೆಳೆಗಳಲ್ಲಿ ಉಳಿಯುತ್ತದೆ. ಆದ ಕಾರಣ ಅದು ಪರೀಕ್ಷೆಯಲಿ ಸಿಕ್ಕಿ ಬೀಳುತ್ತದೆ. ನಮ್ಮ ದೇಶದಲ್ಲಿ ಮಾತ್ರ ಕೀಟನಾಶಕ ರೋಗನಾಶಕ ಬಳಕೆ…

Read more
ಕುಬ್ಜ ತಳಿಯ ಅಡಿಕೆ ಮರ

ಕುಬ್ಜ ತಳಿಯ ಅಡಿಕೆ-ಹೇಗೆ ಬೆಳೆಸುವುದು? ಏನು ಅನುಕೂಲ?

ಕುಬ್ಜ ತಳಿಯ ಅಡಿಕೆಯನ್ನು ಬೆಳೆಸುವ ಬಗ್ಗೆ ರೈತರರಲ್ಲಿ ಇರುವ ಸಂದೇಹಗಳಿಗೆ ಇಲ್ಲಿದೆ ಸಮಂಜಸ  ಉತ್ತರ. ಕುಬ್ಜ ತಳಿಯ ಅಡಿಕೆಯನ್ನು ವಿಟ್ಲದ CPCRI ಪ್ರಾದೇಶಿಕ ಕೇಂದ್ರೀಯ ತೋಟದ ಬೆಳೆಗಳ ಸಂಶೋಧನಾ ಸಂಸ್ಥೆಯು  ಹೈಬ್ರೀಡೀಕರಣದ ಮೂಲಕ  ಅಭಿವೃದ್ದಿಪಡಿಸಿದೆ. ಈಗಾಗಲೇ ಇದು ಹಲವು ರೈತರಲ್ಲಿ  ಮಿತ ಸಂಖ್ಯೆಯಲ್ಲಿ ಬೆಳೆಯುತ್ತಿದೆ. ಸಂಸ್ಥೆಯಲ್ಲದೆ ಕೆಲವು ಖಾಸಗಿ ವ್ಯಕ್ತಿಗಳೂ ಸ್ವಲ್ಪ ದೊಡ್ಡ ಪ್ರಮಾಣದಲ್ಲಿ ಬೆಳೆಸಿದ್ದೂ ಇದೆ.  ಕುಬ್ಜ ತಳಿ ಬೆಳೆಸಿದರೆ ನಿರ್ವಹಣೆ ಸುಲಭ ಎಂದು ಹೊಸಬರು ಅಂದುಕೊಂಡರೆ, ಕೆಲವರು. ಇದರಲ್ಲಿ  ಇತರ ತಳಿಯಷ್ಟು ಇಳುವರಿ ದೊರೆಯುವುದಿಲ್ಲ…

Read more
ಡ್ರಾಗನ್ ಪ್ರುಟ್ ಬೆಳೆ

ಕನ್ನಡ ನಾಡಿನಲ್ಲಿ ಹೊಸ ಹಣ್ಣಿನ ಬೆಳೆಯ ಹವಾ- ಡ್ರ್ಯಾಗನ್ ಫ್ರೂಟ್ ಬೆಳೆ.

ಕಡಿಮೆ ನೀರು, ಕಡಿಮೆ ಫಲವತ್ತಾದ ಭೂಮಿಯಲ್ಲೂ  ಬೆಳೆಯಬಹುದಾದ  ಹಣ್ಣಿನ ಬೆಳೆ ಇದು. ಉತ್ತಮ ಲಾಭ ಇದೆ ಎಂಬುದಾಗಿ ಹೇಳುತ್ತಿದ್ದಾರೆ. ಕರ್ನಾಟಕದ ಬಹಳಷ್ಟು ರೈತರಿಗೆ ಈ ಬೆಳೆಯ ಬಗ್ಗೆ ಆಸಕ್ತಿ ಬಂದು ಬೆಳೆ ಪ್ರದೇಶ ದಿನದಿಂದ ದಿನಕ್ಕೆ ವಿಸ್ತರಣೆ ಆಗುತ್ತಿದೆ. ಡ್ರ್ಯಾಗನ್ ಹಣ್ಣು ಇದು  ನಮ್ಮ ಪ್ರಾದೇಶಿಕ ಹಣ್ಣು ಅಲ್ಲ. ಇದೊಂದು ವಿಶೇಷ ಗುಣವುಳ್ಳ ಹಣ್ಣು. ನಮಲ್ಲಿ ಇತ್ತೀಚೆಗೆ ಇದರ ಪರಿಚಯವಾಗಿದೆ.ಅಮೇರಿಕಾದ ಮೆಕ್ಸಿಕೋದಲ್ಲಿ ಹೆಚ್ಚಾಗಿ ಬೆಳೆಯುತ್ತದೆ. ವಿದೇಶದ ಈ ಹಣ್ಣು ಇತ್ತೀಚಿನ ದಿನಗಳಲ್ಲಿ ಬೆಂಗಳೂರು, ಬೀಜಾಪುರ,ಚಿತ್ರದುರ್ಗ, ಬೆಳಗಾವಿ ಮುಂತಾದ…

Read more
ಉತ್ತಮ ಬೆಳವಣಿಗೆಯ ಸಸಿ

ಬಯಲುಸೀಮೆಯ ಅಡಿಕೆ ಬೆಳೆಗಾರರಿಗೆ ಪ್ರಮುಖ ಸಲಹೆಗಳು.

ಬಯಲು ಸೀಮೆಯ ರೈತರು ಈ ತನಕ ನಷ್ಟದ ಬೆಳೆಗಳಾದ ಜೋಳ, ಭತ್ತ ಮುಂತಾದ ಬೆಳೆಗಳನ್ನೇ ಬೆಳೆಸುತ್ತಿದ್ದವರು. ಈಗ ಹೊಸ ಆಕಾಂಕ್ಷೆಯಲ್ಲಿ ಹೆಚ್ಚಿನ ಆದಾಯ ಕೊಡಬಲ್ಲ ಅಡಿಕೆ ಬೆಳೆಯಲು ಪ್ರಾರಂಭಿಸಿದ್ದಾರೆ.  ಇವರಿಗೆ ಅಡಿಕೆ ಬೆಳೆ ಏನು, ಇದನ್ನು ಬೆಳೆಸುವ ಕುರಿತಾಗಿ ಸ್ವಲ್ಪ ಮಟ್ಟಿನ ಸಲಹೆ ಕೊಡುವುದು ಈ ಬರಹದ ಉದ್ದೇಶ.  ಈಗ ಸಾಂಪ್ರದಾಯಿಕ ಬೆಳೆ ಪ್ರದೇಶದ ಪರಿದಿಯನ್ನು ಮೀರಿ  ವ್ಯಾಪಿಸಿದೆ.  ಕರಾವಳಿ ಮಲೆನಾಡಿನ  ರೈತರು ಮಾತ್ರ ಅಡಿಕೆಯಂತಹ ಬೆಳೆ ಬೆಳೆದು ಹೆಚ್ಚು ಆದಾಯ ಸಂಪಾದಿಸುವುದಲ್ಲ. ಇವರೂ ಸಂಪಾದಿಸಬೇಕು. ನಮ್ಮ…

Read more
ರೈತರು ಸಾಲ ಸೋಲ ಮಾಡಿ ಬೆಳೆದ ಅನನಾಸು ಮಾರಾಟಕ್ಕೆ ಕಷ್ಟವಾಗಿ ಹಾಳಾಗಿದೆ.

ರೈತರ ಸಾಲ ಮನ್ನಾ? ಸರಕಾರ ತೆಗೆದುಕೊಂಡಿದೆ ಸಣ್ಣ ನಿರ್ಧಾರ.

ಕರ್ನಾಟಕದ ರೈತ ಪರ ಸರಕಾರ ಕೊರೋನಾ ಕಾರಣದಿಂದ ಸತ್ತಂತಹ ರೈತರಿಗೆ ನೆರವಾಗಲು ಸಾಲಮನ್ನಾ ಮಾಡುವ ಇಂಗಿತವನ್ನು ವ್ಯಕ್ತಪಡಿಸಿದೆ. ಸಾಲ ಮನ್ನಾ ಎಂದಾಕ್ಷಣ  ರೈತರಲ್ಲದವರ  ಕಿವಿ ನೆಟ್ಟಗಾಗುತ್ತದೆ. ಹಾಗೇನೂ ನೆಟ್ಟಗೆ ಮಾಡಿಕೊಳ್ಳಬೇಡಿ. ಇದು ಬರೇ ಕೊರೋನಾ ದಿಂದ ಮೃತಪಟ್ಟವರಿಗೆ ಮಾತ್ರ. ಉಳಿದವರ ಪ್ರಸ್ತಾಪ ಇಲ್ಲ. ಕಳೆದ ವರ್ಷ ಕೊರೋನಾ ಕಾರಣದಿಂದ ರೈತರಿಗೆ ಬಹಳಷ್ಟು ತೊಂದರೆ ಉಂಟಾಗಿದೆ. ಅದರ ಕಹಿ ನೆನಪು ಮಾಸುವ ಮುನ್ನ ಮತ್ತೆ ಈ ವರ್ಷ ಲಾಕ್ ಡೌನ್ ಮಾಡಲಾಗಿದೆ. ಈ ವರ್ಷವೂ ರೈತರಿಗೆ ಬಹಳಷ್ಟು ತೊಂದರೆಗಳಾಗಿದೆ….

Read more
ಅರ್ಕಾ ರಕ್ಶಕ್ ಟೊಮಾಟೋ

ರೋಗರಹಿತ ಟೊಮಾಟೋ ತಳಿ ಬೆಳೆಸಿ – ನಿಶ್ಚಿಂತರಾಗಿರಿ.

ಟೊಮಾಟೋ ಬೆಳೆಗಾರರ ನಿದ್ದೆಗೆಡಿಸುವ ರೋಗವಾದ ಎಲೆ ಮುರುಟು ರೋಗ, ಸೊರಗು ರೋಗ, ಹಾಗೂ ಎಲೆ ಚುಕ್ಕೆ ರೋಗಕ್ಕೆ ಔಷದೋಪಾಚಾರ ಮಾಡುವುದಕ್ಕಿಂತ ರೋಗ ನಿರೋಧಕ ತಳಿ ಬೆಳೆಯುವುದೇ ಲೇಸು. ಟೊಮೆಟೋ ನಮ್ಮ ರಾಜ್ಯದಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಬೆಳೆಸಲಾಗುವ ತರಕಾರಿಯಾಗಿದ್ದು, ಎಲ್ಲಾ ಬೆಳೆಗಾರರೂ  ಈ ಬೆಳೆಯನ್ನು ಉಳಿಸಿಕೊಳ್ಳಲಿಕ್ಕಾಗಿ ಕೀಟನಾಶಕ – ರೋಗನಾಶಕಗಳಿಗಾಗಿ ಮಾಡುವ ಖರ್ಚು ಉಳಿತಾಯವಾದರೆ ಬೆಳೆಗಾರರಿಗೆ ಖಂಡಿತವಾಗಿಯೂ ಲಾಭವಾಗುತ್ತದೆ. ಕೀಟ ರೋಗಗಳನ್ನು ಬಾರದಂತೆ ಮಾಡಲಿಕ್ಕೂ ಕೀಟ ನಾಶಕ – ರೋಗ ನಾಶಕ ಬೇಕು. ಬಂದ ನಂತರ ಓಡಿಸಲಿಕ್ಕೂ ಇದು…

Read more
Characteristics of good mother palm.

HOW TO SELECT QUALITY COCONUT SEED NUTS .

COCONUT IS PERENIAL LONG LIFE CROP, SO WE HAVE TO TAKE MUCH CARE IN SELECTING GOOD YIELDING QUALITY SEED NUTS. Good genetic quality is the main factor in selecting any seeds. The quality of the planting material is very important in the success of coconut farming. While selecting the good planting material one should see…

Read more
ನೆಟ್ಟು ಬೆಳೆಸಿದ ಬಿದಿರು

ಬಿದಿರು ಬೆಳೆದರೆ ಸಸಿಯೊಂದಕ್ಕೆ ಸರಕಾರ ರೂ. 120 ಕೊಡುತ್ತದೆ.

ಬಿದಿರು ಬೆಳೆಸಿ, ಭಾರೀ ಆದಾಯಗಳಿಸಿ ಎಂಬೆಲ್ಲಾ ಸುದ್ದಿಗಳು ಹರಿದಾಡುತ್ತಿರುವಾಗ ರೈತರಿಗೆ ಈ ವಿಚಾರದಲ್ಲಿ ಆಸಕ್ತಿ ಬರುವುದು ಸಹಜ. ಭಾರತ ಸರಕಾರ ಬಿದಿರು ಅಭಿವೃದಿಗೆ ಪ್ರತ್ಯೇಕ ಮಿಷನ್  ಸ್ಥಾಪಿಸಿದೆ. ಪ್ಲಾಸ್ಟಿಕ್ ಬದಲಿಗೆ ಬಿದಿರು ಬಳಕೆಗೆ ಬರಬೇಕು. ರೈತರಿಗೆ ಆದಾಯ ಸಿಗಬೇಕು. ಬಿದಿರಿನ ಮೂಲಕ ನೆಲ ಜಲ ಸಂರಕ್ಷಣೆಯೂ ಆಗಬೇಕು ಎಂಬುದು ಈ ಯೋಜನೆಯ ಉದ್ದೇಶ. ಆದರೆ ಬಿದಿರು ಕೃಷಿಗೂ ಒಂದು ಇತಿ ಮಿತಿ ಇದೆ. ಒಂದು ಕಾಲದಲ್ಲಿ ಬಿದಿರಿನ ಬಳಕೆ ಅಪರಿಮಿತವಾಗಿತ್ತು. ಬಿದಿರನ್ನು ಬಳಸಿ ಮನೆಯ ಚಾವಣಿಯನ್ನೂ ಮಾಡುತ್ತಿದ್ದರು….

Read more
error: Content is protected !!