ತುಂಟ ಹಸುಗಳನ್ನು ಸಾಧು ಮಾಡುವ ಕೆಲವು ವಿಧಾನಗಳು.

ಕೆಲವು ನಾಟಿ ಹಸುಗಳು ತುಂಟ ಸ್ವಭಾವದವುಗಳಾಗಿರುತ್ತವೆ. ಹಾಲು ಕರೆಯುವಾಗ ಹಿಂದೆ ಹೋದರೆ ಕಾಲಿನಿಂದ ಒದೆಯುವುದು, ಹಾಯುವುದು ಹಾಗೆಯೇ ಹುಚ್ಚುಕಟ್ಟುವುದು ಮಾಡುವುದು ಸಾಮಾನ್ಯ. ಇದನ್ನು  ಸಾಧು ( ಹದಕ್ಕೆ) ತರಲು ಕೆಲವು ಉಪಾಯಗಳನ್ನು ಅನುಸರಿಸಬೇಕು. ಮನೆ ಬಳಕೆಯ ಹಾಲಿಗೆ ಹಸು ಸಾಕುವವರಿಗೆ ನಾಟಿ ಅಥವಾ ನಾಟಿಯಲ್ಲಿ ಮಿಶ್ರ ತಳಿಯ ಹಸುಗಳು ಉತ್ತಮ. ಇವುಗಳನ್ನು ಸಾಕುವುದು ಸುಲಭ. ರೋಗ ರುಜಿನಗಳಿಲ್ಲ. ಕಳೆ ಗಿಡಗಳಿಂದಾದಿಯಾಗಿ ಬಹುತೇಕ ಮೇವನ್ನು ತಿನ್ನುತ್ತದೆ.  ಅಧಿಕ ಆಹಾರ ಬಯಸದ ಕಾರಣ ಸುಮಾರು 7-8  ಕರು ಹಾಕುತ್ತದೆ. ಕೆಲವೊಂದು…

Read more

ತೆಂಗಿನ ಮರದಲ್ಲಿ ಕಾಯಿ ಹೆಚ್ಚುವಿಕೆ ಒಂದು ಕುತೂಹಲ.

ತೆಂಗು ಬೆಳೆಯುವವರೆಲ್ಲರೂ ತಿಳಿದಿರಬೇಕಾದ ಪ್ರಮುಖ ಸಂಗತಿ ಅದರಲ್ಲಿ ಕಾಯಿಗಳು ಹೇಗೆ ಆಗುತ್ತವೆ ಎಂಬುದು. ತೆಂಗಿನ ಮರದಲ್ಲಿ ಹೂ ಗೊಂಚಲು ಆಗುತ್ತದೆ. ಅದರಲ್ಲಿ ಮಿಡಿಗಳು ಬೆಳೆದು ಅದು ಕಾಯಿಯಾಗುತ್ತದೆ ಎಂದಷ್ಟೇ ತಿಳಿದರೆ ಸಾಲದು. ಈ ಪ್ರಕ್ರಿಯೆಯಲ್ಲಿ ಯಾರೆಲ್ಲಾ ಪಾತ್ರ ವಹಿಸುತ್ತಾರೆ. ಇವರೇನಾದರೂ ಕೈಕೊಟ್ಟರೆ ಏನಾಗುತ್ತದೆ ಎಂಬುದನ್ನು ತಿಳಿಯಲೇ ಬೇಕು. ಹೂ ಗೊಂಚಲು ತನ್ನಷ್ಟಕ್ಕೇ ಕಾಯಿ ಕಚ್ಚುವುದಲ್ಲ. ಅದು ಬೇರೆ ಜೀವಿಗಳನ್ನು ಅವಲಂಭಿಸಿ ಆಗುತ್ತದೆ. ಸೃಷ್ಟಿಯ ಈ ವೈಚಿತ್ರ್ಯವನ್ನು ಪ್ರತೀಯೊಬ್ಬ ರೈತರು ತಿಳಿಯಲೇ ಬೇಕು. ತೆಂಗಿನ ಸಸಿ ಉತ್ತಮ ಆರೈಕೆಯಲ್ಲಿ…

Read more

ಹೈನುಗಾರಿಕೆ- ನೊಣಗಳ ನಿಯಂತ್ರಣಕ್ಕೆ ಸುರಕ್ಷಿತ ಉಪಾಯ.

ಹಟ್ಟಿ, ಮನೆ, ಬೆಳೆ ಮುಂತಾದ ಕಡೆಗಳಲ್ಲಿ ತುಂಬಾ ಕಿರಿ ಕಿರಿ ಉಂಟುಮಾಡುವ ಹಾರುವ ಕೀಟಗಳ ನಿಯಂತ್ರಣಕ್ಕೆ ಈ ವ್ಯವಸ್ಥೆ ಯನ್ನು ಮಾಡಿಕೊಂಡರೆ ಯಾವ ಕೀಟನಾಶಕವೂ ಬೇಕಾಗಿಲ್ಲ. ಬಹುತೇಕ ರೈತರು ತಿಳಿದಿರುವಂತೆ ಹಾರುವ ಕೀಟಗಳನ್ನು ನಿಯಂತ್ರಿಸಲು ವಿಷ ರಾಸಾಯನಿಕ ಫಲಕೊಡುವುದಕ್ಕಿಂತ ಹೆಚ್ಚು, ಕೆಲವು ಉಪಾಯಗಳು ಫಲ ಕೊಡುತ್ತವೆ. ಹಾರುವ ನೊಣ, ಪತಂಗಗಳಿಗೆ ಕೀಟನಾಶಕ  ಸರಿಯಾಗಿ ತಗಲುವುದಿಲ್ಲ. ಅವು  ತಪ್ಪಿಸಿಕೊಳ್ಳುತ್ತವೆ. ಅವುಗಳನ್ನು ಬಂಧಿಸಲು ಕೆಲವು ಸುರಕ್ಷಿತ ಉಪಾಯಗಳಿವೆ. ಇದರ ಬಳಕೆಯಿಂದ ಯಾರಿಗೂ ಯಾವ ಹಾನಿಯೂ ಇರುವುದಿಲ್ಲ. ನಾವು ಯಾವಾಗಲೂ ಕೈಯಿಂದ…

Read more
ಅಡಿಕೆ ಮರದ ಸಿಂಗಾರಕ್ಕೆ ಸಿಂಪರಣೆ

ಅಡಿಕೆ- ಸಿಂಗಾರಕ್ಕೆ ಸಿಂಪರಣೆ ಮಾಡುವವರಿಗೆ ಇಲ್ಲಿದೆ ಮಾಹಿತಿ.

ಬೇಸಿಗೆಯಲ್ಲಿ ಅಡಿಕೆ ಕಾಯಿ ಉದುರುವ ಸಮಸ್ಯೆಗಾಗಿ ಬೆಳೆಗಾರರು ಸಿಂಗಾರಕ್ಕೆ ಸಿಂಪರಣೆ ಮಾಡುತ್ತಾರೆ. ಯಾವಾಗ ಸಿಂಗಾರಕ್ಕೆ ಕೀಟ- ರೋಗಗಳಿಂದ ತೊಂದರೆ ಉಂಟಾಗುತ್ತದೆ ಎಂದು ತಿಳಿದು ಆ ಸಮಯಕ್ಕೆ ಸರಿಯಾಗಿ ಸಿಂಪರಣೆ ಮಾಡಬೇಕು.  ಕೀಟವೋ, ರೋಗವೋ ಎಂಬುದನ್ನು ಗಮನಿಸಿ ಅದಕ್ಕೆ ಬೇಕಾದ ಔಷಧಿಯನ್ನು ಸಿಂಪಡಿಸಬೇಕು.   ಮೊಡ ಕವಿದ ವಾತಾವರಣ, ಮಳೆಯಾದ ಸಮಯ ಅಡಿಕೆ ಬೆಳೆಗೆ ಕೆಲವೊಂದು ಸಮಸ್ಯೆಗಳನ್ನು  ತರುತ್ತದೆ. ಅದನ್ನು ತಡೆಯಲು ಆ ವಾತಾವರಣ ಇರುವಾಗಲೇ ಕ್ರಮ ಕೈಗೊಂಡರೆ ಫಲ ಹೆಚ್ಚು.ಎಲ್ಲಾ ಬೆಳೆಗಳಿಗೂ ಅನುಕೂಲಕರ ವಾತಾವರಣ ಎಂದರೆ ಹಿತ…

Read more

ಪ್ರಗತಿಪರ ಕೃಷಿಕ- ಹರಿಶ್ಚಂದ್ರ ಶೆಟ್ಟಿಯವರು ನಮ್ಮನ್ನು ಅಗಲಿದ್ದಾರೆ.

ಪುತ್ತೂರು ತಾಲೂಕು ಇಚಿಲಂಪಾಡಿಯಲ್ಲಿ ಹಲವಾರು ವರ್ಷಗಳಿಂದ ಕೃಷಿ ಮಾಡುತ್ತಿದ್ದು, ಆಧುನಿಕ ಚಿಂತನೆಯ ಕೃಷಿ ಮೂಲಕ ಹೆಸರು ಮಾಡಿದ್ದ ಹಿರಿಯ ಕೃಷಿಕ, ಹರಿಶ್ಚಂದ್ರ ಶೆಟ್ಟಿ ಇವರು ನಮ್ಮನ್ನು ಅಗಲಿದ್ದಾರೆ. ಕೃಷಿ ವೃತ್ತಿಯನ್ನು  ಲಾಭದಾಯಕವಾಗಿ  ಹೇಗೆ ಮುನ್ನಡೆಸಬಹುದು ಎಂಬುದಕ್ಕೆ ಮಾದರಿಯಾಗಿದ್ದ ಶ್ರೀಯುತರು ತಮ್ಮ ಕೃಷಿ ಭೂಮಿಯಲ್ಲಿ ವೈವಿದ್ಯಮಯ ಬೆಳೆಗಳನ್ನು ಬೆಳೆಯುವ ಮೂಲಕ ಕೃಷಿಯ ಆದಾಯವನ್ನು  ಹೆಚ್ಚಿಸಿಕೊಂಡು ಎಲ್ಲರಿಗೂ ಮಾದರಿಯಾಗಿದ್ದವರು. ಇವರು ಕೈಯಾಡಿಸದ ಕೃಷಿಯೇ ಇಲ್ಲ. ಜನೋಪಾಕಾರಿಯಾಗಿದ್ದವರು, ಎಲ್ಲರಿಗೂ ಮಾರ್ಗದರ್ಶಕರಾಗಿದ್ದ ಇವರು ಅಲ್ಪ ಕಾಲದ ಅನಾರೋಗ್ಯದಿಂದ ಇಂದು ಬೆಳಗ್ಗೆ (23-03-2021 ಮಂಗಳವಾರ) …

Read more
ಕಾಡು ಹಣ್ಣು ತಿನ್ನುತ್ತಿರುವ ಗುಬ್ಬಿ

ಗುಬ್ಬಿಗಳ ನಾಶಕ್ಕೆ ಟವರ್ ಮಾತ್ರ ಕಾರಣವಲ್ಲ.

ಗುಬ್ಬಿಗಳ ಸಂಖ್ಯೆ ಕಡಿಮೆಯಾಗಲು ಒಂದು ಕಾರಣ ಮೊಬೈಲ್ ಟವರ್ ಎನ್ನಲಾಗುತ್ತದೆ. ಆದರೆ ಮೊಬೈಲ್ ಟವರ್ ಬರುವ ಮುಂಚೆಯೇ ಇವು ಕಡಿಮೆಯಾಗಲಾರಂಭಿಸಿವೆ ಗೊತ್ತೇ? ಗುಬ್ಬಿಗಳ ನಾಶಕ್ಕೆ ಮೊಬೈಲ್ ಟವರ್ ಒಂದೇ ಕಾರಣ ಅಲ್ಲ. ನಮ್ಮ ಕೃಷಿ ಚಟುವಟಿಕೆ ಮತ್ತು ಹವಾಮಾನಗಳೂ ಒಂದು ಕಾರಣ. ಗುಬ್ಬಿಗಳು ಹಿಂದೆ ನಾವು ಸಣ್ಣವರಿದ್ದಾಗ ಮನೆಯ ಮಾಡಿನ ಸಂದುಗಳಲ್ಲಿ , ಚಾವಡಿಯ  ಆಡ್ದದ ಎಡೆಯಲ್ಲಿ ಗೂಡು ಕಟ್ಟಿ ಕುಳಿತುಕೊಳ್ಳುತ್ತಿತ್ತು. ಅದು ತನ್ನಷ್ಟಕ್ಕೇ ಅಲ್ಲಿಗೆ ಬಂದು ವಾಸ್ತವ್ಯ ಮಾಡುವುದು ವಾಡಿಕೆ. ಗುಬ್ಬಿಗಳು ಮನೆಯ ಮಕ್ಕಳಂತೆ ಆಗಿದ್ದವು.  ಅದು…

Read more
ಮಣ್ಣಿನ ಬಣ್ಣ ಮತ್ತು ಅದರ ಫಲವತ್ತತೆ

ಮಣ್ಣಿನ ಬಣ್ಣ ಮತ್ತು ಅದರ ಫಲವತ್ತತೆ

ಮಣ್ಣಿನಲ್ಲಿ ಬೆಳೆ ಬೆಳೆಯುವ ಪ್ರತೀಯೊಬ್ಬ ರೈತನೂ ಮಣ್ಣಿನ ಬಣ್ಣದ ಮೇಲೆ ಅದರ ಉತ್ಪಾದನಾ ಶಕ್ತಿಯನ್ನು ತಿಳಿಯಬಹುದು. ಮಣ್ಣಿನ ಉತ್ಪಾದನಾ ಶಕ್ತಿ ( ಬೆಳೆ ಬೆಳೆದಾಗ ಅದರ ಬೆಳವಣಿಗೆ ಮತ್ತು ಅದರಲ್ಲಿ ಫಸಲು) ಅದರ ಭೌತಿಕ ಗುಣಧರ್ಮದ ಮೇಲೆ ಅವಲಂಭಿತವಾಗಿರುತ್ತದೆ.  ಜಮೀನಿನ ಮಣ್ಣು ಜೇಡಿಯಿಂದ ಕೂಡಿದೆಯೇ, ಮರಳಿನಿಂದ ಕೂಡಿದೆಯೇ, ಬಣ್ಣ ಹೇಗಿದೆ ಎಂಬುದನ್ನು ಪರಿಶೀಲಿಸಿ ಅದರ ಉತ್ಪಾದಕತೆಯನ್ನು ನಿರ್ಧರಿಸಬಹುದು. ಕೆಲವರು ಮಣ್ಣು ನೋಡಿಯೇ ಈ ಮಣ್ಣಿನಲ್ಲಿ ಕೃಷಿ ಮಾಡುವಾಗ ಎಷ್ಟು ಹಾಕಿದರೂ ಸಾಲದು ಎನ್ನುತ್ತಾರೆ. ಇನ್ನು ಕೆಲವರು ಜಮೀನು…

Read more

ಬೆಳೆಗಾರರೇ – ಮೈಲುತುತ್ತೆ ಖರೀದಿಸುವಾಗ ಬುದ್ದಿವಂತರಾಗಿರಿ.

ಇನ್ನೇನೋ ಮಳೆಗಾಲ ಬರಲಿದೆ. ಅಡಿಕೆಗೆ ಭಾರೀ ಬೆಲೆ ಬಂದಿದೆ. ಅಡಿಕೆ ಬೆಳೆಗಾರರಲ್ಲಿ ದುಡ್ಡು ಇದೆ. ಅದರಲ್ಲಿ ತಮ್ಮ ಹೆಚ್ಚಳವಾಗುತ್ತದೆ. ಈಗಲೇ ಖರೀದಿ ಮಾಡಿ ಎಂದು ವ್ಯಾಪಾರಿಗಳು ಹಳೆ ಸ್ಟಾಕು ಮುಗಿಸಿ ಮುಂದಿನ ಹೊಸ ಸ್ಟಾಕು ಮಾಡಲು ಬಂಡವಾಳ ಕ್ರೋಢೀಕರಣದಲ್ಲಿದ್ದಾರೆ. ಅಡಿಕೆ ಬೆಳೆಗಾರರೇ ನೀವು ಈಗ ಬುದ್ದಿವಂತರಾಗುವುದು ಅಗತ್ಯವಾಗಿದೆ. ಅಡಿಕೆ ಕೊಳೆ ರೋಗಕ್ಕೆ ಮೈಲುತುತ್ತೆ ಬೇಕು. ಹಾಗೆಂದು ಖರೀದಿಸಿದರೆ ದರ ಕಡಿಮೆ, ಮುಂದೆ ಹೆಚ್ಚು. ಇದೆಲ್ಲಾ ಯಾವ ಕ್ರಮವೋ ತಿಳಿಯದು. ಸರಕಾರದ ಸಂಬಂಧಿಸಿದ ಇಲಾಖೆ ಇದನ್ನೆಲ್ಲಾ ಗಮನಿಸಿದೆಯೋ ಇಲ್ಲವೋ…

Read more

ರಸಗೊಬ್ಬರದ ಬಳಕೆ 50% ಕಡಿಮೆ ಮಾಡಬಹುದಾದ ವಿಧಾನ.

ಕೃಷಿಗೆ ರಸಗೊಬ್ಬರ ಅನಿವಾರ್ಯವಲ್ಲ. ಇದರಿಂದ ಇಳುವರಿ ಹೆಚ್ಚಳವಾಗಲು ಅನುಕೂಲವಾಗುತ್ತದೆ. ಬುದ್ಧಿವಂತಿಕೆ ಮಾಡಿದರೆ 50% ರಸ ಗೊಬ್ಬರವನ್ನು ಉಳಿಸಬಹುದು. ನಮ್ಮ ಕೃಷಿಕರಿಗೆ ಇದು ಗೊತ್ತಿದೆಯೋ ಇಲ್ಲವೋ ತಿಳಿಯದು. ನಮ್ಮ ದೇಶದಲ್ಲಿ ಸ್ಥಳೀಯ ಕಚ್ಚಾ ವಸ್ತುಗಳನ್ನು ಬಳಸಿ ರಸ ಗೊಬ್ಬರ ತಯಾರಾಗುವುದು ತೀರಾ ಕಡಿಮೆ. ಬೇರೆ ದೇಶಗಳಿಂದ ಕಚ್ಚಾ ಸಾಮಾಗ್ರಿಯನ್ನು ತರಿಸಿ, ಇಲ್ಲಿ ಉತ್ಪಾದನೆ ಮಾಡಲಾಗುತ್ತದೆ. ಆದ ಕಾರಣ ಬೆಲೆ ನಮ್ಮ ಕೈಯಲ್ಲಿ ಇರುವುದಿಲ್ಲ. ಯಾವಾಗಲೂ ಇದು ಹೆಚ್ಚಳವಾಗುವುದೇ ಹೊರತು ಕಡಿಮೆಯಾಗಬಹುದು ಎಂಬ ಆಕಾಂಕ್ಷೆ ಕೃಷಿಕರಿಗೆ ಬೇಡ.   ರಸಗೊಬ್ಬರ …

Read more

ಡ್ರಾಗನ್ ಪ್ರೂಟ್ – ಹೆಚ್ಚು ಆದಾಯದ ಸುಲಭದ ಬೆಳೆ.

ವಿಪರೀತ ಬಿಸಿಲಿನ ವಾತಾವರಣದ ಬಳ್ಳಾರಿ ಜಿಲ್ಲೆಯಲ್ಲಿ ಡ್ರ್ಯಾಗನ್ ಹಣ್ಣಿನ ಬೇಸಾಯ  ಮಾಡಬಹುದು ಎಂಬುದನ್ನು ಹೊಸಪೇಟೆಯ ರೈತರೊಬ್ಬರು ತೋರಿಸಿಕೊಟ್ಟಿದ್ದಾರೆ. ಹೊಸಪೇಟೆ ತಾಲೂಕಿನ ಜಂಬುನಾಥನಹಳ್ಳಿಯಲ್ಲಿನ 57 ವರ್ಷದ ಇಂಜಿನಿಯರ್ ರಾಜಶೇಖರ್ ದ್ರೋಣವಲ್ಲಿ  ಎಂಬವರು, ತಮ್ಮ ಆರು ಎಕರೆ ಜಮೀನಿನಲ್ಲಿ ಡ್ರ್ಯಾಗನ್ ಹಣ್ಣಿನ ಬೇಸಾಯವನ್ನು ಮಾಡಿ ಅದರಲ್ಲಿ ಉತ್ತಮ ಆದಾಯ ಕಂಡುಕೊಂಡಿದ್ದಾರೆ. ಮೂಲ ಕೃಷಿಕ ಕುಟುಂಬದವರಾಗಿದ್ದರೂ ಹೈದರಾಬಾದಿನಲ್ಲಿ ಇಂಜಿನಿಯರ್ ವೃತ್ತಿಯಲ್ಲಿ ತೊಡಗಿದ್ದರು. ಮೂರು ವರ್ಷದ ನಂತರ ಈ ವೃತ್ತಿಗೆ ವಿದಾಯ ಹೇಳಿ ಆರಿಸಿಕೊಂಡದ್ದು, ಕೃಷಿ ಮತ್ತು ಕೋಳಿ ಸಾಕಾಣಿಕೆ ವೃತ್ತಿಯನ್ನು. ಇವೆರಡರಲ್ಲೂ…

Read more
error: Content is protected !!