flower

ಸಾವಿರಗಟ್ಟಲೆ ಉಳಿಸುವ ಉಚಿತ ಔಷಧಿ ಸಸ್ಯ ಇದು.

ಸಾವಿರಗಟ್ಟಲೆ ಸಂದರ್ಶನ ಫೀಸ್ ಮತ್ತು ಸಾವಿರ ಲೆಕ್ಕದ ಮುಲಾಮು ಮಾತ್ರೆಗೆ ಖರ್ಚು ಮಾಡುವ ಬದಲು ಉಚಿತವಾಗಿ ಅ ಫಲವನ್ನು ಈ ಸಸ್ಯದ ಮೂಲಕ ಪಡೆಯಬಹುದು. ಇದು ಒಂದು ಸುಂದರ ಹೂ ಬಿಡುವ ಸಸ್ಯ. ಸಾಮಾನ್ಯವಾಗಿ ಹೊಳೆ ದಂಡೆ ಹಾಗೂ ರಸ್ತೆ ಬದಿಗಳಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಇದನ್ನು ಕರಾವಳಿಯ ಜನ ಆನೆ ಸಜಂಕು ( ದೊಡ್ದ ಚಗಚೆ) ಎಂದು ಕರೆಯುತ್ತಾರೆ. ಇದು ಅಸಾಮಾನ್ಯ ಔಷಧೀಯ ಸಸ್ಯವಾಗಿದ್ದು, ಮಹತ್ವ ಗೊತ್ತಿದ್ದವರು ಇದನ್ನು ತಮ್ಮ ಹೊಲದ ಬದಿಯಲ್ಲಿ ನೆಟ್ಟು ಬೆಳೆಸಿರುತ್ತಾರೆ….

Read more
ಉತ್ತಮ ಲಕ್ಷಣದ ಹಸು

ಉತ್ತಮ ಹಸುವಿನ ಆಯ್ಕೆಗೆ ಸೂಕ್ಷ್ಮ ಪರೀಕ್ಷೆಗಳು.

ಕೊಳ್ಳುವ ಹಸು ಮಾಲಕರು ಹೇಳಿದಂತೆ ಹಾಲು ಕೊಡುತ್ತದೆಯೇ, ಅವರು ಹೇಳುವುದರಲ್ಲಿ ಸತ್ಯ ಇದೆಯೇ ಎಂಬುದನ್ನು ಕೊಳ್ಳುವವರು ಪರೀಕ್ಷೆ ಮಾಡುವುದು ಅವನ ಹಕ್ಕು. ಇದಕ್ಕೆ ಕೊಡುವವರು ಆಕ್ಷೇಪ ಮಾಡಬಾರದು. ಹಾಲಿನ ಪರೀಕ್ಷೆ ಮತ್ತು ಹಾಲು ಹಿಂಡುವಾಗಿನ ಕೆಲವು ಪರೀಕ್ಷೆಗಳನ್ನು ಮಾಡಿ ಹಸುಕೊಂಡರೆ ಒಳ್ಳೆಯದು. ಹಾಲು ಇಳುವರಿ ಪರೀಕ್ಷೆ : ಹಸುವಿನಿಂದ ಒಂದೂವರೆ ದಿನದಲ್ಲಿ 3 ಬಾರಿ ಹಾಲನ್ನು ಕರೆದು, ದಿನಕ್ಕೆ ಎಷ್ಟು ಹಾಲು ಕೊಡುತ್ತದೆಂದು ತಿಳಿದುಕೊಳ್ಳಬಹುದು. ಹಸು ಬೇಗ ಹಾಲು ತೊರೆ ಬಿಡಬೇಕು. ಮೊಲೆಗಳು ಗಟ್ಟಿಯಾಗಿರಬಾರದು. ನಾಲ್ಕು ಮೊಲೆಗಳಿಂದ…

Read more
ಶುಂಠಿ ತಳಿ ರೆಯೋಡಿಜೆನೆರಾ

ಶುಂಠಿ ಬೆಳೆಯುವ ರೈತರೆಲ್ಲರೂ ತಿಳಿದಿರಬೇಕಾದ ತಳಿ ಪರಿಚಯ.

ಶುಂಠಿ ಬೆಳೆಯುವ ರೈತರು ಬರೇ ಇಳುವರಿ ಒಂದನ್ನೇ ನೋಡುವುದಲ್ಲ. ಇಳುವರಿಯ ಜೊತೆಗೆ ಒಣ ತೂಕದ ಪ್ರಮಾಣ, ಅದರಲ್ಲಿ ನಾರಿನ ಅಂಶ ಹಾಗೆಯೇ ಅದರ ಓಲಿಯೋರೈಸಿನ್  ಎಣ್ಣೆ ಅಂಶ ಇವುಗಳನ್ನೂ ನೊಡಬೇಕು. ಮಾರುಕಟ್ಟೆಯಲ್ಲಿ  ಇಂತಹ ಆಯ್ಕೆ ತಳಿಗಳಿಗೆ ಬೇಡಿಕೆಯೇ ಬೇರೆ ಇರುತ್ತದೆ. ಬೆಲೆಯೂ ಹೆಚ್ಚು ದೊರೆಯುತ್ತದೆ. ಶುಂಠಿ (ಜಿಂಜಿಬರ್ ಆಪಿಸಿನೇಲ್) ಜಿಂಜಿಬರೆಸಿ ಕುಟುಂಬಕ್ಕೆ ಸೇರಿದ ಬಹುವಾರ್ಷಿಕ ವಾಣಿಜ್ಯ ಬೆಳೆ.   ಇದಕ್ಕೆ ಇರುವ ಬೇಡಿಕೆ ಮತ್ತು ಬೆಲೆ ಬಹಳಷ್ಟು ಪ್ರದೇಶ ವಿಸ್ತರಣೆಗೆ ಕಾರಣವಾಗಿದೆ. ರಾಜ್ಯದ ಕರಾವಳಿ, ಮಲೆನಾಡು, ಅರೆ…

Read more
fruit

ಇದು ಆರೋಗ್ಯ ರಕ್ಷಕ ಹಣ್ಣು ಗೊತ್ತೇ?

ದಾರೆ ಹುಳಿ ಎಂದು ಸಾಮಾನ್ಯ ಆಡು ಭಾಷೆಯಲ್ಲಿ ಕರೆಯಲ್ಪಡುವ  ಈ ಹಣ್ಣು ಹುಳಿ ಮತ್ತು ಸಿಹಿ ರುಚಿಯಲ್ಲಿ  ಇರುತ್ತದೆ. ಸಾಮಾನ್ಯವಾಗಿ ಇದನ್ನು ಹಳ್ಳಿಗಳಲ್ಲಿ  ಬೆಳೆಸಿ ಅದನ್ನು ಹುಳಿಯ ಬದಲಿಗೆ  ಉಪಯೋಗ ಮಾಡುತ್ತಾರೆ. ಇದು ಆರೋಗ್ಯಕ್ಕೆ ಉತ್ತಮ ಹಣ್ಣು.  ಬಹಳಷ್ಟು ಔಷಧೀಯ ಗುಣಗಳನ್ನು  ಹೊಂದಿದೆ.ನಾವು ಸಣ್ಣವರಿದ್ದಾಗ ಲಿಂಬೆ ಹುಳಿ ಶರಬತ್ತಿನ ಬದಲು ಇದನ್ನು ಹಿಚುಕಿ ಬೆಲ್ಲ ಹಾಕಿ ಕುಡಿಯುತ್ತಿದ್ದ ನೆನಪು ಈಗಲೂ ಇದೆ. ಸಸ್ಯ ಮೂಲ:  ಕನ್ನಡದಲ್ಲಿ ಇದನ್ನು ಕರಿಮಾದಲ,  ದಾರೆ ಹುಳಿ,  ಕಮ್ರ  ದ್ರಾಕ್ಷಿ,  ಕೊಮರಿಕೆ  ಆಂಗ್ಲ…

Read more
ಹೊಲಕ್ಕೆ ಯೂರಿಯಾ ಎಸೆಯುತ್ತಿರುವ ರೈತ

ಯೂರಿಯಾ ಗೊಬ್ಬರ –ಖರೀದಿ ಇನ್ನು ಕಷ್ಟವಾಗಲಿದೆ!

ರೈತರ ಬೆಳೆ ಪೋಷಣೆಗೆ ಬೇಕಾಗುವ ರಾಸಾಯನಿಕ ಗೊಬ್ಬರಗಳಿಗೆ ಭಾರತ ಸರಕಾರ ಸಬ್ಸಿಡಿ ನೀಡುತ್ತದೆ. ಆದ ಕಾರಣ ಅದು ನಮಗೆ ಮಿತ ದರದಲ್ಲಿ ಲಭ್ಯವಾಗುತ್ತದೆ. ಈ ಸಬ್ಸಿಡಿ  ದುರುಪಯೋಗವಾಗುತ್ತಿದೆ. ಮನಬಂದಂತೆ ಯೂರಿಯಾ ಗೊಬ್ಬರ ಖರೀದಿ ಮಾಡಿ, ಅದನ್ನು ಬೇರೆ ಉದ್ದೇಶಗಳಿಗೂ ಬಳಕೆ ಮಾಡುತ್ತಾರೆ ಎಂಬ ಕಾರಣಕ್ಕೆ ಇನ್ನು ಆಯಾ ಹಂಗಾಮಿನಲ್ಲಿ ಮಾತ್ರ ನಿಗದಿಪಡಿಸಿದ ಪ್ರಮಾಣದ ಗೊಬ್ಬರ ಮಾತ್ರ ಖರೀದಿಗೆ ಅವಕಾಶ ಕಲ್ಪಿಸಲಾಗುತ್ತದೆ. ಈ ನಿಬಂಧನೆ ಜ್ಯಾರಿಯಾಗಿ ಎರಡು ವರ್ಷಗಳೇ ಆಗಿದ್ದರೂ ಈಗ ಎಲ್ಲಾ ರಸಗೊಬ್ಬರ ಮಾರಾಟ ಮಾಡುವ ಅಂಗಡಿಗಳವರೂ ಇದನ್ನು ಕಡ್ದಾಯವಾಗಿ…

Read more
ಬಾಳೆ ಗೊನೆಗೆ ಕವರ್ ಹಾಕಿರುವುದು- Covering for banana bunch

ಬಾಳೆ ಗೊನೆಗೆ ಕವರ್ ಹಾಕಿದರೆ ಹೆಚ್ಚು ಬೆಲೆ.

ಈಗ ಮಾರುಕಟ್ಟೆಯಲ್ಲಿ ದೊರೆಯುವ ಬಾಳೆ ಹಣ್ಣುಗಳನ್ನು ಸರಿಯಾಗಿ ಗಮನಿಸಿದ್ದೀರಾ? ಅವುಗಳ ಮೇಲೆ ಒಂದೇ ಒಂದು ಕಲೆ ಕೂಡಾ ಇರುವುದಿಲ್ಲ. ಹಣ್ಣು ತಿನ್ನುವ ಮುಂಚೆ ಅದನ್ನು ತೊಳೆದು ತಿನ್ನಬೇಕು ಎನ್ನುತ್ತಾರೆ. ಆದರೆ ಇದನ್ನು ಕೈತೊಳೆದು ಮುಟ್ಟುಬೇಕು ಎಂಬಷ್ಟು ಸ್ವಚ್ಚವಾಗಿರುತ್ತದೆ. ಹಣ್ಣು ನೋಡಿದರೆ ಎಂತವನಿಗೂ  ಕೊಳ್ಳುವ ಮನಸ್ಸಾಗಬೇಕು.  ಇದು ಗಾಳೆ ಗೊನೆಗೆ ಕವರ್ ಹಾಕಿ ಬೆಳೆದ ಕಾಯಿಯಾಗಿದ್ದು, ಮಾರುಕಟ್ಟೆಯಲ್ಲಿ ಇದಕ್ಕೆ ಉತ್ತಮ ಬೇಡಿಕೆ. ಮುಂದಿನ ದಿನಗಳಲ್ಲಿ ಇದು ಮಾಮೂಲಿಯಾಗಲಿದೆ.  ಬಹಳ ಹಿಂದಿನಿಂದಲೂ ವಿದೇಶಗಳಿಗೆ ರಪ್ತು ಮಾಡುವ ಉದ್ದೇಶದ ಬಾಳೆ ಕಾಯಿಗಳಿಗೆ…

Read more
ಒಂದು ಗಿಡದಲ್ಲಿ ಬೆಳೆದ ಅರಶಿನ, ಸಾಂಗ್ಲಿ ಸ್ಥಳೀಯ ತಳಿ

ಅರಿಶಿಣ ಬೆಳೆಯುವವರು ಯೋಗ್ಯ ತಳಿಗಳ ಬಗ್ಗೆ ತಿಳಿದಿರಿ.

ಅರಶಿನ ಒಂದು ಪ್ರಮುಖ  ಸಾಂಬಾರ ಬೆಳೆಯಾಗಿದ್ದು, ಉತ್ತರ ಕರ್ನಾಟಕದ  ಬಾಗಲಕೋಟೆ,  ಬೆಳಗಾವಿ, ಬಿಜಾಪುರದ ಕೆಲ ಭಾಗಗಳಲ್ಲಿಯೂ, ದಕ್ಷಿಣ ಕರ್ನಾಟಕದ ಮಂಡ್ಯ, ಕೊಳ್ಳೇಗಾಲ ಕಡೆ ಅಧಿಕ ಪ್ರಮಾಣದಲ್ಲೂ, ಉಳಿದ ಕಡೆಗಳಲ್ಲಿ ಅಲ್ಪ ಸ್ವಲ್ಪ ಪ್ರಮಾಣದಲ್ಲಿಯೂ ಬೆಳೆಯಲಾಗುತ್ತದೆ. ಇದು ಒಂದು ಔಷಧೀಯ ಮತ್ತು ಸಾಂಬಾರ ರೂಪದಲ್ಲಿ ಬಳಸಲ್ಪಡುವ ವಸ್ತುವಾಗಿರುವುದರಿಂದ ಉತ್ತಮ ಬೇಡಿಕೆ ಇದೆ. ಉಳಿದ ಸಾಂಬಾರ ಬೆಳೆಗಳಿಗಿಂತ ಇದರ ಬೆಳೆ ಸುಲಭ. ಭಾರತದಲ್ಲಿ ಹಲವಾರು ಅರಿಶಿಣ ತಳಿಗಳು ಲಭ್ಯವಿದ್ದು, ಕೃಷಿ ಪ್ರದೇಶಕ್ಕೆ ಅನುಗುಣವಾಗಿ ಸ್ಥಾನಿಕ ಹೆಸರುಗಳನ್ನು ಕೊಡಲಾಗಿದೆ. ಮುಖ್ಯವಾಗಿ ಜನಪ್ರಿಯ…

Read more
ಸಾಮಾನ್ಯವಾಗಿ ಎಲ್ಲಾ ಕಡೆಯಲ್ಲೂ ಇರುವ ಬಂಬು ಕೀಟ

ಈ ವಾಸನೆ ಕೀಟಗಳ ಹಾವಳಿಯಿಂದ ಪಾರಾಗುವುದು ಹೇಗೆ?

ಬಹುತೇಕ ಎಲ್ಲಾ ಬೆಳೆಗಳಿಗೂ ರಸ ಹೀರಲು ಒಂದು ತಿಗಣೆ ಪ್ರಭೇದದ ಕೀಟ ಬರುತ್ತದೆ. ಇದು ತರಕಾರಿಗಳು, ಭತ್ತ, ಮೆಣಸು ಮುಂತಾದವುಗಳಲ್ಲಿ ಕುಳಿತು ರಸ ಹೀರಿ ಗಣನೀಯ   ಬೆಳೆ ಹಾನಿ ಮಾಡುತ್ತವೆ. ಸಾಮಾನ್ಯ ಆಡು ಭಾಷೆಯಲ್ಲಿ ಇದನ್ನು ಬಂಬು ಕೀಟ ಎನ್ನುತ್ತಾರೆ. ಇವು ತಿಗಣೆಗಳು. ವಾಸನೆಯಿಂದ ಕುಡಿವೆ. ಹಾಸಿಗೆಯ ಎಡೆಗಳಲ್ಲಿ ವಾಸ ಮಾಡುವ ತಿಗಣೆಯಂತೆ ಇದು. ಇದು ರಸ ಹೀರಿದ ತರಕಾರಿ, ಹಣ್ಣು ಹಂಪಲುಗಳು ವಾಸನೆಯಿಂದ ಕೂಡಿರುತ್ತದೆ. ಕೈಯಲ್ಲಿ ಮುಟ್ಟಿದರೆ ಸಾಕು ಅಸಹ್ಯ ವಾಸನೆ ಕೊಡಬಲ್ಲ ಸಾವಿರಾರು ಬಗೆಯ…

Read more
ಸೊಪ್ಪಿಗಾಗಿ ನುಗ್ಗೆ ಬೆಳೆ

ನುಗ್ಗೆ- ಸೊಪ್ಪು – ಕಾಯಿ ಎರಡರಲ್ಲೂ ಲಾಭ ಇರುವ ಬೆಳೆ.

        ನುಗ್ಗೆ ಮೂಲತಃ ಉಷ್ಣವಲಯಗಳಲ್ಲಿ ಬೆಳೆಯಲ್ಪಡುವ ತರಕಾರಿ. ಮಳೆ ಕಡಿಮೆ ಇರುವಲ್ಲಿ ವರ್ಷದುದ್ದಕ್ಕೂ ಫಲಕೊಡುವ ಬೆಳೆ. ಹಿಂದಿನಿಂದಲೂ ಇದರ ಸೊಪ್ಪು, ಹೂವು ಕೋಡುಗಳನ್ನು ಜನ ಉಪಯೋಗ ಮಾಡುತ್ತಿದ್ದರು. ಈಗ ಸೊಪ್ಪಿಗೂ ವಾಣಿಜ್ಯ ಮಹತ್ವ ಬಂದಿದೆ. ಕೋಡಿಗೂ ಬೇಡಿಕೆ ಚೆನ್ನಾಗಿದೆ. ಆದ ಕಾರಣ ಬೆಳೆಗಾರರಿಗೆ ಅಯ್ಕೆಗಳು  ಹೆಚ್ಚಾಗಿವೆ. ಕೇವಲ ಸೊಪ್ಪುಮಾತ್ರವಲ್ಲ ಇದರ ಕಾಯಿ , ಚಿಗುರು ಬೇರು ತೊಗಟೆ ಎಲ್ಲವು ಆರೋಗ್ಯಕಾರಿ. ಈಗ ನುಗ್ಗೆ ಸೊಪ್ಪು  ಸೂಪರ್ ಫುಡ್ ಸ್ಥಾನವನ್ನು ಪಡೆದಿದೆ.       ಪೋಷಕಾಂಶ ಗುಣಗಳು: ನುಗ್ಗೆಯಲ್ಲಿ  ಬಾಳೆ…

Read more

ಈ ಆಪ್ ಗಳು ನಿಮಗೆ ತುಂಬಾ ಜ್ಞಾನ ಕೊಡುತ್ತವೆ.

ಮಾಹಿತಿಯ ಕೊರತೆಯಿಂದ ನಮ್ಮ ದೇಶದ ರೈತರು ಮಾರುಕಟ್ಟೆ, ಹವಾಮಾನ, ಸರಕಾರದ ಸವಲತ್ತು ಮತ್ತು  ತಾಂತ್ರಿಕ ನೆರವುಗಳಿಂದ ವಂಚಿತರಾಗುತ್ತಿದ್ದಾರೆ. ಇದನ್ನು ಸರಿಪಡಿಸಿ, ರೈತರಿಗೆ ಅನುಕೂಲ ಮಾಡಿಕೊಡಲು ಭಾರತ ಸರಕಾರದಿಂದ ಬಿಡುಗಡೆಯಾದ ಆಪ್ಲಿಕೇಶನ್ ಗಳು ಇವು.  ಕೃಷಿಗೆ ಬೇಕಾದ ಮಾಹಿತಿ ಎಂದರೆ ಕೇವಲ ಮಾರುಕಟ್ಟೆಗೆ ಸಂಬಂಧಿಸಿದ್ದು ಎಂದಲ್ಲ, ರೈತರಿಗೆ ಬಿತ್ತನೆಗೆ ಭೂಮಿ ಸಿದ್ದಪಡಿಸಿ, ಅದನ್ನು ಮಾರಾಟ ಮಾಡಿ, ನಂತರ ಯಾವ ಬೆಳೆ ಬೆಳೆಯಬಹುದು ಎಂಬುದನ್ನು ಒಳಗೊಂಡ ಮಾಹಿತಿ ಅತ್ಯವಶ್ಯಕ. ಕೃಷಿ ಚಟುವಟಿಕೆ ಎಂದರೆ ಅದು ನಿರಂತರ ಚಟುವಟಿಕೆ. ರೈತರು ತಮಗೆ…

Read more
error: Content is protected !!