ಮಂಗಳ ಆಡಿಕೆ

ಜಲ್ಲಿ ಮಂಗಳ ಎಂಬ ಹೊಸ ತಳಿ ಇದೆಯೇ?

ಮಂಗಳ ಎಂಬ ತಳಿಯನ್ನು ಕೇಂದ್ರೀಯ ತೋಟದ ಬೆಳೆಗಳ ಸಂಶೋಧನಾ ಸಂಸ್ಥೆಯು 1972 ರಲ್ಲಿ ಚೀನಾ ದಿಂದ ಮೂಲ ತಂದು ಇಲ್ಲಿ ಅಭಿವೃದ್ದಿಪಡಿಸಿದ್ದು ಬಿಟ್ಟರೆ, ಈ ತನಕ ಬೇರೆ ಮಂಗಳ ತಳಿಯನ್ನು ಬಿಡುಗಡೆ ಮಾಡಿಲ್ಲ. ಅದರ ಮೂಲ ಗುಣ ಕ್ಷೀಣವಾದುದಕ್ಕೆ ಅದರಲ್ಲೇ ಆಂತರಿಕ ಕ್ರಾಸಿಂಗ್  ಮಾಡಿ ಇಂಟರ್ ಮಂಗಳವನ್ನು 1984 ರಲ್ಲಿ ಪಡೆಯಯಲಾಗಿದೆ.  ಚೀನಾದಲ್ಲಿ ಇದಕ್ಕೆ ಯಾವ ಹೆಸರಿತ್ತೋ ಗೊತ್ತಿಲ್ಲ. ಇಲ್ಲಿ ಅಭಿವೃದ್ದಿಪಡಿಸಿ ಬಿಡುಗಡೆ ಮಾಡುವಾಗ ಮಂಗಳ ಹೆಸರನ್ನು ನೀಡಲಾಗಿದೆ. ಹಾಗೆ ನೋಡಿದರೆ ಕೆಲವು ಚಾಲಿ ಅಡಿಕೆಗೆ ಹೊಂದುವ…

Read more

ಕಾಡು ಪ್ರಾಣಿಗಳಿಗೆ ಇನ್ನು ಹೊಲವೇ ಖಾಯಂ ವಾಸ್ತವ್ಯ!

ಸರಕಾರ ಈಗ ಅರಣ್ಯ ಇಲಾಖೆಯ ಸುಪರ್ದಿಯಲ್ಲಿದ್ದ ಸುಮಾರು 23 ಲಕ್ಷ ಎಕ್ರೆ ಅರಣ್ಯ ( ಡೀಮ್ದ್ ಫೋರೆಸ್ಟ್ )ನಲ್ಲಿ 15 ಲಕ್ಷ ಎಕರೆ  ಭೂಮಿಯನ್ನು ಸರಕಾರ ಕಂದಾಯ ಇಲಾಖೆಗೆ ವರ್ಗಾಯಿಸಲು ನಿರ್ಧರಿಸಿದೆ. ಈಗಲೇ ಅರಣ್ಯ ನಾಶದಿಂದ  ಕೃಷಿಕರ 10- 20 % ದಷ್ಟು ಬೆಳೆ ಕಾಡು ಪ್ರಾಣಿಗಳ ಪಾಲಾಗುತ್ತಿದೆ. ಒಂದು ವೇಳೆ ಇನ್ನೂ ಕಾಡು ಕಡಿಮೆಯಾದರೆ  ಕೃಷಿಕರ ಹೊಲದಲ್ಲೇ ಕಾಡು ಪ್ರಾಣಿಗಳು ವಾಸಮಾಡಬಹುದು. ಬೆಳೆಗಳು ಕೋತಿ, ಆನೆ ಕಾಡೆಮ್ಮೆಗಳ ಪಾಲಾಗಬಹುದು. ಹಟ್ಟಿಯಲ್ಲಿರುವ ಹಸುಗಳು ಹುಲಿ, ಚಿರತೆಯ ಪಾಲಾದರೂ…

Read more
ಶುದ್ಧ ತೆಂಗಿನ ಎಣ್ಣೆ

ಶುದ್ಧ ತೆಂಗಿನೆಣ್ಣೆಯಲ್ಲಿದೆ – ಅಪರಿಮಿತ ಆರೋಗ್ಯ ಗುಣಗಳು

ಪ್ರಕೃತಿ ಸೃಷ್ಟಿಸಿದ ಹಲವಾರು ಔಷಧೀಯ ಸಸ್ಯ , ಮೂಲಿಕೆಗಳಲ್ಲಿ ತೆಂಗು ಒಂದು. ಇದು ಇಂದು ನಿನ್ನೆಯ ವಿಚಾರ ಅಲ್ಲ. ಅನಾದಿ ಕಾಲದಿಂದಲೂ ಇದ್ದದ್ದು. ಆದರೆ ಗೊತ್ತೀದ್ದೋ ಗೊತ್ತಿಲ್ಲದೆಯೋ ನಾವು ಬಳಸುವುದು ಕಡಿಮೆ ಮಾಡುತ್ತಿದೇವೆ.ತೆಂಗಿನ ಎಣ್ಣೆ ತಿಂದವರಿಗೆ ರೋಗ ಇಲ್ಲ.  ಕೊಬ್ಬರಿ ಎಣ್ಣೆ ಎಂಬುದು ಹಸುವಿನ ತುಪ್ಪಕ್ಕೆ ಸರಿಸಾಟಿಯಾದ ವಸ್ತು ಎನ್ನುತ್ತಾರೆ. ಇದು ಸಸ್ಯಜನ್ಯ ಎಣ್ಣೆಯಾಗಿದ್ದು, ತುಪ್ಪಕ್ಕಿಂತಲೂ ಮಿಗಿಲಾದ ಔಷಧೀಯ ಗುಣವನ್ನು ಪಡೆದಿದೆ. ನಮ್ಮಲ್ಲಿ ಈಗಲೂ ಹಳ್ಳಿಯ ಜನ ಕಣ್ಣು ತುರಿಕೆ, ಮೈ ತುರಿಕೆ ಆದರೆ ಆ ಭಾಗಕ್ಕೆ…

Read more
ಸುಣ್ಣದ ಹುಡಿ ಚೆಲ್ಲುವುದು

ಸುಣ್ಣ ಹಾಕುತ್ತಿರಾ? ಈ ಮಾಹಿತಿಯನ್ನುಮೊದಲು ತಿಳಿದಿರಿ.

ಸುಣ್ಣ ಹಾಕುವುದರಿಂದ ಮಣ್ಣಿನ ರಸಸಾರ ತಟಸ್ಥ ಸ್ಥಿತಿಯತ್ತ ತಲುಪುತ್ತದೆ, ಅಥವಾ ಸ್ವಲ್ಪ ಕ್ಷಾರೀಯವೂ ಆಗುತ್ತದೆ. ಮಣ್ಣಿನ ಸ್ಥಿತಿ  ಹುಳಿಯಿಂದ ಕ್ಷಾರದತ್ತ ಬದಲಾವಣೆ ಆದ ನಂತರ ಗೊಬ್ಬರ ಬಳಸಿದರೆ ಅದನ್ನು ಸಸ್ಯಗಳು ಸುಭೋಜ್ಯವಾಗಿ ಬಳಸಿಕೊಳ್ಳುತ್ತವೆ. ಜೀರ್ಣ ಶಕ್ತಿ ಸರಿಯಾಗಿ  ಇರುವಾಗ ಆಹಾರ ತಿಂದರೆ ಅದು ಶರೀರಕ್ಕೆ ಚೆನ್ನಾಗಿ ತೆಗೆದುಕೊಳ್ಳುತ್ತದೆ ಹಾಗೆಯೇ ಇದೂ ಸಹ. ಮಣ್ಣಿನ ಜೀರ್ಣ ಶಕ್ತಿಯನ್ನು ಉತ್ತಮಪಡಿಸಿ ಪೋಷಕಾಂಶ ನೀಡುವುದು ಒಳ್ಳೆಯ ಕ್ರಮ. ಸಾಗುವಳಿಗೆ ಒಳಪಟ್ಟ ಅಥವಾ ಬೆಳೆ ಬೆಳೆಯುವ ಭೂಮಿಯ ಸಾರಾಂಶಗಳನ್ನು ಬೆಳೆಗಳು ಬಳಕೆ ಮಾಡಿಕೊಂಡಾಗ…

Read more

ಜೈವಿಕ ಗೊಬ್ಬರವನ್ನು ಹೀಗೆ ಬಳಸಿದರೆ ಹೆಚ್ಚು ಫಲ ಸಿಗುತ್ತದೆ?

ಬೇರೆ ಬೇರೆ ಜೀವಾಣುಗಳ ಸಹಾಯದಿಂದ ಬೆಳೆ ಪೋಷಣೆ ಮತ್ತು ಬೆಳೆ ಸಂರಕ್ಷಣೆ ಮಾಡಬಹುದು. ಈ ಜೀವಾಣುಗಳನ್ನು ಹುಡಿ, ದ್ರವ ರೂಪದಲ್ಲಿ ರೈತರಿಗೆ ಒದಗಿಸಲಾಗುತ್ತದೆ. ಇದರ ಸಮರ್ಪಕ ಫಲಿತಾಂಶ ಯಾವ ಸಂದರ್ಭದಲ್ಲಿ ಚೆನ್ನಾಗಿ ನಡೆಯುತ್ತದೆ ಎಂಬುದು ಎಲ್ಲರೂ ತಿಳಿದಿರಬೇಕು. ಜೀವಾಣುಗಳನ್ನು ಬಳಸುವ ಮುನ್ನ ಅದರ ಬಗ್ಗೆ ರೈತರು ತಿಳಿದುಕೊಳ್ಳಬೇಕು. ಅದು ಜೀವಾಣು ಎಂದಲ್ಲ. ಯಾವುದೇ ಬೆಳೆ ಪೋಷಕ ಇರಲಿ ಬೆಳೆ ಸಂರಕ್ಷಕ ಇರಲಿ, ಬಳಸುವ ಮುನ್ನ ಅದರಲ್ಲಿ ಯಾವ ಅಂಶ ಇದೆ ಎಂಬುದನ್ನು ಯಾರು ಬಹಿರಂಗ ಗೊಳಿಸುತ್ತಾರೆಯೋ ಅವರಿಂದ…

Read more
green leaf carrying

ತೋಟಕ್ಕೆ ಈಗ ಹಸಿ ಸೊಪ್ಪು ಹಾಕಿದರೆ ತುಂಬಾ ಅನುಕೂಲ. ಯಾಕೆ?

ತೋಟಕ್ಕೆ ಹಸಿ ಸೊಪ್ಪುಗಳನ್ನು ಬಳಸುವ ಸರಿಯಾದ ಸಮಯ ಮಳೆಗಾಲದ ಪ್ರಾರಂಭದ ದಿನಗಳು. ಈ ಸಮಯದಲ್ಲಿ ಹಸಿ ಸೊಪ್ಪು ಹಾಕಿದರೆ ಅದು ಕರಗಿಸಿಕೊಡುವ ಜೀವಿಗಳಿಂದ ಚೆನ್ನಾಗಿ ಕರಗುತ್ತದೆ.  ಮಳೆಗಾಲ ಪ್ರಾರಂಭದಿಂದ ಕೊನೆತನಕವೂ ಮಣ್ಣು ತೇವ ಭರಿತವಾಗಿರುತ್ತದೆ, ವಾತಾವರಣ ತಂಪಾಗಿರುತ್ತದೆ. ಇವೆಲ್ಲದರ ಅನುಕೂಲ ಬಳಸಿಕೊಂಡು ಮಣ್ಣಿನಲ್ಲಿ ಇರುವ ಬಹುತೇಕ ಎಲ್ಲಾ ಸೂಕ್ಷ್ಮಾಣು ಜೀವಿಗಳೂ ಹೆಚ್ಚು ಚಟುವಟಿಕೆಯಲ್ಲಿರುತ್ತವೆ. ಈಗ ನೀವು ಏನೇ ಸಾವಯವ ತ್ಯಾಜ್ಯ ಹಾಕಿದರೂ ಅದು ತ್ವರಿತವಾಗಿ ಕರಗಿ ಮಣ್ಣಾಗುತ್ತದೆ. ಈಗ ಸೊಪ್ಪು ಸದೆ ಹಾಕಿದರೆ ಮಳೆ ಹನಿಗಳಿಂದಾಗುವ ಮಣ್ಣು ಸವಕಳಿಯನ್ನೂ ತಡೆಯುತ್ತದೆ. ಕಳೆ ನಿಯಂತ್ರಣಕ್ಕೂ ಸಹಕಾರಿ….

Read more

ರೈತರು ಬುದ್ಧಿವಂತರಾಗದಿದ್ದರೆ ಉಳಿಗಾಲವಿಲ್ಲ. ತಿಳಿದಿರಲಿ.

ನಮ್ಮ ದೇಶದಲ್ಲಿ ಕೃಷಿಕರನ್ನು ಮಾತ್ರ ಯಾವ ರೀತಿಯಲ್ಲೂ ಮೋಸಮಾಡಬಹುದೇನೋ ಅನ್ನಿಸುತ್ತಿದೆ. ಕೃಷಿಕರಿಗೆ ಬೇಕಾಗುವ ಯಂತ್ರೋಪಕರಣ, ಗೊಬ್ಬರ, ಕೀಟ ನಾಶಕ, ಹೀಗೆ ಬೇಕಾಗುವ ಕೃಷಿ ಒಳಸುರಿ ಮಾರಾಟ ಮಾಡುವವರು ದಿನಕ್ಕೆ ಒಬ್ಬರಂತೆ ಸೃಷ್ಟಿಯಾಗುತ್ತಿದ್ದಾರೆ. ನಮಗೆ ಹೇಗಾದರೂ ಮಾಡಿ ಇಳುವರಿ ಹೆಚ್ಚಿಸಿಕೊಳ್ಳಬೇಕೆಂಬ ಹಂಬಲ. ಅವರಿಗೆ ಇದೇ ಬಂಡವಾಳ. ಹೊಸ ಹೊಸ ಉತ್ಪನ್ನಗಳು. ಹೊಸ ಬಾಟಲಿಯಲ್ಲಿ ಅಧಿಕ ಬೆಲೆಯ ಹಳೇ ಸಾಮಾನುಗಳು ಅಷ್ಟೇ ಬದಲಾವಣೆ. ಕೃಷಿಕರ ವೀಕ್ ನೆಸ್-ಇನ್ನೊಬ್ಬರ ಬಂಡವಾಳ: ಕೃಷಿಕರಲ್ಲಿ ಬಹುತೇಕ ಎಲ್ಲರಿಗೂ ಪರಸ್ಪರ ನಂಬಿಕೆ ಕಡಿಮೆ. ಅದು ಒಳ್ಳೆಯದೇ?ಇದು…

Read more
ಬೇರು ಮೇಲೆ ಬಂದ ಅಡಿಕೆ ಗಿಡ

ಅಡಿಕೆ ಮರದ ಬೇರುಗಳು ಮೇಲೆ ಬರುವುದಕ್ಕೆ ಕಾರಣ ಇದು.

ಅಡಿಕೆ ಮರಗಳ ಬೇರು ಮೇಲೆ ಬರಬಾರದು ಎಂದು  ಕರಾವಳಿ ಮಲೆನಾಡಿನ ಬಹುತೇಕ ಬೆಳೆಗಾರರು ಹೊಂಡ ಮಾಡಿ ಸಸಿ ನೆಡುತ್ತಾರೆ. ಎಷ್ಟೇ ಹೊಂಡ ಮಾಡಿದರೂ ಮರ ಬೆಳೆದಂತೆ ಬೇರು ಮೇಲೆ ಬರಲಾರಂಭಿಸುತ್ತದೆ.  ನೆಲಮಟ್ಟದಿಂದ 1 ಅಡಿ ಮೇಲೆ ಬರುವುದೂ ಇದೆ. ಇದು ಯಾವುದೇ ರೋಗ ಅಲ್ಲ. ಇದಕ್ಕೆ ಕಾರಣ ಬೇರೆಯೇ ಇದೆ.  ಅಡಿಕೆ ಸಸ್ಯದ ಬೇರು ಮೇಲೆ ಬಂದಿದೆ ಎಂದರೆ ಮಣ್ಣಿನಲ್ಲಿ ಸಸ್ಯದ ಬೇರುಗಳ ಬೆಳವಣಿಗೆಗೆ ಏನೋ ಅಡ್ದಿ ಉಂಟಾಗಿದೆ ಎಂದರ್ಥ. ಒಮ್ಮೆ ಹುಟ್ಟಿದ ಬೇರು ಸಮರ್ಪಕವಾಗಿ ಬೆಳವಣಿಗೆ…

Read more
ಅಡಿಕೆ- ಕರಿಮೆಣಸು ಬೆಳೆಗಳ ತೋಟಕ್ಕೆ ಅಗತೆ ವರ್ಜ್ಯ

ಅಡಿಕೆ- ಕರಿಮೆಣಸು ಬೆಳೆಗಳ  ತೋಟಕ್ಕೆ ಅಗತೆ, ಉಳುಮೆ ವರ್ಜ್ಯ.

ಅಡಿಕೆ ಮರಗಳ ಬೇರುಗಳು ಮೆತ್ತನೆಯ ಮೇಲ್ಮಣ್ಣಿನಲ್ಲಿ ಹರಡಿ ಬೆಳೆಯುವ ಗುಣದ ಸಸ್ಯಗಳು. ಆದ ಕಾರಣ ಮೇಲು ಭಾಗವನ್ನು ಅಗತೆ, ಉಳುಮೆ ಮಾಡುವುದರಿಂದ  ಬೇರಿಗೆ ಹಾನಿಯಾಗುತ್ತದೆ. ಅಲ್ಲದೆ ಬೇರೆ ಬೇರೆ ತೊಂದರೆಗಳೂ ಉಂಟಾಗುತ್ತವೆ.ಅಡಿಕೆ ಮರದ ಬುಡದಲ್ಲಿ ಕರಿಮೆಣಸು ಇದ್ದರೆ ಯಾವ ಕಾರಣಕ್ಕೂ ಬುಡ ಭಾಗವನ್ನು  ಕೆರೆಯುವುದೂ ಸಹ ಮಾಡಬಾರದು. ಇದರಿಂದ ಕರಿಮೆಣಸಿನ ಬಳ್ಳಿ ಸಾಯಬಹುದು, ಅಥವಾ ಸೊರಗಬಹುದು. ಬುಡ ಬುಡಿಸುವುದು ಹಳೆ ಪದ್ದತಿ: ನಮ್ಮ ಹಿರಿಯರು ತಿಳಿದೋ ತಿಳಿಯದೆಯೋ ಕೆಲವು ಬೇಸಾಯ ಕ್ರಮಗಳನ್ನು ಅನುಸರಿಸುತ್ತಿದ್ದರು. ಅದರಲ್ಲಿ ಒಂದು ಬುಡ…

Read more
paddy

ಭತ್ತದ ಬೆಳೆಯ ಮಹಾ ಶತ್ರು –ಬಂಬು ಕೀಟ ನಿಯಂತ್ರಣ

ಬಂಬು  ಅಥವಾ ಗುಂಧೀ ಬಗ್  (Gundhi bug Leptocorisa oratorius Fabr) ಹೆಸರಿನ ಈ ಕೀಟ ಭತ್ತ ತೆನೆಬಿಡುವ ಹಂತದಲ್ಲಿ ಎಲ್ಲಿದ್ದರೂ ಹಾಜರಾಗುತ್ತದೆ. ತೆನೆಯಲ್ಲಿ ಹಾಲು ಕೂಡುವ ಸಮಯದಲ್ಲಿ ಅದರ  ರಸ ಕುಡಿದು ಭಾರೀ ಬೆಳೆ ನಷ್ಟವನ್ನು ಉಂಟು ಮಾಡುತ್ತದೆ.  ಇದನ್ನು ಯಾವ ಬೆಳೆಗಾರರೂ ನಿರ್ಲಕ್ಷ್ಯ ಮಾಡುವಂತಿಲ್ಲ. ಬಾರದಂತೆ ಮುನ್ನೆಚ್ಚರಿಕೆ ವಹಿಸಬೇಕು. ಬಂದರೆ ತಕ್ಷಣ ನಿಯಂತ್ರಣೋಪಾಯ ಕೈಗೊಳ್ಳಬೇಕು. ಯಾರಾದರೂ ರಾಸಾಯನಿಕ ಕೀಟನಾಶಕ ಬಳಸದೆ ಭತ್ತ ಬೆಳೆಯುತ್ತಾರೆಂದರೆ ಅವರ ಶ್ರಮವನ್ನು ಭಂಗ ಮಾಡುವ ಕೀಟ ಇದ್ದರೆ ಅದು ಬಂಬು….

Read more
error: Content is protected !!