ರೈತರು ಬುದ್ಧಿವಂತರಾಗದಿದ್ದರೆ ಉಳಿಗಾಲವಿಲ್ಲ. ತಿಳಿದಿರಲಿ.

ನಮ್ಮ ದೇಶದಲ್ಲಿ ಕೃಷಿಕರನ್ನು ಮಾತ್ರ ಯಾವ ರೀತಿಯಲ್ಲೂ ಮೋಸಮಾಡಬಹುದೇನೋ ಅನ್ನಿಸುತ್ತಿದೆ. ಕೃಷಿಕರಿಗೆ ಬೇಕಾಗುವ ಯಂತ್ರೋಪಕರಣ, ಗೊಬ್ಬರ, ಕೀಟ ನಾಶಕ, ಹೀಗೆ ಬೇಕಾಗುವ ಕೃಷಿ ಒಳಸುರಿ ಮಾರಾಟ ಮಾಡುವವರು ದಿನಕ್ಕೆ ಒಬ್ಬರಂತೆ ಸೃಷ್ಟಿಯಾಗುತ್ತಿದ್ದಾರೆ. ನಮಗೆ ಹೇಗಾದರೂ ಮಾಡಿ ಇಳುವರಿ ಹೆಚ್ಚಿಸಿಕೊಳ್ಳಬೇಕೆಂಬ ಹಂಬಲ. ಅವರಿಗೆ ಇದೇ ಬಂಡವಾಳ. ಹೊಸ ಹೊಸ ಉತ್ಪನ್ನಗಳು. ಹೊಸ ಬಾಟಲಿಯಲ್ಲಿ ಅಧಿಕ ಬೆಲೆಯ ಹಳೇ ಸಾಮಾನುಗಳು ಅಷ್ಟೇ ಬದಲಾವಣೆ. ಕೃಷಿಕರ ವೀಕ್ ನೆಸ್-ಇನ್ನೊಬ್ಬರ ಬಂಡವಾಳ: ಕೃಷಿಕರಲ್ಲಿ ಬಹುತೇಕ ಎಲ್ಲರಿಗೂ ಪರಸ್ಪರ ನಂಬಿಕೆ ಕಡಿಮೆ. ಅದು ಒಳ್ಳೆಯದೇ?ಇದು…

Read more
ಬೇರು ಮೇಲೆ ಬಂದ ಅಡಿಕೆ ಗಿಡ

ಅಡಿಕೆ ಮರದ ಬೇರುಗಳು ಮೇಲೆ ಬರುವುದಕ್ಕೆ ಕಾರಣ ಇದು.

ಅಡಿಕೆ ಮರಗಳ ಬೇರು ಮೇಲೆ ಬರಬಾರದು ಎಂದು  ಕರಾವಳಿ ಮಲೆನಾಡಿನ ಬಹುತೇಕ ಬೆಳೆಗಾರರು ಹೊಂಡ ಮಾಡಿ ಸಸಿ ನೆಡುತ್ತಾರೆ. ಎಷ್ಟೇ ಹೊಂಡ ಮಾಡಿದರೂ ಮರ ಬೆಳೆದಂತೆ ಬೇರು ಮೇಲೆ ಬರಲಾರಂಭಿಸುತ್ತದೆ.  ನೆಲಮಟ್ಟದಿಂದ 1 ಅಡಿ ಮೇಲೆ ಬರುವುದೂ ಇದೆ. ಇದು ಯಾವುದೇ ರೋಗ ಅಲ್ಲ. ಇದಕ್ಕೆ ಕಾರಣ ಬೇರೆಯೇ ಇದೆ.  ಅಡಿಕೆ ಸಸ್ಯದ ಬೇರು ಮೇಲೆ ಬಂದಿದೆ ಎಂದರೆ ಮಣ್ಣಿನಲ್ಲಿ ಸಸ್ಯದ ಬೇರುಗಳ ಬೆಳವಣಿಗೆಗೆ ಏನೋ ಅಡ್ದಿ ಉಂಟಾಗಿದೆ ಎಂದರ್ಥ. ಒಮ್ಮೆ ಹುಟ್ಟಿದ ಬೇರು ಸಮರ್ಪಕವಾಗಿ ಬೆಳವಣಿಗೆ…

Read more
ಅಡಿಕೆ- ಕರಿಮೆಣಸು ಬೆಳೆಗಳ ತೋಟಕ್ಕೆ ಅಗತೆ ವರ್ಜ್ಯ

ಅಡಿಕೆ- ಕರಿಮೆಣಸು ಬೆಳೆಗಳ  ತೋಟಕ್ಕೆ ಅಗತೆ, ಉಳುಮೆ ವರ್ಜ್ಯ.

ಅಡಿಕೆ ಮರಗಳ ಬೇರುಗಳು ಮೆತ್ತನೆಯ ಮೇಲ್ಮಣ್ಣಿನಲ್ಲಿ ಹರಡಿ ಬೆಳೆಯುವ ಗುಣದ ಸಸ್ಯಗಳು. ಆದ ಕಾರಣ ಮೇಲು ಭಾಗವನ್ನು ಅಗತೆ, ಉಳುಮೆ ಮಾಡುವುದರಿಂದ  ಬೇರಿಗೆ ಹಾನಿಯಾಗುತ್ತದೆ. ಅಲ್ಲದೆ ಬೇರೆ ಬೇರೆ ತೊಂದರೆಗಳೂ ಉಂಟಾಗುತ್ತವೆ.ಅಡಿಕೆ ಮರದ ಬುಡದಲ್ಲಿ ಕರಿಮೆಣಸು ಇದ್ದರೆ ಯಾವ ಕಾರಣಕ್ಕೂ ಬುಡ ಭಾಗವನ್ನು  ಕೆರೆಯುವುದೂ ಸಹ ಮಾಡಬಾರದು. ಇದರಿಂದ ಕರಿಮೆಣಸಿನ ಬಳ್ಳಿ ಸಾಯಬಹುದು, ಅಥವಾ ಸೊರಗಬಹುದು. ಬುಡ ಬುಡಿಸುವುದು ಹಳೆ ಪದ್ದತಿ: ನಮ್ಮ ಹಿರಿಯರು ತಿಳಿದೋ ತಿಳಿಯದೆಯೋ ಕೆಲವು ಬೇಸಾಯ ಕ್ರಮಗಳನ್ನು ಅನುಸರಿಸುತ್ತಿದ್ದರು. ಅದರಲ್ಲಿ ಒಂದು ಬುಡ…

Read more
paddy

ಭತ್ತದ ಬೆಳೆಯ ಮಹಾ ಶತ್ರು –ಬಂಬು ಕೀಟ ನಿಯಂತ್ರಣ

ಬಂಬು  ಅಥವಾ ಗುಂಧೀ ಬಗ್  (Gundhi bug Leptocorisa oratorius Fabr) ಹೆಸರಿನ ಈ ಕೀಟ ಭತ್ತ ತೆನೆಬಿಡುವ ಹಂತದಲ್ಲಿ ಎಲ್ಲಿದ್ದರೂ ಹಾಜರಾಗುತ್ತದೆ. ತೆನೆಯಲ್ಲಿ ಹಾಲು ಕೂಡುವ ಸಮಯದಲ್ಲಿ ಅದರ  ರಸ ಕುಡಿದು ಭಾರೀ ಬೆಳೆ ನಷ್ಟವನ್ನು ಉಂಟು ಮಾಡುತ್ತದೆ.  ಇದನ್ನು ಯಾವ ಬೆಳೆಗಾರರೂ ನಿರ್ಲಕ್ಷ್ಯ ಮಾಡುವಂತಿಲ್ಲ. ಬಾರದಂತೆ ಮುನ್ನೆಚ್ಚರಿಕೆ ವಹಿಸಬೇಕು. ಬಂದರೆ ತಕ್ಷಣ ನಿಯಂತ್ರಣೋಪಾಯ ಕೈಗೊಳ್ಳಬೇಕು. ಯಾರಾದರೂ ರಾಸಾಯನಿಕ ಕೀಟನಾಶಕ ಬಳಸದೆ ಭತ್ತ ಬೆಳೆಯುತ್ತಾರೆಂದರೆ ಅವರ ಶ್ರಮವನ್ನು ಭಂಗ ಮಾಡುವ ಕೀಟ ಇದ್ದರೆ ಅದು ಬಂಬು….

Read more

ರೈತರ ಆದಾಯಕ್ಕೆ ಬ್ಲೇಡ್ ಹಾಕದಿದ್ದರೆ ಅದಾಯ ತಕ್ಷಣ ದ್ವಿಗುಣ.

ಭಾರತ ಸರಕಾರವು 2022 ವೇಳೆಗೆ  ದೇಶದ ರೈತರ ಆದಾಯ ದ್ವಿಗುಣಗೊಳಿಸುವ ಗುರಿಯನ್ನು ಹೊಂದಿರುವುದು ನಮೆಗೆಲ್ಲಾ ಗೊತ್ತಿದೆ. ಇದಕ್ಕೆ ಸಾಕಷ್ಟು ತಯಾರಿಗಳು ಆಗುತ್ತಿದೆ. ಈಗ ನಡೆಯುತ್ತಿರುವ ಪೂರ್ವ ತಯಾರಿಯಲ್ಲಿ ಯಾಕೋ ಭಾರತ ರೈತರ ಆದಾಯವು ದ್ವಿಗುಣಗೊಂಡರೂ ಸಹ ಅದು ಅವನಿಗೆ ಉಳಿಯಲಿಕ್ಕಿಲ್ಲವೇನೋ ಅನ್ನಿಸುತ್ತಿದೆ. ರೈತರ ಆದಾಯ ದ್ವಿಗುಣವಾಗುವುದು (doubling farmers‘ income) ಅನಿವಾರ್ಯ. ಅದರ ಅಗತ್ಯ ಆಡಳಿತ ನಡೆಸುವ ನಮ್ಮ ಮುಖಂಡರಿಗೆ ತಿಳುವಳಿಕೆಗ ಬಂದುದೂ ಸಹ ಸ್ವಾಗತಾರ್ಹ. ಯಾವಾಗಲೋ  ಅದನ್ನು ಸರಕಾರ  ಗಮನಿಸಿ ಅದಕ್ಕೆ ಬೇಕಾದ ಕಾರ್ಯಕ್ರಮಗಳನ್ನು  ಹಾಕಿಕೊಳ್ಳಬೇಕಿತ್ತು. ಈಗಲಾದರೂ…

Read more

ಹ್ಯೂಮಸ್ ಹೆಚ್ಚಿಸಿ ಅಧಿಕ ಫಸಲು ಪಡೆಯಿರಿ.

ಎಲ್ಲರೂ ಹ್ಯೂಮಸ್ ಎಂಬ ಶಬ್ಧವನ್ನು ಕೇಳಿರುತ್ತಾರೆ.ಆದರೆ ಇದು ಏನು, ಹೇಗೆ ಉತ್ಪಾದನೆಯಾಗುತ್ತದೆ ಎಂಬ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ.ಹ್ಯೂಮಸ್ ಎಂದರೆ ಮಣ್ಣಿನಲ್ಲಿ ಜೀವ ರಾಸಾಯನಿಕ ಕ್ರಿಯೆಯಿಂದ ಉತ್ಪಾದನೆಯಾಗುವ ಆಕಾರ ರಹಿತ, ಒಂದು ವಸ್ತು. ಇದು ಮಣ್ಣಿನ ಸ್ಥಿತಿಯನ್ನು ಫಲವತ್ತಾಗಿ ಇಡಲು ನೆರವಾಗುವ ಅಂಶ. ನಾವು ಮಣ್ಣಿಗೆ ಸೇರಿಸುವ ಕೃಷಿ ತ್ಯಾಜ್ಯಗಳು, ಮಣ್ಣಿನಲ್ಲೇ ಇರುವ ಕೆಲವು ಜೀವಿಗಳು ತಮ್ಮ ಆಯುಸ್ಸನ್ನು ಮುಗಿಸಿ ಮತ್ತೆ ಮಣ್ಣಿಗೇ ಸೇರುತ್ತವೆ. dead plant and animals and ferns etc.  ಅದು ಮಣ್ಣಿನಲ್ಲಿ ವಿಘಟನೆಯಾಗುವಾಗ…

Read more
areca nut palm with full yield

ಅಡಿಕೆ – ಉತ್ತಮ ಫಲ ಕೊಡುವ ಮರದ ಲಕ್ಷಣ ಹೇಗಿರಬೇಕು.

ಇತ್ತೀಚೆಗಿನ ಅಡಿಕೆ ತೋಟಗಳಲ್ಲಿ ಶೇ.50 ಮಾತ್ರ ಉತ್ತಮ ಫಲನೀಡಿ, ಉಳಿದವು ಅನುತ್ಪಾದಕ ಮರಗಳಂತೆ ಇರುವ ಕಾರಣ ತೋಟಗಳು ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿದ್ದರೂ ಉತ್ಪಾದನೆ ಆ ಮಟ್ಟಕ್ಕೆ ಏರುತ್ತಿಲ್ಲ. ಬೆಳೆಗಾರರು ಹೆಚ್ಚು ಹೆಚ್ಚು ಸಸಿ ನೆಡುವ ಬದಲು ಇರುವ ತೋಟದಲ್ಲೇ ಬಹುತೇಕ ಉತ್ಪಾದಕ ಮರಗಳಿರುವಂತೆ ತೋಟವನ್ನು ಪುನಃಶ್ಚೇತನ ಮಾಡುವುದು ಎಲ್ಲಾ ದೃಷ್ಟಿಯಿಂದ ಉತ್ತಮ. ಸ್ವಲ್ಪ ಬಿಡುವು ಮಾಡಿಕೊಂಡು ತೋಟ ಸುತ್ತುತ್ತಾ ಬನ್ನಿ. ಹಿಂದೆ ಸುತ್ತುದಾಗ ಗಮನಿಸಿದ ಮರ, ಕಳೆದ ವರ್ಷ ಸುತ್ತುವಾಗ ಗಮನಿಸಿದ ಮರ , ಅದಕ್ಕಿಂತ ಹಿಂದಿನ…

Read more

ಬಯೋ NPK ಒಂದೇ ಸಾಕು? ಇದೆಷ್ಟು ನಿಜ.

ಬಹುತೇಕ  ರೈತರ ಬಳಿಗೆ ಕೆಲವು ನೆಟ್ ವರ್ಕ್ ಸಂಘಟನೆಗಳು, ಹಾಗೆಯೇ ಕೆಲವು ಸಾವಯವ ಗೊಬ್ಬರ ಪ್ರಚಾರಕರು ಒಂದೆರಡೂ ಬಾಟಲಿಗಳನ್ನು ಅಥವಾ ಪ್ಯಾಕೆಟುಗಳನ್ನು  ಪರಿಚಯಿಸಿ ಈ ಪ್ಯಾಕೇಟ್/ಬಾಟಲಿಯ ದ್ರಾವಣ ಹಾಕಿದರೆ ಬೇರೆ ಗೊಬ್ಬರ ಬೇಕಾಗಿಲ್ಲ. ಭಾರೀ ಫಸಲು ಎಂದು  ಹೇಳುತ್ತಾರೆ. ಇದು ಬಯೋ( ಜೈವಿಕ) ಗೊಬ್ಬರ ಎಂಬುದಾಗಿಯೂ ಹೇಳುತ್ತಾರೆ. ಅಧಿಕ ಇಳುವರಿಯ ಆಶೆಯಲ್ಲಿ ಜನ ಖರೀದಿಸಿ ಬಳಸುತ್ತಾರೆ. ಇಂತಹ ಜೈವಿಕ ಗೊಬ್ಬರಗಳ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ. ಬಯೋ NPK ಗೊಬ್ಬರ ಎಂದರೆ ಜೈವಿಕವಾಗಿ ಸಾರಜನಕ , ರಂಜಕ…

Read more
ಗಡ್ದೆ ಕಸಿಯ ಗಿಡ

ಗಡ್ಡೆಯಿಂದ ಅಂಗಾಂಶ ಕಸಿ- ನೀವೇ ಮಾಡಬಹುದು ಹೇಗೆ?

ನಿಮಗೆ ಖುಷಿ ಕಂಡ ಬಾಳೆಯನ್ನು ಎಲ್ಲೇ ಕಂಡರೂ ಅದರ ಒಂದು ಗಡ್ಡೆ ತಂದರೆ ಸಾಕು, ಆ ಒಂದು  ಗಡ್ಡೆಯ ಮೂಲದಲ್ಲಿ 4 ತಿಂಗಳೊಳಗೆ 50 ಕ್ಕೂ ಹೆಚ್ಚು ಸಸಿಗಳನ್ನು  ಪಡೆಯಬಹುದು. ಈ ತಂತ್ರಜ್ಞಾನವನ್ನು ತಿರುಚಿನಾಪಳ್ಳಿಯ ರಾಷ್ಟ್ರೀಯ ಬಾಳೆ ಸಂಶೋಧನಾ ಕೇಂದ್ರದ ವಿಜ್ಞಾನಿಗಳು ಪ್ರಚಾರಕ್ಕೆ ತಂದಿದ್ದಾರೆ. ಬಾಳೆಯ ಅಧಿಕ ಸಸಿಗಾಗಿ ಅಂಗಾಂಶ ಕಸಿ ಮಾಡಬೇಕು. ಇಲ್ಲವೇ ಅಧಿಕ ತೂಕದ ಗಡ್ಡೆಯನ್ನು ತರಬೇಕು. ಅದರ ಬದಲಿಗೆ ಒಂದು ಗಡ್ಡೆ ಇದ್ದರೆ ನಿಮ್ಮ ಮನೆಯಲ್ಲೇ ಅಧಿಕ ಸಂಖ್ಯೆಯ ಬಾಳೆ ಸಸಿಯನ್ನು ಉತ್ಪಾದಿಸಲು…

Read more
brinja

ಬಿಟಿ ಬದನೆ ಬಂದರೆ ಕೀಟನಾಶಕ ಬಳಸದ ಬದನೆ ತಿನ್ನಬಹುದು.

ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಬಿಟಿ ಬದನೆಯ ಬೇಸಾಯ ಸದ್ದಿಲದ್ದೆ ಕರ್ನಾಟಕದಲ್ಲಿ ರೈತರು ಎಚ್ಚರದಿಂದಿರಿ ಎಂಬ    ವಿರೋಧಿ ಹೋರಾಟದ ಸಂದೇಶಗಳು ರವಾನೆಯಾಗುತ್ತಿವೆ. ಯಾಕೆ ಬಿಟಿ ಬದನೆ ಬೇಡ ಎಂದು ತಿಳಿಯುತ್ತಿಲ್ಲ. ವೈಜ್ಞಾನಿಕ ಮೂಲಗಳು ಬಿಟಿಯಿಂದ ತೊಂದರೆ ಇಲ್ಲ ಎಂಬುದನ್ನು ಆದಾರ ಸಹಿತ ಹೇಳಿದರೆ  ಬಿಟಿ ಬೇಡ ಎನ್ನುವವರು ತಮ್ಮದೇ ಆದ ವಾದಗಳಿಂದ ಜನರನ್ನು ಅಂಜಿಸುತ್ತಿದ್ದಾರೆ. ವಿಜ್ಞಾನ ಹೇಳುತ್ತದೆ ಹೀಗೆ: ಬಿಟಿ ಎಂದರೆ ವಂಶವಾಹಿ ಮಾರ್ಪಾಡು ಮಾಡಲಾದ ತಳಿ. ಮಾರ್ಪಾಡು ಎಂದರೆ ಕೆಲವು ಅವಗುಣಗಳನ್ನು ತೆಗೆದು ಅಗತ್ಯ ಗುಣಗಳನ್ನು ಅದರ…

Read more
error: Content is protected !!