ಮನೆಯಲ್ಲೇ ಹಲಸಿನ ಹಣ್ಣಿನ ವೈನ್ ತಯಾರಿಕೆ.

ಹಲವು ಬಗೆಯ ಹಣ್ಣುಗಳಿಂದ ವೈನ್ ತಯಾರಿಸಲಿಕ್ಕೆ ಆಗುತ್ತದೆ. ಹುಳಿ ಅಂಶ ಇರುವ ಹಣ್ಣುಗಳ ವೈನ್ ಮಾಡುವುದು ಸಾಮಾನ್ಯವಾದರೂ , ಬರೇ ಸಿಹಿ ಇರುವ ಹಣ್ಣುಗಳಿಂದಲೂ ವೈನ್ ಮಾಡಬಹುದು. ವೈನ್ ಎಂಬುದು ಆರೋಗ್ಯಕ್ಕೆ ಉತ್ತಮ ಪೇಯವಾಗಿದ್ದು, ಎಲ್ಲರೂ ಇದನ್ನು ಹಿತ ಮಿತವಾಗಿ ಸೇವಿಸಬಹುದು. ಹಲಸಿನ ಹಣ್ಣಿನ ವೈನ್ ವಿಶಿಷ್ಟ ಸುವಾಸನೆಯೊಂದಿಗೆ ಸಿಹಿ ವೈನ್ ಆಗಿರುತ್ತದೆ. ಹಲಸಿನಲ್ಲಿ ಬಕ್ಕೆ ಮತ್ತು ಬೆಳುವ ಎಂಬ ಎರಡು ವಿಧ. ಹಣ್ಣಿಗೆ ಬಕ್ಕೆ ಹಲಸು ಸೂಕ್ತ. ಬೆಳುವೆ ಅಥವಾ ಅಂಬಲಿ ಹಣ್ಣು ರುಚಿಯಲ್ಲಿ, ಎಲ್ಲದರಲ್ಲೂ…

Read more

ಭವಿಷ್ಯದಲ್ಲಿ ಕೃಷಿಗೆ ಇದು ಅತೀ ದೊಡ್ದ ಕಂಟಕ.

ಕೇರಳದಲ್ಲಿ ಆನೆಯೊಂದು ರೈತನ ಬೆಳೆ ಹಾಳು ಮಾಡಿದ್ದಕ್ಕೆ  ಕೊಲ್ಲಲ್ಪಟ್ಟರೆ, ದೇಶದಾದ್ಯಂತ ಸದ್ದು ಗದ್ದಲವಿಲ್ಲದೆ ಅದೆಷ್ಟೋ  ಕಾಡು ಪ್ರಾಣಿಗಳು ಕೊಲ್ಲಲ್ಪಡುತ್ತಿವೆ.  ಅರಿತ್ರಾ ಕ್ಷೇತ್ರಿ  Aritra Kshettri ಎಂಬ ಅಧ್ಯಯನಕಾರ Ministry of Science and Technology’s Innovation in Science Pursuit for Inspired Research programme. ಹೇಳುವಂತೆ 80% ಕಾಡುಪ್ರಾಣಿಗಳು ಕಾಡಿನಿಂದ ನಾಡಿಗೆ ಬಂದಿವೆಯಂತೆ. ಇಲ್ಲಿ ರೈತನ ಬೆಳೆ ಮುಖ್ಯವೋ ಕಾಡು ಪ್ರಾಣಿಗಳು ಮುಖ್ಯವೋ ಎಂಬುದು ಇನ್ನೂ ಪ್ರಶ್ನೆಯಾಗಿ ಉಳಿದಿದೆ ಎನ್ನುತ್ತಾರೆ. ಬೆಳೆ ರಕ್ಷಣೆ ಕಷ್ಟವಾಗುತ್ತಿದೆ: ಮಹಾರಾಷ್ಟ್ರದ…

Read more
ಶುಂಠಿ ಕೊಳೆ ರೋಗಕ್ಕೆ ಪರಿಹಾರ

ಶುಂಠಿ ಕೊಳೆ ರೋಗಕ್ಕೆ ಒಂದೇ ಪರಿಹಾರ.

ಶುಂಠಿಯ ಗಿಡ ಹಳದಿಯಾಗಿ ಕೊಳೆಯುವ Rhizome rot / Soft rot ರೋಗಕ್ಕೆ Pythium aphanidermatum ಶಿಲೀಂದ್ರ,  ಕಾರಣ. ಶುಂಠಿ ಬೆಳೆಯಲ್ಲಿ ಇದರಿಂದಾಗಿ 80-90 % ತನಕ ಬೆಳೆ ನಷ್ಟವಾಗುತ್ತದೆ.  ಇದನ್ನು ಬೇರೆ ಬೇರೆ ವಿಧಾನದಲ್ಲಿ ಟ್ರಯಲ್ ಎಂಡ್ ಎರರ್ ಮಾದರಿಯಲ್ಲಿ ನಿಯಂತ್ರಿಸುವ ಪ್ರಯತ್ನ ಮಾಡಿ ಸಮಾಧಾನ ಮಾಡಿಕೊಳ್ಳುತ್ತಾರೆ. ಇದು ಬಂದ ನಂತರ ನಿಯಂತ್ರಣ ಅಷ್ಟಕ್ಕಷ್ಟೇ. ಮೊದಲೇ ನಿಯಂತ್ರಣ ಮಾಡಿದರೆ ಪರಿಣಾಮಕಾರಿ. ಶುಂಠಿ ರೋಗ ಹೇಗೆ ಬರುತ್ತದೆ:   ಬಿತ್ತನೆ ಗಡ್ಡೆಗಳ ಮೂಲಕ ಈ ರೋಗಕಾರಕ ಶಿಲೀಂದ್ರದ ಪ್ರವೇಶವಾಗುತ್ತದೆ. ಗಡ್ಡೆಗಳಲ್ಲಿ…

Read more
water recharge

ಬೋರ್ವೆಲ್ ರೀಚಾರ್ಜ್ ಎಲ್ಲಿ ಮಾಡಬಹುದು?

ಅಂತರ್ಜಲ ಎಂಬ ಕರೆನ್ಸಿ ಅತಿಯಾಗಿ ಬಳಕೆ ಮಾಡಿ ಮುಗಿಯುತ್ತಿದೆ.ಅದಕ್ಕೆ  ಮತ್ತೆ  ರೀ ಚಾರ್ಜ್ ಮಾಡಬಹುದು ಎನ್ನುತ್ತಾರೆ ಸ್ವಘೋಷಿತ ತಜ್ಞರು. ಇದನ್ನು ಹಲವಾರು ಜನ ಮಾಡಿದ್ದಾರೆ.  ಕೆಲವರು ಒಳ್ಳೆಯದಾಗಿದೆ ಎನ್ನುತ್ತಾರೆ ಕೆಲವರು ನಿರಾಶರಾದದ್ದೂ ಇದೆ. ಒಟ್ಟಿನಲ್ಲಿ ನಿಮ್ಮ ಕೊಳವೆ ಬಾವಿ ಮಳೆಗಾಲದಲ್ಲಿ ನೀರನ್ನು ಕುಡಿಯುವ ಸ್ಥಿತಿಯಲ್ಲಿದ್ದರೆ ಅದಕ್ಕೆ ಸೋಸು ವ್ಯವಸ್ಥೆಗಳ ಮೂಲಕ ನೀರನ್ನು ಮರು ಪೂರಣ ಮಾಡುವುದರಲ್ಲಿ ತಪ್ಪಿಲ್ಲ. ಅಂತರ್ಜಲಕ್ಕೆ ಮರು ಪೂರಣ ಸಾಧ್ಯವೇ: ಭೂಮಿಯ ಒಳಗೆ ಶಿಲಾ ಪದರಗಳ ಕೆಲವು ಬಿರುಕುಗಳಲ್ಲಿ ನೀರು ಇರುತ್ತದೆ. ಇನ್ನು ಕೆಲವು…

Read more
ಹೊಸತಾಗಿ ತೋಟ ಮಾಡುತ್ತೀರಾ

ಹೊಸತಾಗಿ ತೋಟ ಮಾಡುತ್ತೀರಾ ? ಹೀಗೆ ಮಾಡಿ.

ಹೊಸತಾಗಿ ಅಡಿಕೆ ಸಸಿಗಳನ್ನು  ನೆಡುವಾಗ ಸಾಂಪ್ರದಾಯಿಕ  ಅಂತರದಲ್ಲಿ  ಸ್ವಲ್ಪ ಬದಲಾವಣೆ ಮಾಡಿ ಅಷ್ಟೇ ಸಸಿ ಹಿಡಿಸಿ  ಬೇರೆ  ಬೇರೆ ಅಂತರದಲ್ಲಿ ನಾಟಿ ಮಾಡಿದರೆ  ಮಿಶ್ರ ಬೆಳೆ ಬೆಳೆಸಲು ಸುಲಭ. ಭವಿಷ್ಯದಲ್ಲಿ ಕೆಲಸಗಾರರ ಸಮಸ್ಯೆಗೆ ಇದು ಪರಿಹಾರವಾಗಲಿದೆ. ಮುಂದಿನ ದಿನಗಳಲ್ಲಿ ಕೆಲಸಗಾರರು ಸಿಗುತ್ತಾರೆ ಎಂಬ ಆಶೆ ಬೇಡ. ಇಷ್ಟಕ್ಕೂ ಕೆಲಸಗಾರರಿಗೆ ಕಾಲ ಕಾಲಕ್ಕೆ ಏರಿಕೆಯಾಗುವ ಮಜೂರಿಯನ್ನು ಕೊಡಲು ಕೃಷಿಯ ಉತ್ಪಾದನೆ ಸಾಲದು. ಹೀಗಿರುವಾಗ ನಮಗೆ ಇರುವ ಆಯ್ಕೆ ಕೆಲಸದವರ ಅವಲಂಬನೆಯನ್ನು ಕಡಿಮೆ ಮಾಡುವುದು ಒಂದೇ. ಇದಷ್ಟೇ ಅಲ್ಲ. ಒಂದು…

Read more
areca garden with out tilling

ಅಡಿಕೆ- ಬುಡ ಬಿಡಿಸಿ ಗೊಬ್ಬರ ಕೊಡಬೇಕಾಗಿಲ್ಲ.

ಬಹಳ ಜನ ಅಡಿಕೆ , ತೆಂಗಿನ ಮರಗಳಿಗೆ ಗೊಬ್ಬರ ಇತ್ಯಾದಿ ಹಾಕುವಾಗ ಮರದ ಬುಡ ಭಾಗವನ್ನು ಕೆರೆದು ಆ ಅವಕಾಶದ ಒಳಗೆ  ರಾಸಾಯನಿಕ ಗೊಬ್ಬರ, ಕೊಟ್ಟಿಗೆ ಗೊಬ್ಬರ ಕೊಟ್ಟು ಮತ್ತೆ ಮುಚ್ಚುತ್ತಾರೆ.  ಇದಕ್ಕೆ ತಗಲುವ ಖರ್ಚು ಗೊಬ್ಬರಕ್ಕಿಂತ ಹೆಚ್ಚು. ಅದನ್ನು ಉಳಿಸಿದರೆ ಗೊಬ್ಬರ ಜಾಸ್ತಿ ಕೊಟ್ಟು ಇಳುವರಿ ಹೆಚ್ಚು ಪಡೆಯಬಹುದು. ಇಲ್ಲಿ ತೋರಿಸಿರುವ ಚಿತ್ರ ಓರ್ವ ಅಡಿಕೆ  ಬೆಳೆಗಾರ ತನ್ನ ಅಡಿಕೆ  ತೋಟದಲ್ಲಿ ನೆಟ್ಟ ನಂತರ ಗುದ್ದಲಿ ಮುಟ್ಟಿಸಿಲ್ಲ. ಇಲ್ಲಿನ  ಇಳುವರಿ  ಮತ್ತು ಮರದ ಆರೋಗ್ಯ ಬೇರೆಲ್ಲೂ…

Read more

ರೈತರೇ ಭೂಮಿ ಮಾರಿದರೆ ಹಳ್ಳಕ್ಕೆ ಬಿದ್ದೀರಿ- ಜೋಕೆ.

ಕೃಷಿ  ಭೂಮಿಗೆ  ಬಂಗಾರದ ಬೆಲೆ ಬರಬಹುದು. ಅಥವಾ ವಜ್ರದ ಬೆಲೆ ಬರಬಹುದು. ಆದರೆ ಅದು ಮಾರಾಟದ ಸ್ವತ್ತು ಅಲ್ಲ. ಕೊಳ್ಳುವ ಜನ ನಿಮ್ಮನ್ನು ಹಳ್ಳಕೆ ತಳ್ಳಿ, ಅವರು ದೋಣಿಯಲ್ಲಿ ಪಯಣಿಸುತ್ತಾರೆ. ಮನುಷ್ಯನಿಗೆ ಶನಿ ಅಂಟುವ ಮೊದಲ ಚಿನ್ಹೆ ನಮ್ಮ ಅನ್ನದ ಮೂಲವನ್ನು  ಪರರಿಗೆ ಮಾರಾಟ ಮಾಡುವುದಕ್ಕೆ ಮನಸ್ಸು ಒಪ್ಪುವುದು.  ಭೂಮಿ ಮಾರಾಟದ ಸ್ವತ್ತು ಅಲ್ಲ: ಭೂಮಿ ಒಂದು ಸ್ತಿರ ಆಸ್ತಿಯೇ ಹೊರತು ಚಲಾವಣೆಯ ಆಸ್ತಿ ಅಲ್ಲ. ಆಸ್ತಿಗಳಲ್ಲಿ ನಗದೀಕರಣ ಮಾಡಬಹುದಾದ  ಅಸ್ತಿ ಮತ್ತು ನಗದೀಕರಣ ಮಾಡಲಾಗದ ಆಸ್ತಿ…

Read more

ಕೊಳೆ ರೋಗ ಓಡಿಸಿದ ಬಯೋ ಔಷಧಿಗಳ ಹಿಂದಿನ ರಹಸ್ಯ.

ಅಡಿಕೆ ಬೆಳೆಗಾರರಿಗೆ ಕೊಳೆ ರೋಗ ನಿಯಂತ್ರಣ ಆದರೆ ದೊಡ್ದ ಪರೀಕ್ಷೆ ಪಾಸ್. ಇದನ್ನು ಪಾಸ್ ಮಾಡಿಸಿದ ಔಷಧಿಯೇ  ಬಯೋ ಔಷಧಿಗಳು.  ಏನು ಹೆಸರೋ, ಒಳಗೆ ಏನು ಇರುವುದೋ ಯಾರಿಗೂ ಗೊತ್ತಿಲ್ಲ. ಸಾವಯವ, ಜೈವಿಕ, ಹರ್ಬಲ್ ಎಂಬ ಹೆಸರಿನಲ್ಲಿ ರೈತರ ಉದ್ದಾರಕ್ಕೆ ಅದೆಷ್ಟೋ ಜನ ಬಂದರು,  ಹೋದರು. ಅಡಿಕೆಯ ಕೊಳೆ ರೋಗ ನಿಯಂತ್ರಣಕ್ಕೆ ಬೆಳೆಗಾರರು ವ್ಯಯಿಸುವ ಮೊತ್ತ ಕೋಟ್ಯಾಂತರ ರೂಪಾಯಿಗಳು. ನಮ್ಮ ಅಡಿಕೆ ತೋಟಗಳಿಗೆ  ಏನಿಲ್ಲವೆಂದರೂ 10,000 ಟನ್ ಗೂ ಹೆಚ್ಚು ಮೈಲುತುತ್ತೆ ಬೇಕಾಗುತ್ತದೆ. ಇದನ್ನು ಮನಗಂಡ ಕೆಲವರು…

Read more

ರಾಜ್ಯದ ಹೊಸ ಭೂ ಸುಧಾರಣಾ ಕಾಯಿದೆ ಟುಸ್…

ಹಸುರು ಶಾಲು ಹೊದ್ದು, ರೈತರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ, ನಮ್ಮೆಲ್ಲರ  ಮುಖ್ಯಮಂತ್ರಿಗಳು   ಮಾರ್ಚ್ ತಿಂಗಳಲ್ಲಿ  ವಿದೇಶಕ್ಕೆ ಹೋಗಿ ಬಂದು  ರೈತರಿಗೆ ಒಂದು ಶಾಕ್ನ ಸೂಚನೆ  ಕೊಟ್ಟಿದ್ದರು. ಆ ಶಾಕ್ ಈಗ ರಾಜ್ಯದ  ರೈತಾಪಿವರ್ಗದ  ಮೇಲೆಲ್ಲಾ ಹರಿಬಿಡಲಾಗಿದೆ. ಇದು ದುಡ್ಡಿಗಾಗಿ ಅಷ್ಟೇ: ಅಂದು  ( ಮಾರ್ಚ್ 15/2020 )  ಕರ್ನಾಟಕದ  ಮುಖ್ಯಮಂತ್ರಿಗಳು  ಕೃಷಿಕರಲ್ಲದವರು  ಮತ್ತು ಅಧಿಕ ಆದಾಯದ ಮೂಲ ಹೊಂದಿದವರು ಕೃಷಿ ಭೂಮಿ ಕೊಳ್ಳಲು ಅನುಕೂಲವಾಗುವ  ಶಾಸನ ತಿದುಪಡಿಯ ಪ್ರಸ್ತಾಪ ಮಾಡಿದ್ದರು. ಅದಕ್ಕೆ ದೇವರ ದಯೆ ಇರಲಿಲ್ಲವೆಂದು  ಕಾಣಿಸುತ್ತದೆ….

Read more
Nut meg mace

ಅಡಿಕೆ ತೋಟಕ್ಕೆ ಅತ್ಯುತ್ತಮ ಮಿಶ್ರ ಬೆಳೆ ಜಾಯೀಕಾಯಿ.

ಅಡಿಕೆ ತೋಟದಲ್ಲಿ ವಾರ್ಷಿಕ ಮಿಶ್ರ ಬೆಳೆಗಳಿಗಿಂತ  ಬಹುವಾರ್ಷಿಕ ಮಿಶ್ರ ಬೆಳೆಗಳಿದ್ದರೆ ತಲೆಬಿಸಿ ಇಲ್ಲ. ಮರ ಸಾಂಬಾರವಾದ ಜಾಯೀಫಲ ಎಂಬುದು  ಅಡಿಕೆ ಮರಗಳ ಜೊತೆಗೆ ಯಾವುದೇ ಸ್ಪರ್ಧೆ ನಡೆಸದೆ, ಒಂದೆಡೆ ಆದಾಯ ಮತ್ತೊಂದೆಡೆ ಗಾಳಿ ಮತ್ತು ಬಿಸಿಲು ತಡೆಗೆ ಸಹಕರಿಸುವ  ಧೀರ್ಘಾವಧಿಯ ಬೆಳೆ. ಅಡಿಕೆ ತೋಟಕ್ಕೆ ಹೊಂದುವ ಮಿಶ್ರ ಬೆಳೆಗಳಲ್ಲಿ ಕರಿಮೆಣಸು, ಕೊಕ್ಕೋ ಬಹುವಾರ್ಷಿಕ ಮಿಶ್ರ ಬೆಳೆಗಳು. ಆದರೆ ಅವುಗಳ ರಕ್ಷಣೆ, ನಿರ್ವಹಣೆಯ ತೆಲೆಬಿಸಿ ದೊಡ್ಡದು. ಮರ ಸಾಂಬಾರವಾದ  ಜಾಯೀ ಫಲಕ್ಕೆ ಇದೆಲ್ಲಾ ಯಾವುದೂ ಇಲ್ಲ. ನೆಟ್ಟರೆ ಬೆಳೆಯುತ್ತಿರುತ್ತದೆ….

Read more
error: Content is protected !!