ಸ್ಥಳೀಯ ರಾಮ ಫಲ ಹಣ್ಣು

ಸ್ಥಳೀಯ ಹಣ್ಣು ಬೆಳೆಸಿ- ಈಗ ಇದಕ್ಕೆ ಭಾರೀ ಬೇಡಿಕೆ.

ರಾಮಫಲ ಹಣ್ಣಿನ  ಬೆಲೆ ಏನಾದ್ರೂ ಗೊತ್ತೇ? ಕಿಲೋ 200 ಕ್ಕೆ ಮಾರಾಟ ಮಾಡುತ್ತಾರೆ. ರೈತರಿಗೆ  ರೂ.50 ಸಿಗುವುದಕ್ಕೆ ತೊಂದರೆ  ಇಲ್ಲ. ಸೀತಾಫಲದ ಯಥಾವತ್ ರುಚಿಯ ಈ ಹಣ್ಣಿನ ಬೆಳೆಗೆ ನೀರು, ಗೊಬ್ಬರ, ಕೀಟನಾಶಕ, ರೋಗನಾಶಕ ಬೇಕಾಗಿಲ್ಲ. ಚಳಿಗಾಲದಲ್ಲಿ ಮೊದಲು ದೊರೆಯುವ ಹಣ್ಣು. ಉತ್ತಮ ಬೇಡಿಕೆ  ಇದೆ. ಒಮ್ಮೆ ತಿಂದವರು ಮತ್ತೆ ಬೇಕು ಎಂದು ಬಯಸುವ ಹಣ್ಣು ಇದು.  ವಿದೇಶದ ಹಣ್ಣು, ಎಂದರೆ ಎಷ್ಟು ಬೆಲೆಯದರೂ ಕೊಳ್ಳುವ ನಾವು ಸ್ಥಳೀಯ ಹಣ್ಣುಗಳ ಪೌಷ್ಟಿಕತೆ ಬಗ್ಗೆ ಸ್ವಲ್ಪವೂ ಯೋಚನೆ ಮಾಡುವುದಿಲ್ಲ….

Read more
Y C Rudrappa Organic farmer

ನೀವು ಕೃಷಿಕರಾಗಿದ್ದರೆ ಇದನ್ನು ಒಮ್ಮೆ ಓದಿ. ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ.

ಒಬ್ಬ ಸರಕಾರಿ ನೌಕರನಿಗೆ ಸಾಯುವ ತನಕ ಸರಕಾರ ಜೀವನ ಬಧ್ರತೆ ಕೊಡುತ್ತದೆ. ಕೃಷಿಕ ತನ್ನ ಜೀವನಕ್ಕೆ ಬಧ್ರ ಅಡಿಪಾಯವನ್ನು ತಾನೇ ಹಾಕಿಕೊಳ್ಳಬೇಕಾಗುತ್ತದೆ. ಪ್ರತೀಯೊಬ್ಬ ಕೃಷಿಕನೂ ತನ್ನ ದುಡಿಯುವ  ವಯಸ್ಸು ಮೀರಿದ ನಂತರ ಏನು ಎಂದು ಎಂಬುದನ್ನು ದುಡಿಯುವ ವಯಸ್ಸು ಇರುವಾಗ ಯೋಚಿಸಬೇಕು. ಮತ್ತು ಅದಕ್ಕೆ ಬೇಕಾದ ಅಡಿಪಾಯವನ್ನು ಹಾಕಬೇಕು. ಸಾಮಾನ್ಯವಾಗಿ ಸಾಧಿಸುವುದೇನಾದರೂ ಇದ್ದರೆ ಅದನ್ನು 50 ವರ್ಷಗಳ ಒಳಗೇ  ಸಾಧಿಸಿ ಮುಗಿಸಬೇಕು. ಆ ನಂತರ ಮಾಡಬಾರದೆಂದೇನೂ ಇಲ್ಲ.  ಅದೆಲ್ಲವೂ ಪ್ಲಸ್. ಆದರೆ ಅದಕ್ಕಿಂತ ಮುಂಚೆ ಮಾಡಿದರೆ ಒಳ್ಳೆಯದು…

Read more
ಗೇರು - ಹೆಚ್ಚಿನ ಆದಾಯಕ್ಕೆ- ಇದನ್ನು ತಪ್ಪದೆ ಮಾಡಿ

ಗೇರು – ಹೆಚ್ಚಿನ ಆದಾಯಕ್ಕೆ- ಇದನ್ನು ತಪ್ಪದೆ ಮಾಡಿ.

ಗೇರು ಬೆಳೆ ಪ್ರಮುಖ ವಾಣಿಜ್ಯ ಬೆಳೆಯಾಗಿದ್ದು, ನವೆಂಬರ್ ತಿಂಗಳಿನಿಂದ ಪ್ರಾರಂಭವಾಗಿ  ಫೆಬ್ರವರಿ – ಮಾರ್ಚ್  ತನಕ ಸ್ವಲ್ಪ ಆರೈಕೆ  ಮಾಡಿದರೆ ಮರವೊಂದರ ಸರಾಸರಿ 1000 ರೂ. ಗಳಷ್ಟು ಆದಾಯ ತಂದು ಕೊಡಬಲ್ಲ ನಿರಾಯಾಸದ ಬೆಳೆ. ಈ ಬೆಳೆ ಈಗ ಕರಾವಳಿಯಲ್ಲಿ ಸ್ಥಳ ಇಲ್ಲದೆ ಮಲೆನಾಡು, ಅರೆಮಲೆನಾಡು, ಬಯಲು ಸೀಮೆಯ ತನಕ ವಿಸ್ತಾರವಾಗಿದೆ. ಇದು ಈಗಿನ ಜ್ವಲಂತ ಸಮಸ್ಯೆಯಾದ  ನೀರಿನ ಕೊರೆತೆಯನ್ನು ತಡೆದುಕೊಂಡು ಬೆಳೆಯಬಲ್ಲ ಬೆಳೆ. ಮಳೆ ಕಳೆದು ಚಳಿ ಬಂದಾಕ್ಷಣ  ಗೇರು ಮರ ಚಿಗುರಿ ಹೂ ಮೊಗ್ಗು…

Read more
ಹತ್ತಾರು ಲಕ್ಷ ಬೆಲೆಬಾಳುವ ಸಾಗುವಾನಿ ಮರ.

ಸಾಗುವಾನಿಯೂ ಶ್ರೀಗಂಧಕ್ಕೆ ಸಮನಾದ ಮರ.

ಶ್ರೀಗಂಧ ಚಿನ್ನ ಚಿನ್ನವೇ. ಆದರೆ ನಮಗೆ ಅದನ್ನು ಉಳಿಸಿ ಅನುಭವಿಸುವ ಭಾಗ್ಯ ಬೇಕು! ಶ್ರೀಗಂಧ ಬೆಳೆಸಿ ಕೋಟಿ ನಿರೀಕ್ಷೆಯಲ್ಲಿ ನಿರಂತರ ಜೇಬಿನಲ್ಲಿ ಕೆಂಡ ಇಟ್ಟುಕೊಂಡು ಜೀವನ ಕಳೆಯುವ  ಬದಲು ಇದ್ಯಾವುದರ ಭಯವೂ ಇಲ್ಲದೆ ಸಾಗುವಾನಿ ಬೆಳೆಸಿ ಬದುಕಬಹುದು. ಕೋಟಿಯಲ್ಲದಿದ್ದರೂ ಲಕ್ಷಾಂತರ ಆದಾಯ ಕೊಡಬಲ್ಲ ಬೆಳೆ ಸಾಗುವಾನಿ ಮರ. ಇದು ರೈತರೆಲ್ಲರ ಗಮನದಲ್ಲಿ ಇರಬೇಕು. ಸಾಗುವಾನಿ ಅರವನ್ನು ಯಾರೂ ಕದ್ದುಕೊಂಡು ಹೋದಾರು ಎಂಬ ಭಯ ಇಲ್ಲ. ನೀವು ಇಚ್ಚಿಸಿದವರಿಗೆ ಮಾರಬಹುದು. ಎಷ್ಟು ಬೆಳೆಯಿತೋ ಅಷ್ಟು ಮೌಲ್ಯ ಹೆಚ್ಚಾಗುತ್ತದೆ. ಅಸಾಮಾನ್ಯ…

Read more
root puller

ಕಳೆ ಗಿಡಗಳನ್ನು ಬೇರು ಸಮೇತ ತೆಗೆಯಬಹುದಾದ ಸಾಧನ.

    ಕೃಷಿ ಹೊಲದಲ್ಲಿ ಯಾವಾಗಲೂ ಕಳೆ ಸಸ್ಯಗಳು ಸಹಜವಾಗಿ ಹುಟ್ಟಿಕೊಳ್ಳುತ್ತಲೇ ಇರುತ್ತವೆ. ಬೆಳೆದಂತೆ ಅದನ್ನು ಬೇರು ಸಹಿತ ತೆಗೆಯಲು ಸಾಧ್ಯವಾಗುವುದಿಲ್ಲ. ಅಂಥಹ ಕಳೆ ಸಸ್ಯಗಳನ್ನು ಬೇರು ಸಹಿತ ಯಾವ ಶ್ರಮದ ಅಗತ್ಯವೂ ಇಲ್ಲದೆ ತೆಗೆಯಬಹುದಾದ ಸಾಧನವನ್ನು  ಸಾಗರದ ಹೆಗಡೆ ಡೈನಾಮಿಕ್ಸ್ ಪ್ರೈ ಲಿಮಿಟೆಡ್ ಇವರು ಅಭಿವೃದ್ಧಿಪಡಿಸಿದ್ದಾರೆ. ಕೆಲವು ಸಾಧಾರಣ ಗಾತ್ರದ ಗಿಡಗಳನ್ನು ಕೀಳಲು ಹಾರೆ, ಗುದ್ದಲಿ ಮುಂತಾದ ಸಾಧನಗಳು ಬೇಕಾಗಿಲ್ಲ. ಇವುಗಳಿಂದ ಕೀಳಿಸುವ ಶ್ರಮಕ್ಕಿಂತ ತುಂಬಾ ಕಡಿಮೆ ಶ್ರಮದಲ್ಲಿ ಯುಕ್ತಿ ಆಧಾರಿತ ಸಾಧನದಲ್ಲಿ ಅದನ್ನ್ನು ತೆಗೆಯಬಹುದು. ಮುಖ್ಯವಾಗಿ…

Read more
chines potato

ಈ ಗಡ್ಡೆಗೆ ಬಹಳ ಬೇಡಿಕೆ ಮತ್ತು ಉತ್ತಮ ಬೆಲೆ.

ಗಡ್ಡೆ ಗೆಣಸಿನ ಬೆಳೆಗಳಲ್ಲಿ  ಅಧಿಕ ಬೆಲೆಯ ಬೆಳೆ ಎಂದರೆ ಸಾಂಬ್ರಾಣಿ. ಚೈನೀಸ್ ಪೊಟ್ಯಾಟೋ ಎಂಬ ಈ ತರಕಾರಿ ನಮ್ಮಲ್ಲಿ ಬಹಳ ಪುರಾತನ ಕಾಲದಿಂದಲೂ ಬೆಳೆಯಲ್ಪಡುತ್ತಿತ್ತು. ಈಗ ಇದನ್ನು ಕೆಲವೇ ಕೆಲವು ಜನ ಮಾತ್ರ ಬೆಳೆಯುತ್ತಿದ್ದು, ಸರಾಸರಿ  ಕಿಲೋ 60 ರೂ ತನಕ ಬೆಲೆ ಇದೆ. ಅಪರೂಪದ  ತರಕಾರಿಯಾದ ಕಾರಣ ಬಾರೀ ಬೇಡಿಕೆಯೂ ಇದೆ. ತರಕಾರಿ ಅಂಗಡಿಗೆ ಬರುವುದೇ ಕಡಿಮೆ. ಬಂದರೆ ಕ್ಷಣದಲ್ಲಿ ಖಾಲಿ. ಆಲೂಗಡ್ಡೆಯ ತರಹವೇ ಇರುವ ಈ ಗಡ್ಡೆ ಅದರ ತಮ್ಮ ಎಂದರೂ ತಪ್ಪಾಗದು. ಆಲೂಗಡ್ಡೆಗೂ ಇದಕ್ಕೂ…

Read more
ಸರಳವಾಗಿ ಬೋರ್ಡೋ ದ್ರಾವಣ ತಯಾರಿಸುವ ವಿಧಾನ

ಸರಳವಾಗಿ ಬೋರ್ಡೋ ದ್ರಾವಣ (Bordeaux) ತಯಾರಿಸುವ ವಿಧಾನ

ಬೋರ್ಡೋ ದ್ರಾವಣ  ತಯಾರಿಕೆ ಎಂಬುದು ಅತ್ಯಂತ ಸರಳ ವಿಧಾನ. ಆದರೆ ಸ್ವಲ್ಪ ಹೆಚ್ಚು ಕಡಿಮೆಯಾದರೂ ಪಾಕ ಅಪಾಕವಾಗುತ್ತದೆ. ಇದು ಸಿಂಪರಣೆಗೆ ಕಿರಿ ಕಿರಿ ಉಂಟು ಮಾಡುತ್ತದೆ. ಕೊಳೆ ಉಂಟುಮಾಡುವ ರೋಗಾಣುಗಳಿಗೂ ಇದು ಪರಿಣಾಮಕಾರಿಯಾಗಲಾರದು. ಹಾಗಾಗಿ ಕ್ರಮವನ್ನು ಸರಿಯಾಗಿ ತಿಳಿದುಕೊಂಡು ಮಾಡಿದರೆ ಪಾಕ ಸರಿಯಾಗಿರುತ್ತದೆ. ಮೈಲುತುತ್ತೆ ಮತ್ತು ಸುಣ್ಣದ ಸರಿಯಾದ ಮಿಶ್ರಣಕ್ಕೆ ಬೋರ್ಡೋ ದ್ರಾವಣ ಎಂದು ಹೆಸರು. ಶೇ. 1 ರ ದ್ರಾವಣ ಎಂದರೆ 1000 ಗ್ರಾಂ ತಾಮ್ರದ ಸಲ್ಫೇಟ್ ಅನ್ನು 100 ಲೀ. ನೀರಿನಲ್ಲಿ ದ್ರವೀಕರಿಸುವುದು. ಮೈಲುತುತ್ತೆ…

Read more
ಮೈದಾನ ಪ್ರದೇಶಕ್ಕೆ ಹೊಂದುವ ನೀರಾವರಿ ಬೇಕಾಗದ ಗೋಡಂಬಿ ತಳಿಗಳು.

ಮೈದಾನ ಪ್ರದೇಶಕ್ಕೆ ಹೊಂದುವ ನೀರಾವರಿ ಬೇಕಾಗದ ಗೋಡಂಬಿ ತಳಿಗಳು.

ಅರೆ ಮಲೆನಾಡು ಮತ್ತು ಬಯಲು ಸೀಮೆಗಳಾದ ತುಮಕೂರು, ಶಿರಾ, ಕೊಲಾರ, ರಾಮನಗರ, ಹಾಗೆಯೇ ಬಾಗಲಕೋಟೆ, ಬೆಳಗಾವಿಯ ಕೆಲವು ಭಾಗಗಳಲ್ಲಿ  ರೈತರು ಈಗಾಗಲೇ ಗೇರು ಬೆಳೆಸುತ್ತಿದ್ದು, ಇಲ್ಲಿನ ಹವಾಮಾನದಲ್ಲಿ ಉತ್ತಮ ಇಳುವರಿ ಬರುತ್ತಿದೆ. ಇಲ್ಲಿನ ಒಣ ಭೂಮಿಗೆ ಇದು ಚೆನ್ನಾಗಿ ಹೊಂದಿಕೊಂಡು ನೀರಾವರಿ ಮಾಡುವುದಿದ್ದರೂ ಅತೀ ಕಡಿಮೆ ನೀರಾವರಿ ಸಾಕು. ಬಾಗಲಕೋಟೆಯ ತೋಟಗಾರಿಕಾ ವಿಶ್ವವಿಧ್ಯಾನಿಲಯ, ಹುಲಕೋಟಿಯ ಕೃಷಿ ಸಂಶೋಧನಾ ಕೇಂದ್ರ, ಚಿಂತಾಮಣಿಯ ತೋಟಗಾರಿಕಾ ಸಂಶೋಧನಾ  ಕೇಂದ್ರಗಳು ಗೋಡಂಬಿ ಬೆಳೆಯನ್ನು  ಬೆಳೆಸುವ ರೈತರಿಗೆ ಮನವರಿಕೆ ಮಾಡಿಕೊಡಲು ಶ್ರಮಿಸುತ್ತಿದ್ದಾರೆ. ಮೈದಾನ ಪ್ರದೇಶಕ್ಕೆ…

Read more

ಹಬ್ಬದ ದಿನಗಳು ಮತ್ತು ಅದರ ಮಹತ್ವ

ಪ್ರಪಂಚದಾದ್ಯಂತ ಹಬ್ಬಗಳನ್ನು ಆಚರಿಸುತ್ತಾರೆ. ಭಾರತದಲ್ಲಿ ಸಹ ಹಲವಾರು ಹಬ್ಬಗಳನ್ನು ಆಚರಿಸುತ್ತಾರೆ. ಹೆಚ್ಚಿನೆಲ್ಲಾ ಹಬ್ಬ ಹರಿದಿನಗಳು  ವಿಶೇಷ ಸಂದೇಶವನ್ನು ದ್ವನ್ಯಾರ್ಥದಲ್ಲಿ ಕೊಡುವಂತವುಗಳು. ಇಂತಹ ಹಬ್ಬಗಳ ಮಹತ್ವ ಅರಿತು ಅವುಗಳನ್ನು ಆಚರಿಸಿದರೆ ಅದಕ್ಕೆ ಗೌರವ ಹೆಚ್ಚುತ್ತದೆ. ನಮ್ಮ ಮಕ್ಕಳಿಗೆ ಹಬ್ಬ ಹರಿದಿನಗಳಾದರೂ ಒಂದೆ ಶೋಕದ ದಿನಗಳಾದರೂ ಒಂದೇ. ಒಂದು ಮೊಬೈಲ್  ಫೋನು ಹಿಡಿದುಕೊಂಡು ತಮ್ಮಷ್ಟಕ್ಕೇ ತಾವೇ ಏನೋ ವಿಚಾರದಲ್ಲಿ ಮಗ್ನರಾಗಿರುತ್ತಾರೆ. ಇವರಿಗೆ ಹಿರಿಯರು ಆಚರಿಸುವ ಶುಭ ದಿನಗಳ ಬಗ್ಗೆ ಒಂದು ರೀತಿಯಲ್ಲಿ ತಾತ್ಸಾರ. ಇದಕೆಲ್ಲಾ ಕಾರಣ ಅವರಿಗೆ ಆ ಶುಭ…

Read more
ಕೆಂಪಡಿಕೆ ರಾಸೀ ಶ್ರಿಂಗೇರಿ

ಕೆಂಪಡಿಕೆ- ಸುಪಾರಿ ಎರಡೂ ಏರಿಕೆ- ಸೋಮವಾರ 06-12-2021 ರ ಧಾರಣೆ.

ಕರಾವಳಿಯಲ್ಲಿ ಅಡಿಕೆ ಖರೀದಿಯ ಪ್ರಮುಖ ಸಂಸ್ಥೆ ಕ್ಯಾಂಪ್ಕೋ ಇಂದು ಹಳೆ ಸುಪಾರಿ, ಡಬ್ಬಲ್ ಚೋಲ್ ಗಳಿಗೆ ಏಕಾಏಕಿ 10 ರೂ. ಏರಿಸಿ ಅಡಿಕೆ ಮಾರುಕಟ್ಟೆಯಲ್ಲಿ ಸಂಚಲನವನ್ನು ಉಂಟುಮಾಡಿದೆ.  ಖಾಸಗಿಯವರು ನಾವೂ ಸ್ಪರ್ಧೆಗೆ ಸಿದ್ದರಿದ್ದೇವೆ ಎಂದು ತೋರಿಸಿದ್ದಾರೆ. ಕ್ಯಾಂಪ್ಕೋ ಹೊಸ ಸುಪಾರಿ ಕ್ವಿಂಟಾಲಿಗೆ 43,500, ಖಾಸಗಿ 45,000, ಹಳೆ ಅಡಿಕೆ ಕ್ಯಾಂಪ್ಕೋ 42,500- ಡಬ್ಬಲ್ ಚೋಲ್ 43,000 ಖಾಸಗಿ 54,000 ದರದಲ್ಲಿ ಖರೀದಿ ನಡೆದಿದೆ. ಶಿರಸಿಯಲ್ಲಿ ಕೆಂಪಡಿಕೆ (ರಾಶಿ) ಮತ್ತೆ ಬೆಲೆ ಏರಿಕೆಯಾಗಿದೆ. ಬಹುಷಃ ಈ ವಾರ ಮತ್ತೆ…

Read more
error: Content is protected !!