ಮಳೆಗಾಲದ ನಂತರ ಕಳೆ ತೆಗೆಯಿರಿ – ಮಣ್ಣಿನ ರೀಚಾರ್ಜ್ ಮಾಡಿ.
ಕರಾವಳಿ ಮತ್ತು ಮಲೆನಾಡು ಪ್ರದೇಶಗಳಲ್ಲಿ ವರ್ಷಕ್ಕೆ 5 ರಿಂದ 6 ತಿಂಗಳು ಮಳೆಗಾಲ. ಈ ದೀರ್ಘ ಮಳೆಯ ಸಮಯದಲ್ಲಿ ಮಣ್ಣು ನೀರಿನಿಂದ ತುಂಬಿ, ಗಾಳಿಯಿಲ್ಲದ ಸ್ಥಿತಿಯಲ್ಲಿರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಮಣ್ಣು ಅಮ್ಲೀಯವಾಗುತ್ತದೆ ಮತ್ತು ಅದರ ಸ್ವಾಭಾವಿಕ ಸಮತೋಲನ ಕಳೆದುಕೊಳ್ಳುತ್ತದೆ. ಬೇರು ಬೆಳವಣಿಗೆಗೆ ಹಾಗೂ ಪೋಷಕಾಂಶ ಲಭ್ಯತೆಗೆ ಸಹಾಯ ಮಾಡುವ ಉತ್ತಮ ಜೀವಾಣುಗಳು ನಿಷ್ಕ್ರಿಯವಾಗುತ್ತವೆ, ಆದರೆ ಹಾನಿಕಾರಕ ಜೀವಾಣುಗಳು ಹೆಚ್ಚಾಗುತ್ತವೆ. ಇದರ ಪರಿಣಾಮವಾಗಿ ರೋಗಗಳು ಹೆಚ್ಚಾಗಿ ಮಣ್ಣಿನ ಸ್ವಾಭಾವಿಕ ಫಲವತ್ತತೆ ಕುಂಠಿತಗೊಳ್ಳುತ್ತದೆ. ಮಳೆಯು ತಗ್ಗಿ ಚಳಿಗಾಲ ಆರಂಭವಾದಾಗ ತೋಟಗಳಲ್ಲಿ…
