ಸುಣ್ಣ ಬಳಕೆ ಮಾಡದೆ ಮಣ್ಣಿನ ಆರೋಗ್ಯ ಕಾಪಾಡಿ – ನೈಸರ್ಗಿಕವಾಗಿ ಮಣ್ಣಿನ ಸಮತೋಲನ ಕಾಪಾಡುವ ಮಾರ್ಗ
ನೈಸರ್ಗಿಕ ರೀತಿಯಲ್ಲಿ ಮಣ್ಣಿನ ರಸಸಾರದ ಸಮತೋಲನದಿಂದ (ನ್ಯೂಟ್ರಲ್) ಆರೋಗ್ಯವನ್ನು ಕಾಯ್ದುಕೊಳ್ಳುವುದು ಯಾವಾಗಲೂ ಲಾಭದಾಯಕ. ಮಣ್ಣಿನ ಸ್ಥಿತಿ ತಿಳಿಯದೇ ಸುಣ್ಣವನ್ನು, ಅಸಮತೋಲನ ರಸಗೊಬ್ಬರಗಳನ್ನು ಅಥವಾ ಸಾವಯವ ಗೊಬ್ಬರಗಳನ್ನು ಬಳಸುವುದರಿಂದ ರೈತರ ಕಷ್ಟಪಟ್ಟು ಗಳಿಸಿದ ಹಣ ವ್ಯರ್ಥವಾಗುತ್ತದೆ. ಇತ್ತೀಚಿನ ದಿನಗಳಲ್ಲಿ, ವಿಶೇಷವಾಗಿ ಅಡಿಕೆ ರೈತರು ಪೋಷಕಾಂಶ ನಿರ್ವಹಣೆಯ ಕಡೆ ಹೆಚ್ಚು ಗಮನ ಕೊಡುತ್ತಿದ್ದಾರೆ. ಆದರೆ ಹಲವರು ಮಣ್ಣಿನ ಆರೋಗ್ಯ, ಸಸ್ಯಶಾಸ್ತ್ರ ಅಥವಾ ಪೋಷಕಾಂಶಗಳ ಪಾತ್ರ ತಿಳಿಯದೇ, ಇತರರನ್ನು ಅನುಸರಿಸುತ್ತಿದ್ದಾರೆ. ಈ ಅಜ್ಞಾನವನ್ನು ಕೆಲವು ಉತ್ಪನ್ನ ಮಾರಾಟಗಾರರು ದುರುಪಯೋಗಪಡಿಸಿಕೊಂಡಿದ್ದಾರೆ. ಮಣ್ಣಿನ pH…
