areca nut plants

ಅಡಿಕೆಗಿಡ ನೆಡುವಾಗ ಟ್ರೆಂಚ್ ಪದ್ದತಿ ಬೇಡ- ಗಿಡ ಸೊರಗುತ್ತದೆ.

ಅಡಿಕೆ, ಮುಂತಾದ ಸಸ್ಯಗಳಿಗೆ ತಂತು ( Fiber roots) ಬೇರು ಮಾತ್ರ ಇರುತ್ತದೆ. ಈ ತಂತು ಬೇರುಗಳಲ್ಲಿ  ಮತ್ತೆ ಕವಲುಗಳು ಒಡೆದು ಬೇರು ವ್ಯೂಹ ರಚನೆಯಾಗುತ್ತದೆ. ಈ ಬೇರುಗಳು ತುಂಬಾ ಮೃದುವಾಗಿರುತ್ತವೆ. ಹೆಚ್ಚಿನ ತೇವ, ಅಧಿಕ ಬಿಸಿಯನ್ನು ತಡೆದುಕೊಳ್ಳಲಾರವು. ಆದ ಕಾರಣ ನಾವು ಟ್ರೆಂಚ್ ಪದ್ದತಿಯಲ್ಲಿ ಅಡಿಕೆ ಸಸಿ ನೆಟ್ಟರೆ ಅದರ ಬೇರುಗಳಿಗೆ ತೊಂದರೆಯಾಗಿ ಬೆಳವಣಿಗೆಗೆ ಅನನುಕೂಲವಾಗುತ್ತದೆ. ಸಸ್ಯಗಳ ಬೆಳವಣಿಗೆಗೆ ಬೇರುಗಳೇ ಸರ್ವಾಧಾರ. ಬೇರುಗಳ ರಕ್ಷಣೆ ಮತ್ತು ಅವುಗಳ ಪ್ರಸರಣಕ್ಕೆ ಎಷ್ಟು ಅನುಕೂಲ ಮಾಡಿಕೊಡುತ್ತೇವೆಯೋ ಅಷ್ಟು ಆ…

Read more
ಹೊಸತಾಗಿ ತೋಟ ಮಾಡುತ್ತೀರಾ

ಹೊಸತಾಗಿ ತೋಟ ಮಾಡುತ್ತೀರಾ ? ಹೀಗೆ ಮಾಡಿ.

ಹೊಸತಾಗಿ ಅಡಿಕೆ ಸಸಿಗಳನ್ನು  ನೆಡುವಾಗ ಸಾಂಪ್ರದಾಯಿಕ  ಅಂತರದಲ್ಲಿ  ಸ್ವಲ್ಪ ಬದಲಾವಣೆ ಮಾಡಿ ಅಷ್ಟೇ ಸಸಿ ಹಿಡಿಸಿ  ಬೇರೆ  ಬೇರೆ ಅಂತರದಲ್ಲಿ ನಾಟಿ ಮಾಡಿದರೆ  ಮಿಶ್ರ ಬೆಳೆ ಬೆಳೆಸಲು ಸುಲಭ. ಭವಿಷ್ಯದಲ್ಲಿ ಕೆಲಸಗಾರರ ಸಮಸ್ಯೆಗೆ ಇದು ಪರಿಹಾರವಾಗಲಿದೆ. ಮುಂದಿನ ದಿನಗಳಲ್ಲಿ ಕೆಲಸಗಾರರು ಸಿಗುತ್ತಾರೆ ಎಂಬ ಆಶೆ ಬೇಡ. ಇಷ್ಟಕ್ಕೂ ಕೆಲಸಗಾರರಿಗೆ ಕಾಲ ಕಾಲಕ್ಕೆ ಏರಿಕೆಯಾಗುವ ಮಜೂರಿಯನ್ನು ಕೊಡಲು ಕೃಷಿಯ ಉತ್ಪಾದನೆ ಸಾಲದು. ಹೀಗಿರುವಾಗ ನಮಗೆ ಇರುವ ಆಯ್ಕೆ ಕೆಲಸದವರ ಅವಲಂಬನೆಯನ್ನು ಕಡಿಮೆ ಮಾಡುವುದು ಒಂದೇ. ಇದಷ್ಟೇ ಅಲ್ಲ. ಒಂದು…

Read more

ಅಡಿಕೆ ಬೆಳೆಗಾರರೇ- ಮೈಲುತುತ್ತೆ ಪರೀಕ್ಷೆ ಹೀಗೆ ಮಾಡಿ.

ಬೋರ್ಡೋ ದ್ರಾವಣ ತಯಾರಿಕೆಗೆ ಬಳಸುವ ಮೈಲುತುತ್ತೆ ಸರಿ ಇಲ್ಲದ ಕಾರಣ ಅಡಿಕೆ ಕೊಳೆರೋಗ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆಯೇ ಎಂಬ ಸಂಶಯ ಇದೆ. ಅದಕ್ಕೆ ಪುಷ್ಟಿ ಕೊಡುವಂತೆ  ಹಿಂದೆ ಕೆಲವೇ ಕೆಲವು ತಯಾರಿಕೆಗಳು ಇದ್ದರೆ ಈಗ ಹಲವಾರು ತಯಾರಕರು, ಹಲವಾರು ಬ್ರಾಂಡುಗಳು ಬಂದು ರೈತರಿಗೆ ಸಂಪೂರ್ಣವಾಗಿ ದ್ವಂದ್ವ ಉಂಟಾಗಿದೆ. ಈ ದ್ವಂದ್ವ ಬೇಡ. ನೀವೇ ಇದನ್ನು ಪರೀಕ್ಷಿಸಿ ಬಳಸಿ.  ಕಾಪರ್ ಸಲ್ಫೇಟ್ ಸರಬರಾಜುದಾರರ ಬಗ್ಗೆ ಅಂತರ್ ಜಾಲದಲ್ಲಿ ಹುಡುಕಿ. ಹಲವಾರು ಜನ ಇದನ್ನು ಒದಗಿಸುವರು ಸಿಗುತ್ತಾರೆ.ದರ ಸಮರವೂ ಇರುತ್ತದೆ….

Read more

ಅಧಿಕ ಇಳುವರಿಗೆ ಸಹಾಯಕವಾಗುವ ಸಾವಯವ ಗೊಬ್ಬರಗಳು.

ರಾಸಾಯನಿಕ ಗೊಬ್ಬರಗಳು ಒಮ್ಮೆಗೆ  ಉತ್ತಮ ಫಲಿತಾಂಶ ಕೊಡಬಹುದು. ಆದರೆ ಅದು ಧೀರ್ಘ ಕಾಲದ ತನಕ ಕಷ್ಟ. ಮಣ್ಣಿನ ಫಲವತ್ತತೆಯಿಂದ ಮಾತ್ರ ಧೀರ್ಘಕಾಲಿಕ ಫಲಿತಾಂಶ ಪಡೆಯಲು ಸಾಧ್ಯ. ಧೀರ್ಘಾವಧಿ ಬೆಳೆಗಳಿಗೆ ಮಣ್ಣಿನ ಫಲವತ್ತತೆ ಪ್ರಾಮುಖ್ಯ. ಸಾವಯವ ಅಥವಾ ನೈಸರ್ಗಿಕ ಮೂಲವಸ್ತುಗಳಿಂದ ಮಾತ್ರ ಮಣ್ಣಿನ ಫಲವತ್ತತೆ ವೃದ್ದಿಯಾಗಲು ಸಾಧ್ಯ. ರಾಸಾಯನಿಕ ಗೊಬ್ಬರಗಳು ಎಲ್ಲವೂ ಆಮ್ಲೀಯ ಗುಣದವು. ಇದನ್ನು ಮಣ್ಣಿಗೆ ಹಾಕುವುದರಿಂದ ಮಣ್ಣು ಸ್ವಲ್ಪ ಮಟ್ಟಿಗೆ ಅಜೀರ್ಣಕ್ಕೊಳಗಾಗುತ್ತದೆ. ರಾಸಾಯನಿಕ ಗೊಬ್ಬರಗಳನ್ನು ಬಳಸುವುದರ ಜೊತೆಗೆ  ಸಾವಯವ ವಸ್ತುಗಳನ್ನೂ ಸೇರಿಸುತ್ತಿದ್ದರೆ ಮಣ್ಣು ಆರೋಗ್ಯವಾಗಿರುತ್ತದೆ. ಮಣ್ಣು…

Read more
Mulching to whole ground

ಅಡಿಕೆ – ಕಬ್ಬು ಬೆಳೆಯ ಬೇರು ದುಂಬಿ ನಿಯಂತ್ರಣ.

ಅಡಿಕೆಗೆ ಮಾತ್ರ ಬೇರು ಹುಳದ ಕಾಟ ಅಲ್ಲ. ಕಬ್ಬು, ಹಿಪ್ಪು ನೇರಳೆ ಹೀಗೆ ಬಹಳಷ್ಟು ಬೆಳೆಗಳಿಗೆ ಈ ಹುಳದ ಕಾಟ ಇದೆ. ಇದರ ದುಂಬಿಗಳು ಈಗ ಹೊರಗೆ ಹಾರಾಡುವ ಸಮಯ. ಈಗ ಅದನ್ನು ನಿಯಂತ್ರಿಸುವ ಉಪಾಯ ಇದು.ಮರದ ಆರೋಗ್ಯಕ್ಕೆ  ಮತ್ತು ಬೆಳೆವಣಿಗೆಗೆ  ಆಧಾರವೇ ಅದರ ಬೇರು. ಆ ಬೇರನ್ನು ತಿನ್ನುವ ಒಂದು ಹುಳ ಅದನ್ನು ಏಳಿಗೆಯಾಗಲು ಬಿಡುವುದಿಲ್ಲ. ಕೆಲವು ಮಣ್ಣಿನಲ್ಲಿ ಈ ಬೇರು ಹುಳದ ಸ್ತೊಂದರೆ ಹೆಚ್ಚು. ಮತ್ತೆ ಕೆಲವು ಕಡೆ ಕಡಿಮೆ. ಬೇರು ಹುಳಗಳನ್ನು  ಒಡಿಸದಿದ್ದರೆ…

Read more

ಅಡಿಕೆ ಮರದಲ್ಲಿ ಅಂಟು ಸ್ರವಿಸುವುದಕ್ಕೆ ಕಾರಣ ಮತ್ತು ಪರಿಹಾರ.

ಇತ್ತೀಚಿಗೆ ಮಲೆನಾಡು ಮತ್ತು ಬಯಲುಸೀಮೆಯ ಕೆಲವು ತೋಟಗಳಲ್ಲಿ ಅಡಿಕೆ ಮರದಕಾಂಡ ಮತ್ತು ಸೋಗೆಯ ದಿಂಡಿನಿಂದ ಅಂಟು (ಮೇಣದಂತಹ ಪದಾರ್ಥ) ಸೋರುತ್ತಿರುವುದು ಕಂಡುಬಂದಿದೆ.ಇದನ್ನು ಎಂದೂ ಕಂಡಿಲ್ಲದ ಬೆಳೆಗಾರರು ಸಹಜವಾಗಿ ಗೊಂದಲಕ್ಕೀಡಾಗಿದ್ದಾರೆ. ಈ ವಿದ್ಯಮಾನದ ಬಗ್ಗೆ ಲಭ್ಯವಿರುವ ವೈಜ್ಞಾನಿಕ ಮಾಹಿತಿಯನ್ನು ಈ ಲೇಖನದ ಮೂಲಕ ಬೆಳೆಗಾರ ಅನುಕೂಲಕ್ಕಾಗಿ ನೀಡಲಾಗಿದೆ. ಅಂಟು ಸೋರಲು ಕಾರಣವೇನು? ಕೇವಲ ಅರ್ಧ ಸೆಂಟಿಮೀಟರ್‍ ಉದ್ದವಿರುವ ಯೂಪ್ಲಾಟಿಪಸ್ ಪ್ಯಾರಲ್ಲೆಲಸ್ ಎಂಬ ಕೀಟ. ಇದು  ಅಡಿಕೆ ಮರದಕಾಂಡ ಮತ್ತು ಸೋಗೆಯ ದಿಂಡನ್ನು ಕೊರೆದು ಒಳಗೆ ಪ್ರವೇಶಿಸಿಸುತ್ತದೆ. ಕೀಟವು ಪ್ರವೇಶಿಸಿದ…

Read more

ಅಡಿಕೆ ಬೆಲೆ ಕುಸಿಯುವ ಆತಂಕ ಇದೆ.

ಕ್ಯಾಂಪ್ಕೋ ಸಂಸ್ಥೆ, ಹಾಗೂ ಕೆಲವು ಖಾಸಗಿ ವ್ಯಾಪಾರಿಗಳು ಚಾಲಿ ಅಡಿಕೆ ಖರೀದಿಯ ಉತ್ಸಾಹದಲ್ಲಿದ್ದಾರೆ.  ಅತ್ತ ಕೆಂಪಡಿಕೆ ವ್ಯವಹಾರದಲ್ಲಿ ಶಿರಸ್ಸಿಯ TSS  ವ್ಯಾಪಾರಕ್ಕೆ ಇಳಿದು ಚಾಲಿಗೆ 32,000 ದಾಟಿಸಿ ಕೆಲವೇ ದಿನಗಳಲ್ಲಿ ಮತ್ತೆ 26,000 ಕ್ಕೆ ಇಳಿಸಿದೆ. ಎಲ್ಲಿಯೂ ಅಡಿಕೆ ಟೆಂಡರ್ ಆಗಿ ಮಾರಾಟ ಆಗಿಲ್ಲ. ಇದು ಬೆಲೆ ಸ್ಥಿತರೆಯ ಬಗ್ಗೆ ಆತಂಕ ಉಂಟು ಮಾಡುತ್ತಿದೆ. ಕೆಂಪಡಿಕೆಗೆ ನಾಲ್ಕು ದಿನಕ್ಕೆ ಹಿಂದೆ 32,000 ಕ್ಕೆ ಒಂದು ಬಿಡ್ಡಿಂಗ್ ನಡೆಯುವುದರಲ್ಲಿತ್ತು. ಆದರೆ  ಕೆಲವು ದೊಡ್ಡ ವ್ಯಾಪಾರೀ  ಕುಳಗಳ ಒತ್ತಡದಿಂದ ಅದು…

Read more

ಪೊಟ್ಯಾಶಿಯಂ ಫೋಸ್ಫೋನೇಟ್- ಶಿಲೀಂದ್ರ ರೋಗಕ್ಕೆ ರಾಮಬಾಣ.

ಪೊಟ್ಯಾಶಿಯಂ ಫೋಸ್ಫೋನೇಟ್ ಅಥವಾ ಪೊಟಾಶಿಯಂ ಸಾಲ್ಟ್ ಆಫ್ ಫೋಸ್ಫೊರಸ್ ಅಸಿಡ್, ಅಥವಾ ಫೊಟ್ಯಾಶಿಯಂ ಸಾಲ್ಟ್ ಆಫ್ ಫೊಸ್ಫೋನಿಕ್ ಅಸಿಡ್   ಇದು ನೀರಿನಲ್ಲಿ ಕರಗುವ ಒಂದು ಅಂತರ್ ವ್ಯಾಪೀ ಶಿಲೀಂದ್ರ ನಾಶಕ.  ಇದು ನೋಡಲು ಬಿಳಿ ಹರಳು ರೂಪದಲ್ಲಿರುತ್ತದೆ.  ಇದರ ಪಿಎಚ್ ಮೌಲ್ಯ 5.29  ರಷ್ಟು ಇರುತ್ತದೆ.    ಇದು ವಿಶ್ವದಾದ್ಯಂತ ಬಳಕೆಯಲ್ಲಿರುವ ಒಂದು ಪರಿಣಾಮಕಾರೀ ಅಂತರ್ ವ್ಯಾಪೀ ಶಿಲೀಂದ್ರ ನಾಶಕ. ಅಡಿಕೆ, ದ್ರಾಕ್ಷಿ, ಕಾಳುಮೆಣಸು ಬೆಳೆಗಳ ಶಿಲೀಂದ್ರ ರೋಗಕ್ಕೆ ಇದು ಪರಿಣಾಮಕಾರೀ ಎಂದು ನಮ್ಮಲ್ಲೂ ಸಾಬೀತಾಗಿದೆ. ಇದರ…

Read more

ಅಡಿಕೆ- ಬೆಲೆ ಏರಿಕೆಗೆ ಕಾಲ ಕೂಡಿಬಂದಿದೆ.

ಸಿದ್ದನಿಗೆ ಯಾವುದೇ ಕೆಲಸ ಇಲ್ಲ. ಮನೆಯಲ್ಲೇ ಠಿಖಾಣಿ. ಉದ್ಯೋಗಕ್ಕೆ ಹೋಗುವುದಕ್ಕೂ ಅವಕಾಶ ಇಲ್ಲ. ಮನೆಯಲ್ಲಿ ಕುಳಿತು ಬೋರು ಹೊಡೆಯುತ್ತಿದೆ. ಸರಕಾರ ಅಕ್ಕಿ ದಿನಸಿ ಮನೆಗೇ ಸರಬರಾಜು ಮಾಡಬಹುದು. ಇನ್ನು ಖರ್ಚಿಗೆ ಸಾಲವನ್ನೂ ಕೊಡಬಹುದು. ಕಾಲಹರಣ ಮಾಡುವ ಹೊತ್ತಿನಲ್ಲಿ ದಿನಕ್ಕೆ ಒಂದು ಗುಟ್ಕಾ ತಿನ್ನುವವ 2- 4  ತಿಂದರೂ ಅಚ್ಚರಿ ಇಲ್ಲ. ಮನುಷ್ಯನ ಮನಶಾಸ್ತ್ರ ಪ್ರಕಾರ ಚಟಕ್ಕೆ ಸಂಬಂಧಿಸಿದ ವಸ್ತುಗಳ ಬಳಕೆ ಹೆಚ್ಚಾಗುವುದು ಅವನಿಗೆ ಮಾಡಲು ಕೆಲಸ ಕಡಿಮೆ ಇದ್ದಾಗ. ಕೆಲಸದ ಒತ್ತಡಗಳ ಮಧ್ಯೆ ಚಟದ ನೆನಪಾಗುವುದಿಲ್ಲ. ಚಟದ…

Read more

ಆರೋಗ್ಯಬೇಕೇ- ಕೀಟನಾಶಕ ಮಿತಿಗೊಳಿಸಿ.

ಅಡಿಕೆ ಉಳಿಯಬೇಕು. ದುಡ್ಡು ಆಗಬೇಕು ನಿಜ. ಆದರೆ ದುಡ್ಡಿನಲ್ಲಿ ಆರೋಗ್ಯವನ್ನು ಖರೀದಿಸಲಿಕ್ಕೆ ಆಗುವುದಿಲ್ಲ. ಅನಾರೋಗ್ಯ ಬಂದರೆ ನಮ್ಮ ಸಂಪಾದನೆಯಲ್ಲಿ ಆಸ್ಪೆತ್ರೆಯವರು- ವೈದ್ಯರು ಪಾಲುದಾರರಾಗುತ್ತಾರೆ. ಅವರನ್ನು ಸಾಕುವ ಕೆಲಸ ಬೇಡ. ಅಡಿಕೆ ಬೆಳೆಗಾರರಿಗೆ ಸಲಹೆಗಳ ಸುರಿಮಳೆಗಳೇ ಹರಿದು ಬರುತ್ತಿವೆ. ಯಾವ ರೈತರು ಪ್ರಧಾನ ಮಂತ್ರಿಗಳ ಕೃಷಿ ವಿಕಾಸ ಯೋಜನೆಯ 6000 ರೂ. ಫಲಾನುಭವಿಗಳಿದ್ದಾರೆಯೋ ಅವರಿಗೆ  ಮೊಬೈಲ್ ನಂಬ್ರಕ್ಕೆ ಸಂದೇಶಗಳು ಬರುತ್ತಿವೆ. ಇದರಲ್ಲೆಲ್ಲಾ ಅಷ್ಟು ಇಷ್ಟು ರಾಸಾಯನಿಕ ಬಳಕೆ ಮಾಡಿ ಬೆಳೆ ಸಂರಕ್ಷಿಸಿಕೊಳ್ಳಿ ಎಂಬ ಸಂದೇಶ ಇದೆ. ರೈತರೇ ಇದನ್ನು…

Read more
error: Content is protected !!