ರೈತರು ತಮ್ಮ ದ್ವನಿ ಬದಲಾಯಿಸಬೇಕಾಗಿದೆ.

ರೈತರು ತಮ್ಮ ಧ್ವನಿ  ಬದಲಾಯಿಸಬೇಕಾಗಿದೆ..

ರೈತರ ಧ್ವನಿ ಸ್ವಲ್ಪ ಕಡಿಮೆ. ಅದಕ್ಕಾಗಿ ಅವರ ಶೋಷಣೆ ಅವ್ಯಾಹತವಾಗಿ ನಡೆಯುತ್ತಾ ಇದೆ. ಮಾತಾಡುವವರೇ ಇಲ್ಲ. ಮಾತಾಡಿದರೂ ಅದಕ್ಕೆ ಬೆಲೆ ಇಲ್ಲ. ಇದು ಯಾಕಾಗಿ ಆಗುತ್ತದೆ ಎಂದರೆ ನಮ್ಮಲ್ಲಿ ಒಗ್ಗಟ್ಟಿಲ್ಲ.  ಒಗ್ಗಟ್ಟಾಗಿದ್ದರೆ ನಾವು ಯಾರಿಗೂ ತಗ್ಗಿ ಬಗ್ಗಿ ಇರಬೇಕಾಗಿಲ್ಲ. ಬಗ್ಗಿದರೆ  ಈಗ ಒಂದು ಗುದ್ದು ಹೆಚ್ಚು. ಹೆಚ್ಚಿನ ರೈತರು ಬ್ಯಾಂಕು, ಸೊಸೈಟಿ, ಹಾಗೆಯೇ ಇನ್ನಿತರ ಸರಕಾರೀ ಕಚೇರಿಗಳಿಗೆ ಹೋಗುವಾಗ ತಮ್ಮ ಚಪ್ಪಲಿ  ತೆಗೆದು ಹೊರಗಿಟ್ಟು , ದೈನ್ಯದಿಂದ ಒಳಗೆ ಹೋಗುತ್ತಾರೆ. ಇವರನ್ನು ಮಾತಾಡಿಸುವವರೇ ಇಲ್ಲ. ಅದೇ  ಕೃಷಿಕಲ್ಲದವರು…

Read more

ಕಡ್ಡಾಯವಾಗಿ ತೆರಿಗೆ ಪಾವತಿಸುವ ಏಕೈಕ ನಾಗರೀಕರು -ರೈತರು

ಎಲ್ಲರ ದೃಷಿಯಲ್ಲಿ ರೈತರು  ಸರಕಾರದ ಸವಲತ್ತು ಪಡೆಯುವವರು ಎಂದು ಗುರುತಿಸಲ್ಪಟ್ಟವರು. ಆದರೆ ವಾಸ್ತವ ಇವರು ಟ್ಯಾಕ್ಸ್ ಕಟ್ಟುವವರು. ಸಮಾಜ ರೈತ ಎಂದರೆ ಸರಕಾರದ ಕಡಿಮೆ ಬಡ್ಡಿ ದರದ ಸಾಲಪಡೆಯುವವ. ಕೇಂದ್ರ ಸರಕಾರದ ಬಳುವಳಿಯಾದ ಕಿಸಾನ್ ಸಮ್ಮಾನ್ ಯೋಜನೆಯ ಹಣ ಪಡೆಯುವವ. ಸಬ್ಸಿಡಿ, ಸವಲತ್ತು  ಪಡೆಯುವ. ಎಂದು ತಿಳಿದಿದ್ದಾರೆ. ವಾಸ್ತವವಾಗಿ ಸರಕಾರ ಇವರಿಗೆ ಕೊಡುವುದೇನಿದ್ದರೂ ಕಿತ್ತುಕೊಂಡದ್ದರ 10%  ಮಾತ್ರ.  ರೈತ ಎಂದರೆ ಸರಕಾರವನ್ನು ಸಾಕುವವ. ದೇಶದ ಆರ್ಥಿಕತೆಗೆ ರೈತನ ಕೊಡುಗೆ ಸಣ್ಣದಲ್ಲ. ಇದನ್ನು ಎಲ್ಲರಿಗೂ ತಿಳಿಸಿ. ರೈತನನ್ನು ಮೊದಲ…

Read more
error: Content is protected !!