
ಕೊಕ್ಕೋ ಬೆಳೆಗೆ ಶಿಲೀಂದ್ರನಾಶಕ ಸಿಂಪರಣೆ ಏಕೆ ಅಗತ್ಯ ?
ಮಳೆಗಾಲದಲ್ಲಿ ಕೊಕ್ಕೋ ಬೆಳೆ ಉಳಿಸಿಕೊಳ್ಳಬೇಕಾದರೆ ಶಿಲೀಂದ್ರ ನಾಶಕದ ಸಿಂಪರಣೆ ಅತ್ಯಗತ್ಯ. ಕೊಕ್ಕೋ ಬೆಳೆ ಶಿಲೀಂದ್ರ ರೋಗಕ್ಕೆ ಬೇಗ ತುತ್ತಾಗುವ ಬೆಳೆಯಾಗಿದ್ದು ಮಳೆಗಾಲ ಪೂರ್ವದಲ್ಲೇ ಸಿಂಪರಣೆ ಮಾಡಿದರೆ ಉತ್ತಮ. ಮಳೆಗಾಲ ಮುಗಿಯುವ ತನಕ ತಿಂಗಳಿಗೆ ಒಮ್ಮೆಯಂತೆ ಬೋರ್ಡೋ ದ್ರಾವಣ ಅಥವಾ ಇನ್ನಿತರ ಶಿಲೀಂದ್ರ ನಾಶಕವನ್ನು ಸಿಂಪಡಿಸುತ್ತಾ ಇದ್ದರೆ ಉತ್ತಮ ಫಸಲು ಪಡೆಯಬಹುದು. ಕೊಕ್ಕೋ ಎಂಬುದು ವರ್ಷ ಪೂರ್ತಿ ಬೆಳೆ ಇರುವ ಮಿಶ್ರ ಬೆಳೆ . ಕೆಲವು ಸೀಸನ್ ಗಳಲ್ಲಿ ಸ್ವಲ್ಪ ಕಡಿಮೆಯಾಗಬಹುದು. ಕೆಲವು ಸೀಸನ್ ನಲ್ಲಿ ಹೆಚ್ಚಾಗಬಹುದು. ಆದರೆ…