ಅಡಿಕೆ ಧಾರಣೆ ಏರುತ್ತದೆಯೇ ? ಹೀಗೆಯೋ ಮುಂದುವರಿಯುತ್ತದೆಯೋ?

ಅಡಿಕೆ ದರ ಏರುತ್ತದೆಯೇ ? ಹೀಗೆಯೋ ಮುಂದುವರಿಯುತ್ತದೆಯೋ?

ಕಳೆದ ವರ್ಷದ ಅಡಿಕೆ ಬೆಳೆಯ ಸ್ಥಿತಿ ನೋಡಿದರೆ ದರ ಇನ್ನೂ ಏರಿಕೆಯಾಗಬೇಕಿತ್ತು. ವ್ಯಾಪಾರಿಗಳು, ಅಡಿಕೆಯ ಸಿದ್ದ ಉತ್ಪನ್ನ ತಯಾರಿಕ ಉದ್ದಿಮೆಗಳು ದರ ಎಷ್ಟಾದರೂ ಆಗಲಿ, ನಮಗೆ ಅಡಿಕೆ ಬೇಕಾಗಿದೆ. ಕಳುಹಿಸಿ ಎಂಬ ಸೂಚನೆ ಕೊಡಬೇಕಿತ್ತು. ಆದರೆ ಅಂತಹ ಬೇಡಿಕೆಯೂ ಇಲ್ಲ. ದರ ಏರಿಕೆಯೂ ಆಗಿಲ್ಲ. ಕಳೆದ ವರ್ಷಕ್ಕೆ ಹೋಲಿಸಿದರೆ ಸ್ವಲ್ಪ ಪರವಾಗಿಲ್ಲವಾದರೂ ಬೆಳೆ ಲೆಕ್ಕಾಚಾರ ನೋಡಿದರೆ ಬೇಡಿಕೆಯೋ ಬೇಡಿಕೆ ಆಗಬೇಕಿತ್ತು. ಕಾರಣ ಏನಿರಬಹುದು? ಕಳೆದ ವರ್ಷ 50%ದಷ್ಟು ಬೆಳೆ ನಷ್ಟವಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಅರ್ಧದಷ್ಟೂ ಇಲ್ಲ….

Read more
ಅಂದು ವನಿಲ್ಲಾ ಮುಂದೆ ಕರಿಮೆಣಸು.

ಅಂದು ವನಿಲ್ಲಾ –ಮುಂದೆ ಕರಿಮೆಣಸು. ಬೆಳೆಗಾರರು ಸಿದ್ಧರಿರಲೇಬೇಕು.

ಒಂದು ಕಾಲದಲ್ಲಿ ಸುಮಾರು 20 ವರ್ಷಕ್ಕೆ ಹಿಂದೆ ವನಿಲ್ಲಾ ಎಂಬ ಸಾಂಬಾರ ಬೆಳೆ ಭಾರೀ ಉಚ್ಛ್ರಾಯ ಸ್ಥಿತಿಗೆ ತಲುಪಿತ್ತು. ವನಿಲ್ಲಾ  ಬೆಳೆಯೊಂದಿದ್ದರೆ  ಕೃಷಿಕನ ಸ್ಥಿತಿಗತಿಯೇ ಬದಲಾಗಲಿದೆ ಎಂಬ ಹವಾ ಇತ್ತು. ಜನ ಭಾರೀ ಪ್ರಮಾಣದಲ್ಲಿ ಬೆಳೆ ಬೆಳೆಸಿದ್ದರು. ಸಾಕಷ್ಟು ಪ್ರಯೋಗಗಳನ್ನೂ ಮಾಡಿದ್ದರು. ಮಾಹಿತಿಗಾಗಿಯೇ ಕೆಲವು ತಜ್ಞರು ಸಿದ್ದರಾಗಿದ್ದರು. ಈ ಬೆಳೆ ರೈತರನ್ನು  ಮರುಳು ಮಾಡಿದಷ್ಟು ಯಾವ ಬೆಳೆಯೂ ಮಾಡಿರಲಿಕ್ಕಿಲ್ಲ. ಬಹುಷಃ ಈ ಬೆಳೆಯನ್ನು ಬೆಳೆಸದವರೇ ಇರಲಿಕ್ಕಿಲ್ಲ. ಅದೇ ಸ್ಥಿತಿ ಕರಿಮೆಣಸಿಗೆ ಬರಬಹುದೇ?  ಸಾಧ್ಯತೆ ಇಲ್ಲದಿಲ್ಲ. ಯಾವುದೇ ಬೆಳೆ…

Read more
ಏರಿಕೆಯತ್ತ ಅಡಿಕೆ – ಕರಿಮೆಣಸು ಧಾರಣೆಯೂ ಏರಿಕೆ.

ಏರಿಕೆಯತ್ತ ಅಡಿಕೆ – ಕರಿಮೆಣಸು ಧಾರಣೆಯೂ ಏರಿಕೆ.   

ಅಡಿಕೆ ಧಾರಣೆ ಇನ್ನೇನು ನೆಗೆದು ಬೀಳುತ್ತದೆಯೋ ಎಂಬ ಅನುಮಾನ ಉಂಟಾಗಿತ್ತು.ಅದರೆ ಕೆಲವೇ ದಿನದಲ್ಲಿ ಮತ್ತೆ ಏರಿಕೆಯತ್ತ ಮುಖ ಮಾಡಿದೆ. ಜೊತೆಗೆ ಕರಿಮೆಣಸೂ ಸಹ. ನಿನ್ನೆಯೇ ಖಾಸಗಿ ವರ್ತಕರು ಹಳೆ ಅಡಿಕೆ, ಡಬ್ಬಲ್ ಚೋಳ್ ಹಾಗೂ ಹೊಸ ಅಡಿಕೆಗೆ ದರ ಎರಿಸಿದ್ದಾರೆ. ಇಂದು ಕ್ಯಾಂಪ್ಕೋ ಸಹ ಏರಿಕೆ ಮಾಡಿದೆ. ಕೆಂಪಡಿಕೆ ಮಾರುಕಟ್ಟೆ ಸ್ಥಿರವಾಗಿದ್ದು, ಮುಂದಿನ ದಿನಗಳಲ್ಲಿ ಅದೂ ಸ್ವಲ್ಪ ಏರಿಕೆ ಆಗುವ ಸಂಭವ ಇದೆ. ಏರಿಕೆಗೆ ಕಾರಣ ಅಡಿಕೆ ಅವಕ ಕಡಿಮೆಯಾದದ್ದು ಎನ್ನುತ್ತಾರೆ ವರ್ತಕರು. ಅಡಿಕೆ ಧಾರಣೆ ಇಳಿಕೆಯಾದಾಗ …

Read more
ಬೆಳೆಗಾರರೇ ಎಚ್ಚರ! ಅಡಿಕೆ ಬೆಳೆ ಭವಿಷ್ಯ ಭಾರೀ ಅತಂತ್ರವಾಗಿದೆ

ಬೆಳೆಗಾರರೇ ಎಚ್ಚರ! ಅಡಿಕೆ ಬೆಳೆ ಭವಿಷ್ಯ ಭಾರೀ ಅತಂತ್ರವಾಗಿದೆ.

ಅಡಿಕೆ ಬೆಳೆ ಮುಂದಿನ ದಿನಗಳಲ್ಲಿ ಏನಾಬಗಬಹುದು, ಭವಿಷ್ಯದಲ್ಲಿ ಹೀಗೇ ಬೆಲೆ ಉಳಿಯಬಹುದೇ? ಎಂಬ ಕುತೂಹಲ ಎಲ್ಲರನ್ನೂ ಕಾಡುತ್ತಿದೆ. ಎಚ್ಚರ! ಅಡಿಕೆ ಭವಿಷ್ಯ ಭಾರೀ ಅತಂತ್ರವಾಗಿದೆ.ಪ್ರತೀಯೊಬ್ಬ ಕೃಷಿಕನ ಮನಸ್ಸಿನಲ್ಲೂ ಈ ಒಂದು ವಿಚಾರ ಕೊರೆಯುತ್ತಿದೆಯಾದರೂ  ಹೆಚ್ಚಿನವರು ಇನ್ನೂ ಪ್ರದೇಶ ವಿಸ್ತರಣೆ ಮಾಡುತ್ತಲೇ ಇದ್ದಾರೆ. ಆದರೆ ಅಡಿಕೆ ಈಗಾಗಲೇ ಸಂತೃಪ್ತ ಸ್ಥಿತಿಗೆ ಮುಟ್ಟಿದಂತಿದೆ. ಈ ಹಿಂದೆಯೂ ಮುಂದೆ ಅಡಿಕೆಗೆ ಭವಿಷ್ಯವಿಲ್ಲ. ನೆಡಬೇಡಿ ಎಂದು ಹೇಳುತ್ತಿದ್ದರು. ಆದರೆ  ಒಮ್ಮೆ ಬೆಲೆ ಕುಸಿದದ್ದೂ ಮತ್ತೆ ಮೇಲೇರಿತು. ಶ್ರೀಯುತ ಅಶೋಕ್ ಕುಮಾರ್ ಕರಿಕಳ ಅವರ…

Read more
error: Content is protected !!