ಸಾವಯವ ತ್ಯಾಜ್ಯ ಹುಡಿ ಮಾಡಬೇಕೇ? ಯಂತ್ರ ಬಾಡಿಗೆಗೆ ಇದೆ.

ಸಾವಯವ ತ್ಯಾಜ್ಯಗಳಾದ ತೆಂಗಿನ ಗರಿ, ಅಡಿಕೆ ಗರಿ ,ಸೊಪ್ಪು ಸದೆ ಇತ್ಯಾದಿಗಳನ್ನು  ಹುಡಿ ಮಾಡಿ ಬಳಕೆ ಮಾಡಿದರೆ ಅದು ವೇಗವಾಗಿ ಕರಗಿ ಗೊಬ್ಬರವಾಗುತ್ತದೆ. ಹೀಗೆ ಹುಡಿ ಮಾಡಲು ಯಂತ್ರಗಳು ಇವೆ. ಈ ಯಂತ್ರಗಳು ಭಾರೀಪ್ರಮಾಣದ ತ್ಯಾಜ್ಯಗಳನ್ನು  ಕೆಲವೇ ಗಂಟೆಗಳಲ್ಲಿ ಹುಡಿ ಮಾಡಿಕೊಡುತ್ತದೆ. ಪ್ರಸ್ತುತ ರೈತಾಪಿ ವರ್ಗದ ಜನರಿಗೆ ಸರ್ಕಾರವು ರಸಗೊಬ್ಬರದ ದರ ಏರಿಕೆ ಆಗಿರುವಂತಹ ಹಿನ್ನೆಲೆಯಲ್ಲಿ ದೇಶದ ಕೃಷಿ ಸಂಶೋಧನಾ ಅಧ್ಯಯನ ನಡೆಸಿ ಸಾವಯವ ಕೃಷಿಯನ್ನು ಅವಲಂಬಿಸಿದರೆ ಹೆಚ್ಚಿನ ಆದಾಯವನ್ನು ಗಳಿಸಬಹುದೆಂದು ಎಲ್ಲ ಪ್ರಗತಿಪರ ರೈತರು ಸಾವಯವ ಕೃಷಿಯನ್ನು…

Read more
ಉತ್ತಮ ಅಡಿಕೆ ಸಸಿಗಳು

ಅಡಿಕೆ ಬೆಳೆಗಾರರು ಸ್ವಲ್ಪ ಚಾಲಿ ಅಡಿಕೆ ತಳಿಗಳನ್ನೂ ಬೆಳೆಸಿ.

ಎಲ್ಲರೂ ಕೆಂಪಡಿಕೆಗೆ ಹೊಂದುವ ತಳಿಗಳನ್ನೇ ಬೆಳೆಸಿದರೆ ಒಂದಿಲ್ಲೊಂದು ದಿನ  ಕೆಂಪಡಿಕೆ ಮಾರುಕಟ್ಟೆ ಏನಾಗಬಹುದು  ಯೋಚಿಸಿ? ಅಂತಹ ಕಷ್ಟದ ದಿನ ಬಂದರೆ  ರೈತರಿಗೆ ಚಾಲಿ ನೆರವಿಗೆ ಬರಲೂಬಹುದು. ಎಲ್ಲಾ ಅಡಿಕೆ ಚಾಲಿಗೆ ಹೊಂದುವುದಿಲ್ಲ. ಇದಕ್ಕೆ ಕರಾವಳಿಯ ತಳಿಗಳೇ ಸೂಕ್ತ. ಕಳೆದ ವರ್ಷ ಅಡಿಕೆ ಗಿಡಗಳಿಗೆ ಬಂದ ಬೇಡಿಕೆಯನ್ನು ನೋಡಿ ಈ ವರ್ಷ  ನರ್ಸರಿಗಳು ಮಾಡಿದ ಸಸಿ  ಅಷ್ಟಿಷ್ಟಲ್ಲ. ಆದರೆ  ಕರಾವಳಿಯ ಉಭಯ ಜಿಲ್ಲೆಗಳಲ್ಲಿ ಈ ವರ್ಷ ಅಡಿಕೆ ಗಿಡ ಕೇಳುವವರಿಲ್ಲ.  ಹಾಗೆಂದು ಮಲೆನಾಡು, ಅರೆಮಲೆನಾಡು ಮುಂತಾದ ಕಡೆಯ ನರ್ಸರಿಗಳಲ್ಲಿ…

Read more
ಸೂಜಿ ಮೆಣಸಿನ ಇಳುವರಿ

ಅಧಿಕ ಲಾಭದ ಮಿಶ್ರ ಬೆಳೆ – ಸೂಜಿ ಮೆಣಸು

ಸೂಜಿ ಮೆಣಸಿನ ಬೆಳೆಯಲ್ಲೂ ಲಾಭವಿದೆಯೇ ಎಂದು ಹುಬ್ಬೇರಿಸಬೇಡಿ. ಇದಕ್ಕೆ ಒಣ ಮೆಣಸಿಗೆ ಕಿಲೋ 800 ರೂ. ತನಕ ಬೆಲೆ ಇದೆ. ಖರೀದಿ ಮಾಡುವವರೂ ಇದ್ದಾರೆ. ಮಲ್ಲಿಗೆ ಬೇಸಾಯಕ್ಕಿಂತ ಇದು ಸುಲಭ. ಮಲೆನಾಡಿನಲ್ಲಿ ಇದನ್ನು  ಬೆಳೆಸಿಯೇ ವರ್ಷಕ್ಕೆ 50,000 ಕ್ಕೂ ಮಿಕ್ಕಿ ಆದಾಯ ಮಾಡಿಕೊಳ್ಳುವವರು ತುಂಬಾ ಜನ ಇದ್ದಾರೆ. ಕಾಗೆ ಮೆಣಸು, ಜೀರಿಗೆ  ಮೆಣಸು, ಸೂಜಿ ಮೆಣಸು ಇದೆಲ್ಲಾ ಒಂದೇ. ಬಹುತೇಕ ಎಲ್ಲರ ತೋಟದಲ್ಲೂ  ಇದರ ಸಸಿ ಇದೆ. ಅದು ನೆಟ್ಟು ಬೆಳೆಸಿದ್ದಲ್ಲ. ಅದರಷ್ಟಕ್ಕೇ ಹುಟ್ಟಿದ್ದು. ಅನುಕೂಲ ಇದ್ದರೆ …

Read more
ವಿದ್ಯುತ್ ಸರಬರಾಜು ವ್ಯವಸ್ಥೆ

ಕೇಂದ್ರ ವಿದ್ಯುತ್ ಕಾಯಿದೆ – ರೈತರಿಗೆ ತೊಂದರೆ ಇದೆಯೇ?

ಸರಕಾರ ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣ ಮಾಡಿದರೆ ರೈತರಿಗೆ ವಿದ್ಯುತ್ ಉಚಿತವಾಗಿ ಸಿಗುವುದಿಲ್ಲ. ಅದನ್ನು ನಾವು ವಿರೋಧಿಸಬೇಕು. ಖಾಸಗೀಕರಣ ಹಾಗೆ ಹೀಗೆ ಎಂದೆಲ್ಲಾ ರೈತರ ಕಿವಿ ತುಂಬಿ ಅವರನ್ನೂ ತಮ್ಮ ಬೆಂಬಲಕ್ಕೆ ಸೇರಿಸಿಕೊಳ್ಳಲು ಹವಣಿಕೆ ನಡೆಯುತ್ತಿದೆ. ಸರಕಾರ ಹಂತ ಹಂತವಾಗಿ ಎಲ್ಲಾ ಸರಕಾರೀ ವ್ಯವಸ್ಥೆಗಳನ್ನು ಖಾಸಗೀಕರಣ ಮಾಡುವ ತಯಾರಿಯಲ್ಲಿದೆ. ನಮ್ಮ ಪ್ರತಿನಿಧಿಗಳು ಯೋಗ್ಯರೇ ಆಗಿದ್ದರೆ  ಇದರಿಂದ  ಸಾರ್ವಜನಿಕರಿಗೆ ಅನುಕೂಲವೇ ಆಗುವುದು. ಕೇಂದ್ರ ಸರಕಾರ ನಾಳೆ ನಡೆಯಲಿರುವ ಮುಂಗಾರು ಅಧಿವೇಶನದಲ್ಲಿ ವಿದ್ಯುತ್ ಸರಬರಾಜು ವ್ಯವಸ್ಥೆಯ Electricity Amendment Bill 2021…

Read more
ಅಡಿಕೆಯ ಬಳಕೆಯ ಚೂರುಗಳು

ನಾವು ಬೆಳೆಯುವ ಅಡಿಕೆ ಯಾವುದಕ್ಕೆ ಬಳಕೆಯಾಗುತ್ತದೆ ಗೊತ್ತೇ?

ನಾವೆಲ್ಲಾ ಅಡಿಕೆ ಬೆಳೆಗಾರರು. ಆದರೆ ನಮಗೆ ಇನ್ನೂ ಸ್ಪಷ್ಟವಾಗಿ  ನಾವು ಬೆಳೆದ ಅಡಿಕೆ ಯಾವುದಕ್ಕೆ ಬಳಕೆಯಾಗುತ್ತದೆ ಎಂದು ಗೊತ್ತೇ ಇಲ್ಲ.ನಾವು ಬೆಳೆಯುವ ಅಡಿಕೆ ಸಧ್ಯದ ಮಟ್ಟಿಗೆ ಬಳಕೆಯಾಗುವುದು ಈ ಎಲ್ಲಾ ರೂಪಗಳಲ್ಲಿ ಜಗಿದು ಉಗುಳುವುದಕ್ಕೆ ಮಾತ್ರ. ಅಡಿಕೆ ಎಂದರೆ ಅದು ಟ್ಯಾನಿನ್ (ಚೊಗರು) ಒಳಗೊಂಡ ಒಂದು ಬೀಜ ಎಂದು ವ್ಯಾಖ್ಯಾನಿಸಬಹುದು. ಅಡಿಕೆ ಕಾಯಿ  ಬೆಳೆದು ಹಣ್ಣಾದ ಮೇಲೆ ಕೊಯಿಲು ಮಾಡಿ  ನಿರ್ದಿಷ್ಟ ದಿನಗಳ ವರೆಗೆ  ಸೂರ್ಯನ ಬೆಳಕಿನಲ್ಲಿ ಒಣಗಿಸಿ, ಸಿಪ್ಪೆ ಸುಲಿದಾಗ  ದೊರೆಯುವುದು ಚಾಲಿ ಅಥವಾ ಸುಪಾರಿ…

Read more
ಕಾಯಿ ಒಡೆಯುವ ತೊಂದರೆ

ಅಡಿಕೆ ಕಾಯಿ ಒಡೆಯುವುದಕ್ಕೆ ಕಾರಣ ಮತ್ತು ಪರಿಹಾರ .

ಹೆಚ್ಚಿನವರ ಅಡಿಕೆ ತೋಟದಲ್ಲಿ ಎಳೆಯ ಕಾಯಿ ಒಡೆದು ಬೀಳುವ ಸಮಸ್ಯೆ ಇದೆ. ಎಲ್ಲರೂ ಸೂಕ್ತ ಪರಿಹಾರಕ್ಕಾಗಿ ಸಿಕ್ಕ ಸಿಕ್ಕವರ ಅಭಿಪ್ರಾಯಗಳನ್ನು ಕೇಳುತ್ತಿರುತ್ತಾರೆ. ಯಾವ ಪರಿಹಾರ ಕೈಗೊಂಡರೂ  ಕಾಯಿ ಒಡೆಯುವಿಕೆ ಅಥವಾ ಅಂಡೋಡಕ ಮಾತ್ರ ಕಡಿಮೆ ಆಗುವುದೇ ಇಲ್ಲ. ಕೆಲವರ ಅಡಿಕೆ ತೋಟಗಳಲ್ಲಿ 10-15 % ಫಸಲು ಅಂಡೋಡಕದಿಂದ ಹಾಳಾಗುತ್ತದೆ. ಕಾಯಿ ಬಲಿತಂತೆ ಬುಡದಲ್ಲಿ ಉದುರಿಬಿದ್ದ ರಾಶಿ ರಾಶಿ ಹಾಳಾದ ಅಡಿಕೆ ಕಾಣಸಿಗುತ್ತದೆ. ಕೆಲವರು ಬೋರಾನ್ ಕೊರತೆಯಿಂದ ಹೀಗಾಗುತ್ತದೆ ಎನ್ನುತ್ತಾರೆ. ಇನ್ನು ಕೆಲವರು ಸತುವಿನ ಕೊರತೆಯಿಂದ ಹೀಗೆ ಆಗುತ್ತದೆ…

Read more
ಟ್ರಯಾಂಡ್ರಾ ಅಡಿಕೆ ಗೊಂಚಲು

ಟ್ರಯಾಂಡ್ರಾ ಅಡಿಕೆ – ಇದು ಕಿಲೋ ರೂ. 300-350

ಅಡಿಕೆಯಲ್ಲಿ  ನಮಗೆ ಗೊತ್ತಿರುವಂತದ್ದದ್ದು ಒಂದೇ ಪ್ರಭೇದ. ಅಡಿಕೆಯಲ್ಲಿ  ಹಲವಾರು ಪ್ರಭೇದಗಳಿವೆ. ಅಂತದ್ದರಲ್ಲಿ ಒಂದು ಈ ಒಂದು ಸಣ್ಣ ಅಡಿಕೆ. ಇದನ್ನು  ಒಂದು  ರೀತಿಯಲ್ಲಿ ಕಾಡು ಅಡಿಕೆ ಎನ್ನಲೂ ಬಹುದು.  ನಾವೆಲ್ಲಾ ಬೆಳೆಯುವ ಅಡಿಕೆ ಅರೆಕಾ ಕಟೆಚು Areca catechu ಎಂಬ ವರ್ಗಕ್ಕೆ ಸೇರಿದ್ದು.   Arecaceae ಎಂಬ ಕುಟುಂಬದಲ್ಲಿ ಹಲವಾರು ಪ್ರಭೇಧಗಳಿವೆ. ಕರಾವಳಿ ಮಲೆನಾಡಿನ  ಜನ ಕಂಡಿರುವ ರಾಮ ಅಡಿಕೆ ಎಂಬ ಪ್ರಭೇಧ ಇದರಲ್ಲಿ ಒಂದು. ಹಾಗೆಯೇ ಇಲ್ಲಿ ಪರಿಚಯಿಸಲಾಗುತ್ತಿರುವ  “ಅರೆಕಾ ಟ್ರಯಾಂಡ್ರಾ” Areca triandra ಎಂಬುದು ಅಡಿಕೆಯ…

Read more
ಚೂರು ಮಾಡಿದ ಅಡಿಕೆ

ಅಡಿಕೆಗೆ ಬೇಡಿಕೆ ಹೆಚ್ಚುತ್ತಿದೆ- ಬೆಲೆ ಏರುತ್ತಿದೆ.

ಚಾಲಿ ಅಡಿಕೆಗೆ ದರ ಏರುತ್ತಲೇ ಇದ್ದು, ಸದ್ಯವೇ ಅದು ಕ್ವಿಂಟಾಲಿಗೆ ರೂ. 50,000 ತಲುಪಬಹುದು ಎಂಬುದಾಗಿ ಸುದ್ದಿ ಹಬ್ಬುತ್ತಿದೆ. ಚಾಲಿ ಅಡಿಕೆಗೆ ಭಾರೀ ಬೇಡಿಕೆ ಬರುತ್ತಿದ್ದು, ಶಿರಸಿ , ಸಿದ್ದಾಪುರ, ಸಾಗರಲ್ಲಿ ಭಾರೀ ಮುತುವರ್ಜಿಯಿಂದ ಖರೀದಿ ನಡೆಯುತ್ತಿದೆ. ಇಂದು (6-08-21) ಶಿರಸಿ ಮಾರುಕಟ್ಟೆಯಲ್ಲಿ ಚಾಲಿ 41,800 ಕ್ಕೂ,  ಯಲ್ಲಾಪುರದಲ್ಲಿ 41500 ,ಸಾಗರ ಮಾರುಕಟ್ಟೆಯಲ್ಲಿ 40,000 ಹಾಗೂ ಸಿದ್ದಾಪುರದಲ್ಲಿ 41,100 ಕ್ಕೂ ಖರೀದಿ ನಡೆದಿದೆ. ಪುತ್ತೂರು, ಸುಳ್ಯ ಮಂಗಳೂರಿನಲ್ಲಿ 45,000,ಪುತ್ತೂರು, ಸುಳ್ಯ ವಿಟ್ಲಗಳಲ್ಲಿ ಖಾಸಗಿ ವರ್ತಕರು 46,500ಕ್ಕೂ ಖರೀದಿ…

Read more
ಸಾವಯವ ಗೊಬ್ಬರದಿಂದ ಇಳುವರಿಯ ಅಡಿಕೆ ಮರ

ಅಡಿಕೆ – ಈ ಸಾವಯವ ಗೊಬ್ಬರಗಳಿಂದ ಅಧಿಕ ಇಳುವರಿ ಸಾಧ್ಯ.

ಅಡಿಕೆ ಇರಲಿ ಅಥವಾ ಇನ್ಯಾವುದೇ ಬೆಳೆಯಿರಲಿ, ರಸ  ಗೊಬ್ಬರಗಳ ಬದಲು ನೈಸರ್ಗಿಕ ಸಸ್ಯ ಜನ್ಯ ವಸ್ತುಗಳನ್ನೇ ಬಳಸಿಯೂ  ಉತ್ತಮ ಇಳುವರಿ ಪಡೆಯಬಹುದು. ಸಾಮಾನ್ಯ ಇಳುವರಿಗೆ ನಾವು ಸಾಂಪ್ರದಾಯಿಕವಾಗಿ ಬಳಸುತ್ತಾ ಬಂದಿರುವ ಕೊಟ್ಟಿಗೆ ಗೊಬ್ಬರ, ಕುರಿ ಆಡು ಗೊಬ್ಬರಗಳು ಸಾಕು. ಅಧಿಕ ಇಳುವರಿ ಬೇಕಾದರೆ ಸಸ್ಯ ಜನ್ಯ ಗೊಬ್ಬರ , ಪ್ರಾಣಿಜನ್ಯ ಸಾವಯವ  ವಸ್ತುಗಳನ್ನು ಬಳಸಬೇಕಾಗುತ್ತದೆ. ಉತ್ಪಾದನಾ ವೆಚ್ಚ ಮಾತ್ರ ಸ್ವಲ್ಪ ಹೆಚ್ಚಾಗಬಹುದು. ರಸ ಗೊಬ್ಬರಗಳು ಒಮ್ಮೆಗೆ  ಉತ್ತಮ ಫಲಿತಾಂಶ ಕೊಡಬಹುದು. ಆದರೆ ಅದು ಧೀರ್ಘ ಕಾಲದ ತನಕ…

Read more
ಹಸುಗಳು ಹುಲ್ಲು ಆಹಾರ ತಿನ್ನುವುದು

ಹಸುಗಳಿಗೂ ಬರಲಿದೆ ಚಾಕಲೇಟುಗಳು.

ಹೈನುಗಾರಿಕೆ ಮಾಡುವರು ಎದುರಿಸುವ ಕಡಿಮೆ ಹಾಲಿನ ಇಳುವರಿ ಹಾಗೂ ಪೌಷ್ಟಿಕ ಆಹಾರದ ಕೊರೆತೆ ನೀಗಿಸಲು ಈಗ ವಿಜ್ಞಾನಿಗಳು ಚಾಕಲೇಟನ್ನು ಒಂದರ ಸಂಯೋಜನೆಯನ್ನು  ಪರಿಚಯಿಸಿದ್ದಾರೆ. ಇದು ಪ್ರೋಟೀನು , ಶಕ್ತಿ ಎಲ್ಲವನ್ನೂ ಒಳಗೊಂಡಿರುತ್ತದೆ. ಮನುಷ್ಯರು ಚಾಕಲೇಟ್ ತಿಂದರೆ ಶಕ್ತಿ ಹೆಚ್ಚುತ್ತದೆ. ಚಾಕಲೇಟಿನಲ್ಲಿರುವ ಸಕ್ಕರೆ  ಹಾಗೂ ಇನ್ನಿತರ ಶಕ್ತಿ ವರ್ಧಕ  ವಸ್ತುಗಳಿಂದಾಗಿ  ಗಾತ್ರ ಸಣ್ಣದಾದರೂ ಅದರಿಂದ ಲಭ್ಯವಾಗುವ ಶಕ್ತಿ ಹೆಚ್ಚು.  ಅದೇ ತತ್ವದಲ್ಲಿ  ಪಶುಗಳಿಗೂ ಚಾಕಲೇಟು ತಯಾರಿಸಬಹುದಂತೆ. ಈ ಚಾಕಲೇಟುಗಳನ್ನು  ಪಶುಗಳಿಗೆ ತಿನ್ನಿಸಿದರೆ ಅವುಗಳು ಹೆಚ್ಚು ಹಾಲು ಕೊಡಬಲ್ಲವು. ಶಾರೀರಿಕವಾಗಿ…

Read more
error: Content is protected !!